Just In
- 4 hrs ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 4 hrs ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- 5 hrs ago ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- 6 hrs ago ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
Don't Miss
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Movies ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದಿನನಿತ್ಯ ತುಳಸಿ ಎಲೆಯ ಸೇವನೆ ಆರೋಗ್ಯಕ್ಕೆ ಹೇಗೆ ಪ್ರಯೋಜನಕಾರಿ?
ತುಳಸಿಯು ಹಿಂದೂ ಧಾರ್ಮಿಕ ಸಂಪ್ರದಾಯಗಳ ಪವಿತ್ರ ಸ್ಥಾನವನ್ನು ಹೊಂದಿದೆ. ಭಾರತೀಯರು ತುಳಸಿಯನ್ನು ಪ್ರತಿದಿನ ಬೆಳಗ್ಗೆ ಮತ್ತು ಸಾಯಂಕಾಲ ಪೂಜಿಸುತ್ತಾರೆ ಮತ್ತು ಈ ಪವಿತ್ರ ಸಸ್ಯದ ಔಷಧೀಯ ಗುಣಗಳನ್ನು ನೋಡಿದರೆ ನಿಮಗೂ ಅದರ ಮಹತ್ವದ ಅರ್ಥವಾಗುತ್ತದೆ.
ತುಳಸಿ ಧಾರ್ಮಿಕವಾಗಿ ಮಾತ್ರ ಹೆಸರುಗಳಿಸಿಲ್ಲ, ಅದರಲ್ಲಿ ಹಲವು ಔಷಧೀಯ ಗುಣಗಳೂ ಇದೆ. ಆದರೆ ಈ ಅಂಶ ತುಳಸಿ ಬೆಳೆಸಿದ ಎಷ್ಟೋ ಜನರಿಗೂ ತಿಳಿದಿರುವುದಿಲ್ಲ. ಇದರ ಎಲೆಯ ಗಂಧವೇ ವಾತಾವರಣವನ್ನು ತಂಪು ಮತ್ತು ಕಲ್ಮಶರಹಿತವಾಗಿಸುವ ಶಕ್ತಿ ಹೊಂದಿದೆ.
ಈ ಗಿಡವನ್ನು ಮನೆಯ ಮುಂದುಗಡೆ ಬೆಳೆಸುವುದರಿಂದ ಮನೆಯವರೆಲ್ಲರಿಗೂ ಒಳಿತಾಗುತ್ತದೆ ಎಂಬ ವಿಶ್ವಾಸ ಕೂಡ ನಮ್ಮಲ್ಲಿದೆ. ವೈದ್ಯಕೀಯ ಕ್ಷೇತ್ರದಲ್ಲೂ ತುಳಸಿಯು ಹಲವಾರು ಅದ್ಭುತಗಳನ್ನು ಮಾಡಿದೆ. ನಮ್ಮ ಭಾರತೀಯ ಪರಂಪರೆಯು ಸಾವಿರಾರು ವರ್ಷಗಳಿಂದ ತುಳಸಿಯನ್ನು ಬಳಸಿಕೊಂಡು ಬರುತ್ತಿದೆ. ಇದು ರಕ್ತದೊತ್ತಡ ಹಾಗೂ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ ಎಂಬ ನಂಬಿಕೆಯೂ ಇದೆ. ಹತ್ತಾರು ಬಗೆಯ ತುಳಸಿ ಗಿಡಗಳು
ಜ್ವರ ಮತ್ತು ನೆಗಡಿ ಕಾಯಿಲೆಗಳನ್ನು ವಾಸಿಮಾಡುತ್ತದೆ
ಬ್ಯಾಕ್ಟೀರಿಯ ವಿರೋಧಿ ಗುಣಗಳನ್ನು ಹೊಂದಿರುವ ತುಳಸಿ ಎಲೆಯು ಮಲೇರಿಯ, ಡೆಂಗ್ಯೂ ಮತ್ತು ದೀರ್ಘಕಾಲದ ಜ್ವರಗಳು ಸೇರಿದಂತೆ ವಿವಿಧ ಕಾಯಿಲೆಗಳಿಗೆ ಪರಿಣಾಮಕಾರಿಯಾಗಿದೆ. ಎಳೆಯ ತುಳಸಿ ಎಲೆಗಳನ್ನು ಚಹಾ ಜೊತೆಯಲ್ಲಿ ಕುಡಿಸಿ ಸೇವಿಸಿದರೆ ಬಹಳಮಟ್ಟಿಗೆ ಮೇಲ್ಕಂಡ ಕಾಯಿಲೆಗಳ ಪರಿಣಾಮವನ್ನು ಕಡಿಮೆ ಮಾಡಬಹುದು. ನೆಗಡಿಯ ಸಂದರ್ಭದಲ್ಲಿ ತುಳಸಿ ಎಲೆಗಳ ರಸವನ್ನು ಸೇವಿಸಿದರೆ ತ್ವರಿತವಾಗಿ ಪರಿಹಾರ ಪಡೆಯಬಹುದು.
ಉಸಿರಾಟದ ತೊಂದರೆಗಳಿಗೆ ಪರಿಹಾರ ನೀಡುತ್ತದೆ
ತುಳಸಿ ಎಲೆಗಳ ಜೊತೆ ಶುಂಠಿ ಮತ್ತು ಜೇನುತುಪ್ಪ ಸೇರಿಸಿ ಮಾಡಿದ ಕಷಾಯ ವಿವಿಧ ಉಸಿರಾಟದ ತೊಂದರೆಗಳಾದ ನೆಗಡಿ, ಶೀತ, ಅಸ್ತಮಾ ಮತ್ತು ಬ್ರಾಂಕೈಟಿಸ್ ಮುಂತಾದ ವಿವಿಧ ಕಾಯಿಲೆಗಳನ್ನು ಗುಣಪಡಿಸಲು ಅತ್ಯುತ್ತಮ ನಿವಾರಣೋಪಾಯವಾಗಿದೆ. ಈ ಕಷಾಯವು ಶ್ವಾಸಕೋಶಗಳಲ್ಲಿ ಕಟ್ಟಿರುವ ಲೋಳೆಯನ್ನು ಬಿಡಿಸಿ ನರಳುವವರ ಉಸಿರಾಟಕ್ಕೆ ಪರಿಹಾರಕೊಡುತ್ತದೆ.
ಗಂಟಲ ಕೆರೆತವನ್ನು ಗುಣಪಡಿಸುತ್ತದೆ
ಬೆಚ್ಚಗಿರುವ ನೀರಿಗೆ ತುಳಸಿ ಎಲೆಯ ರಸವನ್ನು ಬೆರಸಿ ಮುಕ್ಕಳಿಸಿದರೆ ಗಂಟಲು ಕೆರತವನ್ನು ತೊಡೆದುಹಾಕಲು ಅತ್ಯಂತ ಸಹಾಯಕವಾಗುತ್ತದೆ.
ಬಾಯಿಯೊಳಗಿನ ಸೋಂಕನ್ನು ನಿವಾರಿಸುತ್ತದೆ
ತುಳಸಿ ಎಲೆಯನ್ನು ಬಾಯಿಯೊಳಗಿನ ಹುಣ್ಣು ಮತ್ತು ಸೋಂಕುಗಳ ಚಿಕಿತ್ಸೆಗೆ ಅತ್ಯುತ್ತಮ ಔಷಧಿ. ತ್ವರಿತವಾಗಿ ಗುಣಹೊಂದಲು ಕೇವಲ ಕೆಲವು ತುಳಸಿ ಎಲೆಗಳನ್ನು ನುಣ್ಣಗೆ ಅಗಿಯಬೇಕು. ಇದು ಬಾಯಿಯನ್ನು ಉತ್ತಮವಾಗಿ ಸ್ವಚ್ಚಗೊಳಿಸುವ ಸಾಮಗ್ರಿಯೂ ಆಗಿದೆ.
ಕ್ರಿಮಿ ಕೀಟಗಳ ಕಚ್ಚುವಿಕೆಯನ್ನು ಗುಣಪಡಿಸುತ್ತದೆ
ಒಂದು ಟೀ ಚಮಚ ತುಳಸಿ ಎಲೆಯ ರಸ ಅಥವ ತಾಜ ತುಳಸಿ ಬೇರಿನ ಪೇಸ್ಟ್ ಕ್ರಿಮಿಕೀಟಗಳ ಕಡಿತ ಮತ್ತು ಪೀಡಿತ ಭಾಗಗಳಲ್ಲಿ ಲೇಪಿಸಿಕೊಂಡರೆ ಗುಣಪಡಿಸಲು ಸಹಾಕಾರಿಯಾಗಿದೆ. ತಾಜ ರಸವೂ ಸಹ ನೇರವಾಗಿ ಪೀಡಿತ ಭಾಗಗಳಲ್ಲಿ ಬಳಸಿ ಶೀಘ್ರ ಪರಿಹಾರ ಕಂಡುಕೊಳ್ಳಬಹುದು.
ಆಗಾಗ್ಗೆ ವಾಂತಿಯಾಗುವುದನ್ನು ಶಮನಗೊಳಿಸುತ್ತದೆ
ವಾಂತಿಯಾಗುವುದರಿಂದ ಶೀಘ್ರಪರಿಹಾರ ಪಡೆಯಲು ತುಳಸಿರಸದ ಜೊತೆ ಜೇನುತುಪ್ಪವನ್ನು ಮಿಶ್ರಣಮಾಡಿ ಸೇವಿಸಬೇಕು.
ಕ್ಯಾನ್ಸರ್ ರೋಗವನ್ನು ತಡೆಯುತ್ತದೆ
ತುಳಸಿ ಎಲೆಯು ರಕ್ತದಲ್ಲಿ ಕ್ಯಾನ್ಸರ್ ಉಂಟುಮಾಡುವ ಗೆಡ್ಡೆಗಳನ್ನು ಸಂಪರ್ಕಿಸಿತ್ತದೆ ಮತ್ತು ಸ್ತನ ಕ್ಯಾನ್ಸರ್ ಸೇರಿದಂತೆ ಹಲವಾರು ಕ್ಯಾನ್ಸರ್ ರೋಗಗಳ ಚಿಕಿತ್ಸೆಗೆ ಸಹಾಯಕವಾಗುತ್ತದೆ. ತುಳಸಿಯ ಕ್ಯಾನ್ಸರ್ ವಿರೋಧಿ ಗುಣಗಳಿಂದ ಬಾಯಿಯ ಕ್ಯಾನ್ಸರ್ ಬೆಳವಣಿಗೆಗೆ ಪ್ರತಿಬಂಧಿಸುತ್ತದೆ.
ಶ್ವಾಸಕೋಶಗಳ ಅಸ್ವಸ್ಥತೆಯನ್ನು ಗುಣಪಡಿಸುತ್ತದೆ
ತುಳಸಿಯಲ್ಲಿರುವ ವಿಟಮಿನ್ ಸಿ, ಯುಜೆನಾಲ್ (ಲವಂಗದ ಎಣ್ಣೆ ಆಧಾರಿತ) ಮತ್ತು ಕ್ಯಾಂಫೀನ್ (ಒಂದು ವಾಣಿಜ್ಯ ತೈಲ) ಶ್ವಾಸಕೋಶಗಳೊಳಗೆ ಟಿಬಿ (ಕ್ಷಯ ರೋಗ) ಹಾಗೂ ಧೂಮಪಾನದ ಹೊಗೆಯ ದಟ್ಟಣೆಯಿಂದ ಆಗುವ ಅಪಾಯಗಳನ್ನು ಗುಣಪಡಿಸಲು ಪರಿಣಾಮಕಾರಿಯಾಗಿದೆ.
ಧೂಮಪಾನ ತ್ಯಜಿಸಲು ಸಹಾಯಕಾರಿ
ತುಳಸಿಯು ಧೂಮಪಾನದ ಅಭ್ಯಾಸವನ್ನು ಬಿಡಲು ಬಹಳಷ್ಟು ಸಹಾಯಮಾಡುತ್ತದೆ. ನೀವು ಧೂಮಪಾನದ ಪ್ರಚೋದನೆಯ ಒತ್ತಡ ಬಂದಾಗ ತಾಜಾ ತುಳಸಿ ಎಲೆಯನ್ನು ತಿನ್ನಿ. ಅದು ನಿಮ್ಮ ಪ್ರಚೋದನೆಯನ್ನು ನಿಗ್ರಹಿಸುತ್ತದೆ.