Just In
- 23 min ago ಮೀನ ರಾಶಿಯಲ್ಲಿ ರಾಹು-ಮಂಗಳ ಯುತಿಯಿಂದ ಅಂಗಾರಕ ಯೋಗ: 12 ರಾಶಿಗಳ ಮೇಲಿರಲಿದೆ ಈ ನಕರಾತ್ಮಕ ಪರಿಣಾ
- 56 min ago ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- 1 hr ago ಪುರುಷರಲ್ಲಿ ಹೆಚ್ಚಾಗುತ್ತಿದೆ ಬಂಜೆತನ: ಪುರುಷರು ಈ ಆಹಾರ ಸೇವಿಸಿದರೆ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುವುದು
- 2 hrs ago ಏಪ್ರಿಲ್ 24 ದಿನ ಭವಿಷ್ಯ: ಬುಧವಾರದ ಈ ದಿನ ನಿಮ್ಮ ರಾಶಿಫಲ ಹೇಗಿದೆ?
Don't Miss
- Movies 'KGF-2' ಚಿತ್ರದಿಂದ ಸಿಕ್ಕಿದ್ದು 200 ಕೋಟಿ ರೂ.; 'ಟಾಕ್ಸಿಕ್', 'ರಾಮಾಯಣ'ಕ್ಕೆ ಯಶ್ 50-50 ಡೀಲ್!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಲಕ್ಷ್ಯ ಮಾಡಬೇಡಿ, ಕಣ್ಣುಗಳೇ ನಮ್ಮ ಅಮೂಲ್ಯ ಸಂಪತ್ತು
ಕಣ್ಣು ತುಂಬಾ ಸೂಕ್ಷ್ಮ ಮತ್ತು ಪ್ರಮುಖ ಅಂಗವಾದ್ದರಿಂದ ಇದರೆಡೆಗಿನ ನಿರ್ಲಕ್ಷ್ಯ ಸಲ್ಲದು. ಕಣ್ಣಿನ ಮೇಲಿನ ಅತಿಯಾದ ಒತ್ತಡ ಕಣ್ಣು ನೋವಿಗೆ ಕಾರಣವಾಗಬಹುದು. ಆದ್ದರಿಂದ ಕಣ್ಣಿಗೂ ಸ್ಪೆಷಲ್ ಕೇರ್ ಅಗತ್ಯವಿದೆ...
ದೇಹದಲ್ಲಿ ಕಣ್ಣುಗಳು ಸೂರ್ಯ-ಚಂದ್ರರು ಇದ್ದಂತೆ. ಆಕಾಶದಲ್ಲಿ ಸೂರ್ಯ ಚಂದ್ರರು ಇಲ್ಲದೆ ಭೂಮಿಯ ಮೇಲೆ ಯಾವ ಪರಿಣಾಮ ಬೀರಬಹುದೋ ಅದೇ ಕಣ್ಣುಗಳು ಇಲ್ಲದೆ ದೇಹದ ಮೇಲೆ ಅದೇ ಪರಿಣಾಮ ಉಂಟಾಗಬಹುದು. ಕಣ್ಣುಗಳ ಆರೋಗ್ಯ ಹಾಗೂ ಅವುಗಳ ಆರೈಕೆ ತುಂಬಾ ಮುಖ್ಯವಾಗಿದೆ. ಕಣ್ಣುಗಳಿಗೆ ತೊಂದರೆಯಾದರೆ ಅದರಿಂದ ದೇಹಕ್ಕೆ ದೊಡ್ಡ ಅಡ್ಡಪರಿಣಾಮ ಬೀರಲಿದೆ. ಕಣ್ಣುಗಳೇ ನಮ್ಮ ಅಮೂಲ್ಯ ಸಂಪತ್ತು- ನಿರ್ಲಕ್ಷ್ಯ ಮಾಡದಿರಿ....
ದೃಷ್ಟಿ ಸರಿಯಿಲ್ಲದೆ ಇದ್ದಾಗ ನಮಗೆ ಸುತ್ತಮುತ್ತಲಿನಲ್ಲಿರುವ ವಸ್ತುಗಳನ್ನು ನೋಡಲು ಸಾಧ್ಯವಾಗುತ್ತದೆ. ಇಲ್ಲವೆಂದಾದರೆ ನಮ್ಮ ಕೆಲಸ ಕಾರ್ಯಗಳನ್ನು ಮಾಡಲು ಸಾಧ್ಯವೇ ಇಲ್ಲ. ಇಂದಿನ ದಿನಗಳಲ್ಲಿ ಅತಿಯಾಗಿ ಕಂಪ್ಯೂಟರ್ ಮತ್ತು ಮೊಬೈಲ್ ಅನ್ನು ಬಳಸುವುದರಿಂದ ಕಣ್ಣಿನ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ.
ಹಲವಾರು ಸಮಸ್ಯೆಗಳು ಕಣ್ಣುಗಳನ್ನು ಕಾಡುವುದರಲ್ಲಿ ಸಂಶಯವೇ ಇಲ್ಲ. ಕಣ್ಣು ಒಣಗುವುದು, ಕಣ್ಣು ನೋವು ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಇದಕ್ಕಾಗಿ ಕೆಲವೊಂದು ಮನೆಮದ್ದನ್ನು ಬಳಸಬಹುದು. ಇದು ಯಾವುದೆಂದು ಈ ಲೇಖನದ ಮೂಲಕ ನೀವು ತಿಳಿಯಿರಿ. ಇಂತಹ ಲಕ್ಷಣಗಳು ಕಂಡುಬಂದರೆ 'ಓದುವ ಕನ್ನಡಕ' ಅತ್ಯವಶ್ಯಕ...
ಮನೆಮದ್ದು
ತಯಾರಿಸಲು
ಬೇಕಾಗುವ
ಸಾಮಗ್ರಿಗಳು
ಕ್ಯಾಮೊಮೈಲ್
ಟೀ
ಬ್ಯಾಗ್
-2
ರೋಸ್
ವಾಟರ್
-2
ಚಮಚ
ಕಂಪ್ಯೂಟರ್ ಹಾಗೂ ಮೊಬೈಲ್ನಲ್ಲಿ ಕಡಿಮೆ ಸಮಯ ವ್ಯಯ ಮಾಡಿ, ಕಲುಷಿತ ವಾತಾವರಣಕ್ಕೆ ಕಣ್ಣುಗಳನ್ನು ಬಿಟ್ಟುಕೊಡಬಾರದು. ಹೀಗೆ ಮಾಡಿದಲ್ಲಿ ಈ ನೈಸರ್ಗಿಕ ಮನೆಮದ್ದು ಕಣ್ಣಿನ ಒತ್ತಡ ಕಡಿಮೆ ಮಾಡಿ ಆರೋಗ್ಯ ನೀಡುವಲ್ಲಿ ತುಂಬಾ ಪರಿಣಾಮಕಾರಿಯಾಗಲಿದೆ.
ಕ್ಯಾಮೊಮೈಲ್ ಮತ್ತು ರೋಸ್ ವಾಟರ್ ಕಣ್ಣಿಗೆ ಶಮನ ನೀಡಿ ಒತ್ತಡ ಕಡಿಮೆ ಮಾಡುವುದು. ಇದು ಉರಿಯೂತವನ್ನು ಕಡಿಮೆ ಮಾಡುವುದರಿಂದ ಕಣ್ಣು ಕೆಂಪಾಗುವುದು ಮತ್ತು ಕಣ್ಣು ಒಣಗುವುದನ್ನು ಇದು ತಡೆಯುವುದು. ಈ ಮನೆಮದ್ದನ್ನು ಕೋಶಗಳು ಹೀರಿಕೊಂಡಾಗ ಇದು ದೃಷ್ಟಿಯ ನರಗಳನ್ನು ಬಲಗೊಳಿಸಿ ಕಣ್ಣುಗಳನ್ನು ಆರೋಗ್ಯವಾಗಿಡುತ್ತದೆ.
ಮನೆಮದ್ದು
ತಯಾರಿಸುವ
ಮತ್ತು
ಬಳಸುವ
ವಿಧಾನ
*ಕ್ಯಾಮೊಮೈಲ್
ಟೀ
ಬ್ಯಾಗ್
ಗಳನ್ನು
ಬಿಸಿ
ನೀರಿನಲ್ಲಿ
ಮುಳುಗಿಸಿ.
ಸ್ವಲ್ಪ
ಸಮಯ
ಹಾಗೆ
ಇರಲಿ.
*ಹತ್ತಿಯ
ಉಂಡೆಯನ್ನು
ರೋಸ್
ವಾಟರ್ನಲ್ಲಿ
ಅದ್ದಿ
ಅದನ್ನು
ಕಣ್ಣಿನ
ರೆಪ್ಪೆಗಳ
ಒಳಭಾಗಕ್ಕೆ
ಹಚ್ಚಿಕೊಳ್ಳಿ.
*ಎರಡು
ಟೀ
ಬ್ಯಾಗ್ಗಳನ್ನು
ಕಣ್ಣಿನ
ಮೇಲಿಡಿ.
*30 ನಿಮಿಷಗಳ ಕಾಲ ಹಾಗೆ ಇರಲಿ. ಕಣ್ಣುಗಳು ಮುಚ್ಚಿರಲಿ. ಒಂದು ತಿಂಗಳ ಕಾಲ ಪ್ರತೀ ದಿನ ಹೀಗೆ ಮಾಡಿ.