Just In
- 32 min ago ವೃಷಭ ರಾಶಿಗೆ ಗುರು ಸಂಚಾರ: 12ನೇ ಮನೆಯಲ್ಲಿ ಗುರು ಮಿಥುನ ರಾಶಿಯ ಮೇಲೆ ಬೀರುವ ಪ್ರಭಾವ ಹೇಗಿರಲಿದೆ?
- 1 hr ago ಶಾಲೆಯನ್ನೇ ಬ್ಯೂಟಿ ಪಾರ್ಲರ್ ಮಾಡಿಕೊಂಡ ಪ್ರಿನ್ಸಿಪಾಲ್..! ಕೇಳಿದ ಶಿಕ್ಷಕಿ ಕೈ ಕಚ್ಚಿ ಹಲ್ಲೆ..!
- 14 hrs ago ವೃಷಭ ರಾಶಿಗೆ ಗುರು ಸಂಚಾರ: ಗುರು ನಿಮ್ಮ ಲಗ್ನ ಮನೆಯಲ್ಲಿ ಇರುವುದರಿಂದ ಇದರ ಪ್ರಭಾವ ಹೇಗಿರಲಿದೆ?
- 14 hrs ago ವೃಷಭ ರಾಶಿಗೆ ದೇವಗುರುವಿನ ಸಂಚಾರ: ಮೇಷ ರಾಶಿಗಳಿಗೆ ಇದರ ಪ್ರಭಾವ ಹೇಗಿರಲಿದೆ?
Don't Miss
- News BJP Big Campaign: ಏಪ್ರಿಲ್ 20 ರಿಂದ ರಾಜ್ಯಕ್ಕೆ ಬಿಜೆಪಿ ರಾಷ್ಟ್ರೀಯ ನಾಯಕರ ದಂಡು! ಯಾರ್ಯಾರು ಬರಲಿದ್ದಾರೆ?
- Automobiles Elevate: ಶ್ರೀಸಾಮಾನ್ಯನ ಬಿಎಂಡಬ್ಲ್ಯೂ.. ಹೋಂಡಾ ಎಲಿವೇಟ್ ಖರೀದಿಸಬೇಕೇ? ಆನ್-ರೋಡ್ ಬೆಲೆ ಎಷ್ಟು, EMI ಏನು?
- Finance ಆಪ್ ಸ್ಟೋರ್ನಿಂದ ವಾಟ್ಸಾಪ್, ಥ್ರೆಡ್ ತೆಗೆದುಹಾಕಿದ ಆಪಲ್!
- Sports IPL 2024: ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದರೂ ಹಾರ್ದಿಕ್ ಪಾಂಡ್ಯಗೆ ಭಾರೀ ಮೊತ್ತದ ದಂಡ!
- Technology Google Maps: ಗೂಗಲ್ ಮ್ಯಾಪ್ಸ್ ನಲ್ಲಿ ಹೊಸ ಸೌಲಭ್ಯ! ಹತ್ತಿರದ EV ಚಾರ್ಜಿಂಗ್ ಸ್ಟೇಷನ್ ಸರ್ಚ್ ಬಲು ಸುಲಭ
- Movies ಹರ್ಷಿಕಾ ಪೂಣಚ್ಚ- ಭುವನ್ ಪೊನ್ನಣ್ಣ ಮೇಲೆ ಹಲ್ಲೆ; "ನಮ್ಮ ಬೆಂಗಳೂರಿನಲ್ಲಿ ನಾವು ಎಷ್ಟು ಸುರಕ್ಷಿತ?" ಎಂದ ನಟಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಡ್ರೈ ಫ್ರೂಟ್ಸ್ ಪಲಾವ್: ಒಮ್ಮೆ ಮಾಡಿ, ಸವಿದು ನೋಡಿ!
ಮಕ್ಕಳಿಗೆ ಹಸಿವನ್ನು ಹೆಚ್ಚು ಹೊತ್ತು ತಡೆದು ಹಿಡಿಯಲಿಕ್ಕಾಗುವುದಿಲ್ಲ. ಅಂತೆಯೇ ಸಂಜೆ ಆಟವಾಡಿ ಮನೆಯೊಳಕ್ಕೆ ಬರುತ್ತಿದ್ದಂತೆಯೇ 'ಅಮ್ಮಾ, ತಿನ್ನಲಿಕ್ಕೇನಾದರೂ ಕೊಡು' ಎಂಬ ಬೇಡಿಕೆಯನ್ನು ಹೊತ್ತೇ ಒಳಬರುತ್ತಾರೆ. ನಿಮ್ಮಿಂದ ಕೊಂಚ ತಡವಾಯಿತೋ, ತಟ್ಟೆಗಳಿಗೆ ಚಮಚದಿಂದ ಬಡಿಯಲು ತೊಡಗುತ್ತಾರೆ.
ಈ ಸಮಯದಲ್ಲಿ ಹೆಚ್ಚಿನ ತಾಯಂದಿರು ಸಿದ್ಧ ಆಹಾರಗಳನ್ನು ಅಥವಾ ಚಾಕಲೇಟು, ಬಿಸ್ಕತ್ ಮೊದಲಾದ ತಿಂಡಿಗಳನ್ನೂ ತಿನ್ನಿಸಿ ಮಕ್ಕಳನ್ನು ಸುಮ್ಮನಾಗಿಸುತ್ತಾರೆ. ಆದರೆ ಅಧಿಕ ಕ್ಯಾಲೋರಿಗಳನ್ನು ಹೊಂದಿರುವ ಈ ಆಹಾರಗಳು ಮಕ್ಕಳ ಸ್ಥೂಲಕಾಯಕ್ಕೆ ಮೂಲವಾಗಿವೆ. ಇದರ ಬದಲಿಗೆ ಪೌಷ್ಟಿಕವೂ, ಮಕ್ಕಳು ಇಷ್ಟಪಡುವಂತಹದ್ದೂ, ಶೀಘ್ರವೇ ಸಿದ್ಧವಾಗುವಂತಹದ್ದೂ ಆದ ತಿಂಡಿಯನ್ನು ಮಕ್ಕಳಿಗೆ ತಿನಿಸುವುದು ಆರೋಗ್ಯಕರವಾಗಿದೆ.
ಈ ಹೊತ್ತಿಗಾಗಿ ಡ್ರೈ ಫ್ರೂಟ್ಸ್ ಪಲಾವ್ ಅತ್ಯುತ್ತಮವಾದ ಆಯ್ಕೆಯಾಗಿದೆ.ಇದರಲ್ಲಿ ಉಪಯೋಗಿಸಲಾಗಿರುವುದು ಅನ್ನ, ಸುಲಭವಾದ ಮನೆಯಲ್ಲಿಯೇ ಲಭ್ಯವಿರುವ ಸಾಂಬಾರ ಪದಾರ್ಥಗಳು ಹಾಗೂ ಒಂದು ಹಿಡಿಯಷ್ಟು ನಿಮ್ಮಿಷ್ಟದ ಒಣಫಲಗಳು. ಒಣಫಲಗಳ ಸ್ವಾದ ಹೆಚ್ಚಿಸಲು ಸಾಂಬಾರ ಪದಾರ್ಥಗಳ ಪ್ರಮಾಣವನ್ನು ಕೊಂಚ ಕಡಿಮೆ ಮಾಡಲಾಗಿದೆ. ಈ ಬಟಾಣಿ ಪಲಾವ್ ಮಾಡುವುದು ಬಲು ಸುಲಭ
ಇದು ಕೇವಲ ಮಕ್ಕಳಿಗೆ ಮಾತ್ರವಲ್ಲ, ಹಿರಿಯರಿಗೂ ಅಚ್ಚುಮೆಚ್ಚಿನದ್ದಾಗುವುದರಲ್ಲಿ ಅನುಮಾನವೇ ಇಲ್ಲ. ಅದರಲ್ಲೂ ಈ ಪಲಾವ್ ಅನ್ನು ಕೊಂಚ ಹೆಚ್ಚು ಹೊತ್ತು ಬಿಸಿಯಾಗಲು ಇರಿಸಿದರೆ ಇನ್ನಷ್ಟು ರುಚಿಕರವಾಗಿರುವುದು ಕಂಡುಬಂದಿದೆ. ಇನ್ನೇಕೆ ತಡ? ಸ್ವಾದಿಷ್ಟವಾದ ಪಲಾವ್ ಮಾಡುವ ವಿಧಾನವನ್ನು ಕೆಳಗೆ ನೀಡಲಾಗಿದೆ.
ಪ್ರಮಾಣ:
ಮೂವರಿಗೆ
ಒಂದು
ಹೊತ್ತಿಗಾಗುವಷ್ಟು
ಸಿದ್ಧತಾ
ಸಮಯ:
ಹದಿನೈದು
ನಿಮಿಷಗಳು
ತಯಾರಿಕಾ
ಸಮಯ:
ಇಪ್ಪತ್ತು
ನಿಮಿಷಗಳು.
ಅಗತ್ಯವಿರುವ
ಸಾಮಾಗ್ರಿಗಳು
*ಅಕ್ಕಿ-
ಎರಡು
ಕಪ್
(ಬಾಸ್ಮತಿ
ಉತ್ತಮ
ಆಯ್ಕೆ.
ಇಲ್ಲದಿದ್ದರೆ
ಬಿರಿಯಾನಿಗೆ
ಸೂಕ್ತವಾದ
ಯಾವುದೇ
ಅಕ್ಕಿ)-ಚೆನ್ನಾಗಿ
ತೊಳೆದು
ನೀರು
ಬಸಿದು
ಒಣಗಿಸಿದ್ದು.
*ಬಾದಾಮಿ
-
ಹತ್ತು
(ಒಂದೊಂದನ್ನು
ನಾಲ್ಕು
ತುಂಡಾಗಿಸಿ)
*ಒಣದ್ರಾಕ್ಷಿ
-
ಹತ್ತು
*ಗೋಡಂಬಿ
-
ಹತ್ತು
(ಒಂದೊಂದನ್ನು
ಆರು
ತುಂಡಾಗಿಸಿ)
*ತುಪ್ಪ
-
ಎರಡು
ದೊಡ್ಡಚಮಚ
*ಕಾಳುಮೆಣಸು
(ಇಡಿಯದ್ದು)
-
ಒಂದು
ಚಿಕ್ಕ
ಚಮಚ
*ಉಪ್ಪು-
ರುಚಿಗನುಸಾರ
*ದಾಲ್ಚಿನ್ನಿ
ಎಲೆ
-
ಎರಡು
(ಇಡಿಯ)
*ಕೇಸರಿ-ಒಂದು
ಚಿಟಿಕೆ
ವಿಧಾನ:
1)
ನಾನ್
ಸ್ಟಿಕ್
ಪಾತ್ರೆಯೊಂದರಲ್ಲಿ
ಕೊಂಚ
ನೀರು
ತುಂಬಿಸಿ
ಕುದಿಸಿ
ಬದಿಗಿಡಿ.
2)
ಇನ್ನೊಂದು
ಪಾತ್ರೆಯಲ್ಲಿ
ತುಪ್ಪ
ಹಾಕಿ
ಮಧ್ಯಮ
ಉರಿಯಲ್ಲಿ
ಬಿಸಿಮಾಡಿ.
ತುಪ್ಪ
ಕರಗುತ್ತಿದ್ದಂತೆಯೇ
ದಾಲ್ಚಿನ್ನಿ
ಎಲೆ,
ಕಾಳುಮೆಣಸು,
ಬಾದಾಮಿ,
ಗೋಡಂಬಿ,
ದ್ರಾಕ್ಷಿ
ಹಾಕಿ
ಹುರಿಯಿರಿ.
ಕೊಂಚ
ಕೆಂಪು
ಬಣ್ಣ
ಬರುತ್ತಿದ್ದಂತೆಯೇ
ಇದಕ್ಕೆ
ಅಕ್ಕಿ
ಹಾಕಿ
ಸುಮಾರು
ಎರಡು
ನಿಮಿಷಗಳ
ವರೆಗೆ
ಹುರಿಯಿರಿ.
3)
ಈಗ
ಉಪ್ಪು
ಮತ್ತು
ಕೇಸರಿ
ಹಾಕಿ
ಅರ್ಧ
ನಿಮಿಷ
ಹುರಿಯಿರಿ.
4)
ಇದಕ್ಕೆ
ಕುದಿಸಿಟ್ಟ
ನೀರಿನಿಂದ
ಮೂರು
ಕಪ್
ನೀರು
ಹಾಕಿ
ಸ್ವಲ್ಪ
ತಿರುವಿ
ಕುದಿಯಲು
ಬಿಡಿ
5)
ಕುದಿ
ಬಂದ
ಬಳಿಕ
ಉರಿಯನ್ನು
ಚಿಕ್ಕದಾಗಿಸಿ
ಪಾತ್ರೆಯ
ಮುಚ್ಚಳ
ಮುಚ್ಚಿ
ಹಬೆಯಲ್ಲಿ
ಅಕ್ಕಿ
ಬೇಯುವಂತೆ
ಮಾಡಿ.
6)
ಸುಮಾರು
ನಾಲ್ಕು
ಅಥವಾ
ಐದು
ನಿಮಿಷದ
ಬಳಿಕ
ಅಕ್ಕಿ
ಬೆಂದಿದೆಯೇ
ಪರೀಕ್ಷಿಸಿ
ಬೆಂದಿದ್ದರೆ
ಉರಿಯನ್ನು
ನಂದಿಸಿ
ಮುಚ್ಚಳವನ್ನು
ಇನ್ನೂ
ಕೊಂಚ
ಹೊತ್ತು
ಮುಚ್ಚಿಯೇ
ಇರಿಸಿ.
7)
ಮಕ್ಕಳು
ಒಳಬಂದ
ಬಳಿಕ
ಕೈಕಾಲುಗಳನ್ನು
ಸ್ವಚ್ಛವಾಗಿ
ತೊಳೆದುಕೊಳ್ಳಲು
ಹೇಳಿ
ಆ
ವೇಳೆಯಲ್ಲಿ
ಕೆಲವು
ತರಕಾರಿಗಳನ್ನು
ಚಿಕ್ಕದಾಗಿ
ಹೆಚ್ಚಿ
ಕೊತ್ತಂಬರಿ,
ಮೊಸರು
ಹಸಿಮೆಣಸು
ಹಾಕಿ
ಕೋಸಂಬರಿ
ಮಾಡಿ.
ಮಕ್ಕಳು
ತುಂಬಾ
ಇಷ್ಟಪಟ್ಟು
ಈ
ಪಲಾವನ್ನು
ತಿನ್ನುವುದನ್ನು
ನೋಡಿ
ತೃಪ್ತಿಪಟ್ಟುಕೊಳ್ಳಿ.
ಇದರ
ಬದಲಿಗೆ
ಸಿಹಿ
ರಾಯತಾವನ್ನೂ
ಬಡಿಸಬಹುದು.
ಸಲಹೆ:
1)ಒಣಫಲಗಳ
ಜೊತೆಗೇ
ಶೇಂಗಾಬೀಜವನ್ನೂ
ಸೇರಿಸಬಹುದು.
ಆದರೆ
ಇದನ್ನು
ಮೊದಲೇ
ಕೊಂಚ
ಹುರಿದಿಟ್ಟುಕೊಂಡಿರಬೇಕು,ಏಕೆಂದರೆ
ಬಾದಾಮಿ
ಗೋಡಂಬಿಗಳಷ್ಟು
ಬೇಗ
ಶೇಂಗಾಬೀಜ
ಕೆಂಪಗಾಗುವುದಿಲ್ಲ.
ಅದರಲ್ಲೂ
ಮರಳಿನಲ್ಲಿ
ಹುರಿದ
ಶೇಂಗಾಬೀಜ
ಈ
ಪಲಾವಿಗೆ
ಹೇಳಿ
ಮಾಡಿಸಿದ್ದುದಾಗಿದೆ.
2)
ಅಲಂಕಾರ
ಹೆಚ್ಚಿಸಲು
ಬೇಯಿಸಿದ
ಕ್ಯಾರೆಟ್,
ಕೊತ್ತಂಬರಿ
ಸೊಪ್ಪು,
ಚಿಕ್ಕದಾಗಿ
ಕತ್ತರಿಸಿದ
ಈರುಳ್ಳಿಯ
ಎಲೆ
ಮೊದಲಾದವುಗಳನ್ನೂ
ಸೇರಿಸಬಹುದು.
3)
ಅಣಬೆ
ಇದ್ದರೆ
ಪ್ರತ್ಯೇಕವಾಗಿ
ಬೇಯಿಸಿ
ಅಕ್ಕಿ
ಬೇಯುವ
ಹೊತ್ತಿನಲ್ಲಿ
ಸೇರಿಸಬಹುದು.