Just In
- 7 min ago ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- 45 min ago ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
- 2 hrs ago ದಿನ ಭವಿಷ್ಯ ಏಪ್ರಿಲ್ 20: ಶನಿವಾರದ ಈ ಶುಭ ದಿನ ನಿಮ್ಮ ರಾಶಿಗೆ ಹೇಗಿರಲಿದೆ?
- 3 hrs ago ವೃಷಭ ರಾಶಿಗೆ ಗುರು ಸಂಚಾರ: 10ನೇ ಮನೆಯಲ್ಲಿ ಗುರು ಸಿಂಹ ರಾಶಿಯವರು ಆಸ್ತಿ ಖರೀದಿಸಬಹುದು
Don't Miss
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Movies Shravani subramanya: ದುಃಖ ತಡೆಯಲಾದೇ ತಬ್ಬಿಕೊಂಡ ಶ್ರಾವಣಿ; ವಿಜಯಾಂಬಿಕೆಯಿಂದ ಬಿತ್ತು ಪೆಟ್ಟು
- News ಮೈಸೂರು: ಪ್ರಧಾನಿ ಮೋದಿ ಕುರಿತಾದ ಹಾಡು ಶೇರ್ ಮಾಡಿ ಎಂದಿದ್ದಕ್ಕೆ ಯುವಕನ ಮೇಲೆ ಹಲ್ಲೆ
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಾಲ ಬದಲಾಗಿದೆ ನೋಡಿ, ಮಕ್ಕಳಿಗೂ ಚಿಂತೆ ತಪ್ಪಿದ್ದಲ್ಲ!
ಈ ಶೀರ್ಷಿಕೆಯನ್ನು ಓದಿದ ತಕ್ಷಣ ಮಕ್ಕಳಿಗೆ ಎಂಥಹ ಚಿಂತೆಗಳು ಇರುತ್ತವೆ. ಅವರೇನು ದುಡಿಯಬೇಕೆ? ಇಲ್ಲವೇ ಮನೆ-ಸಂಸಾರ ಸಾಗಿಸಬೇಕೇ ಎಂಬ ಆಲೋಚನೆ ನಿಮಗೆ ಬರಬಹುದು. ನಿಮ್ಮ ತರ್ಕ ಸರಿಯಿರಬಹುದು. ಆದರೆ ಒಂದು ಚಿಂತೆಗೆ ಸಿಕ್ಕಿಹಾಕಿಕೊಂಡಿರುವ ಮಗುವಿಗು ಸಹ ಒಂದು ಕಾಳಜಿಯ ಅಗತ್ಯವಿರುತ್ತದೆ.
ಮಕ್ಕಳಿಗೆ ಚಿಂತೆಗಳೇ ಬರುವುದಿಲ್ಲ ಎಂಬ ಮಾತು ಸುಳ್ಳು, ಅವರಿಗು ಸಹ ಅವರದೇ ಆದ ಚಿಂತೆಗಳು ಇರುತ್ತವೆ, ಅದಕ್ಕೆ ನಿಮ್ಮ ಸಹಾಯ ಅವರಿಗೆ ಅಗತ್ಯವಿರುತ್ತದೆ ಎಂಬುದನ್ನು ಮರೆಯಬೇಡಿ. ಸಾಮಾನ್ಯವಾಗಿ ಮಕ್ಕಳು ತಮ್ಮ ವಿದ್ಯಾಭ್ಯಾಸದ ಕುರಿತಾಗಿ ಹೆಚ್ಚು ಚಿಂತೆ ಮಾಡುತ್ತಾರೆ, ಅವರ ಓದು, ಮನೆಕೆಲಸ, ಪರೀಕ್ಷೆಗಳು, ಜೊತೆಗೆ ಮನೆಯಲ್ಲಿ ಮತ್ತು ಶಾಲೆಯಲ್ಲಿ ಅವರಿಗೆ ಹಿಡಿಸದ ಕೆಲವೊಂದು ಸನ್ನಿವೇಶಗಳು ಅವರನ್ನು ಚಿಂತೆ ಮಾಡುವಂತೆ ಪ್ರೇರೇಪಿಸುತ್ತವೆ. ಒಂದು ವೇಳೆ ಮಗುವೊಂದು ಚಿಂತೆ ಮಾಡಲು ಆರಂಭಿಸಿದರೆ, ಅದಕ್ಕೆ ಇರುವ ಕಾರಣದ ಕುರಿತು ಮೊದಲು ನೀವು ತಿಳಿದುಕೊಳ್ಳಲು ಪ್ರಯತ್ನಿಸಬೇಕು.
ನಿಮ್ಮ ಮಗು ಯಾವಾಗ ಹೆಚ್ಚು ಚಿಂತೆ ಮಾಡುತ್ತದೆಯೋ, ಆಗ ಅದಕ್ಕೆ ಸಹಾಯ ಮಾಡಲು ಕೆಲವೊಂದು ನಿರ್ದಿಷ್ಟ ಕ್ರಮಗಳು ಇರುತ್ತವೆ. ಬನ್ನಿ ಅದನ್ನು ನಾವು ಇಂದು ನಿಮಗೆ ತಿಳಿಸಿಕೊಡುತ್ತೇವೆ. ಆ ಹಂತಗಳನ್ನು ಈ ಕೆಳಗೆ ನೀಡಿದ್ದೇವೆ ಮುಂದೆ ಓದಿ. ಆಧುನಿಕ ತಂತ್ರಜ್ಞಾನ ಮಕ್ಕಳನ್ನು ದಿಕ್ಕು ತಪ್ಪಿಸುತ್ತಿದೆಯೇ?
ಕಾರಣ
ಮಕ್ಕಳು ಸಾಮಾನ್ಯವಾಗಿ ತಾವು ಪರೀಕ್ಷೆಗಳಲ್ಲಿ ಗಳಿಸಿದ ಅಂಕಗಳ ಕುರಿತಾಗಿ ಹೆಚ್ಚು ಚಿಂತೆ ಮಾಡುತ್ತಾರೆ ಅಥವಾ ತಮ್ಮ ಸ್ನೇಹಿತರನ್ನು ಶಾಲೆಯಲ್ಲಿ ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದು ಸಹ ಅವರಿಗೆ ಚಿಂತೆಯ ವಿಚಾರವಾಗಿರುತ್ತದೆ. ತರಗತಿಯಲ್ಲಿರುವ ತರ್ಲೆ ಮಕ್ಕಳು, ತಾವು ಅನುಭವಿಸುವ ಸೋಲುಗಳು ಮತ್ತು ಇತರರ ಎದುರು ಅನುಭವಿಸುವ ಅವಮಾನಗಳು ಮಕ್ಕಳನ್ನು ಚಿಂತೆಗೆ ತಳ್ಳಿ ಬಿಡುತ್ತವೆ. ಪೋಷಕರಾಗಿ ನೀವು ಈ ಕಾರಣಗಳನ್ನು ಆದಷ್ಟು ಶೀಘ್ರವಾಗಿ ಹುಡುಕಬೇಕು.
ಅವರ
ಮಾತನ್ನು
ಕೇಳಿ
ಕಾಳಜಿ
ತೋರಿಸಿ
ಯಾವಾಗ
ನೀವು
ಪರಿಪೂರ್ಣವಾಗಿ
ಆಸಕ್ತಿಯನ್ನು
ತೋರಿಸುತ್ತೀರೋ,
ಆಗ
ಮಗುವಿಗೆ
ಸಂತೋಷ
ಸಿಗುತ್ತದೆ.
ಜೊತೆಗೆ
ತನ್ನ
ಬೆಂಬಲಕ್ಕೆ
ನೀವಿದ್ದೀರಿ
ಎಂಬ
ಮನೋಭಾವ
ಅವರಲ್ಲಿ
ಬೆಳೆಯುತ್ತದೆ.
ನಿಮ್ಮ
ಮಗುವಿನ
ಸಮಸ್ಯೆಯನ್ನು
ಪೂರ್ತಿಯಾಗಿ
ಕೇಳಿದ
ನಂತರ
ಅದಕ್ಕೆ
ಪೂರಕವಾಗಿ
ಪ್ರತಿಕ್ರಿಯಿಸಿ.
ಹದಿಹರೆಯದ
ಪ್ರಾಯದ
ಮಕ್ಕಳ
ಬಗ್ಗೆ
ಎಚ್ಚರ!
ತಿಳುವಳಿಕೆಯನ್ನು
ನೀಡಿ
ಧನಾತ್ಮಕ
ಮನೋಭಾವವನ್ನು
ತಿಳಿಸಿ