Just In
- 1 hr ago ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- 2 hrs ago ಮೀನ ರಾಶಿಯಲ್ಲಿ ಬುಧ ವಕ್ರೀಯ ಚಲನೆ ಮಾಡುವಾಗ ಈ 5 ರಾಶಿಯವರು ವೃತ್ತಿ ಜೀವನದ ಬಗ್ಗೆ ಜಾಗ್ರತೆ
- 3 hrs ago ದಿನ ಭವಿಷ್ಯ ಮಾರ್ಚ್ 29: ಶುಕ್ರವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
- 3 hrs ago ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
Don't Miss
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Movies "ನಾವು ದಕ್ಷಿಣ ಭಾರತದವರಾಗಿದ್ರೂ ಭಾಷೆ ಬರುತ್ತೆ, ಸುಂದರವಾಗಿಯೂ ಇದ್ದೇವೆ"; ನಟಿ ಪ್ರಿಯಾಮಣಿ
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆರೋಗ್ಯಕರ ಅಡುಗೆಗಾಗಿ ಈ ನಿಯಮಗಳು ತಿಳಿದಿರಲಿ
ಆರೋಗ್ಯಕ್ಕೆ ತಿನ್ನುವ ಅಡುಗೆ ಎಷ್ಟು ಮುಖ್ಯವೋ ಅದನ್ನು ತಯಾರಿಸುವ ವಿಧಾನ ಕೂಡ ಅಷ್ಟೇ ಮುಖ್ಯ ಎಂದು ಹೇಳಬೇಕಾಗಿಲ್ಲ. ಬರೀ ಅಡುಗೆ ಕಲಿತು ಪ್ರಯೋಜನವಿಲ್ಲ, ಸ್ಪೆಷಲ್ ಸ್ಕಿಲ್ ಅಂತಾರಲ್ಲ ಹಾಗೇ ಅಡುಗೆ ಟಿಪ್ಸ್ ಗೊತ್ತಿದ್ದರೆ ಅಡುಗೆಯನ್ನು ಸರಳವಾಗಿ, ರುಚಿಕರವಾಗಿ, ಆರೋಗ್ಯಕರವಾಗಿ ಮಾಡಬಹುದು.
ಅಡುಗೆ ಮಾಡುವಾಗ ಕೆಲವೊಂದು ನಿಯಮಗಳಿವೆ, ಅವುಗಳನ್ನು ಯಾವುದೇ ಕಾರಣಕ್ಕೆ ಮರೆಯಬಾರದು. ಆ ನಿಯಮಗಳಾವುವು, ಅವುಗಳನ್ನು ಏಕೆ ಪಾಲಿಸಬೇಕು ಅನ್ನುವುದನ್ನು ಸ್ಲೈಡ್ ನಲ್ಲಿ ವಿವರಿಸಿದ್ದೇವೆ ನೋಡಿ:
ಎಣ್ಣೆಯ ಪ್ರಮಾಣ
ಅಡುಗೆಯ ಬಳಸುವ ಎಣ್ಣೆಯ ಪ್ರಮಾಣದ ಪ್ರಭಾವ ನೇರವಾಗಿ ನಮ್ಮ ದೇಹದ ಮೇಲೆ ಬೀರುತ್ತದೆ. ಆದ್ದರಿಂದ ಎಣ್ಣೆಗೆ ಯಾವ ಎಣ್ಣೆ ಬಳಸುತ್ತಿದ್ದೇವೆ, ಎಷ್ಟು ಪ್ರಮಾಣದಲ್ಲಿ ಬಳಸುತ್ತಿದ್ದೇವೆ ಎನ್ನುವುದನ್ನು ಗಮನಿಸುವುದು ಒಳ್ಳೆಯದು. ಅಲ್ಲದೆ ಒಮ್ಮೆ ಬಳಸಿದ ಎಣ್ಣೆಯನ್ನು ಮರುಬಳಕೆ ಮಾಡದಿರುವುದು ಒಳ್ಳೆಯದು.
ತಾಜಾ ತರಕಾರಿಗಳು
ಅಡುಗೆಗೆ ಫ್ರಿಜ್ ನಲ್ಲಿಟ್ಟು ಶೀತಲೀಕರಣ ಮಾಡಿದ ಆಹಾರಗಳಿಗಿಂತ ತಾಜಾ ತರಕಾರಿಗಳನ್ನು ಬಳಸುವುದು ಒಳ್ಳೆಯದು.
ಪ್ರೆಶರ್ ಕುಕ್ಕರ್
ಅಡುಗೆ ಮಾಡುವಾಗ ಆಹಾರದಲ್ಲಿನ ಪೋಷಕಾಂಶ ಹಾಳಾಗದಂತೆ ಬೇಯಿಸಿ ತಿನ್ನುವುದು ಒಳ್ಳೆಯದು. ಪೋಷಕಾಂಶ ಹಾಳಾಗದಿರಲು ಪ್ರೆಶರ್ ಕುಕ್ಕರ್ ನಲ್ಲಿ ಬೇಯಿಸುವುದು ಕೂಡ ಒಂದು ಉತ್ತಮ ವಿಧಾನ.
ಉಳಿದ ಪದಾರ್ಥಗಳು
ಪದಾರ್ಥಗಳು ಉಳಿದರೆ ಅದನ್ನು ಹಾಗೇ ಇಟ್ಟು ಹಾಳು ಮಾಡುವ ಬದಲು ಅದರಿಂದ ಸೂಪ್, ಪಲ್ಯ ಅಂತ ಮಾಡಿ ತಿನ್ನುವುದು ಒಳ್ಳೆಯದು.
ಧಾನ್ಯಗಳನ್ನು ನೆನೆ ಹಾಕಿ
ಧಾನ್ಯಗಳನ್ನು ಅಡುಗೆ ಮಾಡುವ ಮುನ್ನ ಒಂದು ರಾತ್ರಿ ನೆನೆ ಹಾಕಿ. ಹೀಗೆ ಮಾಡಿದರೆ ಅದು ಬೇಯಲು ಸ್ವಲ್ಪ ಸಮಯ ತೆಗೆದುಕೊಳ್ಳುವುದರಿಂದ ಸಮಯ ಉಳಿಸಿದಂತಾಗುವುದು ಅಲ್ಲದೆ ಧಾನ್ಯದಲ್ಲಿರುವ ಬೇಡದ ರಾಸಾಯನಿಕಗಳು ತುಂಬಾ ಹೊತ್ತು ನೆನೆ ಹಿಟ್ಟು ತೊಳೆದಾಗ ಸಂಪೂರ್ಣವಾಗಿ ಹೋಗುವುದು.
ಸಿಪ್ಪೆ
ನಾವು ತುಂಬಾ ತರಕಾರಿ ಮತ್ತು ಹಣ್ಣುಗಳ ಸಿಪ್ಪೆಯನ್ನು ಬಿಸಾಡುತ್ತೇವೆ. ಆದರೆ ಸೇಬು, ದ್ರಾಕ್ಷಿ, ಸೀಬೆಕಾಯಿ ಈ ರೀತಿಯ ಹಣ್ಣುಗಳಲ್ಲಿ ಹಾಗೂ ಆಲೂಗಡ್ಡೆ, ಸೌತೆಕಾಯಿಯಂತಹ ತರಕಾರಿಗಳ ಸಿಪ್ಪೆಯಲ್ಲಿ ಅಧಿಕ ಪೋಷಕಾಂಶ ಇರುತ್ತದೆ. ಆದ್ದರಿಂದ ಸಿಪ್ಪೆ ಬಿಸಾಡುವ ಮುನ್ನ ಯೋಚಿಸಿ.
ಆಹಾರಗಳ ಆಯ್ಕೆ
ಯಾವ ರೀತಿಯ ಆಹಾರ ತಿನ್ನಬೇಕೆಂಬ ನಿಮ್ಮ ಆಯ್ಕೆ ಕೂಡ ಆರೊಗ್ಯದ ಮೇಲೆ ನೇರ ಪರಿಣಾಮ ಬೀಳುತ್ತದೆ. ವಿಟಮಿನ್ , ಪ್ರೊಟೀನ್, ನಾರಿನಂಶ, ಸ್ವಲ್ಪ ಕಾರ್ಬೋಹೈಡ್ರೇಟ್ ಈ ರೀತಿ ಎಲ್ಲಾ ಬಗೆಯ ಪೋಷಕಾಂಶವಿರುವ ಆಹಾರಗಳು ನಿಮ್ಮ ಅಡುಗೆಯಲ್ಲಿರಲಿ.