Just In
- 2 hrs ago ಗುಡ್ಫ್ರೈಡೆ ಆಚರಣೆ ಹುಟ್ಟಿದ್ದು ಹೇಗೆ? ಇದರ ಮಹತ್ವವೇನು ಗೊತ್ತಾ?
- 11 hrs ago ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- 12 hrs ago ಮೀನ ರಾಶಿಯಲ್ಲಿ ಬುಧ ವಕ್ರೀಯ ಚಲನೆ ಮಾಡುವಾಗ ಈ 5 ರಾಶಿಯವರು ವೃತ್ತಿ ಜೀವನದ ಬಗ್ಗೆ ಜಾಗ್ರತೆ
- 12 hrs ago ದಿನ ಭವಿಷ್ಯ ಮಾರ್ಚ್ 29: ಶುಕ್ರವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
Don't Miss
- News Karnataka Lok Sabha: 28 ಕ್ಷೇತ್ರಗಳ ಜಾತಿವಾರು ಅಭ್ಯರ್ಥಿಗಳ ಯಾರು? ಮಾಹಿತಿ ಇಲ್ಲಿದೆ
- Automobiles ಎಲೆಕ್ಟ್ರಿಕ್ ಲೋಕಕ್ಕೆ ಎಸ್ಯುವಿ ದೈತ್ಯನ ಎಂಟ್ರಿ: ಇನ್ನು ಉಳಿದ ಕಾರುಗಳನ್ನು ದೇವರೇ ಕಾಪಾಡಬೇಕು!
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Finance ಬೆಂಗಳೂರು-ತುಮಕೂರು ನಮ್ಮ ಮೆಟ್ರೋ ಯೋಜನೆ: ಬರಲಿವೆ 19 ಎತ್ತರದ ನಿಲ್ದಾಣಗಳು
- Technology iPhone: ಆಪಲ್ ಅಂತಿಮವಾಗಿ ಐಫೋನ್ 12 ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿಯೇ ಬಿಟ್ಟಿತು! ಏನದು?
- Movies "ಇವರು ಆಡೋ ಮಾತುಗಳಿಂದ ನಮ್ಮ ತಾಯಿ ಊಟ ಮಾಡ್ತಿಲ್ಲ"; ಕಣ್ಣೀರಿಟ್ಟ ವರ್ತೂರು ಸಂತೋಷ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜ್ವರ-ಶೀತಕ್ಕೆ ಮನೆಯಂಗಳದ ತುಳಸಿ ಎಲೆಗಳೇ ಸಾಕು!
ಮಳೆಗಾಲ ಬಂತೆಂದರೆ ಎಲ್ಲರಿಗೂ ಶೀತ, ನೆಗಡಿ, ಜ್ವರಗಳು ಸಾಮಾನ್ಯವಾಗಿ ಆವರಿಸುತ್ತವೆ. ಹೆಚ್ಚಿನವರಿಗೆ ಸೋಂಕು ವಿಪರೀತವಾಗಿರುತ್ತದೆ. ಅದರಲ್ಲೂ ನೆಗಡಿ ಮತ್ತು ಶೀತ ಒಬ್ಬರಿಂದೊಬ್ಬರಿಗೆ ಶೀಘ್ರವಾಗಿ ಹರಡುತ್ತದೆ. ಪರಿಣಾಮವಾಗಿ ಜ್ವರ, ತಲೆಸಿಡಿತ, ಮೈಕೈನೋವು ಮೊದಲಾದವು ಆವರಿಸುತ್ತವೆ. ಹೆಚ್ಚಿನವರ ಮನದಲ್ಲಿ ಜ್ವರ ಬಂದರೆ ಪ್ಯಾರಸಿಟಮಾಲ್ ಮಾತ್ರೆಯನ್ನು ನುಂಗಿದರೆ ಸಾಕು ಎಂಬ ವಿಷಯ ಅಚ್ಚೊತ್ತಿದೆ. ಆರೋಗ್ಯ ರಕ್ಷಕ- ತುಳಸಿ ಎಲೆಯ ವೈಶಿಷ್ಟ್ಯ ಒಂದೇ, ಎರಡೇ?
ಆದರೆ ವಾಸ್ತವವಾಗಿ ಪ್ಯಾರಸಿಟಮಾಲ್ ಜ್ವರವನ್ನು ಕಡಿಮೆಗೊಳಿಸುವ ಯಾವುದೇ ಕೆಲಸ ಮಾಡುವುದಿಲ್ಲ. ಇದರ ಕೆಲಸವೇನಿದ್ದರೂ ನಮ್ಮ ಜೀವಕೋಶಗಳು ನೋವು ಮತ್ತು ತೊಂದರೆಯ ಸೂಚನೆಗಳನ್ನು ಮೆದುಳಿಗೆ ತಲುಪಿಸುವುದನ್ನು ತಡೆಯುವುದು ಮಾತ್ರ. ಒಂದರ್ಥದಲ್ಲಿ ಹಲ್ಲು ಕೀಳುವ ಮೊದಲು ನೀಡುವ ಅರವಳಿಕೆ ಇದ್ದ ಹಾಗೆ. ಪ್ಯಾರಸಿಟಮಾಲ್ ನೋವನ್ನು ಕಡಿಮೆ ಮಾಡುವುದಿಲ್ಲ, ಬದಲಿಗೆ ನೋವಿನ ಸೂಚನೆ ಅದೃಷ್ಟಹೀನ ದೇವತೆ ತುಳಸಿ ಪರಮಪಾವನೆಯಾಗಿದ್ದು ಹೇಗೆ?
ಆದ್ದರಿಂದ
ಈ
ಬಾರಿ
ಶೀತ
ನೆಗಡಿ,
ಜ್ವರ
ಬಾಧಿಸಿದರೆ
ಸುಮ್ಮನೇ
ಆತ್ಮವಂಚನೆ
ಮಾಡಿಕೊಳ್ಳುವ
ಬದಲು
ಜ್ವರವನ್ನು
ನಿಜವಾಗಿಯೂ
ಕಡಿಮೆ
ಮಾಡಲು
ಸಮರ್ಥವಾಗಿರುವ
ತುಳಸಿಯ
ಸೇವೆ
ಪಡೆಯುವುದೇ
ಒಳ್ಳೆಯದು.
ತುಳಸಿ
ಎಲೆ
ಔಷಧೀಯ
ಗುಣಗಳು
ಶೀತ
ನೆಗಡಿ
ತಲೆನೋವು
ಮೊದಲಾದವುಗಳನ್ನು
ದೇಹದ
ರೋಗ
ನಿರೋಧಕ
ಶಕ್ತಿಯೇ
ಉಡುಗಿಸುವಂತೆ
ಬಲಪಡಿಸುವ
ಮೂಲಕ
ಉತ್ತಮ
ಪರಿಹಾರ
ನೀಡುತ್ತದೆ.
ಬನ್ನಿ,
ಈ
ತುಳಸಿ
ಎಲೆಗಳನ್ನು
ಹೇಗೆ
ಬಳಸಬೇಕು
ಎಂಬುದನ್ನು
ಕೆಳಗಿನ
ಸ್ಲೈಡ್
ಶೋ
ಮೂಲಕ
ನೋಡೋಣ:
ತುಳಸಿ-ಗ್ರೀನ್
ಟೀಯ
ಜೋಡಿ-ಮಾಡಲಿದೆ
ಕಮಾಲಿನ
ಮೋಡಿ
ಜ್ವರಕ್ಕೆ ತುಳಸಿ ಟೀ
ಜ್ವರ ತೀವ್ರವಾಗಿದ್ದರೆ ಈ ಟೀ ಉತ್ತಮವಾಗಿದೆ. ಒಂದು ಕಪ್ ಕುದಿಯುತ್ತಿರುವ ನೀರಿಗೆ ಒಂದು ಮುಷ್ಟಿಯಷ್ಟು ತುಳಸಿ ಎಲೆಗಳನ್ನು ಹಾಕಿ ಕೊಂಚ ಟೀ ಪುಡಿ ಸೇರಿಸಿ ಸುಮಾರು ಐದರಿಂದ ಹತ್ತು ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಕುದಿಸಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ
ಜ್ವರಕ್ಕೆ ತುಳಸಿ ಟೀ
ಬಳಿಕ ಈ ನೀರನ್ನು ಸೋಸಿ ದಿನಕ್ಕೆ ಎರಡು ಬಾರಿ ಒಂದು ಲೋಟದಂತೆ ಕುಡಿಯಿರಿ. ಇದರಿಂದ ಜ್ವರ ಶೀಘ್ರವೇ ಕಡಿಮೆಯಾಗುವುದು ಮತ್ತು ಮಲೇರಿಯಾ ಮತ್ತು ಡೆಂಗ್ಯೂ ಜ್ವರದಂತಹ ಮಾರಕ ಜ್ವರಗಳು ಆವರಿಸುವ ಸಾಧ್ಯತೆಯನ್ನೂ ಕಡಿಮೆಯಾಗಿಸುತ್ತದೆ.
ತುಳಸಿ ಎಲೆಗಳನ್ನು ಬೆರೆಸಿದ ಹಾಲು
ಒಂದು ವೇಳೆ ಜ್ವರ ಚಿಕ್ಕದಾಗಿದ್ದರೆ ಒಂದು ಲೋಟ ತುಳಸಿ ಎಲೆ ಬೆರೆಸಿದ ಹಾಲು ಸಾಕಾಗುತ್ತದೆ. ಇದನ್ನು ತಯಾರಿಸಲು ಅರ್ಧ ಲೀಟರ್ ಹಾಲಿನಲ್ಲಿ ಕೊಂಚ ತುಳಸಿ ಎಲೆಗಳು, ಪುಡಿಮಾಡಿದ ಒಂದೆರಡು ಏಲಕ್ಕಿ ಹಾಕಿ ಕುದಿಸಿ. ಬಳಿಕ ಕೊಂಚ ಸಕ್ಕರೆ ಸೇರಿಸಿ ಬಿಸಿಬಿಸಿಯಿದ್ದಂತೆಯೇ ದಿನಕ್ಕೆ ಎರಡು ಬಾರಿ ಕುಡಿಯಿರಿ. ಜ್ವರ ಶೀಘ್ರವೇ ಇಳಿಯುತ್ತದೆ. ತುಳಸಿ ಎಲೆಗಳನ್ನು ಬೆರೆಸಿದ ಹಾಲು ಕುಡಿಯಿರಿ- ಆರೋಗ್ಯ ಪಡೆಯಿರಿ
ತುಳಸಿಯ ಜ್ಯೂಸ್
ಜ್ವರ ಮಧ್ಯಮವಾಗಿದ್ದರೆ ತುಳಸಿಯ ಜ್ಯೂಸ್ ಸಾಕು. ಮಕ್ಕಳಿಗೆ ಈ ವಿಧಾನ ಹೆಚ್ಚು ಸೂಕ್ತವಾಗಿದೆ. ಇದಕ್ಕಾಗಿ ಸುಮಾರು ಹತ್ತು ಹದಿನೈದು ತುಳಸಿ ಎಲೆಗಳನ್ನು ಕೊಂಚ ನೀರಿನೊಂದಿಗೆ ಅರೆದು ಹಿಂಡಿ ರಸವನ್ನು ಸಂಗ್ರಹಿಸಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ
ತುಳಸಿಯ ಜ್ಯೂಸ್
ಈ ರಸವನ್ನು ಕೊಂಚ ತಣ್ಣೀರಿನೊಂದಿಗೆ ಬೆರೆಸಿ ಪ್ರತಿ ಎರಡರಿಂದ ಮೂರು ಬಾರಿ ರೋಗಿಗೆ ಕುಡಿಸಿ. ಜ್ವರ ಶೀಘ್ರವೇ ಇಳಿಯುತ್ತದೆ.
ಅತ್ಯುತ್ತಮ ಚಿಕಿತ್ಸಕ ಗುಣಗಳು
ತುಳಸಿಯನ್ನು ಪವಿತ್ರ ತುಳಸಿ ಎಂದು ಸಹ ಕರೆಯುತ್ತಾರೆ. ಈ ಅದ್ಭುತವಾದ ಗಿಡ ಮೂಲಿಕೆಯು ಹಿಂದೂಗಳ ಪಾಲಿಗೆ ದೇವರ ಸಮಾನ ಎಂಬುದು ಗೊತ್ತಿರುವ ವಿಚಾರವೇ. ಬೆಳಗ್ಗೆ, ಸಂಜೆ ತುಳಸಿಗೆ ಕೈ ಮುಗಿಯದಿದ್ದರೆ ಅವರ ದಿನ ಪರಿಪೂರ್ಣವಾಗುವುದೇ ಇಲ್ಲ. ಸರ್ವ ರೋಗಗಳಿಗು ತುಳಸಿ ತೀರ್ಥವನ್ನೆ ಇವರು ಆಂಟಿ ಬಯೋಟಿಕ್ ರೀತಿಯಲ್ಲಿ ಸೇವಿಸುತ್ತಾರೆ. ಇನ್ನು ದೇವಾಲಯದಲ್ಲಿ ಸಹ ಇದೇ ತೀರ್ಥವನ್ನು ನಮಗೆ ಬಹುತೇಕ ಕಡೆ ನೀಡುತ್ತಾರೆ. ಇದಕ್ಕೆ ಕಾರಣ ಇದರಲ್ಲಿರುವ ಚಿಕಿತ್ಸಕ ಗುಣಗಳು. ಅದಕ್ಕೆ ಇದನ್ನು ಪ್ರತಿ ಮನೆಯಲ್ಲೂ ಬೆಳೆಸುವುದು.