Just In
- 5 hrs ago ಮೀನ ರಾಶಿಯಲ್ಲಿ ರಾಹು-ಮಂಗಳ ಯುತಿಯಿಂದ ಅಂಗಾರಕ ಯೋಗ: 12 ರಾಶಿಗಳ ಮೇಲಿರಲಿದೆ ಈ ನಕರಾತ್ಮಕ ಪರಿಣಾ
- 6 hrs ago ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- 6 hrs ago ಪುರುಷರಲ್ಲಿ ಹೆಚ್ಚಾಗುತ್ತಿದೆ ಬಂಜೆತನ: ಪುರುಷರು ಈ ಆಹಾರ ಸೇವಿಸಿದರೆ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುವುದು
- 7 hrs ago ಏಪ್ರಿಲ್ 24 ದಿನ ಭವಿಷ್ಯ: ಬುಧವಾರದ ಈ ದಿನ ನಿಮ್ಮ ರಾಶಿಫಲ ಹೇಗಿದೆ?
Don't Miss
- Movies 'KGF-2' ಚಿತ್ರದಿಂದ ಸಿಕ್ಕಿದ್ದು 200 ಕೋಟಿ ರೂ.; 'ಟಾಕ್ಸಿಕ್', 'ರಾಮಾಯಣ'ಕ್ಕೆ ಯಶ್ 50-50 ಡೀಲ್!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸೆ. 18 ರಿಂದ ಅ. 16ವರೆಗೆ ಅಧಿಕ ಮಾಸ: ಈ ಸಮಯದಲ್ಲಿ ಶುಭಕಾರ್ಯ ಯಾವುದೂ ಮಾಡುವಂತಿಲ್ಲ, ಏಕೆ?
2020ರಲ್ಲಿ ಅಧಿಕ ಮಾಸ ಬಂದಿದೆ. ಈ ಬಾರಿ ಅಶ್ವಯುಜ ಮಾಸದಲ್ಲಿ ಅಧಿಕ ಮಾಸ ಬಂದಿದೆ. ಸೆಪ್ಟೆಂಬರ್ 18ರಿಂದ ಅಧಿಕ ಮಾಸ ಪ್ರಾರಂಭವಾಗಿ ಅಕ್ಟೋಬರ್ 16ಕ್ಕೆ ಮುಕ್ತಾಯವಾಗಲಿದೆ. ಅಧಿಕ ಮಾಸ ಪ್ರತೀ ಮೂರು ವರ್ಷಕ್ಕೊಮ್ಮೆ ಅಂದರೆ 33 ತಿಂಗಳು, 16 ದಿನ 4 ಘಳಿಗೆಗೆ ಬರುತ್ತದೆ. ಈ ಅಧಿಕ ಮಾಸವನ್ನು ಮಲ ಮಾಸವೆಂದು ಕೂಡ ಕರೆಯಲಾಗುವುದು.
ಅಧಿಕ ಮಾಸವನ್ನು ಪುರುಷೋತ್ತಮ ಮಾಸ ಎಂದು ಕೂಡ ಕರೆಯುತ್ತಾರೆ. ಈ ಮಾಸದ ಅಧಿಪತಿ ಭಗವಾನ್ ವಿಷ್ಣು ಆಗಿದ್ದಾನೆ. ಈ ಸಮಯದಲ್ಲಿ ಯಾವುದೇ ಶುಭ ಕಾರ್ಯ ಮಾಡುವುದಿಲ್ಲ ಆದರೆ ವ್ರತ, ಉಪವಾಸ, ಧ್ಯಾನ ಇವುಗಳಿಗೆ ಸೂಕ್ತವಾದ ಕಾಲ ಇದು ಎಂದು ಹೇಳಲಾಗುತ್ತದೆ.
ಇಲ್ಲಿ ನಾವು ಅಧಿಕ ಮಾಸದಲ್ಲಿ ಮಾಡುವ ವ್ರತ, ಇದರಿಂದ ಸಿಗುವ ಫಲವೇನು, ಯಾವ ದಾನ ಶ್ರೇಷ್ಠ ಹಾಗೂ ಯಾವ ಮಂಗಳಕಾರ್ಯ ಮಾಡಬಾರದು ಎಂಬುವುದರ ಬಗ್ಗೆ ಮಾಹಿತಿ ನೀಡಲಾಗಿದೆ ನೋಡಿ:
ಅಧಿಕ ಮಾಸದಲ್ಲಿ ಏನು ಮಾಡಬಾರದು?
ಹಿಂದೂ ಧರ್ಮದಲ್ಲಿ ಏನಾದರೂ ಹೊಸ ಕಾರ್ಯ ಮಾಡುವಾಗ, ಮದುವೆ-ನಾಮಕರಣ ಇವೆಲ್ಲಾ ಮಾಡುವಾಗ ಶುಭ ಗಳಿಗೆ ನೋಡಿ ಮಾಡಲಾಗುವುದು. ಆದರೆ ಅಧಿಕ ಮಾಸದಲ್ಲಿ ಇಂಥ ಯಾವುದೇ ಮಂಗಳಕರ ಕಾರ್ಯ ಮಾಡುವುದಿಲ್ಲ. ವಿವಾಹ, ನಾಮಕರಣ, ಯಜ್ಞೋಪವೀತ, ಸಾಮಾನ್ಯ ಧಾರ್ಮಿಕ ಸಂಸ್ಕಾರಗಳು, ಹೊಸ ವಸ್ತುಗಳ ಖರೀದಿ, ಗಾಡಿ ಖರಿದಿ, ಗೃಹಪ್ರವೇಶ, ಹೊಸ ವ್ಯಾಪಾರ ಪ್ರಾರಂಭಿಸುವುದು ಹೀಗೆ ಯಾವುದೇ ಶುಭಕರವಾದ ಕಾರ್ಯವನ್ನು ಮಾಡುವಂತಿಲ್ಲ.
ಅಧಿಕ ಮಾಸದಲ್ಲಿ ಮಾಡುವ ವ್ರತ, ಧ್ಯಾನಕ್ಕೆ ತುಂಬಾ ಮಹತ್ವವಿದೆ
ಅಧಿಕ ಮಾಸದ ಸಂಪೂರ್ಣ ಭಾರ ವಿಷ್ಣುವಿನ ಮೇಲಿದೆ. ಪ್ರತಿಯೊಬ್ಬ ವ್ಯಕ್ತಿ ತನ್ನ ಮನಸ್ಸನ್ನು ಪವಿತ್ರಗೊಳಿಸಲು ಇದು ಸೂಕ್ತವಾದ ಮಾಸವೆಂದು ಹೇಳಲಾಗುತ್ತದೆ. ಜನರು ಶ್ರದ್ಧೆಯಿಂದ ವ್ರತ, ಉಪವಾಸ, ಧ್ಯಾನ, ಭಜನೆ, ಕೀರ್ತನೆಯಲ್ಲಿ ತಲ್ಲೀನವಾದರೆ ಇದರಿಂದ ವಿಷ್ಣುವಿನ ಕೃಪೆಗೆ ಪಾತ್ರರಾಗಬಹುದು ಎಂಬ ನಂಬಿಕೆ ಇದೆ. ಈ ಮಾಸದಲ್ಲಿ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಪ್ರಯತ್ನದಿಂದಾಗಿ ವ್ಯಕ್ತಿಯು ಭೌತಿಕ ಹಾಗೂ ಆಧ್ಯಾತ್ಮಿಕ ಉನ್ನತಿ ಗಳಿಸುತ್ತಾನೆ ಹಾಗೂ ಈ ಸಮಯದಲ್ಲಿ ಧಾರ್ಮಿಕ ಕಾರ್ಯದಿಂದಾಗಿ ಜನ್ಮ ಕುಂಡಲಿಯಲ್ಲಿನ ದೋಷ ನಿವಾರಣೆಯಾಗುವುದು.
ಅಧಿಕ ಮಾಸದಲ್ಲಿ ವ್ರತಾಚರಣೆ
ಮನಸ್ಸಿನಲ್ಲಿ ಸಂಕಲ್ಪ ಮಾಡಿ ಅಧಿಕ ಮಾಸದಲ್ಲಿ ವ್ರತಾಚರಣೆ ಮಾಡಿದರೆ ಇದರಿಂದ ಬಯಕೆ ಈಡೇರುವುದು. ಅಧಿಕ ಮಾಸದಲ್ಲಿ ಉತ್ತಮ ಫಲಕ್ಕಾಗಿ ಧಾರಣ ಪಾರಣ ವ್ರತ (ಒಂದು ದಿನ ಉಪವಾಸವಿದ್ದು ಮಾರನೇಯ ದಿನ ಬೆಳಗ್ಗೆ ಆಹಾರ ಸೇವಿಸುವುದು), ಕಭುಕ್ತೌ ವ್ರತ (ದಿನದಲ್ಲಿ ಒಂದು ಹೊತ್ತು ಮಾತ್ರ ಊಟ ಮಾಡುವುದು) ನಕ್ತಭೋಜನ ವ್ರತ (ಸೋರ್ಯಾಸ್ತದ ನಂತರ ಊಟ), ಅಲವಣ ವ್ರತ(ಉಪ್ಪು ಹಾಕಿರದ ಊಟ ಮಾಡುವುದು) ಇಂಥ ವ್ರತ ಪಾಲಿಸುವುದರಿಂದ ಶ್ರೀ ವಿಷ್ಣು ಆಶೀರ್ವದಿಸುತ್ತಾನೆ.
ಅಧಿಕ ಮಾಸದಲ್ಲಿ ದಾನ ಮಾಡಿದರೆ ದಾರಿದ್ರ್ಯ ನಾಶ
ಶನಿ ದೋಷ, ನವಗ್ರಹ ದೋಷ, ದಾರಿದ್ರ್ಯ ಇವುಗಳನ್ನು ಹೋಗಲಾಡಿಸಲು ಮೂವತ್ಮೂರು ಅಪ್ಪೂಪವನ್ನು ಸದ್ಬ್ರಾಹ್ಮಣರಿಗೆ ಕಂಚಿನ ಪಾತ್ರೆಯಲ್ಲಿ ಇಟ್ಟು ದಾನ ಮಾಡಬೇಕು, ಇದರಿಂದ ದಾನ ಮಾಡಿದವರು ಸ್ವರ್ಗಸುಖವನ್ನು ಅನುಭವಿಸುತ್ತಾರೆ ಎಂಬ ನಂಬಿಕೆ ಇದೆ.
ಇನ್ನು ಅಮಾವಾಸ್ಯೆ, ಹುಣ್ಣಿಮೆ, ದ್ವಾದಶಿ ಹಾಗೂ ವೈಧೃತಿ, ವ್ಯತೀಪಾತ ಯೋಗಗಳಲ್ಲಿ ದಂಪತಿಯನ್ನು ಊಟಕ್ಕೆ ಕರೆದು ಅವರಿಗೆ 33 ವಸ್ತುಗಳನ್ನು ಇಟ್ಟು ದಾನ ಮಾಡಬೇಕು. ಹೀಗೆ ಮಾಡುವುದರಿಂದ ನಿಮ್ಮ ಸಂಪತ್ತು ವೃದ್ಧಿಸುವುದು.
ವಿಷ್ಣು ಮಂತ್ರ ಜಪಿಸಬೇಕು
ಈ ಸಮಯದಲ್ಲಿ ಧಾರ್ಮಿಕ ಕಾರ್ಯಗಳನ್ನು ಮಾಡುವುದರ ಜೊತೆಗೆ ಶ್ರೀಮದ್ ದೇವಿ ಭಾಗವತ, ಶ್ರೀ ವಿಷ್ಣು ಪುರಾಣ, ಶ್ರೀ ವಿಷ್ಣು ಸಹಸ್ರನಾಮಾವಳಿ, ವಿಷ್ಣುಮಂತ್ರ ಕೇಳುವುದು, ಜಪಿಸುವುದು ಮಾಡಿದರೆ ತುಂಬಾ ಒಳ್ಳೆಯದಾಗುತ್ತದೆ.
ಅಧಿಕ ಮಾಸ 3 ವರ್ಷಗಳಗೊಮ್ಮೆ ಬರುವುದು. ಇದೀಗ ಬಂದಿದೆ, ಕಷ್ಟಗಳಿಂದ ಮುಕ್ತಿ ಪಡೆಯಲು ಹಾಗೂ ಜನ್ಮ ದೋಷಗಳ ನಿವಾರಣೆ ಅಧಿಕ ಮಾಸ ಸಕಾಲವಾಗಿದ್ದು, ಈ ಸಮಯದಲ್ಲಿ ಧಾರ್ಮಿಕ ಕಾರ್ಯ ಮಾಡುವ ಮೂಲಕ ಅದರ ಫಲ ಪಡೆಯಿರಿ.