Just In
- 7 hrs ago ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- 8 hrs ago ಮೀನ ರಾಶಿಯಲ್ಲಿ ಬುಧ ವಕ್ರೀಯ ಚಲನೆ ಮಾಡುವಾಗ ಈ 5 ರಾಶಿಯವರು ವೃತ್ತಿ ಜೀವನದ ಬಗ್ಗೆ ಜಾಗ್ರತೆ
- 8 hrs ago ದಿನ ಭವಿಷ್ಯ ಮಾರ್ಚ್ 29: ಶುಕ್ರವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
- 8 hrs ago ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
Don't Miss
- Sports IPL 2024: RCB vs KKR ಹೆಡ್-ಟು-ಹೆಡ್ ದಾಖಲೆ, ಪಿಚ್ ವರದಿ; ಚಿನ್ನಸ್ವಾಮಿಯಲ್ಲಿ ಗೆಲುವು ಯಾರಿಗೆ?
- Finance ವಿವಿಧ ರಾಜ್ಯಗಳ ನರೇಗಾ ಕಾರ್ಮಿಕರ ವೇತನ ದರ ಪರಿಷ್ಕರಣೆ, ವಿವರ
- News KRS ಸುತ್ತಲಿನ ಪ್ರದೇಶದಲ್ಲಿ ಗಣಿಗಾರಿಕೆ: ಖಡಕ್ ಎಚ್ಚರಿಕೆ ನೀಡಿದ ಹೈಕೋರ್ಟ್
- Movies "ನಾವು ದಕ್ಷಿಣ ಭಾರತದವರಾಗಿದ್ರೂ ಭಾಷೆ ಬರುತ್ತೆ, ಸುಂದರವಾಗಿಯೂ ಇದ್ದೇವೆ"; ನಟಿ ಪ್ರಿಯಾಮಣಿ
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ ವಿಶ್ವಂಭರ ಸ್ವಾಮೀಜಿ ಯಾರು? ಈಗ ಎಲ್ಲಿದ್ದಾರೆ?
ಈ ಸ್ವಾಮೀಜಿಗಳೆಲ್ಲ ಫೇಸ್ ಬುಕ್ ನಲ್ಲಿ ಯಾಕಿದ್ದಾರೆ ಅನ್ನುವುದಕ್ಕಿಂತ ಇಂಟರ್ ನೆಟ್ಟಿನಲ್ಲಿ ಅವರೆಲ್ಲ ಎಂತಹ ಚರ್ಚೆಗಳನ್ನು ಹುಟ್ಟುಹಾಕುತ್ತಿದ್ದಾರೆ ಎನ್ನುವುದು ನಮ್ಮ ಕುತೂಹಲ. ಈ ತಾಣವನ್ನು ಸ್ವಾಮಿಗಳು ಯಾವ ಬಗೆಯಲ್ಲಿ ಉಪಯೋಗ ಪಡಿಸಿಕೊಳ್ಳುತ್ತಿದ್ದಾರೆ? ಯಾರ್ಯಾರಿಗೆ ಎಷ್ಟು ಭಕ್ತರಿದ್ದಾರೆ? ಇದರಿಂದ ಏನು ಪ್ರಯೋಜನ?
ಯಾವುದೇ ಪ್ರವಚನಗಳಿಲ್ಲದೆ, ಅನುಭವ ಮಂಟಪಗಳಿಲ್ಲದೆ, ಭಿತ್ತಿಪತ್ರಗಳಿಲ್ಲದೆ, ಈಮೇಲುಗಳಿಲ್ಲದೆ ಸಾವಿರಾರು ಭಕ್ತಾದಿಗಳನ್ನು ಒಂದೇ ಏಟಿಗೆ ತಲುಪಬಹುದಾದ ಸೋಷಿಯಲ್ ಮೀಡಿಯ ಈ ಫೇಸ್ ಬುಕ್. ಸ್ವಾಮೀಜಿಗಳು ಭಕ್ತಾದಿಗಳನ್ನು ಮಾತ್ರವಲ್ಲ ಭಕ್ತಾದಿಗಳು ಇನ್ನಿತರ ಭಕ್ತರನ್ನು ಕೂಡ ಸಂಧಿಸುವ, ಮಾಹಿತಿಗಳನ್ನು ಹಂಚಿಕೊಳ್ಳುವ ಉಪಯುಕ್ತ ತಾಣ ಇದಾಗಿದೆ. ಹಾಗಂತ ಇಲ್ಲಿ ನಡೆಯುವ ಎಲ್ಲ ಚರ್ಚೆಗಳು ಉಪಯುಕ್ತವಾಗಿರುತ್ತವೆ ಅಂತಲ್ಲ.
ಆಯಾ ಸ್ವಾಮೀಜಿಗೆ ಮಾತ್ರ ಸಂಬಂಧಿಸಿದ ಮಾಹಿತಿಯ ಜೊತೆಗೆ ಇತರ ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ಕೂಡ ಇಲ್ಲಿ ಮಾಹಿತಿ ಹಾಕಿ ಇತರರಿಗೂ ತಲುಪುವಂತೆ ಮಾಡಬಹುದು. ಇಂಥ ಉಪಯೋಗವನ್ನು ಎಷ್ಟು ಸ್ವಾಮೀಜಿಗಳು ಪಡೆದುಕೊಂಡಿದ್ದಾರೆ? ಉತ್ತರ ಹುಡುಕುತ್ತ ಹೋದರೆ ಕೆಲ ಸ್ವಾರಸ್ಯಕರ ಸಂಗತಿಗಳು ಬೆಳಕಿಗೆ ಬರುತ್ತವೆ. ಅತ್ಯಂತ ಕ್ರಿಯಾಶೀಲರಾಗಿರುವ ಪೇಜಾವರ ಶ್ರೀಗಳ ಮತ್ತು ರಾಘವೇಶ್ವರ ಭಾರತಿ ಸ್ವಾಮಿಜಿಗಳ ಫೇಸ್ ಬುಕ್ ಬಗ್ಗೆ ಈ ತಾಣದಲ್ಲಿ ಓದಿದ್ದೀರಿ. ಇಲ್ಲಿ ಸಾವಿರಗಟ್ಟಲೆ ಭಕ್ತರಿಲ್ಲದಿದ್ದರೂ ಚಟುವಟಿಕೆ ನಿರಂತರವಾಗಿದೆ.
ಹಾಗೆಯೇ ಹುಡುಕುತ್ತಿರುವಾಗ ಸಿಕ್ಕಿದ್ದು ವಿಶ್ವಂಭರ ಸ್ವಾಮೀಜಿ ಎಂಬ ಕಾವಿಧಾರಿ ಸ್ವಾಮೀಜಿಯ ಫೇಸ್ ಬುಕ್ ತಾಣ. ಅವರ ಹಿಂಬಾಲಕರನ್ನು ನೋಡಿ ದಂಗಾಯಿತು. ಸುಮಾರು ನಾಲ್ಕೂವರೆ ಸಾವಿರ ಗೆಳೆಯರನ್ನು ಅವರು ಸಂಪಾದಿಸಿದ್ದಾರೆ. ಆದರೆ, ತಾಣದಲ್ಲಿ ಅಷ್ಟೊಂದು ಚರ್ಚೆ ನಡೆದಿರುವುದು ಕಂಡುಬರುತ್ತಿಲ್ಲ. ಅವರು ಮುಂಬಯಿಯವರಾದರೂ ನಮ್ಮ ಬೆಂಗಳೂರಿನಲ್ಲೇ ನೆಲೆಸಿದ್ದಾರೆಂದು ಮಾಹಿತಿ ನೀಡುತ್ತದೆ. ಇಷ್ಟು ಹೊರತುಪಡಿಸಿದರೆ ಬೇರೆ ಮಾಹಿತಿ ಇಲ್ಲ.
ಅಷ್ಟೊಂದು ಗೆಳೆಯರನ್ನು ಸಂಪಾದಿಸಿದ್ದು ಹೇಗೆ? ಚಟುವಟಿಕೆ ಯಾಕೆ ನಿಂತ ನೀರಾಗಿದೆ? ನಿಜಕ್ಕೂ ಇವರು ಸ್ವಾಮೀಜಿನಾ? ಅಥವಾ ಸ್ವಾಮೀಜಿ ಅಂತ ಹೆಸರಿಟ್ಟುಕೊಂಡಿದ್ದಾರಾ? ಇವರಿಗೂ ಆರ್ಟ್ ಆಫ್ ಲಿವಿಂಗ್ ಗೂ ಏನು ಸಂಬಂಧ? ಸ್ವಾಮೀಜಿಯ ಬಗ್ಗೆ ಹೆಚ್ಚಿನ ಮಾಹಿತಿ ಯಾರಿಗಾದರೂ ತಿಳಿದಿದ್ದರೆ ಈ ದಟ್ಸ್ ಕನ್ನಡ ತಾಣದಲ್ಲಿಯೇ ಹಂಚಿಕೊಳ್ಳಬೇಕೆಂದು ಕೋರಿಕೆ. [ಒನ್ಇಂಡಿಯಾ ಕನ್ನಡ ಫೇಸ್ಬುಕ್ ಫ್ಯಾನ್ ಕ್ಲಬ್ ಸೇರಿರಿ]