Just In
- 2 hrs ago ಮೊಲದ ಜೊತೆ ಓಡಿ ಮತ್ತೊಮ್ಮೆ ರೇಸ್ ಗೆದ್ದ ಆಮೆ..! ಈ ಕಥೆ ನಿಜವಾಗಿದ್ದು ಹೇಗೆ ನೋಡಿ.!
- 2 hrs ago ಗುರು ಸಂಚಾರ: ಮೇ 1ರಿಂದ 3ನೇ ಸ್ಥಾನದಲ್ಲಿರುವ ಗುರು ಮೀನ ರಾಶಿಯವರಿಗೆ ಅದೃಷ್ಟವೇ?
- 14 hrs ago ಗುರು ಸಂಚಾರದಿಂದ ಕುಂಭ ರಾಶಿಯವರ ಆರ್ಥಿಕ ಬದುಕು ಸುಧಾರಿಸಲಿದೆಯೇ?
- 15 hrs ago ಮೇ 1ರಿಂದ ಗುರು ಮಕರ ರಾಶಿಯಲ್ಲಿ ಪಂಚಮ ಸ್ಥಾನದಲ್ಲಿ ಇರುವುದರಿಂದ ಈ ರೀತಿಯೆಲ್ಲಾ ಪ್ರಯೋಜನಗಳಿವೆ
Don't Miss
- Finance ಇನ್ಮುಂದೆ ನಿಮ್ಮ ಜಮೀನಿನಲ್ಲಿ ನೀವು ಮನೆ ಕಟ್ಟೋದಕ್ಕೂ ಸರ್ಕಾರದ ಅನುಮತಿ ಅಗತ್ಯ, ಏನಿದು ಹೋಸ ನಿಯಮ?
- News ಬಿಜೆಪಿ ಭದ್ರಕೋಟೆಯಲ್ಲಿ ಶೋಭಾ ಕರಂದ್ಲಾಜೆಗೆ ಕಠಿಣ ಸವಾಲು!
- Technology ಜಿಯೋ ನಿವ್ವಳ ಲಾಭದಲ್ಲಿ ಭರ್ಜರಿ ಹೆಚ್ಚಳ: ಇಲ್ಲಿದೆ ವಿವರ
- Sports IPL 2024: ಆರ್ಸಿಬಿ ಕಪ್ ಗೆಲ್ಲದಿರಲು ಅತಿಯಾದ ಪಾರ್ಟಿ ಕಾರಣವೇ?; ರೈನಾ ಬಿಚ್ಚಿಟ್ಟ ಸತ್ಯ
- Automobiles Ola: ಓಲಾದಿಂದ ಕಡಿಮೆ ಬೆಲೆಯ 'ಎಸ್1 ಎಕ್ಸ್' ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ದೊಡ್ಡ ಘೋಷಣೆ.. ಏನದು?
- Movies ಕಲರ್ಫುಲ್ ಲೈಟು.. ಡಿಂಪಲ್ ಸ್ಮೈಲು.. 'ಸಂಜು ವೆಡ್ಸ್ ಗೀತಾ 2' ಒಂದು ಹಾಡಿನ ಸೆಟ್ಟಿಗೆ ಬರೋಬ್ಬರಿ ₹50 ಲಕ್ಷ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪತಾಂಜಲಿಯ 'ಕೊರೊನಿಲ್' ಔಷಧ ಬಗ್ಗೆ ತಿಳಿದಿರಬೇಕಾದ ಅಂಶಗಳಿವು
ಒಂದು ಕಡೆ ಭಾರತದಲ್ಲಿ ಕೊರೊನಾ ಆರ್ಭಟಿಸುತ್ತಿದೆ, ಆದರೆ ಕೊರೊನಾ ನಾಶಕ್ಕೆ ಔಷಧಿ ಸಿದ್ಧವಾಗಿದೆ ಎಂದು ಗ್ಲೆನ್ಮಾರ್ಕ್ ಕಂಪನಿ ಹೇಳಿದ ಮೇಲೆ ಜನರಲ್ಲಿ ಸ್ವಲ್ಪ ಭರವಸೆ ಮೂಡಿದೆ. ಇದರ ಜೊತೆಗೆಯೇ ಜೂನ್ 23ಕ್ಕೆ ಪತಾಂಜಲಿ ಕೂಡ ಕೊರೊನಾಗೆ ಔಷಧಿ ನಮ್ಮಲ್ಲಿದೆ ಎಂದು ಅಧಿಕೃತವಾಗಿದೆ ಘೋಷಿಸಿದೆ.
ಯೋಗ ಗುರುವಾಗಿದ್ದ ಬಾಬಾ ರಾಮ್ದೇವ್ ಈಗಾಗಲೇ ಪತಾಂಜಲಿ ಬ್ರ್ಯಾಂಡ್ಗಳನ್ನು ಉತ್ಪಾದಿಸಿ ಯಶಸ್ವಿ ಉದ್ಯಮಿಯಾಗಿದ್ದಾರೆ. ಈಗ ಕೋವಿಡ್ 19 ತಡೆಗಟ್ಟಲು ಕೊರೊನಿಲ್ ಔಷಧಿ ತಂದಿರುವುದಾಗಿ ಹೇಳಿದೆ. ಈ ಕೊರೊನಿಲ್ ಮಾತ್ರೆ ಕೊರೊನಾ ತಡೆಗಟ್ಟಲು ಪರಿಣಾಮಕಾರಿಯೇ, ಆಯುಷ್ ಇಲಾಖೆ ಈ ಕುರಿತು ಏನು ಹೇಳಿದೆ ಎಂದು ನೋಡೋಣ ಬನ್ನಿ:
ಕೊರೊನಿಲ್ ಔಷಧಿ
ಕೊರೊನಿಲ್ ಔಷಧಿ ಬಿಡುಗಡೆ ಮಾಡಿದ ಬಾಬಾ ರಾಮ್ದೇವ್ ಇದು ಈಗಾಗಲೇ ಮೊದಲನೇ ಹಂತದ ಕ್ಲಿನಿಕಲ್ ಟ್ರಯಲ್ ಪೂರ್ಣಗೊಳಿಸಿದೆ ಎಂದು ಹೇಳಿದೆ. ಈ ಔಷಧ ಸೇವಿಸಿ ಈಗಾಗಲೇ ನೂರಕ್ಕೂ ಅಧಿಕ ಕೊರೊನಾ ರೋಗಿಗಳು ಗುಣಮುಖರಾಗದ್ದಾರೆ ಎಂದು ಹೇಳಿದ್ದಾರೆ. ಈ ಔಷಧ ಕುರಿತ ಸಂಶೋಧನೆ 2019 ಅಕ್ಟೋಬರ್ನಲ್ಲಿ ಪ್ರಾರಂಭಿಸಲಾಗಿತ್ತು ಎಂದು ಹೇಳಿದ್ದಾರೆ.
ಕೊರೊನಿಲ್ ಹೇಗೆ ತೆಗೆದುಕೊಳ್ಳಬೇಕು
ಕೊರೊನಿಲ್ ಔಷಧಿಯನ್ನು ಕೋವಿಡ್ 19 ರೋಗಿಯು ಬೆಳಗ್ಗೆ ಮತ್ತು ಸಂಜೆ ತೆಗೆದುಕೊಳ್ಳಬೇಕು. ಈ ಔಷಧ ತೆಗೆದುಕೊಂಡ ಕೆಲವೇ ದಿನಗಳಲ್ಲಿ ಕೊರೊನಾವೈರಸ್ ನಾಶವಾಗಿ ರೋಗಿಯು ಗುಣಮುಖವಾಗುವುದು ಎಂದು ಪತಾಂಜಲಿ ಕಂಪನಿ ಹೇಳಿದೆ.
ಕೊರೊನಿಲ್ನಲ್ಲಿರುವ ಅಂಶಗಳು
ಆಯುರ್ವೇದ ಔಷಧವಾಗಿರುವ ಕೊರೊನಿಲ್ ಅನ್ನು ಅಶ್ವಗಂಧ, ಅಮೃತಬಳ್ಳಿ, ತುಳಸಿ ಮುಂತಾದ ಗಿಡಮೂಲಿಕೆಗಳನ್ನು ಹಾಕಿ ತಯಾರಿಸಲಾಗಿದೆ.
ಈ ಔಷಧ ಸಂಶೋಧನೆಗೆ ಒಳಪಟ್ಟಿದೆಯೇ?
ಪತಾಂಜಲಿಯಯ ಆಚಾರ್ಯ ಬಾಲಕೃಷ್ಣರವರು ಕೊರೊನಿಲ್ ಔಷಧ ಸಂಶೋಧನೆಗೆ ಒಳಪಟ್ಟಿದೆ ಎಂದು ಹೇಳಿದ್ದಾರೆ. ಕೋವಿಡ್ 19 ಕಾಯಿಲೆ ಬಂದಾಗಲೇ ವಿಜ್ಞಾನಿಗಳನ್ನು ನೇಮಿಸಿ ಸಂಶೋಧನೆ ನಡೆಸಲಾಯಿತು. ರೋಗಿಗಳಿಗೆ ಈ ಔಷಧ ನೀಡಿದಾಗ ಶೇ.100ರಷ್ಟು ಗುಣಮುಖರಾಗಿದ್ದಾರೆ. ಈ ಔಷಧ ತೆಗೆದುಕೊಂಡ ರೋಗಿಗಳು 5-14 ದಿನಗಳಲ್ಲಿ ಗುಣಮುಖರಾಗಿದ್ದಾರೆ. ಆದ್ದರಿಂದ ಈ ಔಷಧಿಗೆ ಕೋವಿಡ್-19 ರೋಗಿಗಳನ್ನು ಗುಣಪಡಿಸುವ ಸಾಮಾರ್ಥ್ಯವಿದೆ ಎಂದು ಹೇಳಿದೆ. ಇದರ ಕುರಿತ ದಾಖಲೆಗಳನ್ನು 4-5 ದಿನಗಳಲ್ಲಿ ಬಿಡುಗಡೆ ಮಾಡುವುದಾಗಿಯೂ ಕಂಪನಿ ಹೇಳಿದೆ.
ಆಯುಷ್ ಇಲಾಖೆ ಏನು ಹೇಳಿದೆ?
ಪತಾಂಜಲಿಕೊರೊನಿಲ್ ಔಷಧ ಬಿಡುಗಡೆ ಮಾಡಿದ ಸ್ವಲ್ಪ ಹೊತ್ತಿನಲ್ಲಿಯೇ ಕೊರೊನಿಲ್ ಔಷಧಿ ಕೋವಿಡ್-19 ರೋಗಿಗಳನ್ನು ಗುಣಪಡಿಸುತ್ತದೆ ಎಂದು ಪ್ರಚಾರ ಮಾಡುವಂತಿಲ್ಲ ಎಂದು ಆಯುಷ್ ಇಲಾಖೆ ಹೇಳಿದೆ. ಕೊರೊನಿಲ್ ಔಷಧ ಕುರಿತು ಹೆಚ್ಚಿನ ಮಾಹಿತಿ ನಮಗಿಲ್ಲ ಎಂದು ಹೇಳಿರುವ ಆಯುಷ್ ಈ ಔಷಧ ಪ್ರಚಾರಕ್ಕೆ ತಡೆಯೊಡ್ಡಿದೆ.
ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಯೋಗ ಮತ್ತು ಪ್ರಾಣಯಾಮ
ಈ ಔಷಧ ಜೊತೆಗೆ ರೋಗಿಯು ಯೋಗ ಮತ್ತು ಪ್ರಾಣಯಾಮ ಮಾಡಿದರೆ ಬೇಗನೆ ಗುಣಮುಖರಾಗುತ್ತಾರೆ ಎಂದು ಬಾಬಾ ರಾಮ್ದೇವ್ ಸಲಹೆ ನೀಡಿದ್ದಾರೆ. ಜನರು ಯೋಗ ಹಾಗೂ ಪ್ರಾಣಯಾಮ ಅಭ್ಯಾಸ ಮಾಡುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿರುವವರಿಗೆ ಕೋವಿಡ್-19 ಬಾಧಿಸುವುದಿಲ್ಲ ಎಂದು ಈಗಾಗಲೇ ತಜ್ಞರು ಹೇಳಿದ್ದಾರೆ.
ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕಷಾಯ
ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಮನೆಯಲ್ಲಿಯೇ ಕಷಾಯ ಮಾಡಿ ಕುಡಿಯುವಂತೆ ಸಲಹೆ ನೀಡಿರುವ ಬಾಬಾರಾಮ್ದೇವ್ ಆ ಕಷಾಯ ಹೇಗೆ ತಯಾರಿಸಬೇಕೆಂದು ಕೂಡ ಹೇಳಿದ್ದಾರೆ.
- ಅರ್ಧ ಚಮಚ ಅರಿಶಿಣ ಪುಡಿ
- 3 ಕರಿಮೆಣಸು/ಕಾಳು ಮೆಣಸು
- 3 ಚಿಟಿಕೆಯಷ್ಟು ಒಣಶುಂಠಿ ಪುಡಿ
- 5-6 ಒಣ ದ್ರಾಕ್ಷಿ
- ಜೇನು
- ಇವುಗಳನ್ನು ಬಿಸಿ ನೀರಿನಲ್ಲಿ ಹಾಕಿ 2-3 ನಿಮಿಷ ಕುದಿಸಬೇಕು.
ಈ ಕಷಾಯ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು.