Just In
- 3 hrs ago ವೃಷಭ ರಾಶಿಗೆ ಗುರು ಸಂಚಾರ: ಗುರು ನಿಮ್ಮ ಲಗ್ನ ಮನೆಯಲ್ಲಿ ಇರುವುದರಿಂದ ಇದರ ಪ್ರಭಾವ ಹೇಗಿರಲಿದೆ?
- 3 hrs ago ವೃಷಭ ರಾಶಿಗೆ ದೇವಗುರುವಿನ ಸಂಚಾರ: ಮೇಷ ರಾಶಿಗಳಿಗೆ ಇದರ ಪ್ರಭಾವ ಹೇಗಿರಲಿದೆ?
- 4 hrs ago ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- 5 hrs ago ದಿನ ಭವಿಷ್ಯ ಏಪ್ರಿಲ್ 19: ಶುಕ್ರವಾರದ ಈ ಶುಭ ದಿನ ನಿಮ್ಮ ರಾಶಿಗೆ ಹೇಗಿರಲಿದೆ?
Don't Miss
- Movies 'ಮಾರ್ಟಿನ್' ಚಿತ್ರದ ನಿರ್ಮಾಪಕ- ನಿರ್ದೇಶಕರ ಮಧ್ಯೆ ಕಿರಿಕ್: ಕೊನೆಗೂ ಸಿಕ್ತು ಸ್ಪಷ್ಟನೆ
- News 11 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ: ಡಾ. ಕೆ. ಸುಧಾಕರ್
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿಪರೀತ ಮಳೆ: ನಿಮ್ಮ ಕೈತೋಟದ ಆರೈಕೆ ಹೀಗಿರಲಿ
ಇದು ಚಳಿಗಾಲ, ನೋಡಿದರೆ ಮಳೆಗಾಲದಲ್ಲಿ ಸುರಿಯುವುದಕ್ಕಿಂತ ಹೆಚ್ಚಾಗಿ ಮಳೆ ಸುರಿಯುತ್ತಿದೆ. ಜೋರಾಗಿ ಮಳೆ ಬಂದರೆ ಹೊಲದಲ್ಲಿ ಬೆಳೆದ ಬೆಳೆ ನಾಶವಾಗುವುದು, ಆದರೆ ಜೋರು ಮಳೆಯಿಂದ ಟೆರೇಸ್ನಲ್ಲಿ ಬೆಳೆದ ಗಿಡಗಳನ್ನು ರಕ್ಷಣೆ ಮಾಡಬಹುದು.
ನಿಮ್ಮ ಗಾರ್ಡನ್ ಅನ್ನು ರಕ್ಷಣೆ ಮಾಡಲು ನೀವು ಮಾಡಬೇಕಾಗಿರುವುದು ಏನು ಎಂದು ನೋಡೋಣ ಬನ್ನಿ:
1. ಹಾಳಾದ ಗಿಡವನ್ನು ತೆಗೆಯಿರಿ
ಜೋರಾದ ಮಳೆಗೆ ಗಿಡ ಸ್ವಲ್ಪ ಹಾಳಾಗಿದ್ದರೆ ಸಂಪೂರ್ಣ ಕೊಳೆಯುವುದು, ಜೊತೆಗೆ ಈ ಗಿಡದಿಂದಾಗಿ ಮತ್ತೊಂದು ಗಿಡ ಹಾಳಾಗುವ ಸಾಧ್ಯತೆ ಇದೆ. ಆದ್ದರಿಂದ ಹಾಳಾದ ಗಿಡ, ಮುರಿದ ಕೊಂಬೆಗಳು, ಜೋರಾಗಿ ಗಾಳಿ ಬೀಸಿದಾಗ ಮುರಿದು ಬೀಳುವಂತಿರುವ ಕೊಂಬೆಗಳು ಇವುಗಳನ್ನು ತೆಗೆಯಿರಿ.
2. ಎತ್ತರದ ಗಿಡಗಳಿಗೆ ಸಪೋರ್ಟ್ ನೀಡಿ
ಎತ್ತರದ ಗಿಡಗಳಿದ್ದರೆ ಜೋರಾದ ಮಳೆ-ಗಾಳಿಗೆ ಮುರಿದು ಬೀಳುವುದು, ಅದನ್ನು ತಡೆಯಲು ಸಪೋರ್ಟ್ಗೆ ದೊಡ್ಡ ಕೋಲು ಅಥವಾ ಮರದ ಹಲಗೆ ನೀಡಿ, ಅಥವಾ ಬೀಳದಂತೆ ಹಗ್ಗದಿಂದ ಕಟ್ಟಿ.
3. ನೀರು ನಿಲ್ಲದಂತ ವ್ಯವಸ್ಥೆ ಮಾಡಿ
ಮನೆ ಮುಂದೆ ಚಿಕ್ಕ ಗಾರ್ಡನ್ ಮಾಡಿದ್ದರೆ ನೀರು ನಿಲ್ಲದಂತೆ ಎಚ್ಚರವಹಿಸಿ, ಅದೇ ಟೆರೇಸ್ ಗಾರ್ಡನ್ ಆದರೆ ನೀರು ನಿಲ್ಲದಂತೆ ವ್ಯವಸ್ಥೆ ಇರುತ್ತದೆ. ಒಂದು ವೇಳೆ ನಿಂತರೆ ನೀರು ಹೋಗಲು ವ್ಯವಸ್ಥೆ ಮಾಡಿ.
4. ಗಿಡಗಳನ್ನು ತೆಳುವಾದ ಪ್ಲಾಸ್ಟಿಕ್ನಿಂದ ಕವರ್ ಮಾಡಿ
ಈಗಷ್ಟ ಮೊಳಕ ಬರುತ್ತಿರುವ ಅಥವಾ ಚಿಕ್ಕ ಗಿಡಗಳಿಗೆ ತುಂಬಾ ನೀರು ಬಿದ್ದರೆ ಹಾಳಾಗುತ್ತದೆ, ಅದನ್ನು ತಡೆಗಟ್ಟಲು ತೆಳುವಾದ ಪ್ಲಾಸ್ಟಿಕ್ ಬಳಸಿ.
5. ಗೊಬ್ಬರ ಹಾಕಬೇಡಿ
ತುಂಬಾ ಮಳೆ ಸುರಿಯುತ್ತಿರುವ ಸಮಯದಲ್ಲಿ ಗೊಬ್ಬರ ಹಾಕಬೇಡಿ, ಅದು ನೀರಿನಲ್ಲಿ ಕೊಚ್ಚಿ ಹೋಗುತ್ತದೆ, ಅದರ ಬದಲಿಗೆ ಮಳೆ ನಿಂತ ಬಳಿಕ ಅಥವಾ ಸ್ವಲ್ಪ ಮಳೆ ಬರುವಾಗ ಗೊಬ್ಬರ ಹಾಕಿದರೆ ಚೆನ್ನಾಗಿ ಹೀರಿಕೊಳ್ಳುವುದು.
6. ಮಳೆ ನಿಂತ ಮೇಲೆ
ಪ್ಲಾಸ್ಟಿಕ್ ಹಾಕಿರದಿದ್ದರೆ ಮಳೆ ನಿಂತ ಮೇಲೆ ಗಿಡದ ಬುಡಕ್ಕೆ ಹಾನಿಯಾಗಿದೆಯೇ ಎಂದು ಪರೀಕ್ಷಿಸಿ. ಅಲ್ಲದೆ ಮಳೆ ನಂತರ ಹುಳ-ಹುಪ್ಪಟೆಗಳು ಬಂದಿದ್ದರೆ ಅವುಗಳನ್ನು ತೆಗೆಯಿರಿ.