ಗಣೇಶ ಚತುದರ್ಶಿ ಬಂದೇಬಿಟ್ಟಿದೆ. ಎಲ್ಲೆಡೆಯು ಸಂಭ್ರಮ ಕೂಡ ಮನೆ ಮಾಡಿದೆ. ವರ್ಷ ಕಳೆದು ಹೇಗೆ ಗಣೇಶ ಚತುದರ್ಶಿ ಬಂದಿದೆ ಎಂದು ಗೊತ್ತೇ ಆಗುತ್ತಿಲ್ಲ. ಗಣೇಶ ಚತುದರ್ಶಿಗೆ ಮನೆಯಲ್ಲಿ ಹಾಗೂ ಸಾರ್ವಜನಿಕವಾಗಿ ಗಣಪತಿಯ ಮೂರ್ತಿಯನ್ನಿಟ್ಟು ಪೂಜೆ, ಆರತಿ ಮಾಡಲಾಗುತ್ತದೆ. ಗಣಪತಿ ಮೂರ್ತಿಯನ್ನು ರಚಿಸುವ ಕಲಾವಿದರು ಈಗಾಗಲೇ ಮೂರ್ತಿಗಳಿಗೆ ಅಂತಿಮ ಸ್ಪರ್ಶ ನೀಡಿ ಆಗಿದೆ. ಮಾರುಕಟ್ಟೆಯಲ್ಲಿ ಸುಂದರ ಹಾಗೂ ಬಣ್ಣಬಣ್ಣದ ಗಣಪತಿಗಳು ಜನರನ್ನು ಆಕರ್ಷಿಸುತ್ತಿದೆ. ಪ್ರತಿಯೊಬ್ಬ ಗಣಪತಿ ಭಕ್ತ ಕೂಡ ತಾನು ಅತೀ ಸುಂದರವಾಗಿರುವ ಗಣಪತಿ ಮೂರ್ತಿ ಖರೀದಿಸಬೇಕೆಂದು ಬಯಸುವನು.
ಗಣಪತಿ ದೇವರ ಮೂರ್ತಿ ಖರೀದಿಸುವ ಮೊದಲು ಈ ಸಂಗತಿಗಳು ಗಮನದಲ್ಲಿಟ್ಟುಕೊಳ್ಳಿ
ಹಿಂದೂಗಳು ಅತೀ ಸಡಗರ, ಸಂಭ್ರಮದಿಂದ ಆಚರಿಸುವಂತಹ ಹಬ್ಬವೇ ಗಣೇಶ ಚತುದರ್ಶಿ. ಗಣಪತಿ ದೇವರ ಮೂರ್ತಿಯನ್ನು ಮನೆಗೆ ತಂದು ಹತ್ತು ದಿನಗಳ ಕಾಲ ಪೂಜೆ, ಆರತಿ ಮಾಡಲಾಗುತ್ತದೆ. ಇದರ ಬಳಿಕ ಮೂರ್ತಿಯ ಜಲಸ್ತಂಭ ಮಾಡಲಾಗುತ್ತದೆ. ಈ ವರ್ಷ ಸಪ್ಟೆಂಬರ್ 13ರಂದು ಗಣೇಶ ಚತುದರ್ಶಿ ಬಂದಿದೆ. ಅದಾಗ್ಯೂ, ಗಣಪತಿ ಮೂರ್ತಿಯನ್ನು ಖರೀದಿಸುವ ಮೊದಲು ಕೆಲವೊಂದು ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.
ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಗಣಪತಿ ಮೂರ್ತಿಗಳು ಲಭ್ಯವಿದೆ. ಇದರಿಂದ ಮಾರಾಟಗಾರರಿಗೆ ಲಾಭ. ಮನೆಯಲ್ಲಿ ಪೂಜೆ ಮಾಡಲು ಕುಳಿತಿರುವಂತಹ ಗಣಪತಿ ಒಳ್ಳೆಯದು. ಕಚೇರಿಗಳಿಗೆ ನಿಂತಿರುವ ಗಣಪತಿ ಆಗಬಹುದು. ಕುಳಿತಿರುವ ಗಣಪತಿಯು ಆರ್ಥಿಕ ಸ್ಥಿರತೆ ತರುತ್ತಾರೆ ಮತ್ತು ಹಣದ ದುರುಪಯೋಗ ತಡೆಯುವರು. ನಿಂತಿರುವ ಗಣಪತಿಯು ವೃತ್ತಿಯಲ್ಲಿ ಯಶಸ್ಸು ತಂದುಕೊಡುವರು.
ಗಣಪತಿ ಮೂರ್ತಿಯನ್ನು ಖರೀದಿಸುವಾಗ ಹೆಚ್ಚಿನವರಲ್ಲಿ ಸೊಂಡಿಲು ಯಾವ ಕಡೆಗಿರಬೇಕು ಎನ್ನುವ ಗೊಂದಲ ಕಾಡುವುದು. ಬಾಲಗಣಪನು ಎರಡು ಕಡೆಯ ಸೊಂಡಿಲಿನಲ್ಲಿ ಸುಂದರವಾಗಿ ಕಾಣುವನು. ಆದರೆ ಇದೆರಡನ್ನು ಪೂಜೆಗೆ ಬಳಸಬಾರದು. ಗಣಪತಿಯ ಸೊಂಡಿಲು ಎಡಭಾಗಕ್ಕೆ ಇರಬೇಕು ಮತ್ತು ಇಂತಹ ಮೂರ್ತಿಯು ಪೂಜೆಗೆ ಪವಿತ್ರವೆಂದು ಪರಿಗಣಿಸಲಾಗಿದೆ.
ಗಣಪತಿ ದೇವರ ಮೂರ್ತಿಯೊಂದಿಗೆ ಅವರ ವಾಹನ ಇಲಿ ಕೂಡ ಇರುವುದು. ದೇವರ ಪಾದದ ಕೆಳಗಡೆ ಮೋದಕ ತಿನ್ನುವ ಇಲಿಯನ್ನು ಕೆಲವೆಡೆ ತೋರಿಸಲಾಗಿದೆ. ಗಣಪತಿ ದೇವರಿಗೂ ಮೋದಕವು ತುಂಬಾ ಪ್ರಿಯವಾಗಿದೆ. ಗಣಪತಿ ದೇವರ ಮೂರ್ತಿಯೊಂದಿಗೆ ಇಲಿ ಮತ್ತು ಮೋದಕ ಇರುವುದನ್ನು ನೀವು ಖರೀದಿ ಮಾಡಿ.
ಗಣಪತಿ ದೇವರ ಮೂರ್ತಿಯನ್ನು ಮಣ್ಣು, ಪ್ಯಾರಿಸ್ ಆಫ್ ಪ್ಲಾಸ್ಟರ್ ಅಥವಾ ಇತರ ಯಾವುದೇ ಸಾಮಗ್ರಿಯಿಂದ ತಯಾರಿಸಬಹುದು. ಮೂರ್ತಿ ತಯಾರಿಕೆಗೆ ರಾಸಾಯನಿಕ ಬಳಕೆ ಮಾಡಬಾರದು. ಅದಾಗ್ಯೂ, ಮಣ್ಣು ಮತ್ತು ಮರಳು ಬಳಸಿಕೊಂಡು ಮನೆಯಲ್ಲೇ ಗಣಪತಿ ಮೂರ್ತಿ ತಯಾರಿಸಿದರೆ ಒಳ್ಳೆಯದು. ಹೀಗೀಗ ಹೆಚ್ಚಾಗಿ ಪ್ಯಾರಿಸ್ ಆಫ್ ಪ್ಲಾಸ್ಟರ್ ಬಳಸಿ ಮೂರ್ತಿ ತಯಾರಿಸಲಾಗುತ್ತದೆ. ಪೂಜೆಗೆ ಮರದ ಮೂರ್ತಿ ಬಳಸಬಾರದು. ಇದನ್ನು ಪೂಜಾಕೊಠಡಿಯಲ್ಲೂ ಇಡಬಾರದು.
ಗಣೇಶ ಚತುದರ್ಶಿಗೆ ಖರೀದಿಸುವ ಗಣಪತಿ ಮೂರ್ತಿಯ ಬಣ್ಣವು ತುಂಬಾ ಮಹತ್ವ ಪಡೆಯುವುದು. ಕುಂಕುಮ ಬಣ್ಣವನ್ನು ಮೂರ್ತಿಗೆ ಬಳಸಬಹುದು. ಬಿಳಿ ಬಣ್ಣದಿಂದಲೂ ಮೂರ್ತಿ ತಯಾರಿಸಬಹುದು. ಇಂತಹ ಮೂರ್ತಿಗಳು ಮನೆಯಲ್ಲಿ ಶಾಂತಿ ತರುವುದು. ಗಣೇಶ ಚತುದರ್ಶಿ ವೇಳೆ ಇಂತಹ ಬಣ್ಣದ ಮೂರ್ತಿಗಳನ್ನು ಪೂಜಿಸಿದರೆ ಅದರಿಂದ ನಿಮ್ಮ ಇಷ್ಟಾರ್ಥಗಳು ಬೇಗನೆ ಈಡೇರುವುದು ಎಂದು ಹೇಳಲಾಗಿದೆ.
More LIFE News
- ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- ದುಬೈ ಪ್ರವಾಹದ ವೈರಲ್ ವೀಡಿಯೋಗಳು: ಒಂದೊಂದು ದೃಶ್ಯವೂ ಬದುಕಿನ ಪಾಠ ಹೇಳುತ್ತೆ
- ಕನ್ನಡದಲ್ಲಿಯೇ UPSC ಪರೀಕ್ಷೆ 644ನೇ ರ್ಯಾಂಕ್ ಪಡೆದ ಶಾಂತಪ್ಪ ಕುರುಬರ: ಸಾಧನೆಯ ಛಲವಿದ್ದರೂ ಯಾವುದೂ ಅಡ್ಡಿಯಲ್ಲ
- ದುಬೈಯ ಪ್ರವಾಹದ ದೃಶ್ಯಗಳು: ಪ್ರಕೃತಿಯ ರುದ್ರಾವತಾರ, ಒಂದೂವರೆ ವರ್ಷದ ಮಳೆ 24 ಗಂಟೆಯಲ್ಲಿ ಬಂದಿದೆ
- ದ್ವಾರಕೀಶ್ ಲವ್ ಸ್ಟೋರಿ ಏನು ಗೊತ್ತಾ.? ಎರಡನೇ ಮದ್ವೆಗೆ ಮೊದಲ ಪತ್ನಿ ಗ್ರೀನ್ ಸಿಗ್ನಲ್..!
- ಹಾವನ್ನು ಚಿಟಿಕೆ ಹೊಡೆದಂತೆ ಡಬ್ಬದಲ್ಲಿ ತುಂಬಿದ ವ್ಯಕ್ತಿಯ ಕೌಶಲ್ಯಕ್ಕೆ ಜನರು ಫಿದಾ: 17 ಮಿಲಿಯನ್ಗೂ ಅಧಿಕ ವ್ಯೂವ್ಸ್ ಪಡೆದ ವೀಡಿ
- ವಿಶ್ವ ಆರೋಗ್ಯ ದಿನ: ಪರ್ವಾಗಿಲ್ಲ ಅಂತ ನೀವು ಮಾಡುವ ಈ 9 ತಪ್ಪುಗಳಿಂದಲೇ ಆರೋಗ್ಯ ಹದಗೆಡುತ್ತೆ ಜಾಗ್ರತೆ
- ಸುಡು ಬಿಸಿಲು: ಮನೆ ಸಮೀಪ ಈ ವಸ್ತುಗಳಲ್ಲಿ ಹಾವು ಸೇರಿಕೊಳ್ಳುವ ಸಾಧ್ಯತೆ ಹೆಚ್ಚು, ಜಾಗ್ರತೆವಹಿಸಿ