Just In
- 7 min ago ವಿಶ್ವದಲ್ಲೇ ಅತೀ ಹೆಚ್ಚು ಬಾರಿ ಚುನಾವಣೆ ಸೋತ ವ್ಯಕ್ತಿ..! ಯಾರು ಈ ಸೋಲುವ ಸರದಾರ ಗೊತ್ತಾ?
- 1 hr ago ಮದ್ಯದ ಅಮಲಲ್ಲಿ ತೇಲಾಡುತ್ತಿದ್ದ ಶಿಕ್ಷಕನಿಗೆ ಮಕ್ಕಳಿಂದಲೇ ಚಪ್ಪಲಿ ಏಟು..!
- 3 hrs ago ವಿಶ್ವದ ದುಬಾರಿ ಹಣ್ಣುಗಳಿವು..! ನೀವು ಊಹಿಸದ ಬೆಲೆ ಈ ಹಣ್ಣುಗಳಿಗಿದೆ..!
- 3 hrs ago ಶನಿಯ ನಕ್ಷತ್ರ ಬದಲಾವಣೆ: ಅಕ್ಟೋಬವರೆಗೆ ಈ 3 ರಾಶಿಯವರು ಇದರ ಉತ್ತಮ ಫಲ ಪಡೆಯುವಿರಿ
Don't Miss
- News India Unemployment: ದೇಶದಲ್ಲಿ ಯುವ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಳ: ಬೆಚ್ಚಿಬೀಳಿಸುವ ವರದಿ ಬಹಿರಂಗ!
- Finance ನಿಮಗೆ ಗೊತ್ತಲ್ಲದೇ ನಿಮ್ಮ ಹೆಸರಲ್ಲಿ ಖಾತೆ ತೆರೆದಿರ್ತಾರೆ, ಪಿಂಚಣಿ ಯೋಜನೆ ಬಗ್ಗೆ ಹುಷಾರಾಗಿರಿ
- Movies 16 ವರ್ಷಗಳ ಬಳಿಕ ಸೂಪರ್ ಹಿಟ್ ಜೋಡಿ ದರ್ಶನ; 'ಮಹಾನಟಿ'ಗಾಗಿ ರಮೇಶ್ ಅರವಿಂದ್-ಪ್ರೇಮಾ!
- Automobiles ಜನಪ್ರಿಯ ಕಂಪನಿಗಳಿಂದ ಮುಂಬರುವ ಪುಟ್ಟ ಕಾರುಗಳಿವು.. ಇವೇ ಮಿಡಲ್ ಕ್ಲಾಸ್ ಜನರ ಫೇವರಿಟ್ ಆಗುವುದು ಪಕ್ಕಾ!
- Sports IPL 2024: ಐಪಿಎಲ್ನಲ್ಲಿ ವಿಶಿಷ್ಟ ದಾಖಲೆ ಬರೆದ ಜಯದೇವ್ ಉನಾದ್ಕಟ್; ಈ ಸಾಧನೆ ಮಾಡಿದ ಮೊದಲ ಭಾರತೀಯ
- Technology iPhones: ಬೇಕಿತ್ತಾ ಇದೆಲ್ಲ? ನಕಲಿ ಐಫೋನ್ ಮೂಲಕ ಆಪಲ್ಗೆ ಪಂಗನಾಮ ಹಾಕಿದವನಿಗೆ ಜೈಲೂಟ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೃದ್ರೋಗ ಓಡಿಸುವ ವೃದ್ಧಾಪ್ಯದ ಧನಾತ್ಮಕತೆ!
ಜೀವನದಲ್ಲಿ ಏನೇ ಕಷ್ಟ ಬಂದರೂ ಎದೆ ಗುಂದದೆ ಗುಣಾತ್ಮಕ ಚಿಂತನೆಯಿಂದ ಅದನ್ನು ಎದುರಿಸಿದರೆ, ಒತ್ತಡಗಳಿಂದ ಉದ್ಭವಿಸಬಹುದಾದ ಅದೆಷ್ಟೋ ಬಗೆಯ ಕಾಯಿಲೆಗಳಿಂದ ದೂರ ಉಳಿಯಬಹುದಾಗಿದೆ. ವಯೋ ವೃದ್ಧರಿಗೆ ಈ ಮಾತು ಹೆಚ್ಚು ಅನ್ವಯಿಸುತ್ತದೆ, ಎನ್ನುತ್ತದೆ, ಒಂದು ಹೊಸ ಸಂಶೋಧನೆ.
ಋಣಾತ್ಮಕ ಚಿಂತನೆಗಳು ನಮ್ಮ ಜೀವನದ ಮೌಲ್ಯವನ್ನೇ ಹಾಳುಗೆಡವುತ್ತವೆ. ಅದೇ ಗುಣಾತ್ಮಕ ಚಿಂತನೆ ಉಳ್ಳವರು ವೃದ್ಧಾಪ್ಯ ತಲುಪಿದರೂ ಅವರ ವಯಸ್ಸಿನ ಇತರರಿಗೆ ಕಾಡುವ ಕಾಯಿಲೆಗಳು ಇವರತ್ತ ಚಿಂತೆಯಿಂದ ನಡುವಿನ ಸೊನ್ನೆ ಮಾಯವಾಗಿ " ಚಿತೆ" ಹತ್ತಿರವಾಗುತ್ತದೆ ಎಂಬ ನಾಣ್ಣುಡಿ ಕೇಳಿದ್ದೇವೆ. ನೆಮ್ಮದಿ ಕೆಡಿಸುವ ಮಾನಸಿಕ ಒತ್ತಡಕ್ಕೆ ಕಾರಣವೇನು?
ಅಮೇರಿಕಾದ ನಾರ್ತ್ ಕೆರೋಲಿನಾ ಯೂನಿವರ್ಸಿಟಿಯ ಪ್ರೊಫೆಸರ್ ಶೆವಾನ್ ನ್ಯೂಪರ್ಟ್ ಹೇಳುತ್ತಾರೆ" ಅಘಾತಗಳಿಂದ ತಬ್ಬಿಬ್ಬಾಗಿ ಧೃತಿಗೆಡುವವರು ಬೇಗನೇ ವೃದ್ಧರಾಗುತ್ತಾರೆ. ಋಣಾತ್ಮಕ ಚಿಂತನೆ ಉಳ್ಳವರು ವಯಸ್ಸಾದಂತೆಲ್ಲ ಒತ್ತಡಕ್ಕೊಳಗಾಗಿ ತನ್ಮೂಲಕ ಹೃದಯದ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಆದರೆ ಧನಾತ್ಮಕ ಧೋರಣೆ ಉಳ್ಳವರು ಇದಕ್ಕೆ ವಿರುದ್ಧವಾದ ಸತ್ಪರಿಣಾಮ ಪಡೆಯುತ್ತಾರೆ". ಒತ್ತಡವನ್ನು ಚಿಟಿಕೆ ಹೊಡೆದಷ್ಟು ಸುಲಭವಾಗಿ ನಿಯಂತ್ರಿಸಿ!
ಇವರು ತಮ್ಮ ಸಂಶೋಧನೆಗಾಗಿ 60 ರಿಂದ 96 ವಯಸ್ಸಿನ 43 ಜನರಿಗೆ ಎಂಟು ದಿನಗಳ ಕಾಲ ನಿರಂತರ ಸಂದರ್ಶನ ನಡೆಸಿದರು. ಈ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಮುಖ್ಯವಾಗಿ ಅವರ ಜೀವನದ ಕುರಿತಾದ ಧೋರಣೆಯನ್ನು ಪರಿಶೀಲಿಸಲಾಯ್ತು. ಉದಾಹರಣೆಗೆ: ಅವರಿಗೆ ತಾವು ಯೌವ್ವನದಲ್ಲಿ ಎಲ್ಲರಿಗೂ ಸಲ್ಲುವಂತಿದ್ದು, ಈಗಲೂ ಹಾಗೆಯೇ ಇದ್ದೀರೋ ಅಥವ ತಾನು ನಿಷ್ಪ್ರಯೋಜಕ ಎನ್ನಿಸುತ್ತಿದೆಯೇ? ಎಂದು ಕೇಳಿದರು.
ಯೌವ್ವನದಲ್ಲಿ ಆನಂದವಾಗಿದ್ದು, ಈಗ ಹಾಗಿಲ್ಲ ಎನಿಸುತ್ತಿದೆಯೇ? ಎಂಬಿತ್ಯಾದಿಯಾಗಿ, ಎಂಟು ದಿನಗಳ ಪ್ರಶ್ನೆಗಳೂ ಹೀಗೆಯೇ ಇರುತ್ತಿದ್ದವು. ವ್ಯಕ್ತಿಗಳ ಧೋರಣೆಯಿಂದ ಧನಾತ್ಮಕವೋ ಇಲ್ಲಾ ಋಣಾತ್ಮಕವೋ ಎಂಬುದನ್ನು ತಿಳಿಯುವುದು ಮತ್ತು ಅದಕ್ಕನುಗುಣವಾಗಿ ಅವರ ಶರೀರ ಖಾಯಿಲೆಗಳಿಗೆ ಎರವಾದ ರೀತಿಯನ್ನು ಪರಿಶೀಲಿಸುವುದು ಈ ಸಂಶೋಧನೆಯ ಹಿಂದಿದ್ದ ಚಿಂತನೆ.
" ವೃದ್ಧಾಪ್ಯ ಸಮೀಪಿಸುತ್ತಿದ್ದಂತೆ ಜೀವನದ ಕುರಿತಂತೆ ವ್ಯಕ್ತಿಯ ಧೋರಣೆ ಹೇಗಿರುತ್ತದೆ ಎಂದು ಹೇಳಲಾಗದು. ಅದು ಆ ವ್ಯಕ್ತಿ . ಬೆಳೆದು ಬಂದ ಸಂಸ್ಕೃತಿ, ರೀತಿ-ರಿವಾಜುಗಳನ್ನು ಹೊಂದಿಕೊಂಡಿರುತ್ತದೆ " ಎನ್ನುತ್ತಾರೆ, ಆ ವಿದ್ಯಾಲಯದ ಸಂಶೋಧಕ ವಿದ್ಯಾರ್ಥಿನಿ ಜೆನ್ನಿಫರ್.
ನಿಜ...ನಮ್ಮ ಧೋರಣೆಯ ಹಿಂದೆ ನಮ್ಮ ಹಿರಿಯರು ನಮಗೆ ನೀಡಿದ ಸಂಸ್ಕಾರದ ಪರಿಣಾಮ ಇದ್ದೇ ಇದೆ. ಅದೊಂದು ವೇಳೆ ಋಣಾತ್ಮಕವಾಗಿದ್ದರೂ ಇಂದಿನ ವಿದ್ಯಾವಂತ ಜನತೆ ಅದನ್ನು ಧನಾತ್ಮಕವಾಗಿ ರೂಪಿಸಿಕೊಳ್ಳಬೇಕಾದ ಅವಶ್ಯಕತೆ ಇದೆ, ಅನ್ನಿಸುತಿಲ್ಲವೇ?.
ಐಎಎನ್ಎಸ್ ವರದಿ