Just In
- 2 hrs ago ವೃಷಭ ರಾಶಿಗೆ ಗುರು ಸಂಚಾರ: ಗುರು ನಿಮ್ಮ ಲಗ್ನ ಮನೆಯಲ್ಲಿ ಇರುವುದರಿಂದ ಇದರ ಪ್ರಭಾವ ಹೇಗಿರಲಿದೆ?
- 3 hrs ago ವೃಷಭ ರಾಶಿಗೆ ದೇವಗುರುವಿನ ಸಂಚಾರ: ಮೇಷ ರಾಶಿಗಳಿಗೆ ಇದರ ಪ್ರಭಾವ ಹೇಗಿರಲಿದೆ?
- 3 hrs ago ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- 5 hrs ago ದಿನ ಭವಿಷ್ಯ ಏಪ್ರಿಲ್ 19: ಶುಕ್ರವಾರದ ಈ ಶುಭ ದಿನ ನಿಮ್ಮ ರಾಶಿಗೆ ಹೇಗಿರಲಿದೆ?
Don't Miss
- Movies 'ಮಾರ್ಟಿನ್' ಚಿತ್ರದ ನಿರ್ಮಾಪಕ- ನಿರ್ದೇಶಕರ ಮಧ್ಯೆ ಕಿರಿಕ್: ಕೊನೆಗೂ ಸಿಕ್ತು ಸ್ಪಷ್ಟನೆ
- News 11 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ: ಡಾ. ಕೆ. ಸುಧಾಕರ್
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಿಮ್ಮ ಒಳ್ಳೆದಕ್ಕೆ ಹೇಳ್ತಾಯಿರೋದು ಕೇಳಿ
ಸಾಧಾರಣವಾಗಿ ಬೇಸಿಗೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಾಯಿಲೆ ಕಸಾಲೆಗಳು ಈಗ ಮುಂಗಾರಿನ ಜೊತೆಜೊತೆಗೆ ಪುರಪ್ರವೇಶ ಮಾಡತೊಡಗಿವೆ. ಮೊದಲೆಲ್ಲಾ ದೂರದ ಹಳ್ಳಿಯೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದ ಹೆಮ್ಮಾರಿಗಳು ಈಗ ರಾಜಧಾನಿ ಸೇರಿದಂತೆ ನಗರ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಆರೋಗ್ಯ ಕೇಂದ್ರಗಳಿಗೆ ತಲೆ ಬಿಸಿಯಾಗಿದೆ. ಇದು ಬರೀ ಸರ್ಕಾರಿ ಆಸ್ಪತ್ರೆಯ ಮಾತಲ್ಲ, ಖಾಸಗಿ ಆಸ್ಪತ್ರೆಗಳಲ್ಲಿ ಕೂಡ ಚಿಕುನ್ ಗುನ್ಯಾ, ಡೆಂಗ್ಯೂ, ವಿಷಮಶೀತಜ್ವರ, ಕಾಲರಾ ಮುಂತಾದ ಹೆಮ್ಮಾರಿಗಳ ಕಾಟ ಶುರುವಾಗಿದೆ.
ಮುಂಜಾಗರುಕತೆಯೇ ಮದ್ದು: ಅಯ್ಯೋ ಬಿಡಿ, ದಿನಕ್ಕೊಂದು ಹೊಸ ಕಾಯಿಲೆ(ಉದಾ: ಸಾರ್ಸ್ ,ಹಂದಿಜ್ವರ) ಗಾಳಿಸುದ್ದಿ ಹರಡುವುದು ಸಾಮಾನ್ಯ. ಎಷ್ಟು ಬೇಗ ಸುದ್ದಿ ಹಬ್ಬುವುದೋ ಅಷ್ಟೇ ಬೇಗ ಸುದ್ದಿ ಸಾಯುತ್ತದೆ. ಅದರ ಬಗ್ಗೆ ಚಿಂತೆ ಬೇಡ ಎಂದು ಉಪೇಕ್ಷಿಸುವ ಹಾಗಿಲ್ಲ. ಆರೋಗ್ಯದ ವಿಷಯದಲ್ಲಿ ಎಷ್ಟು ಎಚ್ಚರಿಕೆ ವಹಿಸಿದರೂ ಕಮ್ಮಿಯೇ.
ಬೆಂಗಳೂರಿನ ಬೌರಿಂಗ್ ಆಸ್ಪತ್ರೆ ಹಾಗೂ ಲೇಡಿ ಕರ್ಜನ್ ಆಸ್ಪತ್ರೆಯಲ್ಲಿ ಕನಿಷ್ಠವೆಂದರೂ ಪ್ರತಿದಿನ 40ಕ್ಕೂ ಹೆಚ್ಚು ವೈರಾಣು ಜ್ವರ ಪ್ರಕರಣಗಳು ದಾಖಲಾಗುತ್ತಿವೆ. ಕೆಸಿ ಜನರಲ್ ಆಸ್ಪತ್ರೆಯಲ್ಲೂ ದಿನಕ್ಕೆ ಸುಮಾರು 30 ಕ್ಕೂ ಅಧಿಕ ವಿಷಮಶೀತಜ್ವರ ಬಾಧೆಗೆ ಒಳಪಟ್ಟ ರೋಗಿಗಳು ದಾಖಲಾಗುತ್ತಿದ್ದಾರೆ. ಚಿಕೂನ್ ಗುನ್ಯಾ ಪ್ರಕರಣ ಕೂಡಾ ದಿನೆದಿನೇ ಹೆಚ್ಚುತ್ತಿರುವುದು ಆತಂಕಕಾರಿಯಾಗಿದೆ.
ಬೇಸಿಗೆ ಬಂದಾಗ ಕಾಲರಾ ಕಾಮನ್ ಕಾಯಿಲೆ ಎನ್ನುವಂತೆ ಅಕಾಲಿಕ ಮಳೆ ಸುರಿದರೆ ಬೆಂಗಳೂರಲ್ಲಿ ಡೆಂಗ್ಯೂ ಜ್ವರ ಭೀತಿ ಖಾಯಂ ಎನಿಸತೊಡಗಿದೆ. ಸೊಳ್ಳೆಗಳ ಸಂತಾನ ಅಭಿವೃದ್ಧಿಗೆ ಬಿಬಿಎಂಪಿ ಕೊಡುಗೆ ಅಪಾರ ಎಂದರೆ ತಪ್ಪಾಗಲಾರದು. ಬಿಬಿಎಂಪಿ ಅಧಿಕಾರಗಳೆ ಹೇಳುವಂತೆ, ಪ್ರತಿದಿನ 22 ಡೆಂಗ್ಯೂ ಹಾಗೂ 27 ಚಿಕೂನ್ ಗುನ್ಯಾ ಕೇಸ್ ಗಳು ಬರುತ್ತಿವೆ.100 ಕ್ಕೂ ಅಧಿಕ ಪ್ರಕರಣಗಳು ದಾಖಲಾಗುತ್ತಿದೆ.
ಎಲ್ಲಿದೆ ಶುದ್ಧಜಲ? :ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಸುಮಾರು 23 ಜಿಲ್ಲೆಗಳಿಗೆ ಎಚ್ಚರಿಕೆಯ ಸಂದೇಶವನ್ನು ಆರೋಗ್ಯ ಇಲಾಖೆ ರವಾನಿಸಿದೆ. ಪ್ರಾಥಮಿಕ ಆರೋಗ್ಯಕೇಂದ್ರಗಳಿಗೆ ಹೆಚ್ಚಿನ ಸೌಲಭ್ಯ ಒದಗಿಸಲು ಚಿಂತನೆ ನಡೆದಿದೆ. ಬಾಗಲಕೋಟೆ, ಬಿಜಾಪುರ, ಗುಲ್ಭರ್ಗಾ, ತುಮಕೂರು, ಕೋಲಾರ, ದಕ್ಷಿಣ ಕನ್ನಡ, ಉಡುಪಿ, ಚಿತ್ರದುರ್ಗ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಮಲೇರಿಯಾ ಭೀತಿ ಆವರಿಸಿದೆ. ಅದರಲ್ಲೂ ಕೃಷ್ಣಾ ಮೇಲ್ದಂಡೆ ಯೋಜನಾ ಪ್ರದೇಶದಲ್ಲಿ ಸುಮಾರು 800 ಕ್ಕೂ ಅಧಿಕ ಮಲೇರಿಯಾ ರೋಗಿಗಳನ್ನು ಗುರುತಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ಗದಗ, ಬೀದರ್, ಯಾದಗಿರಿ, ಹಾಸನ, ಬೆಳಗಾವಿ ಹಾಗೂ ಕೋಲಾರದಲ್ಲಿ ಚಿಕುನ್ ಗುನ್ಯಾ ಹರಡಿದೆ. ನಾನಾ ಬಗೆಯ ವೈರಾಣು ಜ್ವರಗಳು ಮೈಸೂರು, ಮಂಡ್ಯ ಹಾಗೂ ಬೆಳಗಾವಿ ಜಿಲ್ಲೆಯನ್ನು ಆವರಿಸಿದೆ. ಪುಣ್ಯಕ್ಕೆ ರಾಜ್ಯದೆಲ್ಲೆಡೆ ಎಚ್ 1 ಎನ್ 1 ಪ್ರಕರಣಗಳು ಕ್ರಮೇಣ ಕಮ್ಮಿಯಾಗುತ್ತಿದೆ. ಎಲ್ಲಕ್ಕೂ ಒಂದೇ ಪರಿಹಾರ ಶುದ್ಧ ಜಲ ಬಳಕೆ, ಕುದಿಸಿ ಆರಿಸಿದ ನೀರನ್ನು ಮಾತ್ರ ಬಳಸುವುದು.
ಮನೆಯ ಸುತ್ತಮುತ್ತ ನೀರು ನೆಲೆನಿಲ್ಲದಂತೆ ನೋಡಿಕೊಳ್ಳುವುದು. ಸೊಳ್ಳೆಗಳ ಸಂತಾನ ಅಭಿವೃದ್ಧಿ ತಡೆಗಟ್ಟಲು ಔಷಧಿ ಸಿಂಪಡಿಸುವುದು. ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯುವಂತೆ ಮಾಡುವುದು. ಹೋಟೆಲ್ ನಲ್ಲೂ ಬಿಸಿನೀರು ಕೇಳಿ ಕುಡಿಯಿರಿ. ಶುದ್ಧತೆ ಹಾಗೂ ಗ್ರಾಹಕರ ಅಪೇಕ್ಷೆಗೆ ಅನುಸಾರವಾಗಿ ಸೇವೆ ಒದಗಿಸುವುದು ಅವರ ಧರ್ಮ ಹಾಗೂ ಕಾನೂನು ಸಮ್ಮತ ಕೂಡಾ.