Just In
- 4 hrs ago ವಿಕಲಚೇತನರಿಗೆ ಸ್ಕೂಟಿ ಗಿಫ್ಟ್..! ಮನೆ ಕಟ್ಟಿಕೊಡುವ ಭರವಸೆ ನೀಡಿದ ನಟ ಲಾರೆನ್ಸ್..!
- 6 hrs ago ಗರಿ ಗರಿಯಾದ ಕೋಡುಬಳೆ ಮನೆಯಲ್ಲೇ ಮಾಡಿ.! 4 ವಸ್ತು ಇದ್ದರೆ ಸಾಕು
- 9 hrs ago Zero Shadow Day: ಬೆಂಗಳೂರಲ್ಲಿ ಇಂದು ಶೂನ್ಯ ನೆರಳು ದಿನ.! ಯಾವ ಸಮಯದಲ್ಲಿ ಗೊತ್ತಾ?
- 11 hrs ago ಹೋಟೆಲ್ ರುಚಿಯ ಪನೀರ್ ಪೆಪ್ಪರ್ ಫ್ರೈ ಮನೆಯಲ್ಲೇ ಮಾಡಿ..! 10 ನಿಮಿಷದಲ್ಲಿ ರೆಡಿ..!
Don't Miss
- Movies Seetha Rama ; ಹೊಸ ಸ್ಕೆಚ್ ಹಾಕಿ ಅಂಜಲಿಯನ್ನು ಭೇಟಿ ಮಾಡಿದ ರುದ್ರಪ್ರತಾಪ್ ಮಾಡಿದ್ದೇನು..?
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Sports DC vs GT IPL 2024: ಡೆಲ್ಲಿ ಕೋಟೆಯಲ್ಲಿ ವಿಜಯದ ಪತಾಕೆ ಹಾರಿಸುತ್ತಾ ಗುಜರಾತ್?; ಟಾಸ್ ವರದಿ, ಆಡುವ ಬಳಗ
- News ಲೋಕಸಭಾ ಚುನಾವಣೆ 2024: ಮತದಾನಕ್ಕೆ ಸಕಲ ಮಂಡ್ಯ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ
- Technology Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಣ್ಣನ್ನು ಫಲವತ್ತವಾಗಿಸುದು ಹೇಗೆ?
ಮನೆಯ ಸುತ್ತ ಒಂದು ಹೂದೋಟ ಇದ್ದರೆ ಎಷ್ಟು ಚೆನ್ನ, ಆದರ ಜೊತೆಗೆ ಒಂದಷ್ಟು ತರಕಾರಿಯನ್ನೂ ಬೆಳೆಸ ಬೇಕೆನ್ನುವುದು ಅನೇಕ ಮಹಿಳೆಯರ ಹೊಂಗನಸುಗಳಲ್ಲೊಂದು.ಮನೆಯ ಕೈ ತೋಟದಲ್ಲೇ ತರಕಾರಿ, ಹೂ ಬೆಳೆಸಿ ಅಕ್ಕಪಕ್ಕದವರಿಗೆ " ರೀ....ನಮ್ಮನೆಲಿ ಬೆಳೆದಿದ್ದು ತರಕಾರಿ ತಗೊಳ್ಳಿ..." ಅಂತಾನೋ " ಪೂಜೆಗೆ ಹೂ ಸಿಗದಿದ್ದರೆ ಬಾರೆಮ್ಮಾ ನಮ್ಮನೆಲೇ ಕಿತ್ಕೋ.." ಎನ್ನುವ ಉದಾರತೆ ತೋರುವಾಗ ಆಕೆಯಲ್ಲಿ ಅದೇನು ವಯ್ಯಾರ.
ತರಕಾರಿ, ಹೂ ಬೆಳೆಯಲು ಉತ್ತಮವಾದ ಬೀಜ ಹಾಗೂ ಸಾಕಷ್ಟು ನೀರಿದ್ದರೆ ಸಾಲದು ಮುಖ್ಯವಾಗಿ ಅದರ ಜೊತೆಗೆ ನಿಮ್ಮ ಮನೆಯ ತೋಟದ ಮಣ್ಣೂ ಫಲವತ್ತಾಗಿರಬೇಕಲ್ವೇ!ಆ ಫಲವತ್ತಾದ ಮಣ್ಣೇ ನಿಮ್ಮ ಇಂಥ ಉದಾದ ಭಾವನೆಗಳಿಗೆ ಸ್ಪಂಧಿಸಲು ಹಾಗೂ ಹೊಂಗನಸು ನನಸಾಗಿಸಲು ಸಹಕಾರಿಯಾಗಿದೆ ಎನ್ನುವುದನ್ನು ಮರೆಯಬೇಡಿ.ಮಣ್ಣು ಜೀವಾಧಾರಕ ಎಂದು ನೀವು ಭಾವಿಸುವಾದರೆ ಅದಕ್ಕೆ ಉತ್ತಮ ಗುಣಮಟ್ಟದ ಪೋಷಣೆ ಅಗತ್ಯ ಎನ್ನುವುದನ್ನೂ ಮರೆಯಬಾರದು.ಒಳ್ಳೇ ಪೌಷ್ಠಿಕಾಂಶ ಹೊಂದಿರುವ ಮಣ್ಣು ಉತ್ತಮ ಫಲ ನೀಡುತ್ತದೆ ಎನ್ನುವುದು ಸತ್ಯ.
ಕೆಲವು ಸಲಹೆಗಳು:-
1. ನಿಮ್ಮ ತೋಟದ ಮಣ್ಣಿಗೆ ಆಗಾಗ ಗೊಬ್ಬರ ಬೆರೆಸಬೇಕು.ಹೆಚ್ಚು ಪೌಷ್ಠಿಕಾಂಶವಿರುವ ಗೊಬ್ಬರವನ್ನು ಮಣ್ಣಿಗೆ ಮಿಶ್ರಣ ಮಾಡಿದರೆ ಒಳ್ಳೆದು.ಕೇವಲ ಮೇಲ್ಭಾಗದ ಮಣ್ಣಿಗೆ ಗೊಬ್ಬರ ಎರಚುವುದರಿಂದ ಏನೂ ಪ್ರಯೋಜನವಿಲ್ಲ. ಮೇಲ್ಭಾಗದ ಮಣ್ಣನ್ನು ಕೆತ್ತಿ ಹದಮಾಡಿ ಗೊಬ್ಬರವನ್ನು ಮಣ್ಣಿಗೆ ಮಿಶ್ರಗೊಳಿಸುವುದರಿಂದ ಒಳ್ಳೆ ಫಲ ನಿರೀಕ್ಷಿಸ ಬಹುದು.ಅದರಲ್ಲೂ ಯಾವುದೇ ರಾಸಾಯನ ಮಿಶ್ರಣವಿಲ್ಲದೆ ಮನೆಯಲ್ಲೇ ಮಾಡಿದ ಗೊಬ್ಬರ ಬಳಕೆ ಮಾಡುವುದಾದರೆ ಇನ್ನೂ ಒಳ್ಳೇಯದೇ.
2.ಪ್ರಾಣಿಗಳ ತ್ಯಾಜ್ಯ, ಸಗಣಿ ಮುಂತಾದವನ್ನು ಬಳಸಿದ ಗೊಬ್ಬರವಾದರೆ ಮಣ್ಣು ಇನ್ನೂ ಹೆಚ್ಚು ಫಲವತ್ತಾಗಿರುತ್ತದೆ. ಗೊಬ್ಬರದಲ್ಲಿ ಪೌಷ್ಠಿಕಾಂಶ ಹೆಚ್ಚಾಗಿ ಇದ್ದರೆ ಗಿಡಗಳು ಹೆಚ್ಚು ಹಸಿರಾಗಿರುತ್ತವೆ.
3. ಇದರ ಜೊತೆಗೆ ಬೇರೆ ಗಿಡ-ಮರಗಳ ಎಲೆಗಳನ್ನು ಕತ್ತರಿಗೆ ಮಣ್ಣಿಗೆ ಮಿಶ್ರ ಮಾಡಿ.ಎಲೆಗಳಿಗೆ ಯಾವುದೇ ರೋಗ ಇಲ್ಲ ಎನ್ನುವುದನ್ನು ಖಾತರಿ ಪಡಿಸಿಕೊಳ್ಳಿ.ಒಣಗಿದ ಎಲೆಗಳು, ಹುಳುಉಪ್ಪಟೆ ತಿಂದು ಬಿಟ್ಟ ಹಾಗೂ ಪಾಚಿಕಟ್ಟಿದ ಎಲೆಗಳು ನೀವು ಮಾಡುವ ಮಿಶ್ರಣದಲ್ಲಿ ಸೇರದ ಹಾಗೆ ಎಚ್ಚರವಹಿಸಿ.ಇದರಿಂದಾಗಿ ಮಣ್ಣಿನ ತಳಭಾಗದಲ್ಲಿ ರೋಗಾಣುಗಳು ಉತ್ಪತ್ತಿಯಾಗಿ ಗಿಡ-ಮರಗಳಿಗೂ ರೋಗ ತಗುಲುವ ಸಾಧ್ಯತೆಗಳಿರುತ್ತದೆ.