Just In
- 1 hr ago ವಾರ ಭವಿಷ್ಯ (ಏಪ್ರಿಲ್20-27) : ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?
- 5 hrs ago ಗುರು ಸಂಚಾರ 2024: ಕನ್ಯಾ ರಾಶಿಯಲ್ಲಿ 12 ತಿಂಗಳು ಗುರುವಿನ ಪ್ರಭಾವ ಹೇಗಿರಲಿದೆ?
- 14 hrs ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 14 hrs ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
Don't Miss
- News Tirumala Property: ತಿರುಪತಿ ತಿರುಮಲ ಶ್ರೀವಾರಿಯ 2023-24ರ ಆಸ್ತಿ ವಿವರ ಇಲ್ಲಿದೆ..
- Automobiles ಭಾರತದ ರಸ್ತೆಯಲ್ಲಿ ಘರ್ಜಿಸುತ್ತಿರುವ ಪವರ್ಫುಲ್ ಎಪ್ರಿಲಿಯಾ ಬೈಕ್ಗಾಗಿ ಅಕ್ಸೆಸರೀಸ್ ಬಿಡುಗಡೆ
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Movies Sathya ; ಸತ್ಯಾ ತವರು ಮನೆಗೆ ಅವಮಾನ ಮಾಡಿದ ಕೀರ್ತನ..!
- Technology Vivo: ಶೀಘ್ರದಲ್ಲೇ ವಿವೋ Y38 5G ಸ್ಮಾರ್ಟ್ಫೋನ್; ವಿನ್ಯಾಸ ಮತ್ತು ಫೀಚರ್ಸ್ ಲೀಕ್
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸ್ವ ಮೂತ್ರ ಸೇವನೆಯ ಚಿಕಿತ್ಸೆ-ಅಸಹ್ಯ ಪಡಬೇಡಿ, ಇದು ಹಲವಾರು ರೋಗಗಳಿಗೆ ರಾಮಬಾಣ
ಲೇಖನದ ಶೀರ್ಷಿಕೆಯೇ ಮುಜುಗರ ತರಿಸುವಂತಿದೆಯಲ್ಲವೇ? ಆದರೆ ಭಾರತದ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿಯವರೂ ಈ ಕ್ರಿಯೆಯನ್ನು ಒಂದು ಚಿಕಿತ್ಸಾ ರೂಪದಲ್ಲಿ ಅನುಸರಿಸುತ್ತಾ ಬಂದಿದ್ದು ಮಾತ್ರವಲ್ಲದೇ 1978ರಲ್ಲಿ ದೇಶವನ್ನುದ್ದೇಶಿಸಿ ಈ ಚಿಕಿತ್ಸೆಯ ಮೂಲಕ ದುಬಾರಿ ಆಸ್ಪತ್ರೆ ಖರ್ಚು ಭರಿಸಲಾಗದ ಮಿಲಿಯಾಂತರ ಭಾರತೀಯರಿಗೆ ನೆರವಾಗಲಿದೆ ಎಂದೂ ಕರೆ ನೀಡಿದ್ದರು. ಎಲ್ಲಿಯವರೆಗೆ ಈ ಕ್ರಿಯೆಯನ್ನು 'ಚಿಕಿತ್ಸೆ' ಎಂಬ ಪದದ ಮೂಲಕ ಪರಿಗಣಿಸುವುದಿಲ್ಲವೋ, ಅಲ್ಲಿಯವರೆಗೆ ಎಲ್ಲರಿಗೂ ಇದೊಂದು ಮಲಿನ ವಿಷಯವೇ ಆಗಿದೆ.
ಈ ಚಿಕಿತ್ಸೆಯನ್ನು ಡೇವಿಡ್ ವೊಲ್ಫ್ ಎಂಬುವರು ಹಲವಾರು ವರ್ಷಗಳ ಹಿಂದೆಯೇ ಪ್ರಸ್ತುತಪಡಿಸಿದ್ದು ವೈದ್ಯವಿಜ್ಞಾನದಲ್ಲಿ AUT(auto-urine therapy ಅಥವಾ amaroli) ಎಂಬ ಹೆಸರನ್ನೂ ನೀಡಲಾಗಿದೆ. ಈ ಪದ್ದತಿಯನ್ನು ಅಳವಡಿಸಿಕೊಂಡರೋ ಇಲ್ಲವೋ ಬೇರೆ ಮಾತು, ಆದರೆ ಕುತೂಹಲವನ್ನು ಕೆರಳಿಸಿದ್ದಂತೂ ನಿಜ.
ಮೂತ್ರ ನೊರೆ ನೊರೆಯಿಂದ ಕೂಡಿದ್ದರೆ, ಆರೋಗ್ಯ ಸಮಸ್ಯೆವಿದೆ ಎಂದರ್ಥ!
ಕೆಲವು ವ್ಯಕ್ತಿಗಳು ತಮ್ಮ ಕ್ಯಾನ್ಸರ್ ನ ಚಿಕಿತ್ಸೆಗೆ ಸ್ವತಃ ಹಸಿವಿದ್ದು ಈ ಅವಧಿಯಲ್ಲಿ ಸಂಗ್ರಹಿಸಿದ ಮೂತ್ರದ ಪಾನ ಮಾಡುತ್ತಿದ್ದಾರೆ ಎಂದು ನಾವು ಕೇಳಿದ್ದೇವೆ. ಕ್ಯಾನ್ಸರ್ ಎಂಬ ಭಯಾನಕ ಕಾಯಿಲೆಗೆ ಚಿಕಿತ್ಸೆ ಎಂದಾದರೆ ಅನಿವಾರ್ಯವೆಂದರೂ ಸರಿ, ನಾವು ಇಂತಹ ಯಾವುದೇ ಕ್ರಮಕ್ಕೆ ಮುಂದಾಗುವುದು ಖಂಡಿತ. ಆದರೆ ಈ ಚಿಕಿತ್ಸೆ ಫಲಕಾರಿಯಾದುದರ ಕಾರಣ ಇಂದಿನ ಆಧುನಿಕ ವೈದ್ಯವಿಜ್ಞಾನವೂ ಈ ವಿಧಾನಕ್ಕೆ ಮನ್ನಣೆ ನೀಡಿ ಒಂದು ಚಿಕಿತ್ಸಾ ಕ್ರಮವಾಗಿ ಸ್ವೀಕರಿಸಿದೆ.
ಭಾರತದಲ್ಲಿ ಸಾವಿರಾರು ವರ್ಷಗಳಿಂದ ಈ ಕ್ರಿಯೆಯನ್ನು ಆಯುರ್ವೇದ ಅನುಸರಿಕೊಂಡು ಬರುತ್ತಿದೆ. ಸ್ವಮೂತ್ರಪಾನದ ಪ್ರಭಾವವನ್ನು ಸುಲಭವಾಗಿ ಜನರು ಅರಿತುಕೊಳ್ಳಲಾರರು. ಯಾವಾಗ ಈ ಕ್ರಿಯೆಯ ಪರಿಣಾಮ ಕಂಡುಬರುತ್ತದೆಯೋ ಆಗಲೇ ಇದರ ಸಾಮರ್ಥ್ಯ ಕಂಡು ಮೂಗಿನ ಮೇಲೆ ಬೆರಳಿಡುವಂತಾಗುತ್ತದೆ.
ಅತ್ಯುತ್ತಮ ದ್ರವ ಎಂದು ಸಾವೀರಾರು ವರ್ಷಗಳ ಹಿಂದೆಯೇ ದೃಢಪಟ್ಟಿದೆ!
ಭಾರತದಲ್ಲಿ ಮಾತ್ರವಲ್ಲ, ರೋಮನ್ನರೂ, ಪ್ರಾಚೀನ ಚೀನೀಯರೂ ಈ ಪದ್ದತಿಯನ್ನು ಅನುಸರಿಸಿ ಆರೋಗ್ಯ ಕಾಪಾಡಲು ಅತ್ಯುತ್ತಮ ದ್ರವ ಎಂದು ಕಂಡುಕೊಂಡಿದ್ದಾರೆ. ಪ್ರಾಚೀನ ಈಜಿಪ್ಟ್, ಚೀನಾ, ಹಿಂದೂ ಮತ್ತು ಅಜ್ಟೆಕ್ ಗ್ರಂಧಗಳಲ್ಲಿ ಚಿಕಿತ್ಸಾ ರೂಪದಲ್ಲಿ ಸ್ವಮೂತ್ರಪಾನ ಬಳಕೆಯಲ್ಲಿತ್ತು ಎಂಬ ಉಲ್ಲೇಖವಿದೆ. ಕ್ರೈಸ್ತ್ರರ ಪವಿತ್ರ ಬೈಬಲ್ ಗ್ರಂಥದ ಅಧ್ಯಾಯ 5:15ರಲ್ಲಿ ಹೀಗೆ ವಿವರಿಸಲಾಗಿದೆ: "Drink water from thine own cistern and the streams of thine own well." (ನೀವು ನಿಮ್ಮದೇ ನೀರಿನ ತೊಟ್ಟಿಯ ನೀರನ್ನು ಮತ್ತು ನಿಮ್ಮದೇ ಸ್ವಂತ ಬಾವಿಯ ಝರಿಯನ್ನು ಕುಡಿಯಿರಿ"
ಅಷ್ಟಕ್ಕೂ ಮೂತ್ರ ಎಂದರೇನು?
ನಮ್ಮ ದೇಹದ ರಕ್ತವನ್ನು ಶೋಧಿಸಿ ಮೂತ್ರಪಿಂಡಗಳು ನೀರಿನಲ್ಲಿ ಕರಗಿಸಿ ಹೊರಹಾಕುವ ಈ ದ್ರವದಲ್ಲಿ ಕೆಲವು ಕಿಣ್ವಗಳೂ, ವಿಟಮಿನ್ನುಗಳೂ, ಖನಿಜಗಳೂ ಇರುತ್ತವೆ ಹಾಗೂ ಇದೊಂದು ರಚನಾತ್ಮಕ ಷಡ್ಭುಜೀಯ ದ್ರವ (structured hexagonal liquid)ವೂ ಆಗಿದೆ. ನಮ್ಮ ದೇಹವೇ ಇದನ್ನು ಉತ್ಪಾದಿಸುವ ಕಾರಣ ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಇನ್ನಷ್ಟು ಉತ್ತಮಗೊಳಿಸಲು ಹಾಗೂ ದೇಹ ಯಾವ ಕಣ ದೇಹಕ್ಕೆ ಸಂಬಂಧಿಸಿದ್ದು ಮತ್ತು ಸಂಬಂಧಿಸಿಲ್ಲ ಎಂಬ ವಿಶ್ಲೇಷಣೆಯನ್ನು ಇನ್ನಷ್ಟು ಸಮರ್ಥವಾಗಿ ಮಾಡಲು ಸಾಧ್ಯವಾಗುತ್ತದೆ. ಈ ಮೂಲಕ ದೇಹದೊಳಗೆ ಆಗಮಿಸುವ ಸೂಕ್ಷ್ಮ ಕ್ರಿಮಿ, ವೈರಸ್ಸುಗಳನ್ನು ಹೊಡೆದೋಡಿಸಲು ರೋಗನಿರೋಧಕ ಶಕ್ತಿಯನ್ನು ಅತಿ ಹೆಚ್ಚು ಬಲಪಡಿಸಲು ಸಾಧ್ಯವಾಗುತ್ತದೆ. ಇನ್ನೂ ಸುಲಭವಾಗಿ ಹೇಳಬೇಕೆಂದರೆ ಒಂದು ಬಾರಿ ಓದಿದ ಪುಸ್ತಕವನ್ನು ಅಥವಾ ನೋಡಿದ ಸಿನೇಮಾವನ್ನು ಮತ್ತೊಮ್ಮೆ ಓದಿದಾಗ ಅಥವಾ ನೋಡಿದಾಗ ಇನ್ನಷ್ಟು ಚೆನ್ನಾಗಿ ಅರ್ಥವಾಗುತ್ತದೆಯಲ್ಲವೇ ಹಾಗೇ ಇದೂ ಸಹಾ.
ಅಷ್ಟಕ್ಕೂ ಮೂತ್ರ ಎಂದರೇನು?
ಒಂದು ವಿಷಯವನ್ನು ಒಂದೇ ಬಾರಿ ಓದಿದಾಗ ಅರ್ಥವಾಗದ್ದು ಎರಡನೆಯ ಅಥವಾ ಮೂರನೆಯ ಬಾರಿ ಓದಿದಾಗಲೇ ಮನದಟ್ಟಾಗುತ್ತದೆ. ಸ್ವಮೂತ್ರಪಾನವೂ ಇದೇ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ದೇಹಕ್ಕೆ ಹಲವಾರು ಅಗತ್ಯ ಪೋಷಕಾಂಶಗಳನ್ನು ಒದಗಿಸುವ ಜೊತೆಗೇ ನಮ್ಮ ದೇಹದ ಪ್ರತಿ ಜೀವಕೋಶಕ್ಕೂ ಒಂದು ಬಗೆಯ ಶಿಕ್ಷಕನಂತೆಯೂ ಕಾರ್ಯನಿರ್ವಹಿಸುತ್ತದೆ.
ಸ್ವಮೂತ್ರಪಾನವೇಕೆ ಬೇಕು?
ಇದಕ್ಕೆ ಕಾರಣ ತುಂಬಾ ಸರಳವಾಗಿದೆ. ರಕ್ತವನ್ನು ಮೂತ್ರಪಿಂಡಗಳು ಶೋಧಿಸಿದ ಬಳಿಕ ಉಳಿಯುವ ದ್ರವವೇ ಮೂತ್ರ ಎಂದು ವಿಜ್ಞಾನಿಗಳು ತಿಳಿಸುತ್ತಾರೆ. ಅಂದರೆ ಇದು ದೇಹದ ಹೆಚ್ಚುವರಿ ನೀರಲ್ಲ॒! ಪೋಷಕಾಂಶ ಹಾಗೂ ಆಮ್ಲಜನಕವನ್ನು ಹೊತ್ತೊಯ್ದ ರಕ್ತಕಣಗಳು ಯಕೃತ್ ನ ಮೂಲಕ ಹಾದು ಹೋದಾಗ ಕಲ್ಮಶ ಮತ್ತು ವಿಷಕಾರಿ ವಸ್ತುಗಳು ರಕ್ತದಿಂದ ಪ್ರತ್ಯೇಕಿಸಲ್ಪಟ್ಟು ದೇಹದಿಂದ ಹೊರಗೆ ವಿಸರ್ಜಿಸಲ್ಪಡುತ್ತವೆ. ಯಕೃತ್ ನಲ್ಲಿ ಶೋಧಿಸಲ್ಪಟ್ಟ ಶುದ್ಧ ರಕ್ತ ಈಗ ಮೂತ್ರಪಿಂಡಗಳ ಮೂಲಕ ಹಾದು ಹೋಗುತ್ತದೆ ಹಾಗೂ ಅಗತ್ಯಕ್ಕೂ ಹೆಚ್ಚಾಗಿರುವ ಪೋಷಕಾಂಶಗಳನ್ನು ಮೂತ್ರಪಿಂಡ ನಿವಾರಿಸಿ ಅಗತ್ಯವಿದ್ದಷ್ಟನ್ನೇ ಕಳಿಸುತ್ತದೆ. ಈ ಕ್ರಿಯೆಗೆ Plasma ultrafiltrate ಎಂದು ಕರೆಯುತ್ತಾರೆ ಹಾಗೂ ಈ ಮೂಲಕ ಪ್ಲಾಸ್ಮಾ ಅಥವಾ ರಕ್ತದ ನೀರಿನಂಶದಲ್ಲಿ ಅತ್ಯಂತ ಸಮರ್ಪಕ ಪ್ರಮಾಣದಲ್ಲಿ ಪೋಷಕಾಂಶಗಳು, ಯೂರಿಯಾ, ಕಿಣ್ವಗಳು, ರಸದೂತಗಳು, ವಿಟಮಿನ್ನುಗಳು ಪ್ರತಿಜೀವಕಗಳು ಹಾಗೂ ಖನಿಜಗಳು ಇರುತ್ತವೆ.
ಸ್ವಮೂತ್ರಪಾನವೇಕೆ ಬೇಕು?
ಈ ದ್ರವಕ್ಕೆ ಅತ್ಯುತ್ತಮವಾದ ಬ್ಯಾಕ್ಟೀರಿಯಾನಿವಾರಕ, ವೈರಸ್ ನಿವಾರಕ ಹಾಗೂ ಶಿಲೀಂಧ್ರ ನಿವಾರಕ ಗುಣಗಳಿರುತ್ತವೆ. ಈ ಮೂಲಕ ದೇಹದಲ್ಲಿ ಉಪ್ಪು ಮತ್ತು ನೀರಿನ ಸಮತೋಲನವನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ. ಯೂರಿಯಾ ಬ್ಯಾಕ್ಟೀರಿಯಾಗಳು ಮತ್ತು ಶಿಲೀಂಧ್ರಗಳನ್ನು ಕೊಲ್ಲುತ್ತದೆ ಹಾಗೂ ಇವುಗಳಿಂದ ಎದುರಾಗಿದ್ದ ಉರಿಯೂತವನ್ನೂ ನಿವಾರಿಸುತ್ತದೆ (ಮಣ್ಣಿನ ಗೊಬ್ಬರವಾಗಿ ಯೂರಿಯಾವನ್ನು ಹಿಂದೆ ವ್ಯಾಪಕವಾಗಿ ಬಳಸಲಾಗುತ್ತಿತ್ತು. ಆದರೆ ಮಣ್ಣಿನಲ್ಲಿರುವ ಪರಿಸರಸ್ನೇಹಿ ಬ್ಯಾಕ್ಟೀರಿಯಾಗಳನ್ನೂ ಇವು ಕೊಂದು ಮಣ್ಣನ್ನೇ ನಿಸ್ಸಾರವಾಗಿಸುವ ಕಾರಣ ಇಂದು ಇದರ ಬಳಕೆ ರಸಗೊಬ್ಬರದಲ್ಲಿ ನಿಲ್ಲಿಸಲಾಗಿದೆ). ಈ ಗುಣದಿಂದಾಗಿಯೇ ಯೂರಿಯಾವನ್ನು ಹಲವು ಚರ್ಮ ಮತ್ತು ಕೂದಲ ಪ್ರಸಾದನಗಳಲ್ಲಿಯೂ ಬಳಸಲಾಗುತ್ತದೆ. ಸಮುದ್ರದಲ್ಲಿ ಅಡ್ಡಾಡುವವರಿಗೆ ಅಕಸ್ಮಾತ್ತಾಗಿ ವಿದ್ಯುತ್ ರೇ ಮೀನು ಅಥವಾ ಬೇರಾವುದೋ ಸಾಗರ ಜೀವಿಯ ಮುಳ್ಳು ಚುಚ್ಚಿದರೆ ತಕ್ಷಣವೇ ಈ ಭಾಗದ ಮೇಲೆ ಮೂತ್ರ ಹೊಯ್ದುಬಿಡುವಂತೆ ಸಲಹೆ ನೀಡಲಾಗಿರುತ್ತದೆ. ಏಕೆಂದರೆ ನಮ್ಮ ಮೂತ್ರವೇ ಆ ಸಮಯದಲ್ಲಿ ತಕ್ಷಣ ಲಭಿಸುವ ಬ್ಯಾಕ್ಟೀರಿಯಾ ನಿವಾರಕ, ಶಿಲೀಂಧ್ರ ನಿವಾರಕ ಹಾಗೂ ವೈರಸ್ ನಿವಾರಕ ದ್ರವವಾಗಿರುತ್ತದೆ.
ಫಲವತ್ತತೆಯನ್ನು ಹೆಚ್ಚಿಸಲೂ ಸಹಕಾರಿ
ಒಂದು ವೇಳೆ ನೀರೇ ಇಲ್ಲದೇ ತೇಲುಗಣ್ಣು ಮೇಲುಗಣ್ಣು ಮಾಡುವ ಸ್ಥಿತಿಯಲ್ಲಿದ್ದಾಗ ಸ್ವಮೂತ್ರಪಾನ ಜೀವ ಉಳಿಸಿಕೊಳ್ಳಲೊಂದು ಅಗತ್ಯಕ್ರಮವಾಗಿದೆ. ಸಂಧಿವಾತ, ಕ್ಯಾನ್ಸರ್, ಹೆಪಟೈಟಿಸ್, ಮಲ್ಟಿಪಲ್ ಸ್ಕ್ಲೆರೋಸಿಸ್, ಎಕ್ಸಿಮಾ, ಸೋರಿಯಾಸಿಸ್, ಮಧುಮೇಹ, ಹರ್ಪಿಸ್ ಹಾಗೂ ಅಡ್ರಿನಲ್ ಗ್ರಂಥಿಯ ವೈಫಲ್ಯ ಮೊದಲಾದ ಕಾಯಿಲೆಗಳಿಗೆ ಚಿಕಿತ್ಸೆಯ ರೂಪದಲ್ಲಿಯೂ ಪ್ರಯೋಗಿಸಲಾಗುತ್ತಿದೆ. ಫಲವತ್ತತೆಯನ್ನು ಹೆಚ್ಚಿಸಲೂ ಸ್ವಮೂತ್ರಪಾನ ಉತ್ತಮ ನೆರವು ನೀಡುತ್ತದೆ. ಅಲ್ಲದೇ ಪ್ರೆಮಾರಿನ್ ಎಂಬ ಔಷಧಿಯಲ್ಲಿ ಕುದುರೆಯ ಮೂತ್ರದಿಂದ ಸಂಗ್ರಹಿಸಲಾದ ಯೂರಿಯಾವನ್ನು ಸೇರಿಸಿರಲಾಗಿರುತ್ತದೆ.