Just In
- 23 min ago ದಿನ ಭವಿಷ್ಯ ಏಪ್ರಿಲ್ 21: ಭಾನುವಾರ ಯಾವ ರಾಶಿಯವರಿಗೆ ಒಳ್ಳೆಯದು? ಹಣಕಾಸು ಹೇಗಿರಲಿದೆ?
- 2 hrs ago ಗುರು ಸಂಚಾರ 2024: ವೃಶ್ಚಿಕ ರಾಶಿಯವರಿಗೆ ಗುರು ಸಂಚಾರದಿಂದ ಅದೃಷ್ಟದ ಬೆಂಬಲ
- 4 hrs ago ಗುರು ಸಂಚಾರ 2024: ತುಲಾ ರಾಶಿಯಲ್ಲಿ 12 ತಿಂಗಳು ಗುರುವಿನ ಪ್ರಭಾವ ಹೇಗಿರಲಿದೆ?
- 7 hrs ago 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
Don't Miss
- Movies ಯಾರಿಗೂ ಹೇಳ್ಬೇಡಿ ; ಬಾಲಿವುಡ್ ಯಾರಿಗೂ ಸುರಕ್ಷಿತವಲ್ಲ ಎಂದ ಪ್ರೀತಿ ಜಿಂಟಾ..!
- Sports DC vs SRH: ಟ್ರಾವಿಸ್ ಹೆಡ್, ಅಭಿಷೇಕ್ ದಾಖಲೆಯ ಜೊತೆಯಾಟ: ಡೆಲ್ಲಿ ಗೆಲುವಿಗೆ ಬೃಹತ್ ಗುರಿ
- News ಕಲೆ ಮತ್ತು ಕಲೆಗಾರ! ಪ್ರಧಾನಿ ನರೇಂದ್ರ ಮೋದಿ ಕಾಲೆಳೆದ ಸಿಎಂ ಸಿದ್ದರಾಮಯ್ಯ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಯಾವುದೇ ಕಾರಣಕ್ಕೂ 'ಸೋರೆಕಾಯಿ-ಜ್ಯೂಸ್' ಮಿಸ್ ಮಾಡಬೇಡಿ!
ಸೋರೆಕಾಯಿಯ ಚಿಕ್ಕ ಚಿಕ್ಕ ತುಂಡುಗಳನ್ನು ಮಿಕ್ಸಿಯ ಬ್ಲೆಂಡರಿನಲ್ಲಿ ಗೊಟಾಯಿಸಿ ಜ್ಯೂಸ್ ತಯಾರಿಸಿ,ದಿನನಿತ್ಯ ಕುಡಿಯುತ್ತಾ ಬಂದರೆ, ಆರೋಗ್ಯಕ್ಕೆ ದುಪ್ಪಟ್ಟು ಲಾಭಗಳಿವೆ....
ಬೆಳಗ್ಗೆ ಎದ್ದು ಇಂದು ಸಾರು ಏನು ಮಾಡುವುದು ಎಂದು ಆಲೋಚಿಸುವಾಗ ಮೊದಲು ನಮಗೆ ನೆನಪಿಗೆ ಬರುವ ತರಕಾರಿಗಳಲ್ಲಿ ಸೋರೆಕಾಯಿಯು ಒಂದು. ಬೇಳೆ ಸಾರಿನ ಜೊತೆಗೆ ಸೋರೆಕಾಯಿಯನ್ನು ಹಾಕಿ ಸಾರು ಮಾಡಿಕೊಂಡು, ಬಿಸಿ ಬಿಸಿ ಅನ್ನದ ಜೊತೆಗೆ ತುಪ್ಪವನ್ನು ಹಾಕಿಕೊಂಡು ಸೇವಿಸುವುದು ಹಲವರಿಗೆ ತುಂಬಾ ಇಷ್ಟವಾಗುವ ಊಟದ ಕ್ರಮವಾಗಿರುತ್ತದೆ. ಸೋರೆಕಾಯಿಯ ಚಿಕ್ಕ ಚಿಕ್ಕ ತುಂಡುಗಳನ್ನು ಮಿಕ್ಸಿಯ ಬ್ಲೆಂಡರಿನಲ್ಲಿ ಗೊಟಾಯಿಸಿ ಜ್ಯೂಸ್ ತಯಾರಿಸಿ, ಇದಕ್ಕೆ ಒಂದು ದೊಡ್ಡಚಮಚ ಜೇನು ಸೇರಿಸಿ ಚೆನ್ನಾಗಿ ಕಲಕಿ, ಪ್ರತಿದಿನ ಸೇವಿಸುತ್ತಾ ಬಂದರೆ ಆರೋಕ್ಕೆ ಹಲವಾರು ರೀತಿಯ ಪ್ರಯೋಜನಗಳಿವೆ... ಬನ್ನಿ ಸೋರೆಕಾಯಿಯ ಆರೋಗ್ಯಕರ ಗುಣಗಳು ಬಹಳಷ್ಟಿದ್ದು ಕೆಲವೊಂದನ್ನು ಈ ಲೇಖನಗಳಲ್ಲಿ ನೀಡಲಾಗಿದೆ, ಮುಂದೆ ಓದಿ....
ರಕ್ತಹೀನತೆ ಸಮಸ್ಯೆಗೆ
ಇದರಲ್ಲಿ ಕಬ್ಬಿಣ ಹೆಚ್ಚಿರುವ ಕಾರಣದಿಂದ ರಕ್ತದ ಕಣಗಳಿಗೆ ಉಪಯುಕ್ತವಗಿದೆ. ರಕ್ತಹೀನತೆಯಿಂದ ಬಳಲುವವರಿಗೆ ಇದು ಅತ್ಯುತ್ತಮವಾದ ಆಯ್ಕೆಯಾಗಿದೆ.
ಜೀರ್ಣಕ್ರಿಯೆಗೆ ಸಹಕಾರಿ
ಈ ಜ್ಯೂಸ್ ನಲ್ಲಿರುವ ವಿಟಮಿನ್ ಬಿ ಜೀವರಾಸಾಯನಿಕ ಕ್ರಿಯೆಯನ್ನು ಹೆಚ್ಚಿಸುವ ಮೂಲಕ ಜೀರ್ಣಕ್ರಿಯೆಗೆ ಹೆಚ್ಚಿನ ನೆರವು ನೀಡುತ್ತದೆ.
ಸಂತಾನಫಲತೆಗೆ ಸಹಕಾರಿ
ಈ ಜ್ಯೂಸ್ ಕುಡಿಯುವ ಮೂಲಕ ಮಹಿಳೆಯರಲ್ಲಿ ಸಂತಾನಫಲತೆಯ ಸಾಧ್ಯತೆ ಹೆಚ್ಚುತ್ತದೆ.
ಮಧುಮೇಹಿಗಳಿಗೆ ರಾಮಬಾಣ
ಈ ಜ್ಯೂಸ್ ಮಧುಮೇಹಿಗಳಿಗೆ ಅತ್ಯುತ್ತಮವಾದ ಆಯ್ಕೆಯಾಗಿದೆ. ಆದರೂ ನಿಮ್ಮ ಕುಟುಂಬ ವೈದ್ಯರ ಸಲಹೆ ಪಡೆದೇ ಕುಡಿಯುವುದು ಸೂಕ್ತ.
ನಿದ್ರಾಹೀನತೆ ಸಮಸ್ಯೆಯಿದ್ದರೆ
ನಿದ್ರಾಹೀನತೆಯಿಂದ ಬಳಲುತ್ತಿರುವ ವ್ಯಕ್ತಿಗಳು ಒಂದು ಕಪ್ ಅನ್ನು ನಿತ್ಯವೂ ಮಲಗುವ ಮುನ್ನ ಕುಡಿದರೆ ಉತ್ತಮ ನಿದ್ದೆ ಲಭ್ಯವಾಗುತ್ತದೆ. ಇದರಲ್ಲಿರುವ ಪೋಷಕಾಂಶಗಳು ಮಾನಸಿಕ ಒತ್ತಡವನ್ನು ಕಡಿಮೆಗೊಳಿಸಿ ರಕ್ತ ದೊತ್ತಡವನ್ನೂ ಸಾಮಾನ್ಯ ಮಟ್ಟಕ್ಕೆ ತರಲು ನೆರವಾಗುವ ಮೂಲಕ ಉತ್ತಮ ನಿದ್ದೆ ಪಡೆಯಲು ಸಹಕರಿಸುತ್ತವೆ.
ಮೂತ್ರಪಿಂಡಗಳಿಗೂ ಉತ್ತಮ
ಮೂತ್ರಪಿಂಡಗಳು (ಕಿಡ್ನಿ) ಮತ್ತು ಮೂತ್ರವ್ಯವಸ್ಥೆಯನ್ನು ಉತ್ತಮಗೊಳಿಸಲು ಸೋರೆಕಾಯಿ ಉತ್ತಮವಾಗಿದೆ. ಇದು ಕ್ಷಾರೀಯವಾಗಿದ್ದು ದ್ರವದಲ್ಲಿರುವ ಆಮ್ಲೀಯತೆಯನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಅಲ್ಲದೇ ಇದು ಉತ್ತಮ ಮೂತ್ರವರ್ಧಕವೂ ಆಗಿದ್ದು ಮೂತ್ರದ ಸೋಂಕಿನಿಂದ ಕಾಪಾಡುತ್ತದೆ. ವಿಶೇಷವಾಗಿ ಮಹಿಳೆಯರಲ್ಲಿ ಸಂತಾನಫಲವನ್ನು ಹೆಚ್ಚಿಸುವ ಮೂಲಕ ಶುಭಸುದ್ದಿ ಪಡೆಯಲು ನೆರವಾಗುತ್ತದೆ.