Just In
Don't Miss
- News Bengaluru Heat: ಏ.25 ರಂದು ನಗರದಲ್ಲಿ ಅತ್ಯಧಿಕ ತಾಪಮಾನ: 12 ವರ್ಷಗಳ ದಾಖಲೆ ಉಡೀಸ್
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Movies Shrirasthu Shubhamasthu:ದೀಪಿಕಾಗೆ ಉತ್ತರ ಕೊಡೋಕೆ ಆಗ್ತಿಲ್ಲ; ಇತ್ತ ಹೆಂಡತಿಗೆ ಸಮಾಧಾನ ಮಾಡೋಕೆ ಆಗ್ತಿಲ್ಲ!
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸರಳ ರೆಸಿಪಿ: ರಾತ್ರಿ ಬೆಳಗಾಗುವುದರೊಳಗೆ 'ಒಣ ಕೆಮ್ಮು' ಮಾಯ!
ಬೇಸಿಗೆಕಾಲದಲ್ಲಿ ಹೆಚ್ಚಿನವರಿಗೆ ಒಣ ಕೆಮ್ಮಿನ ಸಮಸ್ಯೆ ಕಂಡು ಬರುತ್ತದೆ. ದೂಳಿನ ಅಲರ್ಜಿ ಇರುವವರೆಗೆ ಈ ರೀತಿಯ ಕೆಮ್ಮು ಕಂಡು ಬರುತ್ತದೆ.... ಚಿಂತಿಸದಿರಿ ಅದಕ್ಕೆಂದೇ ಸಿಂಪಲ್ ಮನೆಮದ್ದು ನೀಡಿದ್ದೇವೆ, ಪ್ರಯತ್ನಿಸಿ ನೋಡಿ..
ಕೆಮ್ಮಿದವರಿಗೂ ಸುತ್ತಮುತ್ತಲಿನವರಿಗೂ ಕಿರಿಕಿರಿ ಮಾಡುವ ಒಣಕೆಮ್ಮು ಸುಲಭವಾಗಿ ಹೋಗುವುದಿಲ್ಲ. ಏಕೆಂದರೆ ಗಂಟಲ ಒಳಭಾಗ, ಎದೆಯ ಮೇಲ್ಭಾಗದಲ್ಲಿ ಸಂಗ್ರಹವಾಗಿರುವ ಸೋಂಕು ಅತಿ ಹೆಚ್ಚು ಸಾಂದ್ರತೆ ಹೊಂದಿರುವ ಕಾರಣ ಗಟ್ಟಿಯಾಗಿ ಅಂಟಿಕೊಂಡಿದ್ದು ತುರಿಕೆ ಮೂಡಿಸುತ್ತದೆ. ಎಷ್ಟು ಕೆಮ್ಮಿದರೂ ಕಫ ಬರದೇ ಇರುವುದಕ್ಕೇ 'ಒಣ'ಎಂಬ ಪದವನ್ನು ಬಳಸಲಾಗಿದೆ. ಬಹುತೇಕ ಎಲ್ಲರೂ ಈ ಒಣಕೆಮ್ಮನ್ನು ಒಮ್ಮೆಯಾದರೂ ಅನುಭವಿಸಿಯೇ ಇರುತ್ತಾರೆ. ಮಧ್ಯರಾತ್ರಿ ಕಾಡುವ ಕೆಮ್ಮು, ಏನು ಮಾಡಬೇಕು?
ಒಣಕೆಮ್ಮು ಪ್ರಾರಂಭವಾದ ಬಳಿಕ ಇದನ್ನು ನಿಲ್ಲಿಸಲು ಮತ್ತು ಇದರಿಂದ ಬಿಡುಗಡೆ ಪಡೆಯಲು ಎಲ್ಲರೂ ಯತ್ನಿಸುತ್ತಾರೆ. ಆದರೆ ಇವೆರಡೂ ಅಷ್ಟು ಸುಲಭವಲ್ಲ. ನೂರು ಜನರಿರುವ ನಡುವೆ ಕೆಲವರಾದರೂ ನಡುನಡುವೆ ಒಣಕೆಮ್ಮನ್ನು ಕೆಮ್ಮುತ್ತಾ ಇರುವುದನ್ನು ಖಂಡಿತಾ ಗಮನಿಸಬಹುದು. ಇದರ ನಿವಾರಣೆಗೆ ಸುಲಭವಾದ ನೈಸರ್ಗಿಕ ಮನೆಮದ್ದೊಂದು ಲಭ್ಯವಿದೆ. ಹತ್ತೇ ಹತ್ತು ನಿಮಿಷದಲ್ಲಿ ಜ್ವರ, ಶೀತ, ಕೆಮ್ಮು-ಮಂಗಮಾಯ!
ಒಣಕೆಮ್ಮಿಗೆ ಕೆಲವಾರು ಕಾರಣಗಳಿವೆ. ವೈರಸ್ಸುಗಳ ಸೋಂಕು ಹೆಚ್ಚಾದಾಗ ಹೆಚ್ಚಿನ ಕಫವನ್ನು ದೇಹದ ರೋಗ ನಿರೋಧಕ ವ್ಯವಸ್ಥೆ ಮಾಡಿರುತ್ತದೆ. ಈ ಕಫದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಬಿಳಿರಕ್ತಕಣಗಳು ಸತ್ತು ಒಣಗುವುದೇ ಕಫ ಗಟ್ಟಿಯಾಗಲು ಪ್ರಮುಖ ಕಾರಣ. ಈ ಕಫವನ್ನು ನಿವಾರಿಸಲು ದೇಹ ಯತ್ನಿಸುವುದೇ ಒಣಕೆಮ್ಮಿಗೆ ಮೂಲ. ಒಂದು ವೇಳೆ ವೈರಸ್ ಧಾಳಿ ಅಥವಾ ಫ್ಲೂ ಜ್ವರದ ಪರಿಣಾಮವಾಗಿ ಒಣಕಫವಾಗಿದ್ದರೆ ಒಂದೇ ರಾತ್ರಿಯಲ್ಲಿ ನಿವಾರಿಸಲು ಈ ಮನೆಮದ್ದು ಅತ್ಯಂತ ಸಮರ್ಥವಾಗಿದೆ....
ಬೇಕಾಗುವ ಸಾಮಾಗ್ರಿಗಳು
#1. ಆರು ಒಣ ಖರ್ಜೂರಗಳನ್ನು ತೆಗೆದುಕೊಳ್ಳಿ
ಬೇಕಾಗುವ ಸಾಮಾಗ್ರಿಗಳು
#2. ಅರ್ಧ ಲೀಟರ್ ಹಾಲನ್ನು ಪಾತ್ರೆಯಲ್ಲಿ ಸಂಗ್ರಹಿಸಿ
ಬೇಕಾಗುವ ಸಾಮಾಗ್ರಿಗಳು
#3. ಹಾಲನ್ನು ಕುದಿಸಿ. ಖರ್ಜೂರಗಳನ್ನು ತೆರೆದು ಬೀಜ ನಿವಾರಿಸಿ ಕುದಿಯಲು ಪ್ರಾರಂಭವಾದ ಹಾಲಿಗೆ ಬೆರೆಸಿ
ಬೇಕಾಗುವ ಸಾಮಾಗ್ರಿಗಳು
#4 ಹಾಲು ಉಕ್ಕಿಹೋಗದಂತೆ ಉರಿಯನ್ನು ಅತಿ ಚಿಕ್ಕದಾಗಿಸಿ ಮುಂದಿನ ಇಪ್ಪತ್ತರಿಂದ ಮೂವತ್ತು ನಿಮಿಷಗಳವರೆಗೆ ಬಿಸಿ ಮಾಡಿ
ಬೇಕಾಗುವ ಸಾಮಾಗ್ರಿಗಳು
#5 ಬಳಿಕ ಈ ಹಾಲನ್ನು ಕುಡಿಯಲು ಸಾಧ್ಯವಾಗುವಷ್ಟು ತಣಿಸಿ ಒಂದು ಕಪ್ ಕುಡಿಯಿರಿ. ಒಣಕೆಮ್ಮು ಕಡಿಮೆಯಾಗುವವರೆಗೆ ದಿನಕ್ಕೆ ಮೂರು ಬಾರಿ ಪುನರಾವರ್ತಿಸಿ.