Just In
- 6 hrs ago ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- 7 hrs ago ಮೀನ ರಾಶಿಯಲ್ಲಿ ಬುಧ ವಕ್ರೀಯ ಚಲನೆ ಮಾಡುವಾಗ ಈ 5 ರಾಶಿಯವರು ವೃತ್ತಿ ಜೀವನದ ಬಗ್ಗೆ ಜಾಗ್ರತೆ
- 7 hrs ago ದಿನ ಭವಿಷ್ಯ ಮಾರ್ಚ್ 29: ಶುಕ್ರವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
- 8 hrs ago ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
Don't Miss
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Movies "ನಾವು ದಕ್ಷಿಣ ಭಾರತದವರಾಗಿದ್ರೂ ಭಾಷೆ ಬರುತ್ತೆ, ಸುಂದರವಾಗಿಯೂ ಇದ್ದೇವೆ"; ನಟಿ ಪ್ರಿಯಾಮಣಿ
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಎಡೆಬಿಡದೆ ಕಾಡುವ ಕೆಮ್ಮಿಗೆ ಶುಂಠಿ-ಉಪ್ಪಿನ ಕಷಾಯ
ಹೊಟ್ಟೆ ಕೆಟ್ಟಿದ್ದಾಗ, ಹುಳಿತೇಗು, ಹೊಟ್ಟೆಯುರಿ, ಅಜೀರ್ಣ ಮೊದಲಾದ ಜೀರ್ಣಕ್ರಿಯೆಗೆ ಸಂಬಂಧಿಸಿದ ತೊಂದರೆ ಕಂಡುಬಂದಾಗ ಶುಂಠಿಯ ಕಷಾಯ ಅಥವಾ ಹಸಿಶುಂಠಿಯ ರಸ ಕುಡಿದು ಪರಿಹಾರ ಪಡೆದುಕೊಳ್ಳಬಹುದು. ಆದರೆ ಈ ಅದ್ಭುತ ಮಸಾಲೆವಸ್ತು ಅತ್ಯುತ್ತಮವಾದ ಕೆಮ್ಮು ನಿವಾರಕ ಎಂದು ನಿಮಗೆ ಗೊತ್ತಿತ್ತೇ?
ಹೌದು ಕೆಮ್ಮಿಗೆ ಔಷಧಿಯಾಗಿ ನಮ್ಮ ಹಿರಿಯಲು ಶುಂಠಿಯನ್ನು ನೂರಾರು ವರ್ಷಗಳಿಂದ ಬಳಸುತ್ತಾ ಬಂದಿದ್ದಾರೆ. ಹಸಿಶುಂಠಿ ಮತ್ತು ಕೊಂಚ ಉಪ್ಪನ್ನು ಬೆರೆಸಿ ಸೇವಿಸಬೇಕು. ಮುಂದಿನ ಬಾರಿ ಸತತವಾಗಿ ಕಾಡುವ ಕೆಮ್ಮು ಪ್ರಾರಂಭವಾದರೆ ಬೇರೆ ಔಷಧಿಗಳಿಗೆ ಶರಣಾಗುವ ಬದಲು ಈ ಮನೆಮದ್ದನ್ನು ಬಳಸಿ ಶೀಘ್ರವಾಗಿಯೇ ಕೆಮ್ಮಿನಿಂದ ಪಾರಾಗಬಹುದು. ಪ್ರಾಣ ಹಿಂಡುವ ಕೆಮ್ಮಿಗೆ ರಾಮಬಾಣವಾಗಿರುವ 10 ಸಿದ್ಧೌಷಧಗಳು
ಕೆಮ್ಮಿಗೆ ಕಾರಣವಾದ ಬ್ಯಾಕ್ಟೀರಿಯಾ ಮತ್ತು ವೈರಸ್ಸುಗಳನ್ನು ಶುಂಠಿಯಲ್ಲಿರುವ ಬ್ಯಾಕ್ಟೀರಿಯಾ ನಿವಾರಕ ಗುಣ ಸದೆಬಡಿಯುತ್ತದೆ. ಸಾಮಾನ್ಯವಾಗಿ ವೈರಸ್ಸುಗಳ ಧಾಳಿಯಿಂದ ನಮ್ಮ ದೇಹ ಅಂಟುಅಂಟಾದ ದ್ರವವನ್ನು ಗಂಟಲ ಒಳಭಾಗದಲ್ಲಿ ಸ್ರವಿಸುತ್ತದೆ. ಇದು ಬ್ಯಾಕ್ಟೀರಿಯಾಗಳನ್ನು ಅಂಟಿಸಿಕೊಂಡು ಕಫವಾಗುತ್ತದೆ.
ಈ ಕಫವನ್ನು ಹೊರಹಾಕುವ ಕ್ರಿಯೆಯೇ ಕೆಮ್ಮು. ಉಪ್ಪು ಬೆರೆಸಿದ ಶುಂಠಿಯ ರಸ ಈ ಕಫವನ್ನು ಸಡಿಲಗೊಳಿಸಿ ಸುಲಭವಾಗಿ ನಿವಾರಿಸಲು ನೆರವಾಗುತ್ತದೆ. ಕಫವೇ ಇಲ್ಲದ ಬಳಿಕ ಕೆಮ್ಮು ಎಲ್ಲಿಂದ? ಇದೇ ಈ ವಿಧಾನದ ಸಫಲತೆಯ ಗುಟ್ಟು. ಮಧ್ಯರಾತ್ರಿ ಕಾಡುವ ಕೆಮ್ಮು, ಏನು ಮಾಡಬೇಕು?
ಈ
ಔಷಧೀಯ
ಬಳಕೆಯ
ವಿಧಾನ
*ಕೆಮ್ಮು
ಕಡಿಮೆಯಾಗಲು
ಅತ್ಯುತ್ತಮ
ವಿಧಾನವೆಂದರೆ
ಒಂದು
ಚಿಕ್ಕ
ತುಂಡು
ಹಸಿಶುಂಠಿಯನ್ನು
ಉಪ್ಪಿನೊಂದಿಗೆ
ಜಗಿಯುವುದು.
ಆದರೆ
ಹಸಿಶುಂಠಿ
ಕೊಂಚ
ಖಾರವಾದುದರಿಂದ
ಇದು
ಎಲ್ಲರಿಗೂ
ಸಾಧ್ಯವಾಗುವುದಿಲ್ಲ.
*ಇವರು
ಹಸಿಶುಂಠಿಯನ್ನು
ಕೊಂಚ
ನೀರಿನಲ್ಲಿ
ಕುದಿಸಿ
ತಣಿಸಿ
ಶೋಧಿಸಿದ
ಬಳಿಕ
ಚಿಟಿಕೆಯಷ್ಟು
ಉಪ್ಪು
ಸೇರಿಸಿ
ಕುಡಿಯಬಹುದು.
ಇನ್ನೊಂದು
ವಿಧಾನ:
*ಒಂದು
ಚಿಕ್ಕ
ತುಂಡು
ಹಸಿಶುಂಠಿಯ
ಸಿಪ್ಪೆ
ಸುಲಿದು
ಇದಕ್ಕೆ
ಕೊಂಚ
ಉಪ್ಪನ್ನು
ಸಿಂಪಡಿಸಿ.
ಈ
ತುಂಡನ್ನು
ಜಜ್ಜಿ
ನಯವಾಗಿಸಿ
ಒಂದು
ಚಮಚದಲ್ಲಿ
ಲೇಹ್ಯದಂತೆ
ನೇರವಾಗಿ
ನುಂಗಿಬಿಡುವುದು.
*ಸಾಧ್ಯವಾದರೆ
ಕೊಂಚ
ಅಗಿದು
ರಸವನ್ನು
ನುಂಗಬೇಕು.
ಇದರ
ಖಾರದಿಂದ
ರಕ್ಷಣೆ
ಪಡೆಯಲು
ಈ
ತುಂಡನ್ನು
ಸೇವಿಸಿದ
ಬಳಿಕ
ಕೊಂಚ
ಜೇನನ್ನು
ನೆಕ್ಕುವ
ಮೂಲಕ
ಉರಿಯಿಂದ
ತಪ್ಪಿಸಿಕೊಳ್ಳಬಹುದು.
ಬೆಕ್ಕಸ
ಬೆರಗಾಗಿಸುವ
ಹಸಿ
ಶುಂಠಿಯ
ಕಾರುಬಾರು...!
ಶುಂಠಿಯ
ಕಷಾಯ
*ಒಂದು
ವೇಳೆ
ಕೆಮ್ಮಿನೊಂದಿಗೆ
ಉಸಿರಾಟದ
ತೊಂದರೆಯೂ
ಇದ್ದರೆ
ಇದಕ್ಕೆ
ಶುಂಠಿಯ
ಕಷಾಯ
ಉತ್ತಮ
ಪರಿಹಾರವಾಗಿದೆ.
*ಇದಕ್ಕಾಗಿ
ಒಂದು
ಲೋಟ
ನೀರನ್ನು
ಕುದಿಸಿ.ಇದಕ್ಕೆ
ಕೊಂಚ
ಹಸಿಶುಂಠಿಯ
ತುಂಡುಗಳು,
ಕೊಂಚವೇ
ಕಾಳುಮೆಣಸು
ಅಥವಾ
ಕರಿಮೆಣಸು
ಮತ್ತು
ಕೊಂಚ
ಉಪ್ಪು
ಸೇರಿಸಿ
ಕುದಿಸಿ.
*ಈ
ನೀರು
ಅರ್ಧಮಟ್ಟಕ್ಕೆ
ಬರುವವರೆಗೂ
ಕುದಿಸಿ
ಬಳಿಕ
ಉರಿ
ಆರಿಸಬೇಕು.
ನಂತರ
ಉಗುರುಬೆಚ್ಚಗಾಗುವಷ್ಟು
ತಣಿಸಿ
ಸೋಸಿ
ಈ
ನೀರನ್ನು
ಕುಡಿಯಬೇಕು.