Just In
- 6 min ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 37 min ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- 1 hr ago ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- 2 hrs ago ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
Don't Miss
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Movies ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಷಾಯದ ಅತಿಯಾದ ಸೇವನೆಯಿಂದ ಒಳಿತಿಗಿಂತ, ಹಾನಿಯಾಗುವುದೇ ಹೆಚ್ಚು!
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಕಷಾಯದ ಪಾತ್ರ ಎಷ್ಟಿದೆ ಎಂಬುದು ಈ ಕೊರೊನಾ ಕಾಲದಲ್ಲಿ ಎಲ್ಲರಿಗೂ ಚೆನ್ನಾಗಿ ಅರ್ಥವಾಗಿದೆ. ಈ ಹಿಂದೆಯೂ ಕಷಾಯ ಸೇವಿಸುತ್ತಿದ್ದೂ, ದೇಶದಲ್ಲಿ ಕರೋನವೈರಸ್ ಸಾಂಕ್ರಾಮಿಕವು ಪ್ರಾರಂಭವಾದಾಗಿನಿಂದ, ಮನೆಯಲ್ಲಿ ತಾಯಿ ಅಥವಾ ಅಜ್ಜಿ ನಮಗೆ ಔಷಧಿಗಳ ಮೊದಲು ಗಾಢ ಬಣ್ಣದ ಕಷಾಯವನ್ನು ಹೆಚ್ಚೆಚ್ಚು ನೀಡುತ್ತಿದ್ದಾರೆ.
ಕಷಾಯವು ನಿಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತಾಗಿದೆ. ಇದು ಸಾಮಾನ್ಯ ಶೀತ, ಜ್ವರ ಅಥವಾ ನೋಯುತ್ತಿರುವ ಗಂಟಲಿಗೆ ಪರಿಣಾಮಕಾರಿ. ಆದರೆ ಇದನ್ನು ಅತಿಯಾಗಿ ಸೇವಿಸುವುದರಿಂದ ದೇಹಕ್ಕೆ ಪ್ರಯೋಜನವಾಗುವ ಬದಲು ಹಾನಿಯಾಗುತ್ತದೆ ಎಂಬುದು ನಿಮಗೆ ತಿಳಿದಿದೆಯೇ?.. ಹಾಗಾದರೆ ಕಷಾಯವನ್ನು ಹೆಚ್ಚು ಕುಡಿಯುವುದರಿಂದ ಆಗುವ ಅನನುಕೂಲಗಳೇನು ಎಂಬುದನ್ನು ತಿಳಿಯೋಣ.
ಹೆಚ್ಚು ಕಷಾಯ ಸೇವನೆ ಹಾನಿಕಾರಕ ಹೇಗೆ?:
ಕೋವಿಡ್ ಮಹಾಮಾರಿ ವಕ್ಕರಿಸಿ ಎರಡು ವರ್ಷಗಳು ಕಳೆದಿವೆ, ನಾವು ಇನ್ನೂ ಕಷಾಯವನ್ನು ಸೇವಿಸುತ್ತಿದ್ದೇವೆ. ಆದರೆ ಕಷಾಯವನ್ನು ಅತಿಯಾಗಿ ಸೇವಿಸುವುದರಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ ಎಂಬುದು ನಿಮಗೆ ತಿಳಿದಿದೆಯೇ?.. ಕಷಾಯದಲ್ಲಿ ಸಿಗುವ ಎಲ್ಲಾ ಪದಾರ್ಥಗಳನ್ನು ಮಿಶ್ರಣ ಮಾಡದಂತೆ ತಜ್ಞರು ಸಲಹೆ ನೀಡುತ್ತಾರೆ. ಅತಿಯಾದ ಕಷಾಯವು ನಿಮ್ಮ ಮೂತ್ರಪಿಂಡ ಮತ್ತು ಯಕೃತ್ತಿನ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ನೀವು ಈಗಾಗಲೇ ಯಾವುದೇ ಕಾಯಿಲೆಯಿಂದ ಬಳಲುತ್ತಿದ್ದರೆ, ಕಷಾಯವನ್ನು ಸೇವಿಸುವ ಮೊದಲು ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ.
ಕಷಾಯಕ್ಕೆ ಏನು ಹಾಕಬೇಕು?:
ಭಾರತದಲ್ಲಿ ಆಯುರ್ವೇದ ಔಷಧವು ಸಾವಿರಾರು ವರ್ಷಗಳಷ್ಟು ಹಳೆಯದು. ಇದರ ಪ್ರಕಾರ, ಔಷಧಿಗಳನ್ನು 5 ವಿಧಗಳಲ್ಲಿ ಸೇವಿಸಬಹುದು. ಅದರಲ್ಲಿ ಕಷಾಯವೂ ಒಂದು.
ಆಯುರ್ವೇದ ಔಷಧಗಳನ್ನು ಸೇವಿಸುವ ಸಾಮಾನ್ಯ ವಿಧಾನಗಳಲ್ಲಿ ಕಷಾಯ ಒಂದಾಗಿದೆ. ತುಳಸಿ, ಅಮೃತಬಳ್ಳಿ, ಅರಿಶಿನ, ಕರಿಮೆಣಸು, ಶುಂಠಿ, ಲವಂಗ, ನಿಂಬೆ, ಅಶ್ವಗಂಧ, ಏಲಕ್ಕಿ ಮತ್ತು ದಾಲ್ಚಿನ್ನಿ ಕಷಾಯವನ್ನು ತಯಾರಿಸಲು ಬಳಸುವ ಕೆಲವು ಸಾಮಾನ್ಯ ಪದಾರ್ಥಗಳು. ಇದನ್ನು ಹೊರತುಪಡಿಸಿ, ಬೇರಾವುದೇ ಪದಾರ್ಥಗಳನ್ನು ಸೇರಿಸಬೇಡಿ.
ಮಾರ್ಗಸೂಚಿ ಹೇಗಿದೆ?:
ದೇಶಾದ್ಯಂತ ಖ್ಯಾತ ವೈದ್ಯರೊಂದಿಗೆ ಸಮಾಲೋಚಿಸಿ ಕೇಂದ್ರ ಆರೋಗ್ಯ ಸಚಿವಾಲಯ ಹೊರಡಿಸಿದ ಅಧಿಕೃತ ಮಾರ್ಗಸೂಚಿಗಳ ಪ್ರಕಾರ, ತುಳಸಿ, ದಾಲ್ಚಿನ್ನಿ, ಕರಿಮೆಣಸು, ಶುಂಠಿ (ಒಣ ಶುಂಠಿ) ಮತ್ತು ಒಣದ್ರಾಕ್ಷಿ ಸೇರಿಸಿದ ಕಷಾಯವನ್ನು ದಿನಕ್ಕೆ ಒಂದು ಅಥವಾ ಎರಡು ಬಾರಿ ಮಾತ್ರ ಸೇವಿಸಬೇಕು. ಅದಕ್ಕಿಂತ ಹೆಚ್ಚು ಬಾರಿ ಸೇವನೆ ಒಳಿತಿಗಿಂತ ಹಾನಿ ಮಾಡಬಹುದು. ರುಚಿಗೆ ಸಕ್ಕರೆಯ ಬದಲು ಬೆಲ್ಲ ಹಾಕಬೇಕು. ಕರೋನವೈರಸ್ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು 10 ಗ್ರಾಂ ಚ್ಯವನ್ಪ್ರಾಶ್ ಅನ್ನು ತೆಗೆದುಕೊಳ್ಳುವಂತೆ ಶಿಫಾರಸು ಮಾಡುತ್ತದೆ, ಅಂದರೆ ಬೆಳಿಗ್ಗೆ ಒಂದು ಟೀಚಮಚ ಸೇವಿಸಬೇಕು.