Just In
- 1 hr ago ವೀಲ್ಚೇರ್ನಲ್ಲಿ ಮಾವನ ಹೆಣವಿಟ್ಟು ಬ್ಯಾಂಕ್ಗೆ ತಂದ ಸೊಸೆ..! ಲೋನ್ ಮಾಡಿಸುವಾಗ ಸಿಕ್ಕಿಬಿದ್ಲು..!
- 2 hrs ago ಆಕಾಶದಲ್ಲಿ ಮತ್ತೆ ಕಾಣಿಸಿಕೊಂಡ ವಿಚಿತ್ರ ವಸ್ತು.! ಸ್ಪಷ್ಟನೆ ಬೇಕೆಂದ ನಿವಾಸಿಗಳು..!
- 3 hrs ago ದುಬೈ ಪ್ರವಾಹದ ವೈರಲ್ ವೀಡಿಯೋಗಳು: ಒಂದೊಂದು ದೃಶ್ಯವೂ ಬದುಕಿನ ಪಾಠ ಹೇಳುತ್ತೆ
- 7 hrs ago ಎಳ ನೀರು ಹಾಕಿ ಮಾಡುವ 2 ದೋಸೆ ರೆಸಿಪಿ: ರುಚಿ ಸೂಪರ್, ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
Don't Miss
- Movies ಕನ್ನಡ ಚಿತ್ರರಂಗಕ್ಕೆ ಬಂದ ಕಾಲಿವುಡ್ನ ಕಿನ್ನರಿ ; ಡಾಲಿಯ 'ಉತ್ತರಕಾಂಡ'ಕ್ಕೆ ಇವರೇ ನಾಯಕಿ..?
- News ಜಲ ಜೀವನ್ ಮಿಷನ್ ಯೋಜನೆ ವ್ಯರ್ಥ: ಈ ವೃದ್ದೆಗೆ ಕಣ್ಣೀರೇ ಗತಿ
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Automobiles ಜನ ಕ್ಯೂ ನಿಂತು ಖರೀದಿಸುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ಮಾರಾಟದಲ್ಲಿ ಕುಸಿತ: ಕಾರಣವೇನು?
- Finance ಅಂಬುಜಾ ಸಿಮೆಂಟ್ ಮೇಲೆ ಅದಾನಿ ಗ್ರೂಪ್ನಿಂದ 8,339 ಕೋಟಿ ರೂ. ಹೂಡಿಕೆ
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಲ್ಲೇಶ್ವರಂ ದೋಬೀಘಾಟ್ ಹೈಟೆಕ್ ಸೇವೆಗೆ ಸಜ್ಜು
ಇಲ್ಲಿ 50 ಕೆ.ಜಿ, 100 ಕೆ.ಜಿ. ಮತ್ತು 200 ಕೆ.ಜಿ. ಸಾಮರ್ಥ್ಯದ ಮೂರು ವಾಷಿಂಗ್ ಮಶೀನ್ಗಳನ್ನು ಅಳವಡಿಸಲಾಗಿದೆ. ಒಂದು ಬಾರಿಗೆ 40-50 ಕೆ.ಜಿ. ಬಟ್ಟೆಗಳನ್ನು ತುಂಬಬಹುದಾಗಿದೆ. ಇದಕ್ಕೆ ಇಂಡಸ್ಟ್ರೀಯಲ್ ಇನ್ಸ್ಟಿಟ್ಯೂಷನಲ್ ಲಾಂಡ್ರಿ ಕೆಮಿಕಲ್ ಬಳಸಲಾಗುತ್ತಿದೆ.
ಹಳೆ ಮತ್ತು ಹೊಸ ದೋಬೀಘಾಟ್ ಸಂಘದ ಸದಸ್ಯರು ಮಾತ್ರ ಇದರ ಸದುಪಯೋಗವನ್ನು ಪಡೆಯಬಹುದಾಗಿದೆ. ಇದರ ಬಳಕೆಗೆ ತರಬೇತಿಯನ್ನೂ ಸಂಘವೇ ನೀಡುತ್ತಿದೆ. ಸದ್ಯ ಮಲ್ಲೇಶ್ವರಂ ಸುತ್ತಮುತ್ತಲಿನ ವೈಯಾಲಿಕಾವಲ್, ಗುಟ್ಟಹಳ್ಳಿ, ಶ್ರೀರಾಂಪುರ, ಶೇಷಾದ್ರಿಪುರಂನ ಮಡಿವಾಳರು ಇದರ ಪ್ರಯೋಜನ ಪಡೆಯುತ್ತಿದ್ದಾರೆ.
ಆರೋಗ್ಯ ಸುಧಾರಣೆ: ಗಂಟೆಗಟ್ಟಲೆ ಕಿಮಿಕಲ್ ಮತ್ತು ಡಿಟರ್ಜೆಂಟ್ ನೀರಿನಲ್ಲಿ ನಿಂತು ದೋಬೀಘಾಟ್ಗಳಲ್ಲಿ ಕೆಲಸ ಮಾಡುವ ಮಡಿವಾಳರು ಅನೇಕ ಕಾಯಿಲೆಗಳಿಂದ ನರಳುವಂತಾಗಿತ್ತು. ಚರ್ಮ ರೋಗ, ಅಸ್ತಮಾ, ಉಸಿರಾಟದ ತೊಂದರೆ ಮುಂತಾದ ಸಮಸ್ಯೆಗಳು ಕಾಡುತ್ತಿತ್ತು. ಆದರೆ ವಿದ್ಯುತ್ಚಾಲಿತ ಯಂತ್ರಗಳನ್ನು ಬಳಸುವುದರಿಂದ ಆರೋಗ್ಯ ಸುಧಾರಿಸಿದೆ. ಕಡಿಮೆ ಶ್ರಮ, ಕಡಿಮೆ ಸಮಯದಲ್ಲಿ ಹೆಚ್ಚು ಕೆಲಸ ಮಾಡಬಹುದಾಗಿದೆ. ಆರೋಗ್ಯ ಕಾಪಾಡುವುದರ ಜೊತೆಗೆ ಹೈಜೆನಿಕ್ ವಾಷ್ ಕೂಡಾ ಮಾಡಲಾಗುತ್ತಿದೆ ಎಂಬುದು ಮಡಿವಾಳರ ಅಭಿಪ್ರಾಯ.
ಬೆಂಗಳೂರಿನಲ್ಲಿ ಸುಮಾರು 24 ದೋಬೀಘಾಟ್ಗಳಿವೆ. ರಾಜ್ಯ ಮಡಿವಾಳರ ಸಂಘ ರಾಜ್ಯದ ಎಲ್ಲಾ ದೋಬೀಘಾಟ್ಗಳನ್ನೂ ಹೈಟೆಕ್ಗೊಳಿಸಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಈಗಾಗಲೇ ಮಹಾಲಕ್ಷ್ಮಿ ಬಡಾವಣೆ, ಆಸ್ಟಿನ್ ಟೌನ್, ಸಿಂಗಾಪುರ ಮಾರ್ಕೆಟ್ ಮತ್ತು ಶ್ರೀನಗರದಲ್ಲಿ ಟೆಂಡರ್ ಸಹ ಕರೆಯಲಾಗಿದೆ.