Just In
- 1 hr ago ಬೇಸಿಗೆಯಲ್ಲಿ ದಿನಾ ಎಳನೀರು ಕುಡಿದರೆ ಏನಾಗುತ್ತೆ? ಯಾವ ಸಮಯದಲ್ಲಿ ಎಳನೀರು ಕುಡಿಯಬೇಕು?
- 9 hrs ago ಮೀನ ರಾಶಿಗೆ ಮಂಗಳ ಸಂಚಾರ: ಈ 5 ರಾಶಿಯವರು ವೃತ್ತಿ ಬದುಕಿನಲ್ಲಿ ಜಾಗ್ರತೆ
- 9 hrs ago ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- 10 hrs ago ಬಿಲ್ಗೇಟ್ಸ್ ಟೀ ಕೇಳಿದ್ದಕ್ಕೆ ಟೀ ಮಾಡುತ್ತಿರುವ ನಾಯಿ: ಕ್ಯೂಟ್ ವೀಡಿಯೋ ವೈರಲ್
Don't Miss
- Technology ಅಗ್ಗದ ದರದಲ್ಲಿ 5G ಫೋನ್ ಖರೀದಿಸಬೇಕೆ?..ಈ ಆಫರ್ ಮಿಸ್ ಮಾಡ್ಕೋಬೇಡಿ!
- Automobiles Kia: ಬಹುನಿರೀಕ್ಷಿತ ಕಿಯಾ ಕ್ಲಾವಿಸ್ ಮೈಕ್ರೋ ಎಸ್ಯುವಿ ಶೀಘ್ರದಲ್ಲೇ ಬಿಡಗಡೆ
- News ಚಾಮರಾಜನಗರ ಜಿಲ್ಲೆಯ ಹಲವು ಗ್ರಾಮಗಳ ಜನರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ-ಇವರ ಬೇಡಿಕೆ ಏನು ಗೊತ್ತಾ?
- Movies ಅನುಷ್ಕಾ ಶೆಟ್ಟಿ ಬ್ಯಾಕ್ ಟು ಬ್ಯಾಕ್ ಯಾಕೆ ಸಿನಿಮಾ ಮಾಡ್ತಿಲ್ಲಾ? ನಿರ್ದೇಶಕರಿ ಕಂಡೀಷನ್ ಹಾಕ್ತಿದ್ದಾರಾ?
- Finance Bullet train: ಮೇಡ್ ಇನ್ ಇಂಡಿಯಾ ಬುಲೆಟ್ ಟ್ರೈನ್ಗೆ ಶೀಘ್ರ ಚಾಲನೆ, ಗಂಟೆಗೆ 250 ವೇಗ
- Sports India's Squad For T20 World Cup: ಟಿ20 ವಿಶ್ವಕಪ್ಗೆ ಸಂಭಾವ್ಯ 20 ಸದಸ್ಯರ ಭಾರತ ತಂಡ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಾಯಿ ಸಿಹಿ ಮಾಡುವ ಕುಂಬಳಕಾಯಿ ಹಲ್ವಾ
ದೀಪಗಳ ಹಬ್ಬ ದೀಪಾವಳಿಗೆ ಇನ್ನೇನು ಬೆರಳಣಿಕೆಯ ದಿನಗಳ ಕ್ಷಣಗಣನೆ ಮಾತ್ರ ಬಾಕಿ ಇದೆ. ಅದಾಗ್ಯೂ ದೀಪಗಳ ಹಬ್ಬ ಮನರಂಜನೆಯನ್ನು ಮಾತ್ರ ನೀಡುವುದಲ್ಲದೆ ಭಾವೈಕ್ಯದ ಪ್ರತೀಕ ಎಂದೆನಿಸಿದೆ. ಅಜ್ಞಾನದ ಕತ್ತಲೆಯನ್ನು ನಿವಾರಿಸಿ ಜ್ಞಾನ ಜ್ಯೋತಿಯನ್ನು ಬೆಳಗುವ ಈ ಹಬ್ಬ ಜಾತಿಯ ಸಂಕೋಲೆಯನ್ನು ಬೇಧಿಸಿ ಆಚರಿಸುವಂಥದ್ದಾಗಿದೆ, ಅಲ್ಲದೆ ಇಡೀ ವಿಶ್ವವೇ ಈ ಹಬ್ಬದ ಆಚರಣೆಯಲ್ಲಿ ತೊಡಗುತ್ತದೆ.
ಹೌದು, ಪ್ರತಿಯೊಬ್ಬ ಮಾನವನ ಒಳಗಿನ ಆತ್ಮವು ಬೆಳಕಿನಿಂದ ಕೂಡಿದ್ದರೆ ಮಾತ್ರ ಹೊರಪ್ರಪಂಚ ಸುಂದರವಾಗಿರುತ್ತದೆ. ಕತ್ತಲೆಯೆಂಬ ಮೌಢ್ಯ ನಮ್ಮ ಮನದಲ್ಲಿ ಮನೆಮಾಡಿರುವುದರಿಂದ ಅಜ್ಞಾನವೇ ಅಲ್ಲಿ ಮುಖ್ಯ ಸ್ಥಾನವನ್ನು ಪಡೆದುಕೊಂಡಿದೆ. ಇದು ದೂರಾದರೆ ಮಾತ್ರವೇ ಸುಂದರ ಪ್ರಪಂಚ ನಮಗೆ ಗೋಚರವಾಗುತ್ತದೆ. ಹಾಗಾಗಿ ಇಂತಹ ಕತ್ತಲೆಯನ್ನು ಹೋಗಲಾಡಿಸಿ ಬೆಳಕನ್ನು ಚೆಲ್ಲುವ ಹಬ್ಬವೇ ದೀಪಾವಳಿ ಹಬ್ಬದ ಹೆಗ್ಗಳಿಕೆ
ಇನ್ನು
ಹಬ್ಬದ
ಸಂಭ್ರಮಾಚರಣೆಯಲ್ಲಿ
ಹಬ್ಬದಡುಗೆಯ
ಜೊತೆಗೆ
ಏನಾದರೂ
ಸಿಹಿ
ಇರಲೇಬೇಕು
ಅಲ್ಲವೇ?
ದೀಪಾವಳಿಯ
ಸಂಭ್ರಮಕ್ಕಾಗಿ
ನೆಂಟರಿಷ್ಟರು
ಮನೆಗೆ
ಬಂದಿರುವಾಗ
ಏನಾದರೂ
ಪ್ರತ್ಯೇಕವಾದ
ಸಿಹಿಯನ್ನು
ತಯಾರಿಸಲೇಬೇಕಾಗುತ್ತದೆ.
ಅದಕ್ಕೆಂದೇ
ಇಂದಿನ
ಲೇಖನದಲ್ಲಿ
ಅತಿ
ವಿಶೇಷವಾದ
ಕುಂಬಳ
ಕಾಯಿ
ಹಲ್ವಾ
ರೆಸಿಪಿಯನ್ನು
ನಿಮ್ಮ
ಮುಂದಿಡುತ್ತಿದ್ದೇವೆ.
ನಿಮ್ಮ
ಬಂಧು
ಬಾಂಧವರಿಗೆ
ಇಷ್ಟವಾಗುವ
ಈ
ಹಲ್ವಾ
ರೆಸಿಪಿಯನ್ನು
ಕ್ಷಣದಲ್ಲೇ
ಎಲ್ಲರಿಗೂ
ಇಷ್ಟವಾಗುವ
ರೀತಿಯಲ್ಲಿ
ತಯಾರಿಸಬಹುದಾಗಿದೆ.
ಅದು
ಹೇಗೆ
ಎಂಬುದನ್ನು
ಇಲ್ಲಿ
ನೀಡುತ್ತಿದ್ದೇವೆ,
ಮುಂದೆ
ಓದಿ...
ಪ್ರಮಾಣ:
ಮೂವರಿಗೆ
ಒಂದು
ಹೊತ್ತಿಗಾಗುವಷ್ಟು
ಸಿದ್ಧತಾ
ಸಮಯ:
ಹತ್ತು
ನಿಮಿಷಗಳು
ತಯಾರಿಕಾ
ಸಮಯ:
ಹತ್ತು
ನಿಮಿಷಗಳು
ಅಗತ್ಯವಿರುವ
ಸಾಮಗ್ರಿಗಳು:
*ಸಿಹಿಗುಂಬಳ
ತುರಿದದ್ದು:
ಎರಡು
ಕಪ್
*ಹಾಲು:
ಒಂದು
ಕಪ್
*ಸಕ್ಕರೆ:
ಒಂದು
ಕಪ್
*ತುಪ್ಪ:
ಒಂದು
ಕಪ್
*ಒಣದ್ರಾಕ್ಷಿ
:
ಸುಮಾರು
ಹತ್ತು
*ಏಲಕ್ಕಿ
ಪುಡಿ:
ಕಾಲು
ಟೀ
ಚಮಚ
(ಅಥವಾ
ನಾಲ್ಕು
ದೊಡ್ಡ
ಗಾತ್ರದ
ಏಲಕ್ಕಿಯನ್ನು
ಪುಡಿಮಾಡಿ)
*ಗೋಡಂಬಿ:
ಸುಮಾರು
ಆರು
(ಬಿಳಿಯದ್ದು),
(ಲಭ್ಯವಿದ್ದರೆ
ಬಾದಾಮಿಯನ್ನೂ
ಸೇರಿಸಬಹುದು)
*ಕೇಸರಿ:
ಎರಡರಿಂದ
ಮೂರು
ಎಸಳು
ಸಾಕು.
ವಿಧಾನ:
1)
ಸಿಹಿಗುಂಬಳದ
ತುರಿಯನ್ನು
ಕುಕ್ಕರ್
ನಲ್ಲಿ
ಕೊಂಚವೇ
ನೀರಿನೊಡನೆ
ಎರಡು
ಸೀಟಿ
ಬರುವವರೆಗೆ
ಕುದಿಸಿ.
ಬಳಿಕ
ತಣಿಸಿ
ಮುಚ್ಚಳ
ತೆಗೆಯಿರಿ.
ಸಿಹಿಗುಂಬಳವನ್ನು
ಹೊರತೆಗೆದು
ಒಂದು
ತಟ್ಟೆಯ
ನಡುವೆ
ಹರಡಿ.
ತಟ್ಟೆ
ಕೊಂಚ
ಓರೆಯಾಗಿಸಿದರೆ
ಉಳಿದಿದ್ದ
ನೀರು
ಹರಿದು
ಹೋಗುತ್ತದೆ.
ಈ
ನೀರನ್ನು
ನಿವಾರಿಸಿ.
ಕೊಂಚ
ಒತ್ತಿ
ಉಳಿದ
ನೀರು
ಸಹಾ
ಹರಿದು
ಹೋಗುವಂತೆ
ಮಾಡಿ.
2)
ಒಂದು
ದಪ್ಪತಳದ
ಬಾಣಲೆ
ಅಥವಾ
ಪಾತ್ರೆಯಲ್ಲಿ
ಮಧ್ಯಮ
ಉರಿಯಲ್ಲಿ
ಎರಡು
ದೊಡ್ಡ
ಚಮಚ
ತುಪ್ಪವನ್ನು
ಕಾಯಿಸಿ.
ತುಪ್ಪ
ಬಿಸಿಯಾದ
ಕೂಡಲೇ
ಬೇಯಿಸಿದ
ಸಿಹಿಗುಂಬಳ
ತುರಿಯನ್ನು
ಹಾಕಿ
3)
ಕುಂಬಳಕಾಯಿ
ಪೂರ್ಣವಾಗಿ
ಬೇಯುವವರೆಗೆ
ತಿರುವುತ್ತಾ
ಇರಿ.
ಇದು
ಹುರಿಯಲು
ಸುಮಾರು
ಐದು
ನಿಮಿಷ
ಬೇಕಾಗಬಹುದು.
ಆದರೆ
ನಡುನಡುವೆ
ತಿರುವುತ್ತಾ
ಇರಬೇಕು,
ಇಲ್ಲದಿದ್ದರೆ
ತಳ
ಕಪ್ಪಾಗಿ
ರುಚಿ
ಹುಳಿಯಾಗುತ್ತದೆ.
4)
ಈಗ
ಹಾಲು
ಹಾಕಿ
ಕಲಕಿ.
ಬಳಿಕ
ಸಕ್ಕರೆ,
ಕೇಸರಿ
ಹಾಕಿ
ಕಲಕಿ.
ಹಾಲನ್ನು
ಕುಂಬಳದ
ತುರಿ
ಪೂರ್ಣವಾಗಿ
ಹೀರಿಕೊಂಡ
ಬಳಿಕ
ಉರಿಯನ್ನು
ಚಿಕ್ಕದಾಗಿಸಿ
ಇನ್ನೂ
ಎರಡು
ದೊಡ್ಡ
ಚಮಚ
ತುಪ್ಪವನ್ನು
ಹಾಕಿ
ತಿರುವಿ.
5)
ಈಗ
ಏಲಕ್ಕಿಪುಡಿ
ಹಾಕಿ
ತಿರುವಿ.
ತುಪ್ಪ
ಬಿಡುತ್ತಿದೆ
ಎಂದೆನ್ನಿಸಿದಾಗ
ಉರಿ
ಆರಿಸಿ
ಪಾತ್ರೆಯನ್ನು
ಕೆಳಗಿಳಿಸಿ
6)
ಇನ್ನೊಂದು
ಚಿಕ್ಕ
ಪಾತ್ರೆಯಲ್ಲಿ
ಇನ್ನೆರಡು
ದೊಡ್ಡ
ಚಮಚ
ತುಪ್ಪ
ಬಿಸಿಮಾಡಿ
ಗೋಡಂಬಿ,
ದ್ರಾಕ್ಷಿ
(ಮತ್ತು
ಬಾದಾಮಿ)
ಗಳನ್ನು
ಹಾಕಿ
ಕೆಂಪಗಾಗುವಷ್ಟು
ಹುರಿಯಿರಿ.
7)
ಹುರಿದ
ಗೋಡಂಬಿ
ದ್ರಾಕ್ಷಿಯನ್ನು
ಕುಂಬಳ
ತುರಿಗೆ
ಹಾಕಿ
ಮಿಶ್ರಣ
ಮಾಡಿ.
8)
ಬಿಸಿಬಿಸಿಯಿರುವಂತೆಯೇ
ಸೇವಿಸಿ