Just In
- 39 min ago ಮೀನ ರಾಶಿಯಲ್ಲಿ ಬುಧ ವಕ್ರೀಯ ಚಲನೆ ಮಾಡುವಾಗ ಈ 5 ರಾಶಿಯವರು ವೃತ್ತಿ ಜೀವನದ ಬಗ್ಗೆ ಜಾಗ್ರತೆ
- 1 hr ago ದಿನ ಭವಿಷ್ಯ ಮಾರ್ಚ್ 29: ಶುಕ್ರವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
- 1 hr ago ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
- 1 hr ago ಹೋಳಿ ದಿನ ಸ್ಕೂಟಿಯಲ್ಲಿ ಟೈಟಾನಿಕ್ ಪೋಸ್ ನೀಡಿ ದೊಪ್ಪೆಂದು ಬಿದ್ದ ಹುಡುಗಿಗೆ ಬಿತ್ತು ದುಬಾರಿ ಫೈನ್
Don't Miss
- News Mukhtar Ansari: ಗ್ಯಾಂಗ್ಸ್ಟರ್-ರಾಜಕಾರಣಿ ಮುಖ್ತಾರ್ ಅನ್ಸಾರಿ ಸಾವು
- Movies Radha Bhagavathi ; ಮಲ್ಲಿ ಅಲಿಯಾಸ್ ರಾಧಾ ಭಗವತಿ ಹಿನ್ನೆಲೆ ಏನ್ಗೊತ್ತಾ..?
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಧೂಮಪಾನಿಯ ಕೆಮ್ಮನ್ನು' ಸರಳವಾಗಿ ನಿಯಂತ್ರಿಸುವ ಟ್ರಿಕ್ಸ್!
ಒಂದು
ದಮ್ಮು
ಎಳೆದರೆ
ಎರಡು
ಕೆಮ್ಮು
ಫ್ರೀ!
ಧೂಮಪಾನದ
ದುಷ್ಪರಿಣಾಮವನ್ನು
ವಿವರಿಸುವ
ಮಕ್ಕಳ
ಈ
ಅಣಕ
ವಾಸ್ತವವನ್ನು
ಸ್ಪಷ್ಟವಾಗಿಯೇ
ವಿವರಿಸುತ್ತಿದೆ.
ಒಮ್ಮೆ
ಈ
ಕೆಮ್ಮು
ಆವರಿಸಿತು
ಎಂದರೆ
ಮುಂದಿನ
ಹದಿನೈದು
ಇಪ್ಪತ್ತು
ದಿನಗಳವರೆಗೆ
ಕಡಿಮೆಯಾಗುವುದೇ
ಇಲ್ಲ..!
ಧೂಮಪಾನ
ಮಾಡಿದ್ದಕ್ಕೇ
ನಿಮಗೆ
ಕೆಮ್ಮು
ಬಂದಿದ್ದರೆ,
ಹಾಗೇ
ಆಗಬೇಕು
ನಿಮಗೆ
ಎಂದು
ಹೇಳಿ
ಸಮಾಧಾನಪಟ್ಟುಕೊಳ್ಳಬಹುದು.
ಆದರೆ
ಧೂಮಪಾನಿಗಳು
ಬಿಟ್ಟ
ಹೊಗೆಯನ್ನು
ಸೇವಿಸಿ
ಮನೆಯ
ಸದಸ್ಯರು,
ಸಹೋದ್ಯೋಗಿಗಳಿಗೆ
ಈ
ಕೆಮ್ಮು
ಎದುರಾದರೆ?
ಸಾಮಾನ್ಯವಾಗಿ
ಈ
ಕೆಮ್ಮು
ಒಣದಾಗಿದ್ದು
ಕೆಲವರಿಗೆ
ಮಾತ್ರ
ಕಫವೂ
ಒಳಗೊಂಡಿರುತ್ತದೆ.
ಮತ್ತೆ
ಹೊಗೆಯನ್ನು
ಸೇವಿಸದೇ
ಇದ್ದರೆ
ಒಂದೆರಡು
ದಿನಗಳಲ್ಲಿಯೇ
ಇದು
ತನ್ನಿಂತಾನೇ
ಕಡಿಮೆಯಾಗುತ್ತದೆ.
ಒಂದು
ವೇಳೆ
ಆಗದೇ
ಇದ್ದರೆ
ಮಾತ್ರ
ವೈದ್ಯರ
ಬಳಿ
ಭೇಟಿ
ನೀಡುವುದು
ಅಗತ್ಯ.
ಇದಕ್ಕೂ
ಮುನ್ನ
ಮನೆಯಲ್ಲಿಯೇ
ತಯಾರಿಸಬಹುದಾದ
ಕೆಲವು
ಮನೆಮದ್ದುಗಳ
ಮೂಲಕ
ಈ
ಕೆಮ್ಮನ್ನು
ಸುಲಭವಾಗಿ
ಮಣಿಸಬಹುದು.....
ಪರಿಹಾರ #1
ಅತ್ಯಂತ ಸುಲಭವಾದ ಪರಿಹಾರವೆಂದರೆ ನೀರು ಕುಡಿಯುವುದು. ದಿನವಿಡೀ ಸಾಧ್ಯವಾದಷ್ಟು ನೀರನ್ನು ಸತತವಾಗಿ ಕುಡಿಯಬೇಕು. ಈ ನೀರು ಸಾಧ್ಯವಾದಷ್ಟು ಬಿಸಿ ಇರುವುದು ಅಗತ್ಯ. ಇದರಿಂದ ಗಂಟಲಿನ ಒಳಭಾಗದಲ್ಲಿ ಅಂಟಿಕೊಂಡಿದ್ದ ಕಫ ಕರಗಿ ಸಡಿಲಗೊಂಡು ನಿವಾರಣೆಯಾಗಲು ಸಾಧ್ಯವಾಗುತ್ತದೆ. ಅಲ್ಲದೇ ದೇಹಕ್ಕೆ ಹೆಚ್ಚಿನ ನೀರು ಲಭ್ಯವಾಗಿ ರೋಗ ನಿರೋಧಕ ಶಕ್ತಿ ಹೆಚ್ಚಲೂ ಸಾಧ್ಯವಾಗುತ್ತದೆ.
ಪರಿಹಾರ #2
ಮಧುಮೇಹವಿಲ್ಲದ ವ್ಯಕ್ತಿಗಳು ದಿನಕ್ಕೆ ಮೂರು ಬಾರಿ ಒಂದು ಚಿಕ್ಕ ಚಮಚ ಜೇನನ್ನು ಸೇವಿಸಿದರೆ ಉತ್ತಮ. ಇದರ ಉರಿಯೂತ ನಿವಾರಕ ಗುಣ ಸೋಂಕನ್ನು ನಿವಾರಿಸುವ ಜೊತೆಗೇ ಬ್ಯಾಕ್ಟೀರಿಯಾಗಳನ್ನೂ ಎದುರಿಸಿ ಕಫವನ್ನು ಇಲ್ಲವಾಗಿಸಲು ನೆರವಾಗುತ್ತದೆ.
ಪರಿಹಾರ #3
ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ ಒಂಚು ಚಿಕ್ಕ ಚಮಚ ಉಪ್ಪು ಸೇರಿಸಿ ಈ ನೀರಿನಿಂದ ಗಳಗಳಿಸಿ. ದಿನಕ್ಕೆ ಮೂರು ಬಾರಿ ಹೀಗೆ ಮಾಡುವ ಮೂಲಕ ಬಾಯಿಯ ಒಳಗಿನ ತೇವಭಾಗದಲ್ಲಿ ಅಡಗಿದ್ದ ಬ್ಯಾಕ್ಟೀರಿಯಾಗಳನ್ನು ನಿವಾರಿಸಲು ಸಾಧ್ಯವಾಗುತ್ತದೆ ಹಾಗೂ ಕೆಮ್ಮಿನಿಂದ ಹೊರಬರಲು ಸಾಧ್ಯವಾಗುತ್ತದೆ.
ಪರಿಹಾರ #4
ಒಂದು ಕಪ್ ಹಾಲನ್ನು ಕುದಿಸಿ ಇದಕ್ಕೆ ಒಂದೆರಡು ಎಸಳು ಬೆಳ್ಳುಳ್ಳಿಯನ್ನು ಜಜ್ಜಿ ಸೇರಿಸಿ. ಈ ಹಾಲನ್ನು ಇನ್ನೂ ಒಂದೆರಡು ನಿಮಿಷ ಕುದಿಸಿ ಬಿಸಿಬಿಸಿಯಿದ್ದಂತೆಯೇ ಕುಡಿಯಿರಿ. ಬೆಳ್ಳುಳ್ಳಿಯಲ್ಲಿರುವ ಬ್ಯಾಕ್ಟೀರಿಯಾ ನಿವಾರಕ ಗುಣ ಗಂಟಲಿನ ಸೋಂಕನ್ನು ನಿವಾರಿಸಲು ನೆರವಾಗುತ್ತದೆ.
ಪರಿಹಾರ #5
ಒಂದು ಲೋಟ ನೀರಿನಲ್ಲಿ ಒಂದು ಚಿಕ್ಕ ತುಂಡು ಹಸಿಶುಂಠಿಯನ್ನು ಸುಮಾರು ಐದು ನಿಮಿಷಗಳ ಕಾಲ ಕುದಿಸಿ ಬಳಿಕ ಇದಕ್ಕೆ ಕೊಂಚ ಹಾಲು ಬೆರೆಸಿ. ನಂತರ ಇನ್ನೂ ಐದು ನಿಮಿಷ ಕುದಿಸಿದ ನಂತರ ಒಂದು ಚಿಟಿಕೆ ಅರಿಶಿನ ಬೆರೆಸಿ ಕುಡಿಯಿರಿ. ಶುಂಠಿ ಮತ್ತು ಅರಿಶಿನದಲ್ಲಿರುವ ಗುಣಪಡಿಸುವ ಗುಣ ಮತ್ತು ಉರಿಯೂತ ನಿವಾರಕ ಗುಣಗಳು ಕೆಮ್ಮನ್ನು ಗುಣಪಡಿಸಲು ನೆರವಾಗುತ್ತವೆ.
ಪರಿಹಾರ #6
ದಿನಕ್ಕೆ ಕೆಲವು ಕಪ್ ಗಳಂತೆ ಹಸಿರು ಟೀ ಪೇಯವನ್ನು (ಗ್ರೀನ್ ಟೀ) ಕುಡಿಯುತ್ತಾ ಬಂದರೆ ಕೆಮ್ಮಿನಿಂದ ಶೀಘ್ರವಾಗಿ ಹೊರಬರಲು ಸಾಧ್ಯವಾಗುತ್ತದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಣ ಕೆಮ್ಮನ್ನು ಶೀಘ್ರವಾಗಿ ಗುಣಪಡಿಸುತ್ತದೆ.
ಪರಿಹಾರ #7
ಒಂದು ಕಪ್ ನೀರನ್ನು ಕುದಿಸಿ ಇದಕ್ಕೆ ಒಂದು ಇಂಚಿನಷ್ಟು ದೊಡ್ಡ ಹಸಿಶುಂಠಿಯ ತುಂಡನ್ನು ಜಜ್ಜಿ ಬೆರೆಸಿ. ಇದಕ್ಕೆ ಕೆಲವು ಹನಿ ಲಿಂಬೆರಸವನ್ನು ಬೆರೆಸಿ ಕುಡಿಯಿರಿ. ಇವೆರಡೂ ಕೆಮ್ಮನ್ನು ಕಡಿಮೆಗೊಳಿಸಲು ನೆರವಾಗುತ್ತವೆ.