Just In
- 9 hrs ago ವೃಷಭ ರಾಶಿಗೆ ಗುರು ಸಂಚಾರ: ಗುರು ನಿಮ್ಮ ಲಗ್ನ ಮನೆಯಲ್ಲಿ ಇರುವುದರಿಂದ ಇದರ ಪ್ರಭಾವ ಹೇಗಿರಲಿದೆ?
- 9 hrs ago ವೃಷಭ ರಾಶಿಗೆ ದೇವಗುರುವಿನ ಸಂಚಾರ: ಮೇಷ ರಾಶಿಗಳಿಗೆ ಇದರ ಪ್ರಭಾವ ಹೇಗಿರಲಿದೆ?
- 10 hrs ago ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- 11 hrs ago ದಿನ ಭವಿಷ್ಯ ಏಪ್ರಿಲ್ 19: ಶುಕ್ರವಾರದ ಈ ಶುಭ ದಿನ ನಿಮ್ಮ ರಾಶಿಗೆ ಹೇಗಿರಲಿದೆ?
Don't Miss
- Finance ಕಚ್ಚಾ ತೈಲ ಆಮದು ಗಣನೀಯ ಇಳಿಕೆ, ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಾಗುತ್ತಾ?
- News ಹಿರಿಯೂರು: ರಾಷ್ಟ್ರೀಯ ಹೆದ್ದಾರಿಯಲ್ಲಿ ಆಟೋ ಪಲ್ಟಿ: NHAIನ ಆ ಒಂದು ಯಡವಟ್ಟಿನ ವಿರುದ್ಧ ಭುಗಿಲೆದ್ದ ಆಕ್ರೋಶ
- Technology Poco: ಹೊಸದಾಗಿ ಲಾಂಚ್ ಆದ ಪೊಕೊ X6 ಪ್ರೊ 5G ಸ್ಮಾರ್ಟ್ಫೋನ್ಗೆ 17% ರಿಯಾಯಿತಿ!8 GB RAM
- Movies 'ಮಾರ್ಟಿನ್' ಚಿತ್ರದ ನಿರ್ಮಾಪಕ- ನಿರ್ದೇಶಕರ ಮಧ್ಯೆ ಕಿರಿಕ್: ಕೊನೆಗೂ ಸಿಕ್ತು ಸ್ಪಷ್ಟನೆ
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೋವಿಡ್ 19: ಹೋಂ ಐಸೋಲೇಷನ್ನಲ್ಲಿ ಇರುವವರು ಯಾವ ಔಷಧ ಸೇವಿಸಬೇಕು
ದೇಶದಲ್ಲಿ ಕೊರೊನಾ ಸೋಂಕು ಮಿತಿ ಮೀರಿದೆ, ಕರ್ನಾಟಕದಲ್ಲಿ ಪರಿಸ್ಥಿತಿ ಗಂಭೀರವಾಗಿದ್ದು ಜನರು ಬೆಡ್ ಸಿಗದೆ ಪರಿದಾಡುವ ಪರಿಸ್ಥಿತಿ ಬಂದಿದೆ. ಕೋವಿಡ್ 19 ಸೋಂಕಿತರಲ್ಲಿ ಅಧಿಕ ಜನರು ಮನೆಯಲ್ಲಿಯೇ ಹೋಂ ಐಸೋಲೇಟ್ ಆಗಿ ಔಷಧ ತೆಗೆದುಕೊಳ್ಳುತ್ತಿದ್ದಾರೆ.
ಆರೋಗ್ಯ ಸ್ಥಿತಿ ಗಂಭೀರವಾಗುವವರನ್ನು ಮಾತ್ರ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗುತ್ತಿದೆ. ಹೋಂ ಐಸೋಲೇಷನ್ ಇರುವವರು ಯಾವ-ಯಾವ ಔಷಧ ಸೇವಿಸಬೇಕು ಎಂದು ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (DIRECTORATE OF HEALTH AND FAMILY WELFARE SERVICES ANANDARAO CIRCLE, BANGALORE) ಮಾರ್ಗ ಸೂಚಿಗಳನ್ನು ಪ್ರಕಟಿಸಿ.
ದೇಶದಲ್ಲಿ ಕೊರೊನಾ ಸೋಂಕು ಮಿತಿ ಮೀರಿದೆ, ಕರ್ನಾಟಕದಲ್ಲಿ ಪರಿಸ್ಥಿತಿ ಗಂಭೀರವಾಗಿದ್ದು ಜನರು ಬೆಡ್ ಸಿಗದೆ ಪರಿದಾಡುವ ಪರಿಸ್ಥಿತಿ ಬಂದಿದೆ. ಕೋವಿಡ್ 19 ಸೋಂಕಿತರಲ್ಲಿ ಅಧಿಕ ಜನರು ಮನೆಯಲ್ಲಿಯೇ ಹೋಂ ಐಸೋಲೇಟ್ ಆಗಿ ಔಷಧ ತೆಗೆದುಕೊಳ್ಳುತ್ತಿದ್ದಾರೆ.
ಆರೋಗ್ಯ ಸ್ಥಿತಿ ಗಂಭೀರವಾಗುವವರನ್ನು ಮಾತ್ರ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗುತ್ತಿದೆ. ಹೋಂ ಐಸೋಲೇಷನ್ ಇರುವವರು ಯಾವ-ಯಾವ ಔಷಧ ಸೇವಿಸಬೇಕು ಎಂದು ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (DIRECTORATE OF HEALTH AND FAMILY WELFARE SERVICES ANANDARAO CIRCLE, BANGALORE) ಮಾರ್ಗ ಸೂಚಿಗಳನ್ನು ಪ್ರಕಟಿಸಿ.
ಹೋಂ ಐಸೋಲೇಷನ್ ಆಗಿರುವ ರೋಗಿಗಳು ಬೇಗನೆ ಚೇತರಿಸಿಕೊಳ್ಳಲು ಯಾವ-ಯಾವ ಔಷಧ ತೆಗೆದುಕೊಳ್ಳಬೇಕೆಂದು ಆರೋಗ್ಯ ಇಲಾಖೆ ಸೂಚಿಸಿದೆ. ಆದರೆ ನೀವು ಈ ಔಷಧಗಳನ್ನು ನಿಮ್ಮ ವೈದ್ಯರ ಸಲಹೆಯನ್ನು ಪಡೆದ ಬಳಿಕವಷ್ಟೇ ಸೇವಿಸಬೇಕು.
ಔಷಧಗಳು
1. ಕ್ಯಾಪ್ಸೂಲ್ ಡಾಕ್ಸಿಸೈಕ್ಲಿನ್100ಮಿಗ್ರಾಂ 1-0-1 (5 ದಿನ) (Cap. Doxycycline 100 mg 1-0-1 for 5 days)
ಸೂಚನೆ: ಗರ್ಭಿಣಿಯರು, ಎದೆ ಹಾಲುಣಿಸುವವರು ಹಾಗೂ 8 ವರ್ಷದ ಕೆಳಗಿನ ಮಕ್ಕಳಿಗೆ ನೀಡುವಂತಿಲ್ಲ.
2. ಇವರ್ಮೆಕ್ಟಿನ್ 12 ಮಿಗ್ರಾಂ ಮಾತ್ರೆ 1-0-0 (3 ದಿನ) (Tab Ivermectin 12 mg 1-0-0 for 3 days) (
ಸೂಚನೆ: ಈ ಮಾತ್ರೆಯನ್ನು ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಬೇಕು. ಗರ್ಭಿಣಿಯರು, 2 ವರ್ಷದ ಕೆಳಗಿನ ಮಕ್ಕಳಿಗೆ ನೀಡುವಂತಿಲ್ಲ.
3. ಜಿಂಕ್ 50 ಮಿಗ್ರಾಂ ಮಾತ್ರೆ 0-1-0 (7 ದಿನ) (Tab Zinc 50 mg 0-1-0 for 7 days)
ಪ್ರಯೊಜನ: ಇದು ರೋಗ ನಿರೋಧಕ ಶಕ್ತಿ ವೃದ್ಧಿಸುತ್ತೆ
4. ವಿಟಮಿನ್ ಸಿ 500 ಮಿಗ್ರಾಂ ಮಾತ್ರೆ 1-1-1 (7 ದಿನ)(Tab Vitamin C 500 mg 1-1-1 for 7 days)
ಪ್ರಯೊಜನ: ಇದು ರೋಗ ನಿರೋಧಕ ಶಕ್ತಿ ವೃದ್ಧಿಸುತ್ತೆ
5. ಮಾತ್ರೆ-ಪ್ಯಾರಾಸಿಟಮೋಲ್ 500 ಮಿಗ್ರಾಂ SOS (Tab Paracetamol 500 mg SOS)
ಸೂಚನೆ: ಜ್ವರವಿದ್ದರೆ ತೆಗೆದುಕೊಳ್ಳಬಹುದು.
6. ಮಾತ್ರೆ- ಪ್ಯಾಂಟೋಪ್ರಾಜೋಲೆ 40ಮಿಗ್ರಾಂ SOS (Tab Pantoprazole40 mg SOS)
ಸೂಚನೆ: ಅಗ್ಯತವಿದ್ದರೆ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಬೇಕು.
7. ಮಾತ್ರೆ- ಸಿಟ್ರಿಜನ್ 10 ಮಿಗ್ರಾಂ SOS(Tab Cetrizine10 mg SOS)
ಸೂಚನೆ: ಶೀತವಿದ್ದರೆ ತೆಗೆದುಕೊಳ್ಳಬಹುದು.
8. ಆ್ಯಂಟಿಟ್ಯೂಸಿವ್ ಕಾಫ್ ಸಿರಪ್ SOS (Antitussive Cough Syrup SOS )
ಸೂಚನೆ: ಕೆಮ್ಮು ಇದ್ದರೆ ತೆಗೆದುಕೊಳ್ಳಿ
ವಿಶೇಷ ಸೂಚನೆ:
* ಈ ಎಲ್ಲಾ ಔಷಧಿಯನ್ನು ವೈದ್ಯರ ಸಲಹೆ ಪಡೆದ ಬಳಿಕವೇ ತೆಗೆದುಕೊಳ್ಳಬೇಕು.
*ECG ತೆಗೆದು ಅಗ್ಯತವಿರುವವರಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ (Hydroxychloroquine) ನೀಡಲಾಗುವುದು.
* ಅಗ್ಯತವಿರುವವರಿಗೆ ಫೇವಿಪಿರಾವಿರ್ ಮಾತ್ರೆಯನ್ನು ತೆಗೆದುಕೊಳ್ಳಲು ವೈದ್ಯರು ಸೂಚಿಸಬಹುದು.
* Vitamin D 1000 IU 1-0-0 ಮಾತ್ರೆಯನ್ನು ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಬಹುದು.
* ಆಸ್ಪಿರಿನ್ 75ಮಿಗ್ರಾಂ 1-0-0 ತೆಗೆದುಕೊಳ್ಳಲು ವೈದ್ಯರು ಸೂಚಿಸಬಹುದು.
* ಇತರ ಕಾಯಿಲೆಗೆ ಔಷಧಿ ತೆಗೆದುಕೊಳ್ಳುತ್ತಿರುವವರು ನಿಮ್ಮ ವೈದ್ಯರು ಸೂಚಿಸಿದ ಔಷಧ ತೆಗೆದುಕೊಳ್ಳಬಹುದು.
* ಮಕ್ಕಳಿಗೆ ಔಷಧಿಯನ್ನು ನೀಡುವಾಗ ಅವರ ದೇಹದ ತೂಕಕ್ಕೆ ಅನುಗುಣವಾಗಿ ಡೋಸೇಜ್ ನೀಡಬೇಕು.
* ಇನ್ನು ಅಧಿಕ ರಕ್ತದೊತ್ತಡ, ಮಧುಮೇಹ, ಥೈರಾಯ್ಡ್ ಮುಂತಾದ ಸಮಸ್ಯೆಗೆ ಔಷಧ ತೆಗೆದುಕೊಳ್ಳುವವರು ಆ ಔಷಧಿಯನ್ನು ತೆಗೆದುಕೊಳ್ಳಬೇಕು.
ಇತರ ಸಲಹೆ
* ಸೋಂಕಿತರು ಪ್ರತಿದಿನ ಆಗಾಗ ಬಿಸಿ ನೀರಿಗೆ ಉಪ್ಪು ಹಾಕಿ ಬಾಯಿ ಮುಕ್ಕಳಿಸಬೇಕು.
* ದಿನದಲ್ಲಿ ಎರಡು ಬಾರಿ ಹಬೆ ಅಥವಾ ಸ್ಟೀಮ್ ತೆಗೆದುಕೊಳ್ಳಿ.
* ದಿನದಲ್ಲಿ 8 ಲೋಟ ಬಿಸಿ ನೀರು ಸೇವಿಸಿ.
* ಕಷಾಯ ಮಾಡಿ ಕುಡಿಯುವುದು ಒಳ್ಳೆಯದು.
* ಸತುವಿನಂಶವಿರುವ ಆಹಾರ ಸೇವಿಸಿ.
* ಸೂಪ್ ಕುಡಿಯುವುದು ಕೂಡ ಬೇಗನೆ ಸುಸ್ತು ನಿವಾರಣೆಗೆ ಸಹಾಯ ಮಾಡುತ್ತೆ.
* ಚೆನ್ನಾಗಿ ನಿದ್ದೆ ಮಾಡಿ.
* ಆಕ್ಸಿಜನ್ ಲೆವಲ್ ಪರೀಕ್ಷಿಸುತ್ತಾ ಇರಿ.
ಧೈರ್ಯವಾಗಿರಿ
* ನಿಮ್ಮ ವೈದ್ಯರು ಸೂಚಿಸಿರುವ ಸಲಹೆಯನ್ನು ತಪ್ಪದೇ ಪಾಲಿಸಿ.
* ರೋಗ ಲಕ್ಷಣಗಳು ಅಧಿಕವಾದರೆ ಕೂಡಲೇ ಆಸ್ಪತ್ರೆಗೆ ದಾಖಲಾಗಿ.
ಭಯ ಪಡಬೇಡಿ, ಧೈರ್ಯವಾಗಿರಿ. ಔಷಧದಷ್ಟೇ ಮನಸ್ಸಿನ ಧೈರ್ಯ ಕೂಡ ಬೇಗನೆ ಚೇತರಿಸಿಕೊಳ್ಳಲು ಸಹಕಾರಿ.