Just In
- 2 hrs ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 3 hrs ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- 4 hrs ago ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- 4 hrs ago ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
Don't Miss
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Movies ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶಿವರಾತ್ರಿ ವ್ರತಕ್ಕಾಗಿ ವಿಶೇಷ ರೆಸಿಪಿ: ಬಾಳೆಹಣ್ಣಿನ ಸಲಾಡ್
ಶಿವರಾತ್ರಿಯಂದು ವ್ರತವಿರಿಸುವ ಭಕ್ತರು ಕೆಲವು ಆಹಾರಗಳನ್ನು ಮಾತ್ರ ಸೇವಿಸುತ್ತಾರೆ.ಈ ಮಿತಿಯೊಳಗೆ ಬರುವ ಆಹಾರವೆಂದರೆ ಬಾಳೆಹಣ್ಣು. ಬಾಳೆಹಣ್ಣನ್ನು ಹಾಗೇ ತಿನ್ನುವುದಕ್ಕಿಂತ ಇದನ್ನು ಸಲಾಡ್ ರೂಪದಲ್ಲಿ ಸೇವಿಸುವುದೇ ಉತ್ತಮ
ಭಾರತದ ಪ್ರಮುಖ ಹಬ್ಬಗಳಲ್ಲೊಂದಾದ ಮಹಾಶಿವರಾತ್ರಿ ಪ್ರತಿ ರಾಜ್ಯದಲ್ಲಿಯೂ ಭಿನ್ನವಾಗಿ ಆಚರಿಸಲ್ಪಡುತ್ತದೆ. ಆಚರಣೆಯ ವಿಧಾನಗಳಲ್ಲಿ ಕೊಂಚ ಬದಲಾವಣೆ ಇದ್ದರೂ ಮೂಲವಿಧಾನ ಮಾತ್ರ ಒಂದೇ ಆಗಿದೆ. ಅದೆಂದರೆ ಉಪವಾಸ ಆಚರಣೆ ಮತ್ತು ಶಿವನ ಆರಾಧನೆ.
ಶಿವರಾತ್ರಿಯಂದು ವ್ರತವಿರಿಸುವ ಭಕ್ತರು ಕೆಲವು ಆಹಾರಗಳನ್ನು ಮಾತ್ರ ಸೇವಿಸುವ ಕಟ್ಟುಪಾಡು ಆಚರಿಸಬೇಕಾಗುತ್ತದೆ. ಈ ಮಿತಿಯೊಳಗೆ ಬರುವ ಆಹಾರವೆಂದರೆ ಬಾಳೆಹಣ್ಣು. ಉಪವಾಸದ ಅವಧಿಯಲ್ಲಿ ಬಾಳೆಹಣ್ಣನ್ನು ಸೇವಿಸುವ ಮೂಲಕ ಆಹಾರವಿಲ್ಲದ ದೇಹಕ್ಕೆ ಹೆಚ್ಚಿನ ಶಕ್ತಿ ನೀಡುತ್ತದೆ. ಮಹಾಶಿವರಾತ್ರಿಗೆ 5 ಸ್ಪೆಷೆಲ್ ರೆಸಿಪಿ
ಬಾಳೆಹಣ್ಣನ್ನು ಹಾಗೇ ತಿನ್ನುವುದಕ್ಕಿಂತ ಇದನ್ನು ಸಲಾಡ್ ರೂಪದಲ್ಲಿ ಸೇವಿಸುವುದೇ ಉತ್ತಮ. ಬನ್ನಿ, ಸುಲಭವಾಗಿ ಮತ್ತು ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ಹಾಗೂ ಕೆಲವೇ ಸಾಮಾಗ್ರಿಗಳು ಬೇಕಾಗುವ ಈ ಸಲಾಡ್ ತಯಾರಿಸುವುದು ಹೇಗೆ ಎಂಬುದನ್ನು ನೋಡೋಣ....
ಪ್ರಮಾಣ
*ನಾಲ್ವರಿಗೆ ಒಂದು ಹೊತ್ತಿಗಾಗುವಷ್ಟು
*ತಯಾರಿಕಾ ಸಮಯ: ಹತ್ತು ನಿಮಿಷಗಳು
ಅಗತ್ಯವಿರುವ ಸಾಮಾಗ್ರಿಗಳು
ಬಾಳೆಹಣ್ಣು - 2 (ಚಿಕ್ಕದಾಗಿ ತುಂಡರಿಸಿದ್ದು)
ಅಗತ್ಯವಿರುವ ಸಾಮಾಗ್ರಿಗಳು
ಪುದೀನಾ ಎಲೆಗಳು - ¼ ಕಪ್
ಅಗತ್ಯವಿರುವ ಸಾಮಾಗ್ರಿಗಳು
ಮೊಸರು - ¾ಕಪ್ (ಚಮಚದಲ್ಲಿ ಕಡೆದದ್ದು)
ಅಗತ್ಯವಿರುವ ಸಾಮಾಗ್ರಿಗಳು
ಸಕ್ಕರೆ - 2 ಚಿಕ್ಕ ಚಮಚ
ಅಗತ್ಯವಿರುವ ಸಾಮಾಗ್ರಿಗಳು
ಉಪ್ಪು - ರುಚಿಗನುಸಾರ
ಅಗತ್ಯವಿರುವ ಸಾಮಾಗ್ರಿಗಳು
ಕಾಳುಮೆಣಸಿನ ಅಥವಾ ಕರಿಮೆಣಸಿನ ಪುಡಿ - ರುಚಿಗನುಸಾರ
ಅಗತ್ಯವಿರುವ ಸಾಮಾಗ್ರಿಗಳು....
ಲಿಂಬೆ ರಸ - ಕೆಲವು ಹನಿಗಳು
ಅಗತ್ಯವಿರುವ ಸಾಮಾಗ್ರಿಗಳು....
ಸೌತೆ ಕಾಯಿ - ½ ಕಪ್ (ಕೊಂಚ ದೊಡ್ಡ ತುಂಡುಗಳಾಗಿಸಿದ್ದು)
ಅಗತ್ಯವಿರುವ ಸಾಮಾಗ್ರಿಗಳು....
ಶೇಂಗಾಬೀಜ- 1 ದೊಡ್ಡಚಮಚ (ಚೆನ್ನಾಗಿ ಹುರಿದು ಚಿಕ್ಕ ತುಂಡುಗಳನ್ನಾಗಿಸಿದ್ದು)
ಅಗತ್ಯವಿರುವ ಸಾಮಾಗ್ರಿಗಳು....
ಸಬ್ಬಸಿಗೆ ಸೊಪ್ಪು - ½ ದೊಡ್ಡ ಚಮಚ (ಚಿಕ್ಕದಾಗಿ ಹೆಚ್ಚಿದ್ದು)
ವಿಧಾನ
1. ಮೊದಲು ಮೊಸರನ್ನು ಒಂದು ದೊಡ್ಡ ಪಾತ್ರೆಯಲ್ಲಿ ಹಾಕಿ ಇದಕ್ಕೆ ಪುದೀನಾ ಎಲೆಗಳು, ಸಕ್ಕರೆ, ಉಪ್ಪು, ಕಾಳುಮೆಣಸು ಹಾಕಿ ಮಿಶ್ರಣ ಮಾಡಿ, ಪಕ್ಕಕ್ಕಿಡಿ.
2. ಈಗ ಇನ್ನೊಂದು ಪಾತ್ರೆಯಲ್ಲಿ ಬಾಳೆಹಣ್ಣು ಹಾಕಿ ಲಿಂಬೆರಸ ಸೇರಿಸಿ.
ವಿಧಾನ
3. ಇದಕ್ಕೆ ಸೌತೆ, ಉಪ್ಪು, ಶೇಂಗಾ ಮತ್ತು ಸಬ್ಬಸಿಗೆ ಸೊಪ್ಪು ಸೇರಿಸಿ. ಬಳಿಕ ಮೊದಲ ಪಾತ್ರೆಯಲ್ಲಿದ್ದ ಮೊಸರನ್ನು ಸೇರಿಸಿ.
4. ಎಲ್ಲಾ ಸಾಮಾಗ್ರಿಗಳು ಚೆನ್ನಾಗಿ ಬೆರಕೆಯಾಗುವಂತೆ ಚಿಮ್ಮಿಸಿ ಮಿಶ್ರಣಮಾಡಿ.
ಸವಿಯಾದ ಬಾಳೆಹಣ್ಣಿನ ಸಾಲಾಡ್ ಸಿದ್ಧ!
ಅಷ್ಟೇ, ನಿಮ್ಮ ಸವಿಯಾದ ಬಾಳೆಹಣ್ಣಿನ ಸಾಲಾಡ್ ಸಿದ್ಧ. ಈ ಶಿವರಾತ್ರಿಯಂದು ನಿಮ್ಮ ಉಪವಾಸದ ಸಮಯದಲ್ಲಿ ಹೆಚ್ಚು ಕಾಲ ಹಸಿವಾಗದೇ ನಿಮ್ಮ ಮನ ಪೂರ್ಣವಾಗಿ ಭಕ್ತಿಪರವಶಗೊಳ್ಳಲು ನೆರವಾಗಲು ಈ ಸಾಲಾಡ್ ಖಂಡಿತಾ ನೆರವಾಗುತ್ತದೆ.