Just In
Don't Miss
- Movies ನೀಲಿ ಪ್ರಪಂಚದ ಕರಾಳ ಸತ್ಯವನ್ನ ಹೇಳಿದ ಲಾನಾ ರೋಡ್ಸ್
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆರ್ಥಿಕ ಸಮಸ್ಯೆ ದೂರವಿಡಲು ಜ್ಯೋತಿಷ್ಯದ ಮಂತ್ರ
ಆದರೆ ಅದಕ್ಕೆಲ್ಲ ಕಾರಣ ಏನಿರಬಹುದು ಮತ್ತು ಆರ್ಥಿಕ ಸಮಸ್ಯೆ ದೂರವಿಡುವ ದೈವಿಕ ಶಕ್ತಿ ಯಾವುದು ಎಂದು ತಿಳಿಯುವುದೂ ಅಷ್ಟೇ ಮುಖ್ಯ. ಆರ್ಥಿಕ ಮುಗ್ಗಟ್ಟನ್ನು ಉಂಟುಮಾಡುವ ಕೆಲವು ವಿಚಾರ ಮತ್ತು ಅದಕ್ಕಿರುವ ಪರಿಹಾರವನ್ನು ಇಲ್ಲಿ ತಿಳಿದುಕೊಳ್ಳಿ.
* ಬುದ್ಧಿವಂತಿಕೆ ಕೊರತೆ: ಬುದ್ಧಿವಂತಿಕೆಯನ್ನು ಹೇಗೆ ಉಪಯೋಗಿಸಿಕೊಳ್ಳುತ್ತೇವೆ ಮತ್ತು ಹೇಗೆ ಬೆಳೆಸಿಕೊಳ್ಳುತ್ತೇವೆ ಎಂಬುದರ ಮೇಲೆ ಸರ್ವ ಸಮಸ್ಯೆಯ ನಿರ್ವಹಣೆ ನಿಂತಿದೆ. ವೇದದ ಪ್ರಕಾರ, ಶುಕ್ರ, ಗುರು ಮತ್ತು ಮಂಗಳ ಗ್ರಹಗಳ ಆರಾಧನೆಯಿಂದ ಈ ಕುಶಲತೆಯನ್ನು ಮೈಗೂಡಿಸಿಕೊಳ್ಳಬಹುದು ಎನ್ನಲಾಗಿದೆ. ಅಷ್ಟೇ ಅಲ್ಲ, ನಿಮ್ಮ ಜಾತಕದಲ್ಲಿರುವ ಹಣದ ಭವಿಷ್ಯದ ಕುರಿಹಿನಿಂದ ಗ್ರಹಿಸಲಾಗದ ಆ ಬುದ್ಧಿವಂತಿಕೆ ಗುರುತಿಸಲು ಸಾಧ್ಯವಾಗುತ್ತದೆ.
* ನಡತೆ ಮತ್ತು ಆಂತರಿಕ ತೊಂದರೆ: ನಿಮ್ಮ ಪರಿಮಿತಿಯ ಯೋಚನೆಯಲ್ಲೇ ಹೆಚ್ಚು ಕಾಲ ಕಳೆಯುವ ಬದಲು ಹೊರಗಿನ ಪ್ರಪಂಚದ ಜನರೊಂದಿಗೂ ಬೆರೆತರೆ ಹಣವನ್ನು ಒಳ್ಳೆಯ ರೀತಿ ಗಳಿಸಿಕೊಳ್ಳುವ ರೀತಿಯನ್ನು ಕಂಡುಕೊಳ್ಳಬಹುದು. ಅಷ್ಟೇ ಅಲ್ಲ, ಜಾತಕ ಕುಂಡಲಿಯ 2 ಮತ್ತು 3ನೇ ಮನೆಯನ್ನು ಪರಿಶೀಲಿಸಿದರೂ ಆರ್ಥಿಕತೆಯ ಸಂಪೂರ್ಣ ವರದಿ ಪಡೆಯಬಹುದು. ಶುಕ್ರ, ಚಂದ್ರ, ಬುಧ ಗ್ರಹಗಳನ್ನು ಶಾಂತಗೊಳಿಸಿದರೆ ನಿಮ್ಮ ಆಂತರಿಕ ಸಮಸ್ಯೆಯನ್ನು ಸುಲಭವಾಗಿ ನಿವಾರಿಸಲು ಸಹಕಾರಿಯಾಗುತ್ತದೆ.
* ವರ್ತಮಾನ ಅಥವಾ ಭೂತದಲ್ಲಿನ ಕರ್ಮಫಲ: ಭೂತ ಪಾಪ ಕರ್ಮವನ್ನು ಪೂರ್ಣ ಸರಿಮಾಡಲು ಸಾಧ್ಯವಲ್ಲದಿದ್ದರೂ, ಪರಿಹಾರವಂತೂ ಕಂಡುಕೊಳ್ಳಲೇಬೇಕು. ಧನಾತ್ಮಕ ಪ್ರಭಾವಗಳನ್ನು ಹೆಚ್ಚು ಅಳವಡಿಸಿಕೊಳ್ಳುವುದರಿಂದ ಸಮಸ್ಯೆಗಳಿಗೆ ಸ್ವಲ್ಪ ಮಟ್ಟಿಗಾದರೂ ಪರಿಹಾರ ದೊರೆಯುತ್ತದೆ. ನಿಮ್ಮ ಜಾತಕದಿಂದ ವರ್ತಮಾನ ಮತ್ತು ಭೂತ ಕರ್ಮಫಲಗಳನ್ನು ತಿಳಿಯಬಹುದು, ನಿಮ್ಮ ಜನ್ಮ, ಆರ್ಥಿಕತೆ ಮತ್ತು ಕರ್ಮಫಲ ಎಲ್ಲವೂ ಅವಲಂಬಿತವಾಗಿದೆ ಎಂದು ವೇದ ತಿಳಿಸಿದೆ.
* ಸೋಮಾರಿತನ: ಇದು ಹಲವರ ಸಮಸ್ಯೆ. ಕೆಲವು ವ್ಯಾಯಾಮದೊಂದಿಗೆ ದಿನವನ್ನು ಪ್ರಾರಂಭಿಸಿದರೆ ದಿನವಿಡೀ ಚೈತನ್ಯದಿಂದಿರಲು ಸಹಕಾರಿ. ಋಣಾತ್ಮಕ ಅಂಶಗಳನ್ನು ಹೋಗಿಸುವತ್ತ ಗಂಭೀರವಾಗಿ ಚಿಂತಿಸಬೇಕು ಎನ್ನುವುದು ಮನುಷ್ಯ ಕಂಡುಕೊಂಡ ಪರಿಹಾರ. ಇದಕ್ಕೆ ನೀವು ದೈವಬೆಂಬಲ ಬಯಸುವುದಾದರೆ ಶನಿ, ಕೇತು, ರಾಹು ಎಂಬ ಶಕ್ತಿಯುತ ಗ್ರಹಗಳಿಗೆ ಪ್ರಾರ್ಥನೆ ಸಲ್ಲಿಸಿದರೆ ಸೋಮಾರಿತನ ಹೋಗಲಾಡಿಸಿ ಆರ್ಥಿಕತೆಯತ್ತ ಸಾಗುತ್ತಿರುವ ದಾರಿ ಸುಗಮವಾಗುತ್ತದೆ.
* ಸ್ವಾರ್ಥತೆ: ದೌರ್ಬಲ್ಯ ಮತ್ತು ಅಸಾಮರ್ಥ್ಯತೆಯೇ ಸ್ವಾರ್ಥಕ್ಕೆ ದಾರಿ ಎಂಬುದನ್ನು ಮರೆಯಬೇಡಿ. ಯಾವಾಗಲೂ ಧನಾತ್ಮಕತೆ ಚಿಂತನೆ ನಡೆಸಿದರೆ ತಲೆಯಲ್ಲಿ ಕೆಟ್ಟ ಯೋಚನೆಗಳೂ ತುಂಬಿಕೊಳ್ಳುವುದಿಲ್ಲ. ಜ್ಯೋತಿಷ್ಯದ ಪ್ರಕಾರ, ಚಂದ್ರನೊಂದಿಗೆ ಕೆಲವು ಅಶುಭ ಗ್ರಹಗಳು ಸೇರಿ ಮನುಷ್ಯನಲ್ಲಿ ಸ್ವಾರ್ಥತೆ ಉಂಟುಮಾಡುತ್ತದೆ. ಆದ್ದರಿಂದ ಪರಿಹಾರಕ್ಕಾಗಿ ಜ್ಯೋತಿಷಿಗಳನ್ನು ಸಂಪರ್ಕಿಸಿ ಉತ್ತಮ ಸಲಹೆ ಕಂಡುಕೊಳ್ಳಬಹುದು.
* ಹೊಸತನದ ಕೊರತೆ: ಯಾವಾಗಲೂ ಹೊಸತನ್ನು ಯೋಚಿಸಬೇಕು. ಹೊಸತನದ ಕೊರತೆ ಉಂಟಾಗುವುದೇ ಬುಧಗ್ರಹ ಅಶುಭ ಸ್ಥಾನದಲ್ಲಿದ್ದಾಗ. ಆದ್ದರಿಂದ ಒಳಿತಾಗಲು ಪ್ರಾರ್ಥನೆಯ ಮೂಲಕ ಬುಧನ ಆಶೀರ್ವಾದ ಪಡೆಯುವುದನ್ನು ಮರೆಯಬೇಡಿ.
* ಅವಕಾಶ ನಿಮ್ಮದು: ನಿಮಗೆ ಸಿಕ್ಕ ಯಾವುದೇ ಅವಕಾಶವನ್ನು ಕಳೆದುಕೊಳ್ಳಬೇಡಿ. ನಿಮಗೆ ಲಾಭ ತರುವ ಯಾವುದೇ ಅಂಶವನ್ನು ಸರಿಯಾಗಿ ಉಪಯೋಗಿಸಿಕೊಳ್ಳಿ. ನಿಮ್ಮ ಆರ್ಥಿಕತ ಸ್ಥಿತಿಗತಿಯನ್ನು ತಿಳಿಯಲು ನಿಮ್ಮ ಜಾತಕವನ್ನು ಮತ್ತು ದಶಾಭುಕ್ತಿಗಳನ್ನು ತಿಳಿದುಕೊಂಡರೆ ಹಣಕಾಸಿನ ಯಶಸ್ಸಿಗೆ ಅಡ್ಡಿಯಾಗಿರುವ ಅಂಶಗಳನ್ನು ತೊಡೆದುಹಾಕಬಹುದು.