Just In
Don't Miss
- News Siddaramaiah: ಹುಬ್ಬಳ್ಳಿಯ ನೇಹಾ ಹಿರೇಮಠ ನಿವಾಸಕ್ಕೆ ಸಿಎಂ ಭೇಟಿ: ಸಿದ್ದರಾಮಯ್ಯ ಕೊಟ್ಟ ಭರವಸೆ ಏನು?
- Movies ''ಹೆಣ್ಮಕ್ಕಳು ಎಲ್ಲೆಲ್ಲೋ ಹೋದರು'' ಎಂದ ಶ್ರುತಿಗೆ ಮಹಿಳಾ ಆಯೋಗ ನೋಟಿಸ್ ; 07 ದಿನದ ಗಡುವು..!
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ತಣ್ಣೀರಿನ ಸ್ನಾನ' ನಿಜಕ್ಕೂ ಇದು ಆರೋಗ್ಯಕ್ಕೆ ಸೋಪಾನ....
ಹಿಂದಿನಿಂದಲೂ ಜನರು ಎರಡು ಬಗೆಯಲ್ಲಿ ಸ್ನಾನ ಮಾಡುತ್ತಾ ಬಂದಿದ್ದಾರೆ. ಅದರಲ್ಲಿ ಕೆಲವರು ಎಣ್ಣೆ ಹಚ್ಚಿಕೊಂಡು ಬಿಸಿ ನೀರಿನಲ್ಲಿ ಸ್ನಾನ ಮಾಡುವುದು. ಇನ್ನು ಕೆಲವರು ತಣ್ಣೀರಿನ ಸ್ನಾನ ಮಾಡುವುದು. ಎರಡಕ್ಕೂ ಅದರದ್ದೇ ಆದ ಕೆಲವೊಂದು ಪ್ರಾಮುಖ್ಯತೆಗಳಿವೆ. ಊಟದ ನಂತರ ಸ್ನಾನ, ತೊಂದರೆಗೆ ಆಹ್ವಾನ!
ದೇಹಕ್ಕೂ ಇದರಿಂದ ಲಾಭಗಳು ಇವೆ. ಅದರಲ್ಲೂ ತಣ್ಣೀರಿನಿಂದ ಸ್ನಾನ ಮಾಡುವುದರಿಂದ ದೇಹದ ಪ್ರತಿರೋಧಕ ಶಕ್ತಿ ಹೆಚ್ಚಳವಾಗಿ ಸಾಮಾನ್ಯವಾಗಿ ಕಾಡುವಂತಹ ಶೀತದಿಂದ ನಮ್ಮನ್ನು ರಕ್ಷಿಸುತ್ತದೆ. ಆದರೆ ಹೆಚ್ಚಿನ ಚಳಿಯಿರುವ ಹವಾಮಾನದಲ್ಲಿ ವಾಸಿಸುವವರು ತಣ್ಣೀರಿನ ಸ್ನಾನ ಮಾಡುವುದು ಬೇಡ. ಗರ್ಭಿಣಿಯರು ಬಿಸಿ ನೀರಿನಲ್ಲಿ ಸ್ನಾನ ಮಾಡಬಾರದೇ?
ಇನ್ನು
ಹೆಚ್ಚಿನ
ಉಷ್ಣತೆಯಿರುವ
ಹವಾಮಾನದಲ್ಲಿ
ತಣ್ಣೀರಿನ
ಸ್ನಾನವನ್ನು
ವಾರದಲ್ಲಿ
ಒಂದು
ಸಲವಾದರೂ
ಮಾಡಿದರೆ
ಅದರಿಂದ
ಆರೋಗ್ಯಕ್ಕೆ
ಒಳ್ಳೆಯದು.
ಬೆಳಿಗ್ಗೆ
ತಣ್ಣೀರಿನ
ಸ್ನಾನ
ಮಾಡುವುದರಿಂದ
ಆಗುವ
ಲಾಭಗಳ
ಬಗ್ಗೆ
ಈ
ಲೇಖನದಲ್ಲಿ
ತಿಳಿದುಕೊಳ್ಳುವ....
ವಾರದ
ನಾಲ್ಕು
ದಿನ
ತಲೆ
ಸ್ನಾನ
ಮಾಡುವಂತಿಲ್ಲ!
ಯಾಕೆ
ಹೀಗೆ?
ಪ್ರತಿರೋಧಕ ಶಕ್ತಿಯನ್ನು ವೃದ್ಧಿಸುವುದು
ತಣ್ಣೀರಿನ ಸ್ನಾನ ಮಾಡುವ ಒಂದು ಲಾಭವೆಂದರೆ ಇದು ಪ್ರತಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ಬಿಸಿ ನೀರಿನ ಸ್ನಾನ ಮಾಡುವವರಿಗಿಂತ ತಣ್ಣೀರಿನ ಸ್ನಾನ ಮಾಡುವವರಲ್ಲಿ ಬಿಳಿ ರಕ್ತದ ಕಣಗಳ ವಿರುದ್ಧ ಹೋರಾಡುವ ವೈರಸ್ ಗಳ ಪ್ರಮಾಣವು ಹೆಚ್ಚಾಗುತ್ತದೆ.
ತೂಕ ಇಳಿಸಲು ಸಹಕಾರಿ
ಬಿಸಿ ನೀರಿನ ಟಬ್ನಲ್ಲಿ ದೇಹವನ್ನು ಮುಳುಗಿಸಿ ಇಡುವುದರಿಂದ ತೂಕ ಕಡಿಮೆ ಮಾಡಿಕೊಳ್ಳಬಹುದು ಎಂಬ ವಾದವಿದೆ. ಹೊಸ ಅಧ್ಯಯನಗಳ ಪ್ರಕಾರ ತಣ್ಣೀರಿನ ಸ್ನಾನ ಮಾಡುವುದರಿಂದ ತೂಕ ಕಳೆದುಕೊಳ್ಳಲು ಸಹಕಾರಿಯಾಗುವುದು. ಹೆಚ್ಚು ತಂಪಾಗಿರುವುದಕ್ಕೆ ಮೈಯನ್ನು ಒಡ್ಡಿಕೊಳ್ಳುವುದರಿಂದ ಕಂದು ಕೊಬ್ಬು ಹೆಚ್ಚಾಗುತ್ತದೆ. ಕಂದು ಕೊಬ್ಬು ಶಕ್ತಿಯನ್ನು ದಹಿಸುತ್ತದೆ.
ರಕ್ತ ಹೆಪ್ಪುಗಟ್ಟುವಂತಹ ಸಮಸ್ಯೆಗೆ....
ರಕ್ತ ಹೆಪ್ಪುಗಟ್ಟುವಂತಹ ಸಮಸ್ಯೆ ಇರುವವರು ನಿಯಮಿತವಾಗಿ ತಣ್ಣೀರಿನಲ್ಲಿ ಸ್ನಾನ ಮಾಡಿದರೆ ಒಳ್ಳೆಯದು. ತಣ್ಣೀರಿನ ಸ್ನಾನದ ಆರೋಗ್ಯಕರ ಲಾಭ ಇದಾಗಿದೆ. ಇದು ಅಂಗಾಂಗಗಳು ಹಾಗೂ ಚರ್ಮದ ರಕ್ತ ಸಂಚಲನವನ್ನು ಹೆಚ್ಚಿಸುತ್ತದೆ. ಆದರೆ ತುಂಬಾ ಚಳಿಗಾಲದಲ್ಲಿತಣ್ಣೀರಿನ ಸ್ನಾನ ಬೇಡ....
ಖಿನ್ನತೆಯಿಂದ ಮುಕ್ತಿ
ತಣ್ಣೀರಿನ ಸ್ನಾನ ಮಾಡುವುದರಿಂದ ಖಿನ್ನತೆಯನ್ನು ತಡೆಯಬಹುದು ಮತ್ತು ಅದರಿಂದ ಪರಿಹಾರ ಪಡೆಯಬಹುದು. ತಂಪಾದ ವಾತಾವರಣವು ಮೆದುಳನ್ನು ಉತ್ತೇಜಿಸಿ ತಂಪಾಗಿರಿಸುತ್ತದೆ. ತಣ್ಣೀರಿನ ಸ್ನಾನ ಮಾಡುವ ದೊಡ್ಡ ಆರೋಗ್ಯ ಲಾಭ ಇದಾಗಿದೆ.
ಶ್ವಾಸಕೋಶಕ್ಕೆ ಒಳ್ಳೆಯದು
ನಾವು ಕಠಿಣ ವ್ಯಾಯಾಮ ಮಾಡುವಾಗ ಶ್ವಾಸಕೋಶ ತೆರೆದುಕೊಳ್ಳುವಂತೆ ತಣ್ಣೀರಿನ ಸ್ನಾನ ಮಾಡುವ ವೇಳೆ ಕೂಡ ತೆರೆದುಕೊಳ್ಳುವುದು. ತಣ್ಣೀರಿನ ಸ್ನಾನ ಮಾಡುವುದರಿಂದ ನೀವು ಚೆನ್ನಾಗಿ ಉಸಿರಾಡಲು ಸಾಧ್ಯವಾಗುವುದು.
ಹಾರ್ಮೋನುಗಳಿಗಾಗಿ
ತಣ್ಣೀರಿನ ಸ್ನಾನ ಮಾಡುವುದರಿಂದ ಸಂತಾನೋತ್ಪತ್ತಿಯ ಅಂಗಾಂಗಗಳು ಬಲವನ್ನು ಪಡೆಯುತ್ತದೆ. ತಣ್ಣೀರಿನ ಸ್ನಾನದಿಂದ ಪುರುಷರಲ್ಲಿ ಟೆಸ್ಟೊಸ್ಟಿರಾನ್ ಉತ್ಪತ್ತಿ ಹೆಚ್ಚಾಗುತ್ತದೆ ಎಂದು ಅಧ್ಯಯನಗಳು ಹೇಳಿವೆ.
ಬಂಜೆತನ ನಿವಾರಣೆಗೆ
ಮೂರು ವಾರಗಳ ಕಾಲ ದಿನಾಲೂ ಬಿಸಿ ನೀರಿನ ಸ್ನಾನ ಮಾಡುವವರು ಮುಂದಿನ ಆರು ವಾರಗಳ ಕಾಲ ಬಂಜೆತನವನ್ನು ಎದುರಿಸುತ್ತಾರೆ ಎಂದು ಅಧ್ಯಯನಗಳು ಹೇಳಿವೆ. ಉತ್ತಮ ಫಲವತ್ತತೆಗಾಗಿ ತಣ್ಣೀರಿನ ಸ್ನಾನ ಮಾಡಿ. ಬೆಳಿಗ್ಗೆ ತಣ್ಣೀರಿನ ಸ್ನಾನ ಮಾಡುವ ಕೆಲವೊಂದು ಆರೋಗ್ಯ ಲಾಭಗಳು ಇದಾಗಿದೆ.