Just In
Don't Miss
- Sports LSG vs CSK IPL 2024: ಮತ್ತೊಮ್ಮೆ ಧೋನಿ, ಜಡೇಜಾ ಅಬ್ಬರ; ಲಕ್ನೋ ತಂಡಕ್ಕೆ ಸವಾಲಿನ ಗುರಿ ನೀಡಿದ ಸಿಎಸ್ಕೆ
- News ಚಿನ್ನದ ಬೆಲೆಯಲ್ಲಿ ಭರ್ಜರಿ ಏರಿಕೆ, ಕಾರಣ ಏನು?
- Movies Puttakkana Makkalu:ಸ್ನೇಹಾ ಕೈ ಸೇರಿಯೇ ಬಿಡ್ತು ವಿಚ್ಛೇದನದ ಪೇಪರ್; ಮುಂದೇನು?
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ 5 ಪ್ರಮುಖ ಪ್ರಯೋಜನ ಮಣ್ಣಿನ ಪಾತ್ರೆಯಲ್ಲಿ ಅಡುಗೆ ಮಾಡಿದರೆ ಮಾತ್ರ ಸಿಗುವುದು
ನೀವು ಅಡುಗೆಗೆ ಮಣ್ಣಿನ ಪಾತ್ರೆ ಬಳಸುತ್ತೀರಾ? ಮಣ್ಣಿನ ಪಾತ್ರೆ ಬಳಸುವವರಾದರೆ ಅದರಲ್ಲಿ ಮಾಡುವ ಅಡುಗೆಯ ರುಚಿ ಇತರ ಪಾತ್ರೆಯಲ್ಲಿ ಮಾಡುವ ಅಡುಗೆಗಿಂತ ಹೇಗೆ ಭಿನ್ನವಾಗಿರುತ್ತೆ ಎಂಬುವುದು ಖಂಡಿತ ಗೊತ್ತಿರುತ್ತದೆ.
ಇಲ್ಲದಿದ್ದರೆ ಇನ್ನು ಕೆಲ ರೆಸ್ಟೋರೆಂಟ್ಗಳಲ್ಲಿ ಮಣ್ಣಿನ ಪಾತ್ರೆಯಲ್ಲಿ ಮಾಡಿದ ಬಿರಿಯಾನಿ ಅಥವಾ ಕರಿ ಎಂದು ಸ್ಪೆಷಲ್ ಆಗಿ ಹೈಲೈಟ್ ಮಾಡಿರುತ್ತಾರೆ, ಅಂಥ ಹೋಟೆಲ್ಗಳಲ್ಲಿ ಆಹಾರದ ರುಚಿ ನೋಡಿರುತ್ತೀರಿ...
ಈ ಮಣ್ಣಿನ ಪಾತ್ರೆಯಲ್ಲಿ ಮಾಡುವ ಅಡುಗೆ ರುಚಿಯಲ್ಲಿ ಮಾತ್ರವಲ್ಲ, ಇನ್ನಿತರ ವಿಷಯಗಳಲ್ಲೂ ಬೇರೆ ಪಾತ್ರೆಗಳಲ್ಲಿ ಮಾಡುವ ಅಡುಗೆಗಿಂತ ತುಂಬಾನೇ ವಿಶೇಷವಾಗಿರುತ್ತೆ. ಹೇಗೆ ಎಂದು ನೋಡೋಣ ಬನ್ನಿ:
1. ಮಣ್ಣಿನ ಪಾತ್ರೆಯಲ್ಲಿ ಮಾಡಿದರೆ ಆಹಾರದ ಪೋಷಕಾಂಶಗಳು ಹಾಳಾಗಲ್ಲ
ಮಣ್ಣಿನ ಪಾತ್ರೆ ಇತರ ಅಲ್ಯುಮಿನಿಯಂ, ನಾನ್ಸ್ಟಿಕ್ ಪಾತ್ರೆಗೆ ಹೋಲಿಸಿದರೆ ನಿಧಾನಕ್ಕೆ ಬಿಸಿಯಾಗುತ್ತೆ, ಅಲ್ಲದೆ ಆಹಾರದಲ್ಲಿ ಬಿಸಿ ಒಂದೇ ರೀತಿ ಹರಡುತ್ತದೆ. ಇದರಿಂದಾಗಿ ಇತರ ಪಾತ್ರೆಗಳಲ್ಲಿ ಮಾಡಿದ ಅಡುಗೆಗಿಂತ ಮಣ್ಣಿನ ಪಾತ್ರೆಯಲ್ಲಿ ಮಾಡಿದ ಅಡುಗೆಯಲ್ಲಿ ಪೋಷಕಾಂಶ ಹೆಚ್ಚಿರುತ್ತದೆ.
2. ನಮ್ಮ ಹೃದಯದ ಆರೋಗ್ಯಕ್ಕೆ ಒಳ್ಳೆಯದು
ಮಣ್ಣಿನ ಪಾತ್ರೆಯಲ್ಲಿ ಅಡುಗೆ ಮಾಡಿದಾಗ ಅದರಲ್ಲಿರುವ ನೀರಿನಂಶ, ಎಣ್ಣೆಯಂಶ ಎಲ್ಲಾ ಆಹಾರ ಬೇಯುವಾಗ ಬಳಕೆಯಾಗುತ್ತೆ, ಇತರ ಪಾತ್ರೆಯಲ್ಲಿ ಬಳಸುವ ಎಣ್ಣೆಗಿಂತ ಸ್ವಲ್ಪ ಎಣ್ಣೆ ಹಾಕಿದರೆ ಸಾಕಾಗುತ್ತೆ. ಎಣ್ಣೆ ಸ್ವಲ್ಪ ಬಳಸಿದಾಗ ಹೃದಯದ ಆರೋಗ್ಯಕ್ಕೆ ಒಳ್ಳೆಯದು.
3. ಆಹಾರದಲ್ಲಿ PH ಸಮತೋಲನ ಮಾಡುತ್ತದೆ
ಮಣ್ಣಿನ ಪಾತ್ರೆಯಲ್ಲಿ ಮಾಡಿದ ಅಡುಗೆಯಲ್ಲಿ PH ಸಮತೋಲನದಲ್ಲಿರುತ್ತದೆ. ಆದ್ದರಿಂದ ಮಣ್ಣಿನ ಪಾತ್ರೆಯಲ್ಲಿ ಮಾಡಿದ ಅಡುಗೆಗೆ ರುಚಿ ಮಾತ್ರವಲ್ಲ ಒಳ್ಳೆಯ ಸುವಾಸನೆ ಕೂಡ ಇರುತ್ತದೆ.
4. ಖನಿಜಾಂಶಗಳಿರುತ್ತದೆ
ಮಣ್ಣಿನ ಪಾತ್ರೆಯಲ್ಲಿ ಮಾಡಿದ ಅಡುಗೆಯಲ್ಲಿ ಕಬ್ಬಿಣದಂಶ, ಮೆಗ್ನಿಷ್ಯಿಯಂ ಮುಂತಾದ ಖನಿಜಾಂಶಗಳಿರುತ್ತದೆ. ಆಹಾರದಲ್ಲಿರುವ ಎಲ್ಲಾ ಖನಿಜಾಂಶಗಳು ಹಾಳಾಗದೆ ನಿಮಗೆ ಸಿಗುತ್ತದೆ.
5. ಪರಿಸರಕ್ಕೂ ಒಳ್ಳೆಯದು
ಇನ್ನು ಮಣ್ಣಿನ ಪಾತ್ರೆ ಒಡೆದಾಗ ಬಿಸಾಡಿದರೆ ಪರಿಸರಕ್ಕೆ ಯಾವುದೇ ಹಾನಿಯಿಲ್ಲ. ಅಡುಗೆ ಮಾಡಿದರೆ ಆರೋಗ್ಯಕ್ಕೆ ಒಳ್ಲೆಯದು, ಬಿಸಾಡಿದಾಗ ಪರಿಸರಕ್ಕೂ ಒಳ್ಳೆಯದು. ಒಟ್ಟಿನಲ್ಲಿ ಮಣ್ಣಿನ ಪಾತ್ರೆ ಹಾಗೂ ಅದರ ದಿ ಬೆಸ್ಟ್....