Just In
- 1 min ago ಗರಿ ಗರಿಯಾದ ಕೋಡುಬಳೆ ಮನೆಯಲ್ಲೇ ಮಾಡಿ.! 4 ವಸ್ತು ಇದ್ದರೆ ಸಾಕು
- 5 hrs ago ಹೋಟೆಲ್ ರುಚಿಯ ಪನೀರ್ ಪೆಪ್ಪರ್ ಫ್ರೈ ಮನೆಯಲ್ಲೇ ಮಾಡಿ..! 10 ನಿಮಿಷದಲ್ಲಿ ರೆಡಿ..!
- 13 hrs ago ಮೀನ ರಾಶಿಯಲ್ಲಿ ರಾಹು-ಮಂಗಳ ಯುತಿಯಿಂದ ಅಂಗಾರಕ ಯೋಗ: 12 ರಾಶಿಗಳ ಮೇಲಿರಲಿದೆ ಈ ನಕರಾತ್ಮಕ ಪರಿಣಾ
- 14 hrs ago ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
Don't Miss
- News ಈ ಎರಡು ಕ್ಷೇತ್ರಗಳಲ್ಲಿ ಕಾಡುಗೊಲ್ಲರ ಮತ ಪಡೆಯಲು ಕೈ, ಕಮಲ ಪ್ಲಾನ್ ಏನು?-ಇಲ್ಲಿದೆ ಮಾಹಿತಿ
- Finance ಬೆಂಗಳೂರು, ನೋಯ್ಡಾ, ಪುಣೆಯಲ್ಲಿ ಶೀಘ್ರದಲ್ಲೇ ಹೊಸ ಆಪಲ್ ಸ್ಟೋರ್ ಪ್ರಾರಂಭ
- Technology ಈ ಹೊಸ 5G ಫೋನ್ ಖರೀದಿಸಿದರೆ, ವಿವೋ ಕಂಪನಿಯ ಇಯರ್ಫೋನ್ ಉಚಿತ!
- Automobiles ನಟಿ ಶಿಲ್ಪಾ ಶೆಟ್ಟಿಗೆ ಮತ್ತೊಂದು ಸಮಸ್ಯೆ ತಂದಿಟ್ಟ ಪತಿ: ಐಷಾರಾಮಿ ಕಾರುಗಳು ಸೀಜ್!
- Sports 2025ರ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸಲಿದೆಯೇ?; ಬಿಸಿಸಿಐ ಹೇಳಿದ್ದೇನು?
- Movies ಅದ್ಧೂರಿ 'ರಾಮಾಯಣ' ಚಿತ್ರದ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಮೊದಲ ಮಾತು
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮುದ್ದು ಮಕ್ಕಳನ್ನು ಕಾಡುವ ನಿದ್ರಾಹೀನತೆ ಸಮಸ್ಯೆ....
ಮಕ್ಕಳು ಮುಗ್ಧರೇನೋ ನಿಜ. ಆದರೆ, ಆತಂಕದಿಂದ ಮುಕ್ತರಾಗಿರಬೇಕಿಲ್ಲ! ಮಕ್ಕಳೂ ಸಹ ನಿದ್ರಾಹೀನತೆಯಿಂದ ಬಳಲುತ್ತಿರಬಹುದು.ಕೆಲವರಿಗೆ ನಿದ್ರೆಗೆ ಜಾರುವ ತೊಂದರೆಯಾದರೆ, ಮತ್ತೆ ಕೆಲವರದು ನರಳಾಟದ ನಿದ್ರೆ! ನಿದ್ರಾಹೀನತೆಯಿಂದ ಬಳಲುವ ಮಕ್ಕಳು ಮರುದಿವಸ ಬಹಳ ಮಂಕಾಗಿರುತ್ತಾರೆ. ಕಲಿಕೆಯಲ್ಲಿ ಹಿಂದುಳಿಯಲು ಇದೂ ಒಂದು ಕಾರಣವಿರಬಹುದು.
ಮಕ್ಕಳು ನೆಮ್ಮದಿಯಿಂದ ನಿದ್ರಿಸದೇ ಗೊರಕೆ ಹೊಡೆಯುವುದು, ನರಳುವುದು, ಹೊರಳುವುದು ಮಾಡಿದರೆ, ಅವರಲ್ಲಿ ಯಾವುದೋ ಭಯ ಆವರಿಸಿದೆ ಎಂದರ್ಥ. ಅದು ಶಾಲೆಯ ಶಿಕ್ಷಕರ ಕೋಲಿನ ಭಯವೋ, ಅವರು ಹಗಲಿನಲ್ಲಿ ನೋಡಿರಬಹುದಾದ ಭೂತದ ಚಲನಚಿತ್ರದ ಪರಿಣಾಮವೋ ಆಗಿರಬಹುದು. ಇಲ್ಲವೇ ದುಷ್ಟ ಸಹಪಾಠಿಯ ಭಯ ಕಾಡುತ್ತಿರಲೂ ಬಹುದು. ಮಕ್ಕಳ ಮನಸ್ಸು ಹೂವಿನಂತೆ, ನೋವು ಮಾಡಬೇಡಿ...
ಇಂತಹ ಸಂದರ್ಭಗಳಲ್ಲಿ ಮಕ್ಕಳೊಂದಿಗೆ ಮುಕ್ತವಾಗಿ ಮಾತನಾಡಿ ಅವರ ಮನಸ್ಸಿನಲ್ಲಿ ಕಾಡುತ್ತಿರುವ ಚಿಂತೆಯ ಎಳೆಯನ್ನು ಬಿಡಿಸಿಕೊಳ್ಳಬೇಕು. ಕೆಲವುಮಕ್ಕಳು ಮನಸ್ಸಿನಲ್ಲಿ ಇರುವುದನ್ನು ಸುಲಭವಾಗಿ ಹೊರಗೆಡಹುವುದಿಲ್ಲ. ಅಂತಹವರನ್ನು ತಾಳ್ಮೆಯಿಂದ ನಿಧಾನವಾಗಿ ಪುಸಲಾಯಿಸಿ, ವಿಚಾರಿಸಬೇಕಾಗುತ್ತದೆ. ಅನಂತರ ಅವರ ಸಮಸ್ಯೆಗೆ ಪರಿಹಾರ ನೀಡಿ, ಧೈರ್ಯ ತುಂಬಬೇಕಾಗುತ್ತದೆ.
ಕೆಲವು ಮಕ್ಕಳಿಗೆ ತಮ್ಮ ಸಮಸ್ಯೆ ತಮಗೇ ತಿಳಿದಿರುವುದಿಲ್ಲ. ಅಂತಹ ಮಕ್ಕಳ ದೈನಂದಿನ ಜೀವನದಲ್ಲಿ ಹಾಸುಹೊಕ್ಕಾಗಿರುವ ಎಲ್ಲ ವಿಷಯಗಳ ಕುರಿತೂ ಎಳೆ ಎಳೆಯಾಗಿ ಪ್ರಶ್ನೆ ಮಾಡಿ "ನೋವು" ಎಲ್ಲಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ.
ಇಂದಿನ ಮಕ್ಕಳು ಪುಸ್ತಕಕ್ಕಿಂತ ಹೆಚ್ಚಾಗಿ ಗಣಕಯಂತ್ರ, ಮೊಬೈಲ್, ಐ ಪ್ಯಾಡ್, ಟ್ಯಾಬ್ ಗಳ ಸಹವಾಸದಲ್ಲಿ ಮೈ ಮರೆಯುತ್ತಾರೆ. ಅಂತಹ ಉಪಕರಣಗಳಿಂದ ಹೊರ ಹೊಮ್ಮುವ ಅಯಸ್ಕಾಂತೀಯ ಕಿರಣಗಳಿಂದ ಆಗಬಹುದಾದ ದುಷ್ಪರಿಣಾಮಗಳ ಪಟ್ಟಿ ಒತ್ತಟ್ಟಿಗಿರಲಿ; ಇದರಿಂದ ಮಕ್ಕಳ ಶರೀರಕ್ಕೆ ಯಾವುದೇ ವ್ಯಾಯಾಮ ಲಭಿಸದಿರುವುದರಿಂದಲೂ ನಿದ್ರೆ ಬಾರದಿರಬಹುದು.
ಇಂತಹ ಮಕ್ಕಳ ದೈನಂದಿನ ವೇಳಾ ಪಟ್ಟಿಯಲ್ಲಿ ಸಾಕಷ್ಟು ಆಟ, ವ್ಯಾಯಮಗಳು ಒಳಗೊಳ್ಳುವಂತೆ ನಿಗಾ ವಹಿಸಬೇಕಾಗುತ್ತದೆ. ಆಯಾಸವಾದರೆ, ನೆಮ್ಮದಿಯ ನಿದ್ರೆಯೂ ಬಂದೀತು!