Just In
- 8 min ago ರುಚಿ ರುಚಿಯ ಸ್ಪೆಷಲ್ ಅಂಬೂರ್ ಬಿರಿಯಾನಿ ಮಾಡಿ ನೋಡಿ..! ಇಲ್ಲಿದೆ ರೆಸಿಪಿ
- 54 min ago ಹನುಮಂತನ ಪವಾಡ: ಈ ದೇವಾಲಯದಲ್ಲಿ ಹನುಮಾನ್ ಮೂರ್ತಿ ವರ್ಷದಿಂದ ವರ್ಷಕ್ಕೆ ಎತ್ತರ ಬೆಳೆಯುತ್ತಿದೆ!
- 3 hrs ago ತಾವರೆಯ ಬೀಜವನ್ನು ಹಾಲಿನ ಜೊತೆ ಸೇವಿಸಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
- 3 hrs ago ಗಂಡು ಎಂದು ಸಾಕಿದ್ದ ನೀರು ಕುದುರೆ 7 ವರ್ಷದ ಬಳಿಕ ಹೆಣ್ಣಾಗಿತ್ತು..! ಝೂನಲ್ಲಿ ಅಚ್ಚರಿ..!
Don't Miss
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Automobiles ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- News ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಮೋದಿ; ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ: ಸಿದ್ದರಾಮಯ್ಯ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Movies ತಮನ್ನಾ ಪಾಲಿಗೆ 'ದುಬಾರಿ' ಆಯಿತು 'ಪ್ರಚಾರ' ; ಮಿಲ್ಕಿ ಬ್ಯೂಟಿಯನ್ನ ವಿಚಾರಣೆಗೆ ಕರೆದ ಸೈಬರ್ ಇಲಾಖೆ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪ್ರೀತಿ, ಪ್ರೇಮ, ವಿರಹ -ಸಂಬಂಧದಲ್ಲಿ ಹಾಲು-ಜೇನುವಿದ್ದಂತೆ!
ಇಂದಿನ ದಿನಗಳಲ್ಲಿ ಈ ವಿರಹ ಹೊಸರೂಪ ಪಡೆದು ನೂತನ ಆವೃತ್ತಿಯಾದ "ಮಿಸ್ಸಿಂಗ್ ಅಂಡ್ ಕಿಸ್ಸಿಂಗ್" ಅಥವಾ ಚುಂಬಿಸು-ಕಳೆದುಕೊಳ್ಳು ಎಂದು ಕನ್ನಡದಲ್ಲಿ ಹೃಸ್ವವಾಗಿ ಕರೆಯಬಹುದಾದ ಈ ಪ್ರಕ್ರಿಯೆಯಿಂದ ನಿಜವಾಗಿಯೂ ಸಂಬಂಧ ಬಲಗೊಳ್ಳುತ್ತದೆ...
ಸಂಗಾತಿಗಳ ನಡುವಣ ಸಂಬಂಧ ಗಟ್ಟಿಯಾಗಲು ಕೇವಲ ದೈಹಿಕ ಆಕರ್ಷಣೆ ಸಾಲದು, ಬದಲಿಗೆ ವಿಶ್ವಾಸ, ಪ್ರೀತಿ, ಭರವಸೆ ಮೊದಲಾದವೂ ಇರಬೇಕು. ಅಂತೆಯೇ ಕೊಂಚ ದೂರವೂ ಸಹಾ. ಪ್ರೇಮವೆಂದರೆ ಇಡಿಯ ದಿನ ಒಬ್ಬರಿಗೊಬ್ಬರು ಗೋಂದಿನಂತೆ ಅಂಟಿಕೊಂಡಿರುವುದೂ ಅಲ್ಲ, ಈ ಹೊತ್ತಿನಲ್ಲಿ ತಮ್ಮ ಸಂಗಾತಿ ಏನು ಮಾಡುತ್ತಿದ್ದಾರೆ ಎಂಬುದನ್ನು ಸತತವಾಗಿ ಗಮನಿಸುತ್ತಿರುವುದೂ ಅಲ್ಲ. ಈ ರೀತಿಯ ಗಂಡ ಸಿಕ್ಕಿದರೆ ಅವರೇ ಪುಣ್ಯವಂತರು...!
ಇಂದಿನ ದಿನಗಳಲ್ಲಿ ಆಧುನಿಕ ತಂತ್ರಜ್ಞಾನದ ಮೂಲಕ ತಮ್ಮ ಸಂಗಾತಿ ಎಲ್ಲಿರುತ್ತಾರೆ, ಏನು ಮಾಡುತ್ತಿದ್ದಾರೆ ಎಂಬುದನ್ನು ಕಂಡುಕೊಳ್ಳುವುದು ಸುಲಭವಾಗಿರುವುದರಿಂದ ಈ ಕ್ರಿಯೆ ಹೊಸ ರೀತಿಯಲ್ಲಿ ಸಂಬಂಧದ ನಡುವೆ ಹುಳಿ ಹಿಂಡಬಹುದು. ಆದ್ದರಿಂದಲೇ ಹಿರಿಯರು ಸಂಬಂಧ ಗಟ್ಟಿಗೊಳ್ಳಲು ವಿರಹದ ಅಗತ್ಯವನ್ನೂ ಎತ್ತಿ ಹಿಡಿದಿದ್ದರು.
ಇಂದಿನ ದಿನಗಳಲ್ಲಿ ಈ ವಿರಹ ಹೊಸರೂಪ ಪಡೆದು ನೂತನ ಆವೃತ್ತಿಯಾದ "ಮಿಸ್ಸಿಂಗ್ ಅಂಡ್ ಕಿಸ್ಸಿಂಗ್" ಅಥವಾ ಚುಂಬಿಸು-ಕಳೆದುಕೊಳ್ಳು ಎಂದು ಕನ್ನಡದಲ್ಲಿ ಹೃಸ್ವವಾಗಿ ಕರೆಯಬಹುದಾದ ಈ ಪ್ರಕ್ರಿಯೆಯಿಂದ ನಿಜವಾಗಿಯೂ ಸಂಬಂಧ ಬಲಗೊಳ್ಳುತ್ತದೆ ಎಂದು ಕಂಡುಕೊಳ್ಳಲಾಗಿದೆ. ಚುಂಬಿಸುವಾಗ ಕಣ್ಣುಗಳನ್ನು ಮುಚ್ಚುವುದು ಯಾಕೆ?
ದಂಪತಿಗಳ ನಡುವಣ ವಿರಸ, ಸಂಗಾತಿಯ ಮಹತ್ವ, ಕೊಂಚಕಾಲದ ಬಳಿಕ ಲಭ್ಯವಾಗುವ ಸ್ಪರ್ಶಸುಖ ಮೊದಲಾದವು ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುವುದು ಮಾತ್ರವೇ ಅಲ್ಲ ಸ್ವಾರಸ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಇದನ್ನೇ ಅಲ್ಲವೇ ಬೇಂದ್ರೆಯವರು 'ಕಾಯೋದ್ರಾಗಿನ ಸುಖ ಕೂಡೂದ್ರಾಗ ಇಲ್ಲ' ಎಂದು ಹೇಳಿರುವುದು! ಬನ್ನಿ, ಈ ಸ್ವಾರಸ್ಯದ ಬಗ್ಗೆ ಕೆಲವು ಮಾಹಿತಿಗಳನ್ನು ನೋಡೋಣ...
ಮಾಹಿತಿ #1
ಯಾವಾಗ ನಿಮ್ಮ ಸಂಗಾತಿ ನಿಮ್ಮ ಕಣ್ಣಿನಿಂದ ದೂರಾಗುತ್ತಾರೋ, ಆಗ ಅವರನ್ನು ಕಾಯುವ, ಬರಮಾಡಿಕೊಳ್ಳುವ ಕಾತುರ ನಿಮ್ಮ ದೇಹದಲ್ಲಿ ಕೆಲವಾರು ರಾಸಾಯನಿಕ ಕ್ರಿಯೆಗಳು ಜರುಗುತ್ತವೆ.
ಮಾಹಿತಿ #1
ಸಂಗಾತಿಯ ಇರದಿರುವಿಕೆಯನ್ನು ಮೆದುಳು ಒಂದು ಶೂನ್ಯದಂತೆ ಪರಿಗಣಿಸಿ ಇತರ ಕೆಲಸಗಳಲ್ಲಿ ಉತ್ಸಾಹವನ್ನು ಕಡಿಮೆ ಮಾಡುತ್ತದೆ.
ಮಾಹಿತಿ #2
ಈ ಶೂನ್ಯವನ್ನು ತುಂಬಿಕೊಳ್ಳಲು ಮೆದುಳಿಗೆ ಹೊಸ ವಿಚಾರಗಳು ಬೇಕಾಗುತ್ತವೆ. ಹೆಚ್ಚಿನವರು ತಮ್ಮ ಸಂಗಾತಿಯೊಂದಿಗೆ ಕಳೆದ ಮಧುರ ಕ್ಷಣಗಳನ್ನು ನೆನಪಿಸಿಕೊಂಡು ಪುಳಕಿತಗೊಳ್ಳುತ್ತಾರೆ.
ಮಾಹಿತಿ #2
ಅಂದರೆ ಶೂನ್ಯವು ಸಂಗಾತಿಯ ಬಗೆಗಿನ ಒಳ್ಳೆಯ ಅಭಿಪ್ರಾಯಗಳನ್ನೇ ಹೆಚ್ಚು ತುಂಬಿಕೊಳ್ಳುವ ಮೂಲಕ ಸಂಗಾತಿಯ ಬಗ್ಗೆ ಗೌರವ ಹೆಚ್ಚುತ್ತದೆ. (ವ್ಯತಿರಿಕ್ತವಾಗಿ ಹಳಸುತ್ತಿರುವ ಸಂಬಂಧದಲ್ಲಿ ಈ ಜಾಗವನ್ನು ಸಂಗಾತಿಯ ಋಣಾತ್ಮಕ ಸಂಗತಿಗಳೇ ಆವರಿಸಿಕೊಳ್ಳುತ್ತವೆ)
ಮಾಹಿತಿ #3
ಈ ಶೂನ್ಯದ ಅವಧಿ ಹೆಚ್ಚಾದಷ್ಟೂ ಸಂಗಾತಿಯ ಬಗ್ಗೆ ಉತ್ತಮ ಅಭಿಪ್ರಾಯಗಳು ತುಂಬಿಕೊಳ್ಳುವುದು ಹೆಚ್ಚುತ್ತಾ ಹೋಗುವ ಮೂಲಕ ನಿಮ್ಮ ಸಂಗಾತಿಯ ಬಗ್ಗೆ ಗೌರವ, ತನ್ಮೂಲಕ ಪ್ರೀತಿಯೂ ಹೆಚ್ಚುತ್ತಾ ಹೋಗುತ್ತದೆ.
ಮಾಹಿತಿ #4
ವಿಶೇಷವಾಗಿ ಪುರುಷರು ತಮ್ಮ ಸಂಗಾತಿಯಿಂದ ದೂರವಿದ್ದಾಗ ಮೆದುಳಿನ ಶೂನ್ಯಭಾಗ ಸಂಗಾತಿಯ ಬಗ್ಗೆ ಯೋಚಿಸುತ್ತಲೇ ಮಲಗುವ ಕಾರಣ ಸ್ವಪ್ನಸ್ಖಲನಕ್ಕೆ ಒಳಗಾಗುತ್ತಾರೆ.
ಮಾಹಿತಿ #5
ಆದ್ದರಿಂದ ಪ್ರೀತಿಯನ್ನು ಹೆಚ್ಚಿಸಲು ಕೊಂಚ ವಿರಹವೂ ಅಗತ್ಯ ಎಂದು ಮನಃಶಾಸ್ತ್ರಜ್ಞರು ತಿಳಿಸುತ್ತಾರೆ.
ಮಾಹಿತಿ #5
ಅಂತೆಯೇ ಅತಿ ಹೆಚ್ಚು ಹತ್ತಿರವಿರುವ ದಂಪತಿಗಳ ನಡುವೆಯೂ ಪ್ರೀತಿ ಕಡಿಮೆಯಾಗಿರುವುದು ಕಂಡುಬಂದಿದೆ. ಆಹಾರದಿಂದ ಕೊಂಚ ಕಾಲ ದೂರವಿದ್ದಾಗ ಹಸಿವು ಹೆಚ್ಚುವಂತೆಯೇ ಪ್ರೀತಿಪಾತ್ರರಿಂದ ಆಗಾಗ ದೂರವಿರುವ ಮೂಲಕ ಪ್ರೀತಿಯೂ ಹೆಚ್ಚುತ್ತದೆ ಎಂದು ಸಾಬೀತುಪಡಿಸಲಾಗಿದೆ.