Just In
Don't Miss
- Movies Puttakkana Makkalu: ಮಗಳ ಜೀವನ ಹಾಳಾಗುವ ಆತಂಕದಲ್ಲಿ ಪುಟ್ಟಕ್ಕ; ಬಂಗಾರಮ್ಮ ಬೇಸರ
- News ಲೋಕಸಭಾ ಚುನಾವಣೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ಎಚ್ಡಿಕೆ ಮೇಕೆದಾಟು ಅಸ್ತ್ರ
- Sports DC vs GT IPL 2024: ಅಕ್ಷರ್, ಪಂತ್ ಭರ್ಜರಿ ಬ್ಯಾಟಿಂಗ್; ಗುಜರಾತ್ಗೆ ಸವಾಲಿನ ಗುರಿ ನೀಡಿದ ಡೆಲ್ಲಿ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಧೂಮಪಾನಿಯ ಕೆಮ್ಮನ್ನು' ಸರಳವಾಗಿ ನಿಯಂತ್ರಿಸುವ ಟ್ರಿಕ್ಸ್!
ಒಂದು
ದಮ್ಮು
ಎಳೆದರೆ
ಎರಡು
ಕೆಮ್ಮು
ಫ್ರೀ!
ಧೂಮಪಾನದ
ದುಷ್ಪರಿಣಾಮವನ್ನು
ವಿವರಿಸುವ
ಮಕ್ಕಳ
ಈ
ಅಣಕ
ವಾಸ್ತವವನ್ನು
ಸ್ಪಷ್ಟವಾಗಿಯೇ
ವಿವರಿಸುತ್ತಿದೆ.
ಒಮ್ಮೆ
ಈ
ಕೆಮ್ಮು
ಆವರಿಸಿತು
ಎಂದರೆ
ಮುಂದಿನ
ಹದಿನೈದು
ಇಪ್ಪತ್ತು
ದಿನಗಳವರೆಗೆ
ಕಡಿಮೆಯಾಗುವುದೇ
ಇಲ್ಲ..!
ಧೂಮಪಾನ
ಮಾಡಿದ್ದಕ್ಕೇ
ನಿಮಗೆ
ಕೆಮ್ಮು
ಬಂದಿದ್ದರೆ,
ಹಾಗೇ
ಆಗಬೇಕು
ನಿಮಗೆ
ಎಂದು
ಹೇಳಿ
ಸಮಾಧಾನಪಟ್ಟುಕೊಳ್ಳಬಹುದು.
ಆದರೆ
ಧೂಮಪಾನಿಗಳು
ಬಿಟ್ಟ
ಹೊಗೆಯನ್ನು
ಸೇವಿಸಿ
ಮನೆಯ
ಸದಸ್ಯರು,
ಸಹೋದ್ಯೋಗಿಗಳಿಗೆ
ಈ
ಕೆಮ್ಮು
ಎದುರಾದರೆ?
ಸಾಮಾನ್ಯವಾಗಿ
ಈ
ಕೆಮ್ಮು
ಒಣದಾಗಿದ್ದು
ಕೆಲವರಿಗೆ
ಮಾತ್ರ
ಕಫವೂ
ಒಳಗೊಂಡಿರುತ್ತದೆ.
ಮತ್ತೆ
ಹೊಗೆಯನ್ನು
ಸೇವಿಸದೇ
ಇದ್ದರೆ
ಒಂದೆರಡು
ದಿನಗಳಲ್ಲಿಯೇ
ಇದು
ತನ್ನಿಂತಾನೇ
ಕಡಿಮೆಯಾಗುತ್ತದೆ.
ಒಂದು
ವೇಳೆ
ಆಗದೇ
ಇದ್ದರೆ
ಮಾತ್ರ
ವೈದ್ಯರ
ಬಳಿ
ಭೇಟಿ
ನೀಡುವುದು
ಅಗತ್ಯ.
ಇದಕ್ಕೂ
ಮುನ್ನ
ಮನೆಯಲ್ಲಿಯೇ
ತಯಾರಿಸಬಹುದಾದ
ಕೆಲವು
ಮನೆಮದ್ದುಗಳ
ಮೂಲಕ
ಈ
ಕೆಮ್ಮನ್ನು
ಸುಲಭವಾಗಿ
ಮಣಿಸಬಹುದು.....
ಪರಿಹಾರ #1
ಅತ್ಯಂತ ಸುಲಭವಾದ ಪರಿಹಾರವೆಂದರೆ ನೀರು ಕುಡಿಯುವುದು. ದಿನವಿಡೀ ಸಾಧ್ಯವಾದಷ್ಟು ನೀರನ್ನು ಸತತವಾಗಿ ಕುಡಿಯಬೇಕು. ಈ ನೀರು ಸಾಧ್ಯವಾದಷ್ಟು ಬಿಸಿ ಇರುವುದು ಅಗತ್ಯ. ಇದರಿಂದ ಗಂಟಲಿನ ಒಳಭಾಗದಲ್ಲಿ ಅಂಟಿಕೊಂಡಿದ್ದ ಕಫ ಕರಗಿ ಸಡಿಲಗೊಂಡು ನಿವಾರಣೆಯಾಗಲು ಸಾಧ್ಯವಾಗುತ್ತದೆ. ಅಲ್ಲದೇ ದೇಹಕ್ಕೆ ಹೆಚ್ಚಿನ ನೀರು ಲಭ್ಯವಾಗಿ ರೋಗ ನಿರೋಧಕ ಶಕ್ತಿ ಹೆಚ್ಚಲೂ ಸಾಧ್ಯವಾಗುತ್ತದೆ.
ಪರಿಹಾರ #2
ಮಧುಮೇಹವಿಲ್ಲದ ವ್ಯಕ್ತಿಗಳು ದಿನಕ್ಕೆ ಮೂರು ಬಾರಿ ಒಂದು ಚಿಕ್ಕ ಚಮಚ ಜೇನನ್ನು ಸೇವಿಸಿದರೆ ಉತ್ತಮ. ಇದರ ಉರಿಯೂತ ನಿವಾರಕ ಗುಣ ಸೋಂಕನ್ನು ನಿವಾರಿಸುವ ಜೊತೆಗೇ ಬ್ಯಾಕ್ಟೀರಿಯಾಗಳನ್ನೂ ಎದುರಿಸಿ ಕಫವನ್ನು ಇಲ್ಲವಾಗಿಸಲು ನೆರವಾಗುತ್ತದೆ.
ಪರಿಹಾರ #3
ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ ಒಂಚು ಚಿಕ್ಕ ಚಮಚ ಉಪ್ಪು ಸೇರಿಸಿ ಈ ನೀರಿನಿಂದ ಗಳಗಳಿಸಿ. ದಿನಕ್ಕೆ ಮೂರು ಬಾರಿ ಹೀಗೆ ಮಾಡುವ ಮೂಲಕ ಬಾಯಿಯ ಒಳಗಿನ ತೇವಭಾಗದಲ್ಲಿ ಅಡಗಿದ್ದ ಬ್ಯಾಕ್ಟೀರಿಯಾಗಳನ್ನು ನಿವಾರಿಸಲು ಸಾಧ್ಯವಾಗುತ್ತದೆ ಹಾಗೂ ಕೆಮ್ಮಿನಿಂದ ಹೊರಬರಲು ಸಾಧ್ಯವಾಗುತ್ತದೆ.
ಪರಿಹಾರ #4
ಒಂದು ಕಪ್ ಹಾಲನ್ನು ಕುದಿಸಿ ಇದಕ್ಕೆ ಒಂದೆರಡು ಎಸಳು ಬೆಳ್ಳುಳ್ಳಿಯನ್ನು ಜಜ್ಜಿ ಸೇರಿಸಿ. ಈ ಹಾಲನ್ನು ಇನ್ನೂ ಒಂದೆರಡು ನಿಮಿಷ ಕುದಿಸಿ ಬಿಸಿಬಿಸಿಯಿದ್ದಂತೆಯೇ ಕುಡಿಯಿರಿ. ಬೆಳ್ಳುಳ್ಳಿಯಲ್ಲಿರುವ ಬ್ಯಾಕ್ಟೀರಿಯಾ ನಿವಾರಕ ಗುಣ ಗಂಟಲಿನ ಸೋಂಕನ್ನು ನಿವಾರಿಸಲು ನೆರವಾಗುತ್ತದೆ.
ಪರಿಹಾರ #5
ಒಂದು ಲೋಟ ನೀರಿನಲ್ಲಿ ಒಂದು ಚಿಕ್ಕ ತುಂಡು ಹಸಿಶುಂಠಿಯನ್ನು ಸುಮಾರು ಐದು ನಿಮಿಷಗಳ ಕಾಲ ಕುದಿಸಿ ಬಳಿಕ ಇದಕ್ಕೆ ಕೊಂಚ ಹಾಲು ಬೆರೆಸಿ. ನಂತರ ಇನ್ನೂ ಐದು ನಿಮಿಷ ಕುದಿಸಿದ ನಂತರ ಒಂದು ಚಿಟಿಕೆ ಅರಿಶಿನ ಬೆರೆಸಿ ಕುಡಿಯಿರಿ. ಶುಂಠಿ ಮತ್ತು ಅರಿಶಿನದಲ್ಲಿರುವ ಗುಣಪಡಿಸುವ ಗುಣ ಮತ್ತು ಉರಿಯೂತ ನಿವಾರಕ ಗುಣಗಳು ಕೆಮ್ಮನ್ನು ಗುಣಪಡಿಸಲು ನೆರವಾಗುತ್ತವೆ.
ಪರಿಹಾರ #6
ದಿನಕ್ಕೆ ಕೆಲವು ಕಪ್ ಗಳಂತೆ ಹಸಿರು ಟೀ ಪೇಯವನ್ನು (ಗ್ರೀನ್ ಟೀ) ಕುಡಿಯುತ್ತಾ ಬಂದರೆ ಕೆಮ್ಮಿನಿಂದ ಶೀಘ್ರವಾಗಿ ಹೊರಬರಲು ಸಾಧ್ಯವಾಗುತ್ತದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಣ ಕೆಮ್ಮನ್ನು ಶೀಘ್ರವಾಗಿ ಗುಣಪಡಿಸುತ್ತದೆ.
ಪರಿಹಾರ #7
ಒಂದು ಕಪ್ ನೀರನ್ನು ಕುದಿಸಿ ಇದಕ್ಕೆ ಒಂದು ಇಂಚಿನಷ್ಟು ದೊಡ್ಡ ಹಸಿಶುಂಠಿಯ ತುಂಡನ್ನು ಜಜ್ಜಿ ಬೆರೆಸಿ. ಇದಕ್ಕೆ ಕೆಲವು ಹನಿ ಲಿಂಬೆರಸವನ್ನು ಬೆರೆಸಿ ಕುಡಿಯಿರಿ. ಇವೆರಡೂ ಕೆಮ್ಮನ್ನು ಕಡಿಮೆಗೊಳಿಸಲು ನೆರವಾಗುತ್ತವೆ.