Just In
Don't Miss
- News ಕುಡುಕರಿಗೆ ಎಣ್ಣೆ ಸಿಗುತ್ತಿಲ್ಲ, ಪರದಾಟ ನೋಡಲು ಆಗುತ್ತಿಲ್ಲ!
- Movies Bhagyalakshmi: ಶ್ರೇಷ್ಠಾ-ತಾಂಡವ್ ಮದುವೆಗೆ ಕುಸುಮಾ ಹಾರೈಕೆ; ಸತ್ಯ ಗೊತ್ತಾದ್ರೆ ಐತೆ ಮಾರಿ ಹಬ್ಬ!
- Sports DC vs GT IPL 2024: ಅಕ್ಷರ್, ಪಂತ್ ಭರ್ಜರಿ ಬ್ಯಾಟಿಂಗ್; ಗುಜರಾತ್ಗೆ ಸವಾಲಿನ ಗುರಿ ನೀಡಿದ ಡೆಲ್ಲಿ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಳಿಗಾಲದಲ್ಲಿ ತಣ್ಣೀರಿನಿಂದ ಮುಖ ತೊಳೆದರೆ, ಈ ತ್ವಚೆ ಸಮಸ್ಯೆಗಳು ದೂರವಾಗುತ್ತವೆ
ಚಳಿಗಾಲದಲ್ಲಿ, ತ್ವಚೆಯು ತುಂಬಾ ಒಣಗಿ, ಹಲವಾರು ಚರ್ಮದ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಇದನ್ನು ಹೋಗಲಾಡಿಸಲು ಕೋಲ್ಡ್ ಕ್ರೀಮ್ ಅಥವಾ ಕಾಸ್ಮೆಟಿಕ್ ಉತ್ಪನ್ನಗಳನ್ನು ಬಳಸುತ್ತೇವೆ. ಆದರೆ, ತಣ್ಣೀರು ಚಳಿಗಾಲದಲ್ಲಿ ಅನೇಕ ಚರ್ಮದ ಸಮಸ್ಯೆಗಳಿಗೆ ಚಿಕಿತ್ಸೆ ನೀಡುತ್ತದೆ ಎಂದು ನಿಮಗೆ ತಿಳಿದಿದೆಯೇ?.
ಹೌದು, ಯಾವುದೇ ಉತ್ತಮ ಮಾಯಿಶ್ಚರೈಸರ್ ಅಥವಾ ಸೌಂದರ್ಯ ಉತ್ಪನ್ನಗಳಿಗಿಂತ ತಣ್ಣೀರು ನಿಮ್ಮ ಚರ್ಮದ ಮೇಲೆ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದು ಮುಖ ಅಥವಾ ಕಣ್ಣು ಊದಿಕೊಂಡಿದ್ದರೆ, ತಕ್ಷಣವೇ ಚಿಕಿತ್ಸೆ ನೀಡುವುದು. ಹಾಗಾದರೆ, ತಣ್ಣೀರು ತ್ವಚೆಗೆ ಏನೆಲ್ಲಾ ಪ್ರಯೋಜನಗಳನ್ನು ತರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.
ತಣ್ಣೀರಿನಿಂದ ಚರ್ಮಕ್ಕೆ ಆಗುವ ಪ್ರಯೋಜನಗಳೇನು ಎಂಬುದನ್ನು ಈ ಕೆಳಗೆ ನೀಡಲಾಗಿದೆ:
ಮುಖದ ಊತವನ್ನು ನಿವಾರಿಸುವುದು:
ನಾವು ಬೆಳಿಗ್ಗೆ ಬೇಗ ಹಾಸಿಗೆಯಿಂದ ಎದ್ದಾಗ, ನಮ್ಮ ಕಣ್ಣುಗಳು ಊದಿಕೊಂಡಿರುತ್ತವೆ. ಕೆಲವೊಮ್ಮೆ, ನಿದ್ರೆಯ ಕೊರತೆ, ಒತ್ತಡ ಅಥವಾ ಆಹಾರದ ಅಲರ್ಜಿಯ ಕಾರಣದಿಂದಾಗಿ, ಮುಖದ ಮೇಲೆ ಪಫಿನೆಸ್ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಮುಖ ಮತ್ತು ಕಣ್ಣುಗಳ ಊತವನ್ನು ತೆಗೆದುಹಾಕಲು ತಣ್ಣೀರು ತುಂಬಾ ಪರಿಣಾಮಕಾರಿಯಾಗಿದೆ. ಬೆಳಗ್ಗೆ ಹಾಸಿಗೆಯಿಂದ ಎದ್ದ ತಕ್ಷಣ ತಣ್ಣೀರಿನಿಂದ ಮುಖ ತೊಳೆಯಿರಿ. ತಣ್ಣೀರು ಉಬ್ಬಿದ ಮುಖವನ್ನು ಗುಣಪಡಿಸುವುದು ಮಾತ್ರವಲ್ಲದೆ ರಾತ್ರಿ ಚರ್ಮದ ಮೇಲೆ ಸಂಗ್ರಹವಾಗುವ ಎಣ್ಣೆಯನ್ನು ಹೋಗಲಾಡಿಸುತ್ತದೆ.
ಸೂಕ್ಷ್ಮ ರೇಖೆಗಳು ಮತ್ತು ಸುಕ್ಕುಗಳನ್ನು ಕಡಿಮೆ ಮಾಡುವುದು:
ತಣ್ಣೀರಿನಿಂದ ಮುಖ ತೊಳೆದರೆ ತ್ವಚೆಯು ತಾರುಣ್ಯ ಮತ್ತು ಫ್ರೆಶ್ ಆಗಿ ಕಾಣುತ್ತದೆ. ತಣ್ಣೀರು ಮುಖದ ಮೇಲಿನ ಸುಕ್ಕುಗಳು ಮತ್ತು ಸೂಕ್ಷ್ಮ ರೇಖೆಗಳನ್ನು ಬಹಳ ಮಟ್ಟಿಗೆ ಕಡಿಮೆ ಮಾಡುತ್ತದೆ. ಚಳಿಗಾಲದಲ್ಲೂ ಬೆಳಗ್ಗೆ ಎದ್ದ ತಕ್ಷಣ ತಣ್ಣೀರಿನಿಂದ ಮುಖ ತೊಳೆಯಿರಿ.
ಡಲ್ನೆಸ್ ನಿವಾರಿಸುವುದು:
ತಣ್ಣೀರಿನಿಂದ ಮುಖ ತೊಳೆದರೆ ತ್ವಚೆಯ ಮಂದತೆ ದೂರವಾಗುತ್ತದೆ. ತಣ್ಣೀರು ಚರ್ಮವನ್ನು ತಾಜಾವಾಗಿರಿಸುತ್ತದೆ. ಚಳಿಗಾಲದಲ್ಲಿ, ತಣ್ಣೀರು ನಿಮ್ಮ ಚರ್ಮಕ್ಕೆ ಹೆಚ್ಚು ರಕ್ತವನ್ನು ಪಂಪ್ ಮಾಡಿ, ಚರ್ಮವನ್ನು ಹೆಚ್ಚು ಸ್ಪಷ್ಟವಾಗಿ ಕಾಣುವಂತೆ ಮಾಡುತ್ತದೆ. ಈ ಮೂಲಕ ತ್ವಚೆಯಲ್ಲಿ ಕಾಂತಿ ಹೊಮ್ಮುವಂತೆ ಮಾಡುತ್ತದೆ.
ತೆರೆದ ಚರ್ಮದ ರಂಧ್ರಗಳನ್ನು ಮುಚ್ಚುವುದು:
ಚಳಿಗಾಲದಲ್ಲಿ ಬೆಚ್ಚಗಿನ ನೀರಿನಿಂದ ಮುಖ ತೊಳೆದರೆ ಚರ್ಮದ ರಂಧ್ರಗಳು ತೆರೆದುಕೊಳ್ಳುತ್ತವೆ. ಈ ಚರ್ಮದ ರಂಧ್ರಗಳನ್ನು ಮುಚ್ಚಲು ತಣ್ಣೀರಿನಿಂದ ಮುಖವನ್ನು ತೊಳೆಯಿರಿ. ಬಿಸಿನೀರಿನಲ್ಲಿ ಸ್ನಾನ ಮಾಡಿದರೂ, ಮುಖವನ್ನು ತಣ್ಣೀರಿನಿಂದ ತೊಳೆಯುವುದು ಉತ್ತಮ. ಜೊತೆಗೆ ತಣ್ಣೀರು ನಿಮ್ಮ ತ್ವಚೆಯ ಜೊತೆಗೆ ನಿಮ್ಮ ಕಣ್ಣುಗಳನ್ನು ತಾಜಾವಾಗಿರಿಸುತ್ತದೆ.
ಸೂರ್ಯನ ಹಾನಿಕಾರಕ ಕಿರಣಗಳಿಂದ ರಕ್ಷಿಸುವುದು:
ಚಳಿಗಾಲದಲ್ಲಿ, ನಾವು ದೀರ್ಘಕಾಲದವರೆಗೆ ಸೂರ್ಯನಲ್ಲಿ ಕುಳಿತುಕೊಳ್ಳುತ್ತೇವೆ, ಇದು ಚರ್ಮಕ್ಕೆ ಹೆಚ್ಚು ಹಾನಿಯನ್ನುಂಟುಮಾಡುತ್ತದೆ. ತಣ್ಣೀರಿನಿಂದ ಮುಖ ತೊಳೆಯುವುದರಿಂದ ಸೂರ್ಯನ ಹಾನಿಕಾರಕ ಕಿರಣಗಳ ಪ್ರಭಾವದಿಂದ ಚರ್ಮವನ್ನು ರಕ್ಷಿಸಬಹುದು. ಮುಖದ ಮೇಲಿನ ಸೂಕ್ಷ್ಮ ರೇಖೆಗಳನ್ನು ತೊಡೆದುಹಾಕಲು, ನಾವು ಅತ್ಯುತ್ತಮವಾದ ಕ್ರೀಮ್ಗಳು ಮತ್ತು ವಿವಿಧ ರೀತಿಯ ಸೌಂದರ್ಯವರ್ಧಕ ಉತ್ಪನ್ನಗಳನ್ನು ಬಳಸುತ್ತೇವೆ. ಆದರೆ ಮುಖದ ಅಂದವನ್ನು ಹೆಚ್ಚಿಸಲು ಮತ್ತು ಕಣ್ಣುಗಳ ಊತವನ್ನು ಹೋಗಲಾಡಿಸಲು ಕೇವಲ ತಣ್ಣೀರು ಸಾಕು ಎಂಬುದು ಈ ಮೂಲಕ ತಿಳಿದುಬರುತ್ತದೆ.