Just In
- 1 hr ago
ಜೂನ್ 2022: ಈ ತಿಂಗಳಲ್ಲಿರುವ ಪ್ರಮುಖ ಹಬ್ಬ ಹಾಗೂ ವ್ರತಗಳ ಪಟ್ಟಿ
- 4 hrs ago
ಜೂನ್ 2022: ಮದುವೆ, ಪ್ರಯಾಣ, ಗೃಹಪ್ರವೇಶ, ಹೊಸ ವ್ಯವಹಾರಕ್ಕೆ ಶುಭ ದಿನಾಂಕಗಳು
- 6 hrs ago
ಮಂಕಿಪಾಕ್ಸ್: ಸಲಿಂಗಿಗಳು, ಮಾಂಸಾಹಾರಿಗಳಿಗೆ ಈ ಕಾಯಿಲೆ ಹರಡುವುದೇ? ಮಂಗನಿಂದ ಇದು ಹರಡುತ್ತಿಯೇ?
- 9 hrs ago
ಬ್ಯೂಟಿ ಟಿಪ್ಸ್: ತ್ವಚೆಗೆ ಅರಿಶಿನ ಹಚ್ಚುವಾಗ ಈ ತಪ್ಪುಗಳನ್ನು ಎಂದಿಗೂ ಮಾಡಲೇಬೇಡಿ
Don't Miss
- Finance
Closing Bell: ವಹಿವಾಟಿನ ಅಂತ್ಯಕ್ಕೆ ಲಾಭ: ಐಟಿ ಷೇರುಗಳ ಏರಿಕೆ
- Sports
IPL 2022 ಕ್ವಾಲಿಫೈಯರ್ 2: RCB vs RR; ರಾಜಸ್ಥಾನ ಪರವಾಗಿವೆ ಅಂಕಿ-ಅಂಶಗಳು
- Technology
BSNL ಗ್ರಾಹಕರಿಗೆ ಗುಡ್ನ್ಯೂಸ್!..ಈ ಪ್ಲಾನಿನಲ್ಲಿ ಸಿಗುತ್ತೆ 425 ದಿನಗಳ ವ್ಯಾಲಿಡಿಟಿ!
- News
ಆರ್ಎಸ್ಎಸ್ನವರೇನು ದ್ರಾವಿಡರೇ? ಮೂಲ ಭಾರತೀಯರೇ? ಸಿದ್ದರಾಮಯ್ಯ ಪ್ರಶ್ನೆ
- Automobiles
ಹಲವು ವರ್ಷಗಳಿಂದ ದೇಶಿಯ ಮಾರುಕಟ್ಟೆಯಲ್ಲಿ ಮಿಂಚುತ್ತಿರುವ ಮಹೀಂದ್ರಾ ಸ್ಕಾರ್ಪಿಯೋ ಎಸ್ಯುವಿಯ ರೋಚಕ ಇತಿಹಾಸ
- Education
Prize Money : ಪ್ರೋತ್ಸಾಹಧನಕ್ಕಾಗಿ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ..ಅರ್ಜಿ ಸಲ್ಲಿಕೆಗೆ ಜೂ.10 ಕೊನೆಯ ದಿನ
- Movies
ಪ್ಯಾನ್ ಇಂಡಿಯಾ ರೇಸ್ನಲ್ಲಿ ಕನ್ನಡ ಸ್ಟಾರ್ ನಟರು: ಓಡೋರು ಯಾರು? ಬೀಳೋರು ಯಾರು?
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸಂಕ್ರಾಂತಿಯಂದು ಸವಿಯುವ ಆಹಾರಗಳಲ್ಲಿ ಅಡಗಿದೆ ಆರೋಗ್ಯ ರಹಸ್ಯ
ವರ್ಷದ ಮೊದಲ ಹಬ್ಬ, ರೈತರ ಸುಗ್ಗಿಯ ಹಬ್ಬ ಮಕರ ಸಂಕ್ರಾಂತಿ ಆಚರಣೆಯನ್ನು ಜನವರಿ 14ರಂದು ಆಚರಿಸಲಾಗುವುದು. ಮಕರ ಸಂಕ್ರಾಂತಿಯನ್ನು ಭಾರತದಲ್ಲಿ ಸಡಗರ-ಸಂಭ್ರಮದಿಂದ ಬೇರೆ-ಬೇರೆ ಹೆಸರಿನಲ್ಲಿ ಆಚರಿಸಲಾಗುವುದು.
ಪಂಜಾಬ್ನಲ್ಲಿ ಈ ಹಬ್ಬವನ್ನು ಲೋಹರಿ ಎಂದು, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಬೋಗಲಿ ಬಿಹು, ಗುಜರಾತ್ ಮತ್ತು ರಾಜಸ್ತಾನದಲ್ಲಿ ಉತ್ತರಾಯಣ್ (ಗಾಳಿಪಟ ಹಾರಿಸುವ ಹಬ್ಬ), ಕರ್ನಾಟಕ, ಬಿಹಾರ, ಆಂಧ್ರ ಪ್ರದೇಶ ಮೊದಲಾದೆಡೆ ಮಕರ ಸಂಕ್ರಾಂತಿ, ತಮಿಳುನಾಡಿನಲ್ಲಿ ಪೊಂಗಲ್, ಕೇರಳದಲ್ಲಿ ಮಗರವಳಕ್ ಎಂದು ಆಚರಿಸಲಾಗುವುದು.
ನಮ್ಮ ಕರ್ನಾಟಕದಲ್ಲಿ ಸಂಕ್ರಾಂತಿ ಎಂದರೆ ಎಳ್ಳು ಬೆಲ್ಲ ಸವಿಯುವುದು, ಅದೇ ತಮಿಳುನಾಡಿನಲ್ಲಿ ಪೊಂಗಲ್ ಮಾಡಲಾಗುವುದು.ಮಕರ ಸಂಕ್ರಾಂತಿ ಹಬ್ಬದಲ್ಲಿ ಪೊಂಗಲ್, ಎಳ್ಳು ಬೆಲ್ಲ, ಕಬ್ಬು, ಕೊಬ್ಬರಿ, ಬಾರೆ ಹಣ್ಣು ಸವಿಯುವ ಸಂಪ್ರದಾಯವಿದೆ.
ಸಂಕ್ರಾಂತಿ ಹಬ್ಬವನ್ನು ಚಳಿಗಾಲದ ಮಧ್ಯದಲ್ಲಿ ಆಚರಿಸಲಾಗುವುದು, ಈ ಸಮಯದಲ್ಲಿ ವೈರಲ್ ಹಾಗೂ ಬ್ಯಾಕ್ಟಿರಿಯಾ ಸೋಂಕು ತಗುಲುವ ಸಾಧ್ಯತೆ ಹೆಚ್ಚು. ಈ ಸಮಯಕ್ಕೆ ನಮ್ಮ ಆರೋಗ್ಯಕ್ಕೆ ಏನು ಬೇಕು ಎಂಬುವುದು ನಮ್ಮ ಪೂರ್ವಜರಿಗೆ ತಿಳಿದಿರಬೇಕು, ಹಾಗಾಗಿಯೇ ದೇಹವನ್ನು ಬೆಚ್ಚಗಿಡುವ ಆಹಾರವನ್ನು ಸಂಕ್ರಾಂತಿ ಹಬ್ಬದ ಸಮಯದಲ್ಲಿ ಸವಿಯಲಾಗುವುದು.
ಸಂಕ್ರಾಂತಿ ಹಬ್ಬದಲ್ಲಿ ನಾವು ಸವಿಯುವ ಆಹಾರಗಳಲ್ಲಿರುವ ಆರೋಗ್ಯ ರಹಸ್ಯ ಬಗ್ಗೆ ಇಲ್ಲಿ ಹೇಳಿದ್ದೇವೆ ನೋಡಿ:

ಪೊಂಗಲ್:
ಪೊಂಗಲ್ ಅನ್ನು ಸಂಕ್ರಾಂತಿ ಹಬ್ಬದಂದು ಹೊರಗಡೆ ಒಲೆ ಹಚ್ಚಿ ಮಣ್ಣಿನ ಮಡಿಕೆಯಲ್ಲಿ ಮಾಡಲಾಗುವುದು. ಇದರಿಂದ ದೇಹಕ್ಕೆ ವಿಟಮಿನ್ ಡಿ ದೊರೆಯುವುದು, ಅಲ್ಲದೆ ಇದರಲ್ಲಿ ಅರಿಶಿಣ ಹಾಕುವುದರಿಂದ ವೈರಾಣುಗಳ ವಿರುದ್ಧ ಹೋರಾಡುವ ಸಾಮಾರ್ಥ್ಯ ದೇಹಕ್ಕೆ ನೋಈಡುತ್ತದೆ. ಇದರಲ್ಲಿ ರುಚಿಗಾಗಿ ಬಳಸುವ ಶುದ್ಧವಾದ ತುಪ್ಪದಲ್ಲಿ ಅನೇಕ ಪೋಷಕಾಂಶಗಳಿವೆ. ಇದು ತ್ವಚೆಯ ಮಾಯಿಶ್ಚರೈಸರ್ ಕಾಪಾಡಿ ತ್ವಚೆ ಹಾಗೂ ಕೂದಲನ್ನು ರಕ್ಷಣೆ ಮಾಡುತ್ತದೆ.
ಪೊಂಗಲ್ನಲ್ಲಿ ಬಳಸುವ ಅಕ್ಕಿ ಮತ್ತು ಹೆಸರು ಬೇಳೆ ದೇಹದಲ್ಲಿ ಕಾರ್ಬೋಹೈಡ್ರೇಟ್ಸ್ ಹಾಗೂ ಪ್ರೊಟಿನ್ ಸಮತೋಲನ ಕಾಪಾಡಲು ಸಹಕಾರಿ.

ಬೆಲ್ಲ
ಬೆಲ್ಲ ಲಿವರ್ ಅನ್ನು ಶುದ್ಧೀಕರಿಸುತ್ತದೆ ಹಾಗೂ ದೇಹದಲ್ಲಿರುವ ಕಶ್ಮಲವನ್ನು ಹೊರ ಹಾಕುತ್ತದೆ. ಬೆಲ್ಲದಲ್ಲಿ ಖನಿಜಾಂಶಗಳಾದ ಕ್ಯಾಲ್ಸಿಯಂ, ಕಬ್ಬಿಣದಂಶ, ಸತು, ರಂಜಕ, ಪೊಟಾಷ್ಯಿಯಂ, ಸೆಲೆನಿಯಂ ಇದ್ದು ಇವುಗಳು ದೇಹದಲ್ಲಿರುವ ಬೇಡದ ಕಶ್ಮಲವನ್ನು ಹೊರ ಹಾಕಲು ಸಹಕಾರಿ. ಅಲ್ಲದೆ ಚಳಿಗಾಲದಲ್ಲಿ ಕಾಡುವ ಉಸಿರಾಟದ ತೊಂದರೆ ತಡೆಗಟ್ಟಲು ಕೂಡ ಬೆಲ್ಲ ಸಹಕಾರಿ.

ಎಳ್ಳು-ಬೆಲ್ಲ:
ಎಳ್ಳು, ಒಣ ಕೊಬ್ಬರಿ, ನೆಲಗಡಲೆ, ಬೆಲ್ಲ ಇವುಗಳ ಮಿಶ್ರಣವಾಗಿದೆ.
ಎಳ್ಳು: ಇದರಲ್ಲಿ ತಾಮ್ರ, ಕ್ಯಾಲ್ಸಿಯಂ, ಸತು, ಕಬ್ಬಿಣದಂಶ ಹಾಗೂ ವಿಟಮಿನ್ ಇ ಇದ್ದು, ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು ಹಾಗೂ ಇದರಲ್ಲಿರುವ ಎಣ್ಣೆಯಂಶ ತ್ವಚೆ ಹಾಗೂ ಕೂದಲಿಗೆ ತುಂಬಾನೇ ಒಳ್ಳೆಯದು.
ಕೊಬ್ಬರಿ: ಇದರಲ್ಲಿ ನಾರಿನಂಶ ಅಧಿಕವಿದ್ದು ತ್ವಚೆ ಸಂಬಂಧಿ ಸೋಂಕು ಬಾರದಂತೆ ತಡೆಗಟ್ಟುತ್ತದೆ.
ನೆಲಗಡಲೆ: ಇದರಲ್ಲಿ ಒಮೆಗಾ 6 ಕೊಬ್ಬಿನಂಶ ಇದ್ದು ತ್ವಚೆಗೆ ತುಂಬಾ ಒಳ್ಳೆಯದು. ಇದರಲ್ಲಿ ವಿಟಮಿನ್ ಬಿ ಮತ್ತು ಬಯೋಟಿನ್ ಇರುವುದರಿಂದ ಕೂದಲಿನ ಆರೋಗ್ಯಕ್ಕೆ ಒಳ್ಳೆಯದು.

ಕಬ್ಬು:
ಇದರಲ್ಲಿ ಎಲೆಕ್ಟ್ರೋಲೈಟ್ಸ್, ಕ್ಯಾಲ್ಸಿಯಂ, ಕಬ್ಬಿಣದಂಶ ಇದ್ದು ಲಿವರ್ ಶುದ್ಧೀಕರಿಸಲು ತುಂಬಾನೇ ಸಹಕಾರಿ. ಇದು ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ, ಸೋಂಕಿನ ವಿರುದ್ಧ ಹೋರಾಡುತ್ತದೆ, ಚಳಿಗಾಲದಲ್ಲಿ ಸವಿಯಬಹುದಾದ ಅತ್ಯುತ್ತಮವಾದ ಜ್ಯೂಸ್ ಆಗಿದೆ.

ಬಾರೆ ಹಣ್ಣು
ಇದರಲ್ಲಿ ವಿಟಮಿನ್ ಸಿ ಇದ್ದು ಆ್ಯಂಟಿಆಕ್ಸಿಡೆಂಟ್ ದೇಹದಲ್ಲಿರುವ ಬೇಡದ ಕಣಗಳ ವಿರುದ್ಧ ಹೋರಾಡುತ್ತದೆ ಹಾಗೂ ಕಣಗಳಿಗೆ ಹಾನಿಯುಂಟಾಗುವುದನ್ನು ತಪ್ಪಿಸುತ್ತದೆ. ಮುಖದ ಕಾಂತಿ ಹೆಚ್ಚಿಸುವಲ್ಲಿ ಈ ಹಣ್ಣು ಸಹಕಾರಿ. ಇದು ರಕ್ತವನ್ನು ಕೂಡ ಶುದ್ಧೀಕರಿಸುತ್ತದೆ.