Just In
Don't Miss
- Automobiles Kia: ಬ್ರೇಕ್ ಇಲ್ಲದ ಟ್ರಕ್ನಂತೆ ಮುನ್ನುಗ್ಗುತ್ತಿದೆ ಕಿಯಾ: ಈಗ ಸಣ್ಣ ಪಟ್ಟಣಗಳಲ್ಲೂ ಸಿಗಲಿದೆ!
- Sports RCB vs KKR: ಯಶ್ ಮೇಲೆ 'ದಯೆ' ತೋರುತ್ತಾರಾ ರಿಂಕು ಸಿಂಗ್?; ಜಿದ್ದು ತೀರಿಸಿಕೊಳ್ತಾರಾ ಆರ್ಸಿಬಿ ವೇಗಿ?
- Technology ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಡೀಪ್ಫೇಕ್ ದೊಡ್ಡ ಕಳವಳಕಾರಿ ಎಂದ ಮೋದಿ
- News ಚಿತ್ರದುರ್ಗದಲ್ಲಿ ಬಿಜೆಪಿಗೆ ಬಂಡಾಯದ ಬಿಸಿ: ಅಭ್ಯರ್ಥಿ ಬದಲಿಸದಿದ್ದರೆ ಪಕ್ಷೇತರ ಸ್ಪರ್ಧೆ, ಏ.3ಕ್ಕೆ ನಾಮಪತ್ರ ಸಲ್ಲಿಕೆ?
- Movies ಪುಟ್ಟಕ್ಕನ ಮನೆಗೆ ಕುಡಿದು ಬಂದ ಮುರಳಿಗೆ ಶಾಕ್; ಅಮ್ಮ ಅರೆಸ್ಟ್.. ಸಹನಾ ಮೇಲೆ ಗೂಬೆ ಕೂರಿಸಿದ ಪತಿ
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಾತ್ರೆಯ ಹಂಗಿಲ್ಲದೆ ಮೈಗ್ರೇನ್ ತಲೆನೋವು ನಿಯಂತ್ರಣಕ್ಕೆ!
ಮೈಗ್ರೇನ್ ತಲೆನೋವು ಕಾಣಿಸಿಕೊಂಡರೆ ಉಪಶಮನ ಮಾಡೋದು ಅಷ್ಟು ಸುಲಭವಲ್ಲ. ಮಾತ್ರೆ ತೆಗೆದುಕೊಂಡರೂ ಮೈಗ್ರೇನ್ ಬೇಗ ಹೋಗೋದಿಲ್ಲ...ಆದರೆ ಇದನ್ನು ನಿಯಂತ್ರಿಸಬಹುದಾದ ಮನೆಮದ್ದಗಳಿವೆ...
ತಲೆನೋವುಗಳು ವಿವಿಧ ತರ. (ಗಂಡ ಕರೆದಲ್ಲಿ ಹೋಗಲು ಇಷ್ಟವಿರದ ಪತ್ನಿಯರು ನೀಡುವ ಕಾರಣದ ತಲೆನೋವಲ್ಲ) ಇವುಗಳಲ್ಲಿ ಕೆಲವು ಮಾನಸಿಕ ಒತ್ತಡ ಅಥವಾ ಮೆದುಳಿಗೆ ತಲುಪುವ ರಕ್ತದಲ್ಲಿ ಕೊರತೆ ಅಥವಾ ಮೂಗಿನ ಹಿಂಭಾಗದಲ್ಲಿ ಆಗಿರುವ ಸೋಂಕಿನ ಮೂಲಕ ಎದುರಾಗುವ ಸಾಮಾನ್ಯ ತಲೆನೋವುಗಳಾದರೆ ತಲೆನೋವಿನ ಅತ್ಯುಗ್ರ ರೂಪವಾದ ಮೈಗ್ರೇನ್ ಜೀವವನ್ನೇ ಹಿಂಡಿ ಬಿಡುತ್ತದೆ. ಮೈಗ್ರೇನ್ ತಲೆನೋವೇ? ಒಮ್ಮೆ ಈ ಜ್ಯೂಸ್ ಕುಡಿದು ನೋಡಿ...
ಕೆಲವು ತಲೆನೋವುಗಳು ಬಿಸಿಲಿಗೆ ಅನುಸಾರವಾಗಿ ಏರಿಕೆ ಇಳಿಕೆ ಕ್ರಮದಲ್ಲಿ ಸಾಗಿದರೆ ಕೆಲವು ಆಹಾರದಲ್ಲಿ ವಿಷವಸ್ತುಗಳ ಇರುವಿಕೆಯ ಪರೋಕ್ಷ ಪರಿಣಾಮವಾಗಿದೆ. ಕಾರಣವೇನೇ ಇರಲಿ, ತಲೆನೋವು ಬಂದರೆ ಯಾರಿಗೂ ಯಾವ ಕೆಲಸವನ್ನೂ ಮಾಡಲು ಇಷ್ಟವಾಗುವುದಿಲ್ಲ. ತಲೆನೋವಿಗೆ ಇದುವರೆಗೆ ಸಮರ್ಪಕವಾದ ಔಷಧಿ ಇಲ್ಲ. ಮೈಗ್ರೇನ್ ತಲೆನೋವಿಗೆ ಮಾತ್ರೆ ಬಿಡಿ; ಮನೆ ಮದ್ದು ಪ್ರಯತ್ನಿಸಿ
ಇರುವ ಔಷಧಿಗಳೆಲ್ಲಾ ನೋವು ನಿವಾರಕಗಳಾಗಿದ್ದು ನೋವಿನ ಭಾವನೆಯನ್ನು ತಡೆಯುತ್ತವೆ ಅಷ್ಟೇ. ಅಲ್ಲದೇ ಈ ಮಾತ್ರೆಗಳ ಅಡ್ಡಪರಿಣಾಮಗಳು ಭೀಕರವಾಗಬಹುದು. ಪ್ಯಾರಾಸೆಟಮಾಲ್ ನಂತಹ ಮಾತ್ರೆಗಳು ಯಕೃತ್ ಮತ್ತು ಮೂತ್ರಪಿಂಡಗಳಿಗೆ ಹಾನಿಯುಂಟುಮಾಡಬಹುದು. ತಲೆನೋವನ್ನು ಕಡಿಮೆ ಮಾಡಲು ಕೆಲವು ಸುಲಭ ವಿಧಾನಗಳಿದ್ದು ಇವು ನಿಮ್ಮ ನೆರವಿಗೆ ಬರಬಹುದು....
ಅಗತ್ಯವಿರುವ ಸಾಮಾಗ್ರಿಗಳು
ನಿಮಗೆ ಹಿಮಾಲಯನ್ ಉಪ್ಪಿನ ಅಗತ್ಯವಿದೆ. ಇದು ಕೊಂಚ ಗುಲಾಬಿ ಬಣ್ಣದಲ್ಲಿದ್ದು ಸಾಮಾನ್ಯ ಅಯೋಡಿನ್ ಯುಕ್ತ ಉಪ್ಪಿಗಿಂತಲೂ ಭಿನ್ನವಾಗಿರುತ್ತದೆ. ಎರಡು ಚಮಚ ಹಿಮಾಲಯನ್ ಉಪ್ಪು ಮತ್ತು ಒಂದು ಲಿಂಬೆಯ ಅಗತ್ಯವಿದೆ.
ತಯಾರಿಸುವ ಬಗೆ
ಒಂದು ಲೋಟದಲ್ಲಿ ಲಿಂಬೆಹಣ್ಣಿನ ರಸವನ್ನು ಹಿಂಡಿ ಇದಕ್ಕೆ ಉಪ್ಪು ಸೇರಿಸಿ ಮಿಶ್ರಣ ಮಾಡಿ. ಕೊಂಚ ನೀರನ್ನು ಬೆರೆಸಿ ಉಪ್ಪೆಲ್ಲಾ ಕರಗುವವರೆಗೆ ಕಲಕಿ.
ಸೇವನೆಯ ವಿಧಾನ
ತಲೆನೋವಿದ್ದಾಗ ಈ ಪಾನೀಯವನ್ನು ಗಟಗಟನೇ ಕುಡಿದುಬಿಡಿ. ಕೆಲವೇ ನಿಮಿಷಗಳಲ್ಲಿ ತಲೆನೋವು ಕಡಿಮೆಯಾಗುತ್ತಿರುವುದನ್ನು ಗಮನಿಸಬಹುದು.
ಹಿಮಾಲಯದಲ್ಲಿ ಉಪ್ಪು ಹೇಗೆ ಬಂತು?
ಮಿಲಿಯಾಂತರ ವರ್ಷಗಳ ಹಿಂದೆ ಅಂಟಾರ್ಕ್ಟಿಕಾದಿಂದ ಭಾರತಖಂಡ ಮೇಲೆದ್ದು ಬಡಿದಾಗ ಹಿಮಾಲಯ ಉದ್ಭವವಾಯಿತು. ಈ ಭಾಗದಲ್ಲಿ ಕೆಲವು ಸಮುದ್ರಗಳೂ ಇದ್ದವು. ಕಾಲಕ್ರಮೇಣ ಈ ನೀರೆಲ್ಲಾ ಆವಿಯಾಗಿ ಕೇವಲ ಉಪ್ಪು ಉಳಿದುಕೊಂಡಿತು. ಇದೇ ಹಿಮಾಲಯನ್ ಸಾಲ್ಟ್. ಇದರಲ್ಲಿ 84 ಬಗೆಯ ಖನಿಜಗಳು ಮತ್ತು ಎಲೆಕ್ಟ್ರೋಲೈಟುಗಳಿವೆ. ಈ ಉಪ್ಪಿಗೆ ಮೈಗ್ರೇನ್ ತಲೆನೋವನ್ನೂ ಗುಣಪಡಿಸುವ ಶಕ್ತಿಯಿದೆ. ಅಲ್ಲದೇ ರೋಗ ನಿರೋಧಕ ಶಕ್ತಿ ಹೆಚ್ಚುವುದು, ದೇಹದ ಶಕ್ತಿ ಹೆಚ್ಚುವುದು, ದೇಹದಲ್ಲಿ ಆಮ್ಲೀಯ-ಕ್ಷಾರೀಯ ಸಂತುಲತೆ ಕಾಪಾಡುವುದು, ಎಲೆಕ್ಟ್ರೋಲೈಟುಗಳ ಸಂತುಲತೆ ಕಾಪಾಡುವುದು ಮೊದಲಾದ ಪ್ರಯೋಜನಗಳಿವೆ.
ಇನ್ನೊಂದು ವಿಧಾನ
ಒಂದು ಲೋಟದಲ್ಲಿ ಎಳನೀರನ್ನು ಸಂಗ್ರಹಿಸಿ ಇದಕ್ಕೆ ಚಿಟಿಕೆಯಷ್ಟು ಹಿಮಾಲಯನ್ ಉಪ್ಪನ್ನು ಬೆರೆಸಿ ಕೆಲವು ಹನಿ ಲಿಂಬೆರಸ ಸೇರಿಸಿ ಕಲಕಿ ಕುಡಿಯಿರಿ.
ನಿರ್ಜಲೀಕರಣದಿಂದ ಬರುವ ತಲೆನೋವು
ಒಂದು ವೇಳೆ ಬೇಸಿಗೆಯಲ್ಲಿ ನಿರ್ಜಲೀಕರಣದಿಂದ ತಲೆನೋವು ಎದುರಾದರೆ ಈ ವಿಧಾನದಿಂದ ತಕ್ಷಣವೇ ತಲೆನೋವು ಕಡಿಮೆಯಾಗುತ್ತದೆ.
ಇತರ ಪ್ರಯೋಜನಗಳು
ಈ ರಸದ ಸೇವನೆಯಿಂದ ದೇಹದಲ್ಲಿ ಖನಿಜಗಳ ಕೊರತೆ ಹಾಗೂ ಈ ಮೂಲಕ ಎದುರಾಗಿದ್ದ ಎಲೆಕ್ಟ್ರೋಲೈಟುಗಳ ಅಸಂತುಲತೆಯ ತೊಂದರೆ ಸರಿಯಾಗುತ್ತದೆ. ವಿಶೇಷವಾಗಿ ಯಕೃತ್ ನಲ್ಲಿ ವಿಷಕಾರಿ ವಸ್ತುಗಳು ಹೆಚ್ಚಾಗುವ ಕಾರಣ ಎದುರಾಗುವ ತಲೆನೋವು ತಕ್ಷಣವೇ ಕಡಿಮೆಯಾಗುತ್ತದೆ.