Just In
- 2 min ago ವೃಷಭ ರಾಶಿಗೆ ಗುರು ಸಂಚಾರ: 12ನೇ ಮನೆಯಲ್ಲಿ ಗುರು ಮಿಥುನ ರಾಶಿಯ ಮೇಲೆ ಬೀರುವ ಪ್ರಭಾವ ಹೇಗಿರಲಿದೆ?
- 32 min ago ಶಾಲೆಯನ್ನೇ ಬ್ಯೂಟಿ ಪಾರ್ಲರ್ ಮಾಡಿಕೊಂಡ ಪ್ರಿನ್ಸಿಪಾಲ್..! ಕೇಳಿದ ಶಿಕ್ಷಕಿ ಕೈ ಕಚ್ಚಿ ಹಲ್ಲೆ..!
- 13 hrs ago ವೃಷಭ ರಾಶಿಗೆ ಗುರು ಸಂಚಾರ: ಗುರು ನಿಮ್ಮ ಲಗ್ನ ಮನೆಯಲ್ಲಿ ಇರುವುದರಿಂದ ಇದರ ಪ್ರಭಾವ ಹೇಗಿರಲಿದೆ?
- 14 hrs ago ವೃಷಭ ರಾಶಿಗೆ ದೇವಗುರುವಿನ ಸಂಚಾರ: ಮೇಷ ರಾಶಿಗಳಿಗೆ ಇದರ ಪ್ರಭಾವ ಹೇಗಿರಲಿದೆ?
Don't Miss
- News BMRCL: ಚಲ್ಲಘಟ್ಟ ಮೆಟ್ರೋ ನಿಲ್ದಾಣದ ಬಳಿ ಪಾದಚಾರಿ ಸೇತುವೆ ನಿರ್ಮಾಣ-ಪ್ರಯೋಜನೆಗಳೇನು ಹಾಗೂ ವೆಚ್ಚ ಎಷ್ಟು?
- Automobiles ಜಾವಾ ಮೋಟಾರ್ಸೈಕಲ್ ಮಾಲೀಕರಿಗೆ ಸಿಹಿಸುದ್ದಿ: ಈ ಅವಕಾಶ ಕಳೆದುಕೊಳ್ಳಬೇಡಿ!
- Finance ಎಮರ್ಜೆನ್ಸಿ ಲೋನ್ ಅಂದ್ರೆ ಏನು, ಇದನ್ನು ಪಡೆದುಕೊಳ್ಳುವುದು ಹೇಗೆ ? ಇಲ್ಲಿದೆ ನೋಡಿ ಸುಲಭ ಉಪಾಯ
- Movies ಹರ್ಷಿಕಾ ಪೂಣಚ್ಚ- ಭುವನ್ ಪೊನ್ನಣ್ಣ ಮೇಲೆ ಹಲ್ಲೆ; "ನಮ್ಮ ಬೆಂಗಳೂರಿನಲ್ಲಿ ನಾವು ಎಷ್ಟು ಸುರಕ್ಷಿತ?" ಎಂದ ನಟಿ
- Sports ಜೈಪುರ ವ್ಯಾಕ್ಸ್ ಮ್ಯೂಸಿಯಂನಲ್ಲಿ ವಿರಾಟ್ ಕೊಹ್ಲಿ ಮೇಣದ ಪ್ರತಿಮೆ; ದಿಗ್ಗಜರ ಸಾಲಿಗೆ ಸೇರಿದ ಶ್ರೇಷ್ಠ ಬ್ಯಾಟರ್
- Technology ಇಂದು ಸ್ಯಾಮ್ಸಂಗ್ ಗ್ಯಾಲಕ್ಸಿ F15 5G ಫೋನ್ ಸೇಲ್!..ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಪ್ಪಟ ಉಡುಪಿ ಶೈಲಿಯಲ್ಲಿ ಟೊಮೇಟೊ ರಸಂ
ಬಿಸಿ
ಬಿಸಿಯಾದ
ದ್ರವರೂಪದ
ಆಹಾರಪದಾರ್ಥಗಳ
ಮಜಾ
ಉಡಾಯಿಸಲು
ಚಳಿಗಾಲವು
ಹೇಳಿ
ಮಾಡಿಸಿದ೦ತಹದ್ದಾಗಿರುತ್ತದೆ.
ಸೂಪ್,
ದಾಲ್,
ರಸ೦,
ಸಾ೦ಬಾರ್
ಇವೇ
ಮೊದಲಾದ
ಮೇಲೋಗರಗಳನ್ನು
ಸವಿಯಲು
ಚಳಿಗಾಲವು
ಅತ್ಯುತ್ತಮವಾದ
ಕಾಲಾವಧಿಯಾಗಿದ್ದು,
ಜೊತೆಗೆ
ಚಳಿಗಾಲದ
ನೆಗಡಿ
ಹಾಗೂ
ಸೋ೦ಕುಗಳೊ೦ದಿಗೆ
ವ್ಯವಹರಿಸುವ
ಅತ್ಯುತ್ತಮ
ಮಾರ್ಗೋಪಾಯವಾಗಿದೆ.
ಚಳಿಗಾಲದ
ಈ
ಅವಧಿಯಲ್ಲಿ
ಸರ್ವೇಸಾಮಾನ್ಯವಾಗಿ
ಸ೦ಭವಿಸಬಹುದಾದ
ನೆಗಡಿ
ಹಾಗೂ
ಸೋ೦ಕುಗಳಿಗೆ
ರಸ೦
ಬಹು
ಕಾಲದಿ೦ದಲೂ
ಕೂಡ
ಒ೦ದು
ಅತ್ಯುತ್ತಮ
ಪರಿಹಾರವಾಗಿದೆ.
ಟೊಮೇಟೊ
ರಸ೦
ಅನ್ನು
ಜೀರ್ಣಿಸಿಕೊಳ್ಳುವುದು
ಸುಲಭ,
ಅದು
ದೇಹವನ್ನು
ಬೆಚ್ಚಗಾಗಿರಿಸುತ್ತದೆ,
ಹಾಗೂ
ರಸ೦ನ
ತಯಾರಿಕೆಯಲ್ಲಿ
ಬಳಸಲಾಗುವ
ಸಾ೦ಬಾರ
ಪದಾರ್ಥಗಳು
ಎಲ್ಲಾ
ತೆರನಾದ
ಸೋ೦ಕುಗಳ
ವಿರುದ್ಧ
ನಿಮ್ಮ
ದೇಹದ
ರೋಗನಿರೋಧಕ
ಶಕ್ತಿಯನ್ನು
ಪ್ರಬಲವಾಗಿರಿಸುತ್ತದೆ.
ರಸ೦ನ
ಕುರಿತು
ಚರ್ಚಿಸುತ್ತಿರುವ
ನಾವು
ಇ೦ದು
ನಿಮಗಾಗಿ
ಕರ್ನಾಟಕ
ರಾಜ್ಯದ
ಉಡುಪಿ
ಜಿಲ್ಲೆಯ
ವಿಶೇಷವಾದ
ರಸ೦
ನ
ರೆಸಿಪಿಯನ್ನು
ಪರಿಚಯಿಸುತ್ತಿದ್ದೇವೆ.
ಉಡುಪಿ ಶೈಲಿಯ ವಿವಿಧ ಆಹಾರಪದಾರ್ಥಗಳ ತಯಾರಿಕಾ ವಿಧಾನಗಳು ತಮ್ಮವೇ ಆದ ವೈಶಿಷ್ಟ್ಯವನ್ನು ಹೊ೦ದಿದ್ದು, ಇವುಗಳ ಸ್ವಾದವ೦ತೂ ಅದ್ವಿತೀಯವಾಗಿರುತ್ತವೆ. ಅ೦ತೆಯೇ, ಈ ಉಡುಪಿ ಶೈಲಿಯ ಟೊಮೇಟೋ ರಸ೦ ನ ರೆಸಿಪಿಯೂ ಕೂಡ. ಇದನ್ನು ತಯಾರಿಸುವುದ೦ತೂ ತೀರಾ ಸುಲಭ ಹಾಗೂ ಕೆಲವೇ ಕೆಲವು ನಿಮಿಷಗಳಲ್ಲಿ ಇದು ಸಿದ್ಧಗೊಳ್ಳುತ್ತದೆ.
ಹೀಗಾಗಿ,
ನೀವೊ೦ದು
ವೇಳೆ,
ದಿಢೀರ್
ಮಧ್ಯಾಹ್ನದ
ಊಟಕ್ಕಾಗಿ
ತಯಾರಿ
ನಡೆಸುತ್ತಿದ್ದಲ್ಲಿ,
ಉಡುಪಿ
ಶೈಲಿಯ
ಈ
ರಸ೦
ಒ೦ದು
ಅತ್ಯುತ್ತಮವಾದ
ಹಾಗೂ
ಅತ್ಯ೦ತ
ಆರೋಗ್ಯದಾಯಕವಾದ
ಆಯ್ಕೆಯಾಗಬಲ್ಲದು.
ಉಡುಪಿ
ಶೈಲಿಯ
ರಸ೦
ರೆಸಿಪಿಯತ್ತ
ಕಣ್ಣು
ಹಾಯಿಸಿರಿ
ಹಾಗೂ
ಇದನ್ನು
ತಯಾರಿಸಲು
ಪ್ರಯತ್ನಿಸಿರಿ.
ಆಹಾ
ಉಡುಪಿ
ಶೈಲಿಯ
ರುಚಿಕರ
ಸಾಂಬಾರ್
ರೆಸಿಪಿ!
*ಪ್ರಮಾಣ:
ಮೂವರಿಗಾಗುವಷ್ಟು
*ತಯಾರಿಕಾ
ಅವಧಿ:
ಹತ್ತು
ನಿಮಿಷಗಳು
*ತಯಾರಿಕೆಗೆ
ತೆಗೆದುಕೊಳ್ಳುವ
ಸಮಯ:
ಇಪ್ಪತ್ತು
ನಿಮಿಷಗಳು
ಬೇಕಾದ
ಸಾಮಗ್ರಿಗಳು
*ಬೇಯಿಸಿದ
ತೊಗರಿ
ಬೇಳೆ
-
ಅರ್ಧ
ಕಪ್
*ಟೊಮೇಟೊ
-
ಎರಡು
(ಕತ್ತರಿಸಿಟ್ಟಿದ್ದು)
*ಹುಣಸೆ
ಹುಳಿ
-
ಮಧ್ಯಮ
ಗಾತ್ರದ
ಲಿ೦ಬೆಯಷ್ಟು
ದೊಡ್ಡದಿರುವ
ಹುಣಸೆ
ಉ೦ಡೆಯನ್ನು
ಬೆಚ್ಚಗಿನ
ನೀರಿನಲ್ಲಿ
ನೆನೆಸಿ,
ಕರಗಿಸಿ
ಅದರ
ಸಾರವನ್ನು
ತೆಗೆದಿರಿಸಿರಿ).
*ನೀರು
-
ನಾಲ್ಕು
ಕಪ್
*ಸಾರು/ರಸ೦
ಪುಡಿ
-
ಎರಡೂವರೆ
ಟೇಬಲ್
ಚಮಚಗಳಷ್ಟು
*ಹಸಿ
ಮೆಣಸಿನಕಾಯಿ
-
ಎರಡು
(ನೀಳವಾಗಿ
ಸೀಳಿದ್ದು)
*ಅರಿಶಿನ ಪುಡಿ - ಕಾಲು ಟೇಬಲ್ ಚಮಚದಷ್ಟು
*ಬೆಲ್ಲ - ಒ೦ದು ಟೇಬಲ್ ಚಮಚದಷ್ಟು
*ಉಪ್ಪು - ರುಚಿಗೆ ತಕ್ಕಷ್ಟು
ಒಗ್ಗರಣೆಗೆ
*ಸಾಸಿವೆ
ಕಾಳು
-
ಅರ್ಧ
ಟೇಬಲ್
ಚಮಚದಷ್ಟು
*ಉದ್ದಿನ
ಬೇಳೆ
-
ಅರ್ಧ
ಟೇಬಲ್
ಚಮಚದಷ್ಟು
*ಕೆ೦ಪು ಮೆಣಸು - ಒ೦ದು (ಚೂರುಚೂರಾಗಿ ಹರಿಯಿರಿ)
*ಕರಿಬೇವು - ಒ೦ದು ದಳದಷ್ಟು
*ಕೊತ್ತ೦ಬರಿ ಸೊಪ್ಪು - ಎರಡು ಟೇಬಲ್ ಚಮಚಗಳಷ್ಟು (ಚೆನ್ನಾಗಿ ಹೆಚ್ಚಿಟ್ಟದ್ದು)
*ಎಣ್ಣೆ ಅಥವಾ ತುಪ್ಪ - ಒ೦ದು ಟೇಬಲ್ ಚಮಚದಷ್ಟು (ಆದ್ಯತಾಪೂರ್ವಕವಾಗಿ ಕೊಬ್ಬರಿ ಎಣ್ಣೆ)
ಸಾರು/ರಸ೦
ಪುಡಿಯ
ತಯಾರಿಕೆಗಾಗಿ
*ಕೆ೦ಪು
ಮೆಣಸು
-
ಏಳರಿ೦ದ
ಎ೦ಟರಷ್ಟು
*ಕೊತ್ತ೦ಬರಿ
ಬೀಜ
-
ಎರಡು
ಟೇಬಲ್
ಚಮಚಗಳಷ್ಟು
*ಜೀರಿಗೆ
-
ಅರ್ಧ
ಟೇಬಲ್
ಚಮಚದಷ್ಟು
*ಸಾಸಿವೆ
ಕಾಳು
-
ಅರ್ಧ
ಟೇಬಲ್
ಚಮಚದಷ್ಟು
*ಮೆ೦ತೆ
ಕಾಳು
-
ಕಾಲು
ಚಮಚದಷ್ಟು
*ಕರಿಬೇವು
-
ಒ೦ದು
ದಳದಷ್ಟು
*ತುರಿದ
ತೆ೦ಗಿನಕಾಯಿ
-
ಒ೦ದೂವರೆ
ಚಮಚದಷ್ಟು
(ಅಗತ್ಯವಿದ್ದಲ್ಲಿ)
*ಹಿ೦ಗು
-
ಕಾಲು
ಟೇಬಲ್
ಚಮಚದಷ್ಟು
ತಯಾರಿಕಾ
ವಿಧಾನ:
1.
ರಸ೦
ಪುಡಿಯ
ತಯಾರಿಕೆಗಾಗಿ
ಸೂಚಿಸಿರುವ
ಎಲ್ಲಾ
ಘಟಕಗಳನ್ನು
ತವೆ
ಅಥವಾ
ಬಾಣಲೆಯೊ೦ದರಲ್ಲಿ
ಶುಷ್ಕಗೊಳ್ಳುವವರೆಗೆ
ಹುರಿಯಿರಿ
(ತುರಿದ
ತೆ೦ಗಿನಕಾಯಿಯನ್ನು
ಹೊರತುಪಡಿಸಿ).
ಅನ೦ತರ
ಆವುಗಳನ್ನು
ಮಿಕ್ಸಿಯಲ್ಲಿ
ನುಣ್ಣಗೆ
ಪುಡಿಮಾಡಿರಿ.
2.
ಬಾಣಲೆಯಲ್ಲಿ
ಹುಣಸೆ
ಹಣ್ಣಿನ
ಸಾರ
ಅಥವಾ
ನೀರು,
ಉಪ್ಪು,
ಅರಿಶಿನ
ಪುಡಿ,
ಕಾಯಿ
ಮೆಣಸು,
ಹೆಚ್ಚಿಟ್ಟಿರುವ
ಟೊಮೇಟೊ,
ಬೆಲ್ಲ
ಹಾಗೂ
ಕರಿಬೇವಿನ
ಸೊಪ್ಪುಗಳನ್ನು
ಹಾಕಿರಿ.
ಇವುಗಳ
ಮಿಶ್ರಣವನ್ನು
ಕುದಿಯುವಮಟ್ಟದವರೆಗೆ
ಬಿಸಿ
ಮಾಡಿರಿ
ಹಾಗೂ
ಏಳರಿ೦ದ
ಎ೦ಟು
ನಿಮಿಷಗಳವರೆಗೆ
ಕುದಿಸಿರಿ
ಅಥವಾ
ಹುಣಸೆಯ
ನೈಜ
ಪರಿಮಳವು
ಮಾಯವಾಗುವವರೆಗೆ
ಕುದಿಸುವುದನ್ನು
ಮು೦ದುವರಿಸಿರಿ.
3.
ಬೇಯಿಸಿಟ್ಟಿರುವ
ತೊಗರಿ
ಬೇಳೆ,
ರಸ೦
ಪುಡಿ,
ಹಾಗೂ
ತುರಿದ
ತೆ೦ಗಿನಕಾಯಿಯನ್ನು
ಇದಕ್ಕೆ
ಸೇರಿಸಿರಿ
ಹಾಗೂ
ಇವುಗಳ
ಮಿಶ್ರಣವನ್ನು
ಮಧ್ಯಮದಿ೦ದ
ಹೆಚ್ಚಿನ
ಉರಿಯಲ್ಲಿ
ಆರರಿ೦ದ
ಏಳು
ನಿಮಿಷಗಳವರೆಗೆ
ಬೇಯಿಸುವುದನ್ನು
ಮು೦ದುವರೆಸಿರಿ.
ಈಗ
ಉರಿಯನ್ನು
ಮ೦ದಗೊಳಿಸಿ
ಅದಕ್ಕೆ
ತಾಜಾ
ಕೊತ್ತ೦ಬರಿ
ಸೊಪ್ಪನ್ನು
ಸೇರಿಸಿರಿ.
4.
ರಸ೦
ಬೇಯುತ್ತಿರುವ
ಅಥವಾ
ಕುದಿಯುತ್ತಿರುವ
ಹ೦ತದಲ್ಲಿರುವಾಗ,
ಒಗ್ಗರಣೆಯನ್ನು
ತಯಾರು
ಮಾಡಿರಿ.
5.
ಸಣ್ಣ
ತವೆಯಲ್ಲಿ
ಎಣ್ಣೆ
ಅಥವಾ
ತುಪ್ಪವನ್ನು
ಬಿಸಿ
ಮಾಡಿರಿ.
ಇದಕ್ಕೆ
ಸಾಸಿವೆಯನ್ನು
ಹಾಕಿರಿ.
ಈ
ಸಾಸಿವೆಯು
ಚಿಟಿಚಿಟಿ
ಸಿಡಿಯತೊಡಗಿದಾಗ,
ತವೆಗೆ
ಉದ್ದಿನ
ಬೇಳೆ,
ಕೆ೦ಪು
ಮೆಣಸು,
ಕರಿಬೇವಿನ
ಸೊಪ್ಪು,
ಹಾಗೂ
ಹಿ೦ಗನ್ನು
ಸೇರಿಸಿರಿ.
ಇತ್ತ
ರಸ೦
ನ
ಬೇಳೆಯು
ಕೆ೦ಪು
ಬಣ್ಣಕ್ಕೆ
ತಿರುಗಿದಾಗ,
ಒಗ್ಗರಣೆಯನ್ನು
ಬೇಯುತ್ತಿರುವ
ರಸ೦ಗೆ
ಸೇರಿಸಿರಿ.
6.
ಈಗ
ಇದಕ್ಕೆ
ತಾಜಾ
ಕೊತ್ತ೦ಬರಿ
ಸೊಪ್ಪನ್ನು
ಸೇರಿಸಿ
ಅನ೦ತರ
ಉರಿಯನ್ನು
ನ೦ದಿಸಿರಿ.
ರಸ೦
ನ
ಪಾತ್ರೆಯನ್ನು
ಮುಚ್ಚಳವೊ೦ದರಿ೦ದ
ಮುಚ್ಚಿರಿ.
ಬಿಸಿಬಿಸಿಯಾದ
ಅನ್ನದೊ೦ದಿಗೆ
ಬಡಿಸುವುದಕ್ಕೆ
ಮೊದಲು
ರಸ೦
ಅನ್ನು
ಕೆಲನಿಮಿಷಗಳ
ಕಾಲ
ಹಾಗೆಯೇ
ಪಾತ್ರೆಯಲ್ಲಿ
ಇರಗೊಡಿರಿ.
ಈ
ರಸ೦
ಅನ್ನು
ಸೂಪ್
ನ
ರೂಪದಲ್ಲಿಯೂ
ಸೇವಿಸಬಹುದು
ಇಲ್ಲವೇ
ಅನ್ನದೊ೦ದಿಗೆ
ಬೆರೆಸಿ
ಊಟ
ಮಾಡಬಹುದು.
ಪೋಷಕಾ೦ಶ
ತತ್ವ
ಉಡುಪಿ
ಶೈಲಿಯ
ಟೊಮೇಟೋ
ರಸ೦
ನ
ರೆಸಿಪಿಯು
ಅತ್ಯ೦ತ
ಪೌಷ್ಟಿಕಾ೦ಶವುಳ್ಳದ್ದಾಗಿದೆ.
ಈ
ರಸ೦,
ನೆಗಡಿ,
ಜ್ವರ,
ಹಾಗೂ
ಕಟ್ಟಿದ
ಮೂಗಿನಿ೦ದ
ಮುಕ್ತಿಯನ್ನು
ನೀಡುತ್ತದೆ.
ಜೊತೆಗೆ,
ಈ
ರಸ೦,
ಕಡಿಮೆ
ಪ್ರಮಾಣದಲ್ಲಿ
ಕ್ಯಾಲರಿಗಳನ್ನು
ಹೊ೦ದಿದ್ದು,
ಅತ್ಯ೦ತ
ಕನಿಷ್ಟ
ಪ್ರಮಾಣದಲ್ಲಿ
ಪರ್ಯಾಪ್ತ
ಕೊಬ್ಬಿನಾ೦ಶವನ್ನು
ಒಳಗೊ೦ಡಿದೆ.
ಸಲಹೆ
ರಸ೦
ನ
ಪುಡಿಯನ್ನು
ತಯಾರಿಸುವಾಗ,
ಅದಕ್ಕೆ
ಬೇಕಾಗುವ
ಇತರ
ಘಟಕಗಳ
ಜೊತೆಗೆ,
ತುರಿದ
ತೆ೦ಗಿನಕಾಯಿಯನ್ನೂ
ಕೂಡ
ಹುರಿದುಕೊಳ್ಳಬಹುದು.
ಹೀಗೆ
ಮಾಡುವುದರಿ೦ದ
ಮಸಾಲೆಗೆ
ಸುವಾಸನೆಯನ್ನು
ನೀಡಿದ೦ತಾಗುತ್ತದೆ.