Just In
- 27 min ago ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
- 2 hrs ago ದಿನ ಭವಿಷ್ಯ ಏಪ್ರಿಲ್ 20: ಶನಿವಾರದ ಈ ಶುಭ ದಿನ ನಿಮ್ಮ ರಾಶಿಗೆ ಹೇಗಿರಲಿದೆ?
- 3 hrs ago ವೃಷಭ ರಾಶಿಗೆ ಗುರು ಸಂಚಾರ: 10ನೇ ಮನೆಯಲ್ಲಿ ಗುರು ಸಿಂಹ ರಾಶಿಯವರು ಆಸ್ತಿ ಖರೀದಿಸಬಹುದು
- 4 hrs ago ಸೌರಮಂಡಲದಲ್ಲಿದೆ 9ನೇ ಗ್ರಹ..! ಯಾವುದದು..? ಎಲ್ಲಿದೆ..?
Don't Miss
- News ಹುಬ್ಬಳ್ಳಿ ನೇಹಾ ಕೊಲೆ ಪ್ರಕರಣ: ಸಿದ್ದರಾಮಯ್ಯ ಸರ್ಕಾರವೇ ನೇರ ಹೊಣೆ ಎಂದ ಬಿಜೆಪಿ ಶಾಸಕ
- Sports LSG vs CSK IPL 2024: ಮತ್ತೊಮ್ಮೆ ಧೋನಿ, ಜಡೇಜಾ ಅಬ್ಬರ; ಲಕ್ನೋ ತಂಡಕ್ಕೆ ಸವಾಲಿನ ಗುರಿ ನೀಡಿದ ಸಿಎಸ್ಕೆ
- Movies Puttakkana Makkalu:ಸ್ನೇಹಾ ಕೈ ಸೇರಿಯೇ ಬಿಡ್ತು ವಿಚ್ಛೇದನದ ಪೇಪರ್; ಮುಂದೇನು?
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬೀಟ್ರೂಟ್- ಬಣ್ಣ ಕೆಂಪಾಗಿರಬಹುದು, ಆದರೆ ಪವರ್ ಜಬರ್ದಸ್ತ್!
ಕೇವಲ ತನ್ನ ಬಣ್ಣದ ಕಾರಣ ಹೆಚ್ಚಿನವರ ಅವಗಣನೆಗೆ ಒಳಗಾಗಿರುವ ತರಕಾರಿ ಎಂದರೆ ಬೀಟ್ರೂಟ್. ಹೆಚ್ಚಿನವರು ಕೆಂಪು ಬಣ್ಣವನ್ನು ತಮ್ಮ ಊಟದಲ್ಲಿ ಇಷ್ಟಪಡದಿರುವುದೇ ಇದಕ್ಕೆ ಕಾರಣ. ವಾಸ್ತವವಾಗಿ ಜೀವ ಉಳಿಸುವ ಔಷಧಿ ಕಹಿಯಿರುವಂತೆ ಬಣ್ಣದಲ್ಲಿ ಆಕರ್ಷಕವಲ್ಲದಿದ್ದರೂ ಪೋಷಕಾಂಶಗಳ ಆಗರವಾಗಿರುವ ಬೀಟ್ರೂಟ್ ಅನ್ನು ನಮ್ಮ ಆಹಾರದಲ್ಲಿ ನಿಯಮಿತವಾಗಿ ಸೇರಿಸುವ ಮೂಲಕ ಇದರ ಅದ್ಭುತ ಪ್ರಯೋಜನಗಳನ್ನು ಪಡೆಯಬಹುದು .
ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು, ರಕ್ತದಲ್ಲಿರುವ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡಲು ಮತ್ತು ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸಲು- ಮೊದಲಾದ ರೀತಿಯಲ್ಲಿ ಈ ಕೆಂಪುಕೆಂಪಾದ ಗಡ್ಡೆ ನಮ್ಮ ನೆರವಿಗೆ ಬರುತ್ತದೆ. ಅತ್ಯಂತ ಮುಖ್ಯವಾಗಿ ನಮ್ಮ ರಕ್ತದಲ್ಲಿ ಕೆಂಪು ರಕ್ತಕಣಗಳ ಕೊರತೆಯಿಂದಾಗಿ ಉಂಟಾಗುವ ಅನೀಮಿಯಾ ಸ್ಥಿತಿಗೂ ಬೀಟ್ರೂಟ್ ನೀಡುವ ನೆರವು ಯಾವುದೇ ಬೇರೆ ಆಹಾರದಲ್ಲಿಲ್ಲ!
ಅಧ್ಯಯನ ವರದಿ: ವ್ಯಾಯಮದ ಬಳಿಕ ಚೆನ್ನಾಗಿ ಬೀಟ್ರೂಟ್ ಸೇವಿಸಬೇಕಂತೆ!
ಬೀಟ್ರೂಟ್ ಅನ್ನು ಕೇವಲ ತರಕಾರಿಯಾಗಿ ಅಲ್ಲದೇ ಇತರ ರೂಪದಲ್ಲಿಯೂ ಭಾರತದಲ್ಲಿ ಬಳಸಲಾಗುತ್ತಿದೆ. ಹಸಿಯಾಗಿ ಸಾಲಾಡ್ ರೂಪದಲ್ಲಿ, ರಸ ತೆಗೆದು ಜ್ಯೂಸ್ ರೂಪದಲ್ಲಿ, ಹಲ್ವಾ ಮೊದಲಾದ ಸಿಹಿತಿಂಡಿಗಳ ರೂಪದಲ್ಲಿ, ಇತರ ಅಡುಗೆಗಳಿಗೆ ಬಣ್ಣ ನೀಡಲೂ ಬಳಕೆಯಾಗುತ್ತಿದೆ. ಇಂತಹ ಉತ್ತಮ ತರಕಾರಿಯ ಹತ್ತು ಗುಣಗಳ ಸಾರಾಂಶವನ್ನು ಇಲ್ಲಿ ನೀಡಲಾಗಿದೆ. ಸಾಂಬಾರ್, ಪಲ್ಯ, ಸಲಾಡ್, ಸಿಹಿ ತಿಂಡಿ ಸೇರಿದಂತೆ ಇನ್ನೂ ಅನೇಕ ಆಹಾರ ಪದಾರ್ಥಗಳನ್ನು ತಯಾರಿಸಬಹುದು. ಆಹಾರ ಮೂಲಕ ಬೀಟ್ರೂಟ್ ಸೇವಿಸಿದರೆ ಅನೇಕ ಆರೋಗ್ಯಕರ ಉಪಯೋಗಗಳನ್ನು ಪಡದುಕೊಳ್ಳಬಹುದು. ಹಾಗಾದರೆ ಆ ಉಪಯೋಗಗಳು ಯಾವವು? ಎನ್ನುವುದನ್ನು ನೀವು ಅರಿಯಬೇಕೆಂದಿದ್ದರೆ ಮುಂದಿರುವ ವಿವರಣೆಯನ್ನು ಓದಿ....
ರಕ್ತದಲ್ಲಿನ ಹೀಮೋಗ್ಲೋಬಿನ್ ಹೆಚ್ಚಿಸುತ್ತದೆ
ಈ ತರಕಾರಿಯನ್ನು ಹಸಿಯಾಗಿ ಸೇವಿಸಬಹುದಾದರೂ ಬೇಯಿಸಿ ತಿಂದರೆ ಇದರ ಗರಿಷ್ಟ ಪ್ರಯೋಜನವನ್ನು ಪಡೆಯಬಹುದು. ಇದರಲ್ಲಿ ಅತಿಹೆಚ್ಚಿರುವ ಕಬ್ಬಿಣದ ಅಂಶದ ಕಾರಣ ರಕ್ತಹೀನತೆ ಹೋಗಲಾಡಿಸಲು ಅತ್ಯಂತ ಸಮರ್ಥವಾದ ಆಹಾರವಾಗಿದ್ದು ಬಾಣಂತಿಯರಿಗೆ ಮತ್ತು ಮಹಿಳೆಯರ ಮಾಸಿಕ ದಿನಗಳಲ್ಲಿ ಸೇವಿಸಲು ಅತ್ಯಂತ ಸೂಕ್ತವಾದ ಆಹಾರವಾಗಿದೆ. ಇದರಲ್ಲಿರುವ ಪೋಷಕಾಂಶಗಳು ರಕ್ತದಲ್ಲಿನ ಹೀಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸಲು ಸಮರ್ಥವಿರುವ ಕಾರಣ ಕೊಂಚವೇ ಉಪ್ಪು ಸೇರಿಸಿದ ಬೇಯಿಸಿದ ಬೀಟ್ರೂಟ್ ಪಲ್ಯ ಅತ್ಯಂತ ಉತ್ತಮವಾದ ಆಹಾರವಾಗಿದೆ.
ರಕ್ತದೊತ್ತಡವನ್ನು ಕಡಿಮೆಗೊಳಿಸುತ್ತದೆ
ಬೀಟ್ ರೂಟ್ ಅನ್ನು ವಿಶ್ವದ ಆರೋಗ್ಯಕರ ಆಹಾರಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಬೀಟ್ ರೂಟ್ ದೇಹದಲ್ಲಿ ರಕ್ತದ ಹರಿವನ್ನು ಹೆಚ್ಚಿಸುತ್ತದೆ. ನೈಟ್ರೇಟ್ನ ಉಪಸ್ಥಿತಿಯಿಂದ ದೇಹವು ನೈಟ್ರಿಕ್ ಆಕ್ಸೈಡ್ ಆಗಿ ಮಾರ್ಪಡುತ್ತದೆ ಮತ್ತು ಪ್ರಕ್ರಿಯೆಯಲ್ಲಿ ರಕ್ತದೊತ್ತಡವನ್ನು ತಡೆಯುತ್ತದೆ.
ಕ್ಯಾನ್ಸರ್ ತಡೆಯುತ್ತದೆ
ಬೀಟ್ರೂಟ್ನಲ್ಲಿರುವ ಬೀಟಾಸಯಾನಿನ್ ಪೋಷಕಾಂಶ ರಕ್ತದಲ್ಲಿರುವ ಕ್ಯಾನ್ಸರ್ ಕಾರಕ ಕಣಗಳನ್ನು ಹೊಡೆದೋಡಿಸಲು ನೆರವಾಗುತ್ತದೆ. ಸಾಮಾನ್ಯವಾಗಿ ಪ್ರಾರಂಭಿಕ ಹಂತದಲ್ಲಿರುವ ಕ್ಯಾನ್ಸರ್ ಪೂರ್ಣವಾಗಿ ಗುಣವಾಗಬಲ್ಲದು.(ವಿಕೋಪಕ್ಕೆ ತಿರುಗಿದ ಕ್ಯಾನ್ಸರ್ ಚಿಕಿತ್ಸೆಗೆ ಹೆಚ್ಚಿನ ಸಮಯಾವಕಾಶ ಅಗತ್ಯವಿದೆ). ಕ್ಲುಪ್ತಕಾಲದಲ್ಲಿ ಕ್ಯಾನ್ಸರ್ ಇರುವಿಕೆಯನ್ನು ಗುರುತಿಸಿ ಚಿಕಿತ್ಸೆ ಪಡೆದು ಗುಣಮುಖರಾದವರಿಗೂ ಬೀಟ್ರೂಟ್ ಅಗತ್ಯವಾಗಿದೆ. ಏಕೆಂದರೆ ಇವರ ದೇಹದಲ್ಲಿ ಮತ್ತೊಮ್ಮೆ ಈ ಕ್ಯಾನ್ಸರ್ ಕಾರಕ ಕಣಗಳು ಉತ್ಪತ್ತಿಯಾಗದಂತೆ ಬೀಟಾಸಯಾನಿನ್ ತಡೆಯುತ್ತದೆ. ಪರಿಣಾಮವಾಗಿ ಉತ್ತಮ ಆರೋಗ್ಯವನ್ನು ಮತ್ತು ಆಯಸ್ಸನ್ನು ಪಡೆಯಬಹುದು.
ಹೃದಯ ಆರೋಗ್ಯಕರವಾಗಿ ಇರುತ್ತದೆ
ಬೀಟ್ ರೂಟ್ ಹೃದಯ ರೋಗ ಮತ್ತು ಪಾರ್ಶ್ವವಾಯುವಿನ ಅಪಾಯವನ್ನು ಕಡಿಮೆ ಮಾಡುತ್ತದೆ. ಬೀಟ್ ರೂಟ್ನಲ್ಲಿನ ಫೈಬರ್ ಪ್ರಸ್ತುತ ಕೊಲೆಸ್ಟ ಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್, ಎಚ್ ಡಿ ಎಲ್ (ಉತ್ತಮ) ಕೊಲೆಸ್ಟ್ರಾಲ್ಗಳನ್ನು ಸಮತೋಲನದಲ್ಲಿ ಇರುವಂತೆ ನೋಡಿಕೊಳ್ಳುತ್ತದೆ.
ಯಕೃತ್ತಿನ ಆರೋಗ್ಯ ಸುಧಾರಿಸುತ್ತದೆ
ಬೀಟ್ ರೂಟ್ ನಿಮ್ಮ ಯಕೃತ್ತಿನ ಆರೋಗ್ಯವನ್ನು ಸುಧಾರಿಸುವ ಉತ್ತಮ ಆಹಾರಗಳಲ್ಲಿ ಒಂದಾಗಿದೆ. ಈ ಸಸ್ಯವು ಆಂಟಿಆಕ್ಸಿಡೆಂಟ್ಗಳು, ವಿಟಮಿನ್ಗಳು, ಕಬ್ಬಿಣ, ಕ್ಯಾಲ್ಸಿಯಂ ಮತ್ತು ಬೀಟೈನ್ಗಳನ್ನು ಒಳಗೊಂಡಿರುತ್ತದೆ. ಪಿತ್ತಜನಕಾಂಗವು ಟಾಕ್ಸಿನ್ಗಳನ್ನು ತೊಡೆದುಹಾಕಲು ಮತ್ತು ಪಿತ್ತಜನಕಾಂಗದಿಂದ ತೆಗೆದುಹಾಕಲ್ಪಟ್ಟ ಜೀವಾಣು ವಿಷವನ್ನು ಬೀಟೈನ್ನಿಂದ ಹೊರಹಾಕುತ್ತದೆ.
ಶಕ್ತಿಯನ್ನು ಸುಧಾರಿಸುತ್ತದೆ
ಬೀಟ್ ರೂಟ್ ಸ್ನಾಯುಗಳನ್ನು ಹೆಚ್ಚು ಇಂಧನ-ಸಮರ್ಥವಾಗಿ ಮಾಡುತ್ತದೆ. ಇದರಿಂದಾಗಿ ದೇಹದ ಶಕ್ತಿ ಹೆಚ್ಚುವುದು. ಬೀಟ್ ರೂಟ್ ಅಲ್ಲಿ ಕಂಡುಬರುವ ನೈಟ್ರೇಟ್ ರಕ್ತದ ಹರಿವನ್ನು ಸುಧಾರಿಸುತ್ತದೆ. ಇದು ಶಕ್ತಿಯ ಮಟ್ಟವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಉರಿಯೂತವನ್ನು ಕಡಿಮೆ ಮಾಡುತ್ತದೆ
ಬೀಟ್ರೂಟ್ ಫೋಲೇಟ್, ಫೈಬರ್ ಮತ್ತು ಬೆಟಾಲೈನ್ ಗಳನ್ನು ಹೊಂದಿದೆ. ಅದು ಅತ್ಯುತ್ತಮ ಉರಿಯೂತದ ಆಹಾರಗಳಲ್ಲಿ ಒಂದಾಗಿದೆ. ಈ ವಿನಮ್ರವಾದ ತರಕಾರಿ ನೋವು, ಊತ ಮತ್ತು ಕೆಂಪು ಬಣ್ಣವನ್ನು ಕಡಿಮೆ ಮಾಡುತ್ತದೆ. ಇದು ಅಸ್ವಸ್ಥತೆ ಉಂಟುಮಾಡುವುದನ್ನು ತಡೆಯುವುದು.
ರಕ್ತದ ಮಟ್ಟವನ್ನು ಹೆಚ್ಚಿಸುವುದು
ದೇಹ ಸರಿಯಾಗಿ ಕಾರ್ಯ ನಿರ್ವಹಿಸಲು ಸೂಕ್ತ ಮಟ್ಟದಲ್ಲಿ ಹಿಮಗ್ಲೋಬಿನ್ ಪ್ರಮಾಣ ಇರಬೇಕಾಗುವುದು. ಕಡಿಮೆ ಪ್ರಮಾಣದ ರಕ್ತದ ಮಟ್ಟ ರಕ್ತಹೀನತೆಗೆ ಕಾರಣವಾಗುವುದು. ದೈನಂದಿನ ಸೇವನೆಯಲ್ಲಿ ಬೀಟ್ ರೂಟ್ಅನ್ನು ಸೇರಿಸಿಕೊಂಡರೆ ರಕ್ತದ ಮಟ್ಟವು ಏರುವುದು ಹಾಗೂ ರಕ್ತಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳು ಪರಿಹಾರ ಕಾಣುವುದು.
ಮಿದುಳಿನ ಆರೋಗ್ಯ ಕಾಪಾಡುತ್ತದೆ
ಬುದ್ಧಿಮಾಂದ್ಯತೆಯಿಂದ ಪೀಡಿತವಾಗುವ ಮೆದುಳಿನ ಪ್ರದೇಶವಾದ ಸೊಮಾಟೊಮಾಟರ್ ಕಾರ್ಟೆಕ್ಸ್ನ ಆಮ್ಲಜನಕೀಕರಣವನ್ನು ಸುಧಾರಿಸುವ ಮೂಲಕ ಮಿದುಳಿನ ನರರೋಗವನ್ನು ಸುಧಾರಿಸಲು ಬೀಟ್ರೂಟ್ ಹೆಸರುವಾಸಿಯಾಗಿದೆ. ಅಲ್ಲದೆ, ನೈಟ್ರಿಕ್ ಆಕ್ಸೈಡ್ ಮೆದುಳಿನ ಕೋಶಗಳನ್ನು ಪರಸ್ಪರ ಸಂವಹನ ಮಾಡಲು ಅನುಮತಿಸುತ್ತದೆ. ಇದರಿಂದಾಗಿ ಮೆದುಳಿನ ಆರೋಗ್ಯವನ್ನು ಹೆಚ್ಚಿಸುತ್ತದೆ.
ನಿರ್ವಿಶೀಕರಣದಲ್ಲಿ ಸಹಾಯ ಮಾಡುತ್ತದೆ
ದೇಹದಿಂದ ಜೀವಾಣು ತೊಡೆದುಹಾಕಲು ಮತ್ತು ನಿಮ್ಮ ದೇಹವನ್ನು ನಿರ್ವಿಷಗೊಳಿಸಲು ದೈನಂದಿನ ಸೇವನೆಯಲ್ಲಿ ಬೀಟ್ ರೂಟ್ಅನ್ನು ಸೇರಿಸಿಕೊಂಡರೆ ನಿಮ್ಮ ದೇಹವು ಸರಿಯಾಗಿ ಕಾರ್ಯನಿರ್ವಹಿಸಲು, ಬೀಟ್ರೂಟ್ ನಿಮ್ಮ ದೇಹದ ನಿರ್ವಿಶೀಕರಣ ಪ್ರಕ್ರಿಯೆಯೊಂದಿಗೆ ಸಹಾಯ ಮಾಡುತ್ತದೆ.
ಗರ್ಭಿಣಿಯರಿಗೆ ಉತ್ತಮವಾದದ್ದು
ಬೀಟ್ ರೂಟ್ ಗರ್ಭಿಣಿಯರಿಗೆ ಗರ್ಭಿಣಿಯರಿಗೆ ಉತ್ತಮವಾದದ್ದು. ಏಕೆಂದರೆ ಇದು ನೈಟ್ರೇಟ್ ಗಳನ್ನು ಒಳಗೊಂಡಿರುತ್ತದೆ. ಅವು ಫೋಲಿಕ್ ಆಸಿಡ್ ಕೂಡ ಸಮೃದ್ಧವಾಗಿವೆ. ಗರ್ಭಿಣಿ ತಾಯಂದಿರು ಆಹಾರದಲ್ಲಿ ಸೇರಿಸುವುದಕ್ಕಾಗಿ ಇದು ಒಂದು ಉತ್ತಮ ನೈಸರ್ಗಿಕ ಆಹಾರ.
ಲೈಂಗಿಕ ಆರೋಗ್ಯವನ್ನು ಸುಧಾರಿಸುತ್ತದೆ
ಬೀಟ್ ರೂಟ್ ಉತ್ತಮ ಪ್ರಮಾಣದ ಬೊರಾನ್ ಅನ್ನು ಹೊಂದಿರುತ್ತದೆ. ಇದು ಖನಿಜವನ್ನು ನೇರವಾಗಿ ಲೈಂಗಿಕ ಹಾರ್ಮೋನುಗಳ ಉತ್ಪಾದನೆಗೆ ಸಂಬಂಧಿಸಿದೆ. ಬೀಟ್ರೂಟ್ ನ ಬೀಟೈನ್ ಅಂಶವು ಮನಸ್ಸನ್ನು ಸಡಿಲಗೊಳಿಸುತ್ತದೆ ಮತ್ತು ಟ್ರಿಪ್ಟೊಫಾನ್ ನಿಮಗೆ ಮನಸ್ಥಿತಿಗೆ ಸಹಾಯ ಮಾಡುವ ಸಂತೋಷಕ್ಕೆ ಕೊಡುಗೆ ನೀಡುತ್ತದೆ.
ಮಧುಮೇಹ ನಿಯಂತ್ರಿಸುತ್ತದೆ
ಯಾವುದೇ ತರಕಾರಿಯಲ್ಲಿರುವ ಸಕ್ಕರೆ ರಕ್ತವನ್ನು ಸೇರುವ ಗತಿಯನ್ನು ಗುರುತಿಸಲು ಗ್ಲೈಸೆಮಿಕ್ ಕೋಷ್ಟಕ ಬಳಸಲಾಗುತ್ತದೆ. (glycaemic index). ಇದರ ಪ್ರಕಾರ ಬೀಟ್ರೂಟ್ನಲ್ಲಿ ಈ ಅಂಶ ಮಧ್ಯಮದಲ್ಲಿರುವುದರಿಂದ (ಅಂದರೆ ಅತಿ ಶೀಘ್ರವಾಗಿ ಕರಗುವುದೂ ಇಲ್ಲ ತುಂಬಾ ತಡವಾಗಿ ಕರಗುವುದೂ ಇಲ್ಲ) ಮಧುಮೇಹಿಗಳಿಗೆ ಹೇಳಿ ಮಾಡಿಸಿದ ಸಕ್ಕರೆಯಾಗಿದೆ. ಇದರಿಂದ ಮಧುಮೇಹಿಗಳು ತಮ್ಮ ಶರೀರಕ್ಕೆ ಅಗತ್ಯವಿರುವ ಸಕ್ಕರೆಯನ್ನು ಅವರ ಶರೀರ ತಡೆದುಕೊಳ್ಳಬಹುದಾದ ಗತಿಯಲ್ಲಿಯೇ ಪಡೆಯಬಹುದು. (ಜೇನು ಅತಿ ಶೀಘ್ರವಾಗಿ ಕರಗುವ ಸಕ್ಕರೆಯಾದುದರಿಂದ ಮಧುಮೇಹಿಗಳಿಗೆ ಸಲ್ಲದು). ಜೊತೆಗೇ ಇದರಲ್ಲಿ ಕ್ಯಾಲೋರಿಗಳು ಕಡಿಮೆ ಇರುವುದರಿಂದ ಮತ್ತು ಕೊಬ್ಬು ರಹಿತವಾದುದರಿಂದ ಮಧುಮೇಹಿಗಳ ಸಕ್ಕರೆಯ ಬಯಕೆಯನ್ನು ಆರೋಗ್ಯ ಕದಡದೇ ಪೂರೈಸಲು ಬೀಟ್ ರೂಟ್ ನೆರವಿಗೆ ಬರುತ್ತದೆ.
ವಿವಿಧ ತರಕಾರಿಗಳ ಮಿಶ್ರಣದೊಂದಿಗೆ
ಸಾಮಾನ್ಯವಾಗಿ ಭಾರತೀಯ ಅಡುಗೆಗಳಲ್ಲಿ ಎಲ್ಲಾ ತರಕಾರಿಗಳನ್ನು ಕೊಂಚಕೊಂಚವಾಗಿ ಸೇರಿಸಿ ಸಾಂಬಾರ್, ಪಲ್ಯ, ಉಪ್ಪಿನಕಾಯಿ ಮೊದಲಾದವುಗಳನ್ನು ಮಾಡುತ್ತಾರೆ. ಇದರಿಂದ ಪ್ರತಿ ತರಕಾರಿಯ ಉತ್ತಮ ಗುಣಗಳು ಇತರ ತರಕಾರಿಯ ಗುಣಗಳೊಂದಿಗೆ ಸೇರಿ ಒಟ್ಟಾರೆಯಾಗಿ ಒಂದು ಪ್ರಬಲ ಆಹಾರವಾಗಿರುತ್ತದೆ. ಅಂತೆಯೇ ಬೀಟ್ರೂಟ್ ಸಹಾ ಸೇರಿಸಿದ ವಿವಿಧ ತರಕಾರಿಗಳ ಪಲ್ಯ, ಸಾರುಗಳು ಪೋಷಕಾಂಶಗಳ ಆಗರವಾಗಿದ್ದು ಹಲವು ರೀತಿಯಲ್ಲಿ ಆರೋಗ್ಯವನ್ನು ವೃದ್ಧಿಸುತ್ತವೆ. ಬೀಟ್ರೂಟಿನಲ್ಲಿರುವ ಬೀಟಾಸಯಾನಿನ್ ಎಂಬ ಪೋಷಕಾಂಶದ ಕಾರಣ ಇದಕ್ಕೆ ರಕ್ತದ ಬಣ್ಣ ಬಂದಿದ್ದು ಒಂದು ಪ್ರಬಲ ಆಂಟಿ ಆಕ್ಸಿಡೆಂಟ್ ಆಗಿದೆ. ಇದರ ಮಹತ್ವವೆಂದರೆ ದೇಹದ ನರಗಳ ಒಳಭಾಗದಲ್ಲಿ ಅಂಟಿಕೊಳ್ಳುವ ಜಿಡ್ಡಾದ ಕೆಟ್ಟ ಕೊಲೆಸ್ಟ್ರಾಲ್ (LDL) ಅನ್ನು ಕಳೆವಣಿಕಳೆತ (oxidation) ಆಗದಂತೆ ತಡೆದು ನರಗಳ ಗೋಡೆಗಳಿಗೆ ಅಂಟಿಕೊಳ್ಳದಂತೆ ತಡೆಯುತ್ತದೆ. ಇದರಿಂದ ಕೆಟ್ಟ ಕೊಲೆಸ್ಟ್ರಾಲ್ ಮೂಲಕ ಎದುರಾಗಬಹುದಾಗಿದ್ದ ಕಂಟಕಗಳು ಇಲ್ಲವಾಗುತ್ತವೆ.
ಬೀಟ್ರೂಟ್ ಜ್ಯೂಸ್
ಬೇಯಿಸಿ ತಿಂದಂತೆಯೇ ಹಸಿ ಬೀಟ್ರೂಟ್ ನ ರಸವೂ ಆರೋಗ್ಯವನ್ನು ಹಲವು ರೀತಿಯಿಂದ ರಕ್ಷಿಸುತ್ತದೆ. ನಿಮಿರು ದೌರ್ಬಲ್ಯವಿದ್ದವರ ರಕ್ತದಲ್ಲಿ ನೈಟ್ರೇಟುಗಳ ಪ್ರಮಾಣ ಹೆಚ್ಚಾಗಿದ್ದು ಇದು ವಿಶೇಷವಾಗಿ ಜನನಾಂಗದ ನರಗಳಲ್ಲಿ ರಕ್ತ ತುಂಬಿಕೊಳ್ಳಲು ಅಡ್ಡಿಯಾಗುತ್ತದೆ. ಬೀಟ್ರೂಟ್ ರಸದಲ್ಲಿರುವ ಪೋಷಕಾಂಶಗಳು ಈ ನೈಟ್ರೇಟುಗಳ ಪ್ರಭಾವ ಕಡಿಮೆಗೊಳಿಸುವ ಮೂಲಕ ನಿಮಿರುದೌರ್ಬಲ್ಯ ಕಡಿಮೆಯಾಗಲು ಸಾಧ್ಯವಾಗಿಸುತ್ತದೆ. the Journal of Nursing and Health Science ಎಂಬ ವೈದ್ಯಕೀಯ ಪತ್ರಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ ಪ್ರತಿದಿನ ಒಂದು ಲೋಟ ಬೀಟ್ರೂಟ್ ಜ್ಯೂಸ್ ಅನ್ನು ಇಪ್ಪತ್ತು ದಿನಗಳವರೆಗೆ ಕುಡಿದವರ ರಕ್ತದಲ್ಲಿ ಹೀಮೋಗ್ಲೋಬಿನ್ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದ್ದು ರಕ್ತಹೀನತೆಯ ತೊಂದರೆ ಸಾಕಷ್ಟು ಸುಧಾರಿಸಿದೆ. ಪ್ರತಿದಿನ ಅರ್ಧ ಕೇಜಿ ಬೀಟ್ರೂಟಿನಿಂದ ಹಿಂಡಿ ತೆಗೆದ ರಸವನ್ನು ಸತತವಾಗಿ ಎರಡು ವಾರಗಳವರೆಗೆ ಕುಡಿದರೆ ಜ್ಯೂಸ್ ಕುಡಿದ ಆರು ಗಂಟೆಗಳಲ್ಲಿಯೇ ಅಧಿಕ ರಕ್ತದೊತ್ತಡ ಸಾಮಾನ್ಯ ಸ್ಥಿತಿಗೆ ಬರುತ್ತದೆ.
ಹೃದಯದ ಅಧಿಕ ಒತ್ತಡವನ್ನು ಕಡಿಮೆಗೊಳಿಸುತ್ತದೆ
ಬೀಟ್ರೂಟ್ನ ಪೋಷಕಾಂಶಗಳು ನಮ್ಮ ಜೀರ್ಣಾಂಗಗಳಲ್ಲಿ ಹೀರಲ್ಪಟ್ಟ ಬಳಿಕ ಅದರಲ್ಲಿರುವ ನೈಟ್ರೇಟುಗಳು (nitrates) ನೈಟ್ರೈಟುಗಳಾಗಿ (nitrites) ಮತ್ತು ವಾಯುರೂಪದ ನೈಟ್ರಿಕ್ ಆಕ್ಸೈಡ್ ಆಗಿ ಪರಿವರ್ತನೆಯಾಗುತ್ತವೆ. ಈ ಎರಡೂ ಪೋಷಕಾಂಶಗಳು ರಕ್ತದಲ್ಲಿ ಸೇರಿದ ಬಳಿಕ ನರಗಳನ್ನು ಒಳಗಿನಿಂದ ಹಿಗ್ಗಿಸುತ್ತಾ ಹೋಗುತ್ತವೆ. ನರಗಳನ್ನು ಒಳಗಿನಿಂದ ಹಿಗ್ಗಿಸುವುದರಿಂದ ರಕ್ತ ಕಡಿಮೆ ಒತ್ತಡದಲ್ಲಿ ಮುಂದುವರೆಯಲು ಸಾಧ್ಯವಾಗುತ್ತದೆ. ಈಗ ಹೃದಯಕ್ಕೆ ರಕ್ತವನ್ನು ದೇಹದ ಎಲ್ಲಾ ಮೂಲೆಗಳಿಗೆ ಕಳುಹಿಸಲು ಕಡಿಮೆ ಅಥವಾ ಆರೋಗ್ಯಕರ ಒತ್ತಡದಲ್ಲಿ ನೂಕಿದರೆ ಸಾಕು. ಪರಿಣಾಮವಾಗಿ ಅಧಿಕ ರಕ್ತದೊತ್ತಡವಿದ್ದರೆ ಸಾಮಾನ್ಯ ಸ್ಥಿತಿಗೆ ಬರಲು ಬೀಟ್ ರೂಟ್ ನೆರವಾಗುತ್ತದೆ. ಈ ಬಗ್ಗೆ ನಡೆದ ಸಂಶೋಧನೆಗಳ ಮೂಲಕ ಅಧಿಕ ರಕ್ತದೊತ್ತಡವಿರುವ ರೋಗಿಗಳು ಸುಮಾರು ಅರ್ಧ ಕೇಜಿಯಷ್ಟು ಬೀಟ್ರೂಟ್ನಿಂದ ತಯಾರಿಸಿದ ಖಾದ್ಯವನ್ನು ಸೇವಿಸಿದ ಆರು ಗಂಟೆಗಳೊಳಗೆ ಅವರ ರಕ್ತದೊತ್ತಡ ಗಮನಾರ್ಹವಾಗಿ ಕಡಿಮೆಯಾಗಿರುವುದನ್ನು ಖಚಿತಪಡಿಸಿವೆ.