Just In
- 4 hrs ago ಮೀನ ರಾಶಿಯಲ್ಲಿ ರಾಹು-ಮಂಗಳ ಯುತಿಯಿಂದ ಅಂಗಾರಕ ಯೋಗ: 12 ರಾಶಿಗಳ ಮೇಲಿರಲಿದೆ ಈ ನಕರಾತ್ಮಕ ಪರಿಣಾ
- 5 hrs ago ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- 5 hrs ago ಪುರುಷರಲ್ಲಿ ಹೆಚ್ಚಾಗುತ್ತಿದೆ ಬಂಜೆತನ: ಪುರುಷರು ಈ ಆಹಾರ ಸೇವಿಸಿದರೆ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುವುದು
- 6 hrs ago ಏಪ್ರಿಲ್ 24 ದಿನ ಭವಿಷ್ಯ: ಬುಧವಾರದ ಈ ದಿನ ನಿಮ್ಮ ರಾಶಿಫಲ ಹೇಗಿದೆ?
Don't Miss
- Movies 'KGF-2' ಚಿತ್ರದಿಂದ ಸಿಕ್ಕಿದ್ದು 200 ಕೋಟಿ ರೂ.; 'ಟಾಕ್ಸಿಕ್', 'ರಾಮಾಯಣ'ಕ್ಕೆ ಯಶ್ 50-50 ಡೀಲ್!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮುಂಬೈ ನಗರದ ರಿಯಲ್ ಭೂತದ ಕಥೆಗಳು!-ಹೀಗೂ ಉಂಟೆ?
ಭೂತದ ಕಥೆಗಳಿರುವ ಊರೇ ಈ ಭಾರತದಲ್ಲಿಲ್ಲ. ಒಂದೊಂದು ಊರಿನ ಭೂತದ ಕಥೆಯೂ ಭಿನ್ನ ಹಾಗೂ ರೋಮಾಂಚಕಾರಿ. ಮುಂಬೈ ಎಂಬ ಮಹಾನಗರದಲ್ಲಿ ಇನ್ನೆಷ್ಟಿರಬೇಡ? ಇಲ್ಲಿಯೂ ಭಯಾನಕವಾದ, ಮೈನವಿರೇಳಿಸುವ ಹಾಗೂ ಪುರಾತನಕಾಲದ ಭೂತದ ಕಥೆಗಳು ಬೇಕಾದಷ್ಟಿವೆ. ಮನುಷ್ಯರು ಸತ್ತ ನಂತರ ದೆವ್ವಗಳಾಗಿ ನಮ್ಮನ್ನು ಏಕೆ ಕಾಡುತ್ತಾರೆ?
ಕೆಲವು ಕಥೆಗಳಂತೂ ಅಮೂಲ್ಯ ಸ್ಥಳಗಳಲ್ಲಿ ಕಟ್ಟಡವನ್ನು ಖಾಲಿ ಮಾಡಿಸುವಷ್ಟಿವೆ. ಬಿಳಿಸೀರೆ ತೊಟ್ಟು ಕಾಡುವ ಮಹಿಳೆ, ಸಾಮೂಹಿಕ ಆತ್ಮಹತ್ಯೆ, ಪಾಳುಬಿದ್ದ ಬಂಗಲೆ, ನಿಗೂಢ ಸಾವುಗಳು ಇತ್ಯಾದಿಗಳು ನೂರಾರಿವೆ. ಆದರೆ ಮುಂಬೈಯಂತಹ ಮಹಾನಗರದಲ್ಲಿ ಆಧುನಿಕತೆ ಭರದಿಂದ ಸಾಗುತ್ತಿರುವಾಗ ಭೂತಪ್ರೇತದಂತಹ ವಿಷಯಗಳ ವಿಶ್ವಾಸಾರ್ಹತೆಯನ್ನು ನಂಬಲು ಇಂದಿನ ಜನರು ತಯಾರಿಲ್ಲ. ಇವರಲ್ಲಿ ಹೆಚ್ಚಿನವರು ಈ ಭೂತಗಳ ಭಯವನ್ನು ಮೀರಿ ಆ ಸ್ಥಳಗಳಲ್ಲಿ ವಾಸಿಸಲು ಮುಂದಗುತ್ತಾರೆ. ಎಂತಹ ಧೈರ್ಯವಂತನ ಎದೆ ನಡುಗಿಸುವ ಭಯಂಕರ ಸ್ಥಳಗಳು!
ಆದರೆ ಜನರು ವಾಸಿಸಲು ಹೆದರುವ ಕೆಲವು ಸ್ಥಳಗಳು ಇಂದಿಗೂ ಮುಂಬೈಯಲ್ಲಿವೆ. ಟವರ್ ಆಫ್ ಸೈಲೆನ್ಸ್ ಅಥವಾ ಮುಕೇಶ್ ಮಿಲ್ಸ್ ಇದರಲ್ಲೊಂದು. ಅಷ್ಟೇ ಅಲ್ಲ, ಭೂತಕ್ಕೋ, ಇನ್ಯಾವುದೋ ವಿವರಿಸಲಾಗದ ಕಾರಣದಿಂದ ಮುಂಬೈನ ಕೆಲವಾರು ಬಹುಮಹಡಿ ಕಟ್ಟಡಗಳಲ್ಲಿ 13ನೇ ಮಹಡಿಯನ್ನು ಉದ್ದೇಶಪೂರ್ವಕವಾಗಿ ನೀಡದೇ ಇರುವುದನ್ನು ನೋಡಬಹುದು. ಬನ್ನಿ, ಇಂತಹ ಕೆಲವು ರೋಚಕ ಕಥೆಗಳ ಬಗ್ಗೆ ಅರಿಯೋಣ....
ಆತ್ಮಹತ್ಯಾ ಗೋಪುರ
ಮುಂಬೈಯಲ್ಲಿರುವ ಗ್ರಾಂಡ್ ಪರಡಿ ಟವರ್ ಈಗ ಭೂತಗಳ ವಾಸಸ್ಥಾನವೆಂದೇ ಪರಿಚಿತ. ಕೆಂಪ್ಸ್ ಕಾರ್ನರ್ನಲ್ಲಿರುವ ಈ ಕಟ್ಟಡದ ಎಂಟನೆಯ ಮಹಡಿಯಲ್ಲಿ ಯಾರೇ ವಾಸಿಸಿದರೂ ಅಲ್ಲಿನ ಭೂತಗಳು ಆ ಜನರನ್ನು ಆತ್ಮಹತ್ಯೆಗೆ ಪ್ರೇರೇಪಿಸುತ್ತವೆ ಎಂಬ ವದಂತಿ ಇದೆ!
ಇಲ್ಲಿ ಇಪ್ಪತ್ತಕ್ಕೂ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ
2004ರಲ್ಲಿ ವೃದ್ಧ ದಂಪತಿಗಳು ಈ ಮಹಡಿಯಿಂದ ಕೆಳಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದರು. ಒಂದೇ ವರ್ಷದಲ್ಲಿ ಇವರ ಮಕ್ಕಳು ಹಾಗೂ ಮೊಮ್ಮಕ್ಕಳೂ ಇದೇ ಮಹಡಿಯಿಂದ ನಿಗೂಢವಾಗಿ ಆತ್ಮಹತ್ಯೆ ಮಾಡಿಕೊಂಡರು. ಈ ಕಟ್ಟಡದಲ್ಲಿ ಇದುವರೆಗೆ ಸುಮಾರು ಇಪ್ಪತ್ತಕ್ಕೂ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ಇವರಲ್ಲಿ ಪುಟ್ಟ ಮಕ್ಕಳೂ, ಇವರ ಮನೆಯ ಪರಿಚಾರಿಕೆಯರೂ ಸೇರಿದ್ದಾರೆ.
ಕುಪಿತ ಕಟ್ಟದ ವಾಸ್ತುಶಿಲ್ಪಿ!
ಮುಂಬೈನ ಖ್ಯಾತ ತಾಜ್ ಹೋಟೆಲ್ ಸಹಾ ಭೂತದ ಕಥೆಯಿಂದ ಮುಕ್ತಿ ಪಡೆದಿಲ್ಲ. ಈ ಕಟ್ಟಡದ ವಾಸ್ತುಶಿಲ್ಪಿ ಡಬ್ಲ್ಯೂ ಎ. ಛೇಂಬರ್ಸ್ ರವರ ಭೂತ ಈ ಕಟ್ಟಡದ ಒಂದು ಭಾಗದಲ್ಲಿ ವಾಸವಾಗಿದೆ ಎಂಬ ಪ್ರಪೀತಿಯಿದೆ. ಈ ಖ್ಯಾತ ಹೋಟೆಲಿನ ವಿನ್ಯಾಸವನ್ನು ತನಗೆ ಅತ್ಯುತ್ತಮವೆಂಬಂತೆ ವಿನ್ಯಾಸಗೊಳಿಸಿದ ಫ್ರೆಂಚ್ ವಾಸ್ತುಶಿಲ್ಪಿ ವಿನ್ಯಾಸವನ್ನು ಕಟ್ಟಡ ಕಾಮಗಾರಿ ಮುಂದುವರೆಸಲು ನೀಡಿ ತಮ್ಮ ಸ್ವದೇಶಕ್ಕೆ ತೆರಳಿದ್ದರು.
ಕುಪಿತ ಕಟ್ಟದ ವಾಸ್ತುಶಿಲ್ಪಿ!
ಆದರೆ ಅವರು ಬಳಿಕ ಹಿಂದಿರುಗಿದಾಗ ಈ ಕಟ್ಟಡದ ಮುಂಭಾಗವನ್ನು ಅವರ ವಿನ್ಯಾಸಕ್ಕೆ ತದ್ವಿರುದ್ಧವಾಗಿ ನಿಲ್ಲಿಸಲಾಗಿತ್ತು. ಈ ಬದಲಾವಣೆಯನ್ನು ಸಹಿಸದ ಅವರಿಗೆ ಮಾನಸಿಕ ಆಘಾತವಾಗಿ ಇದನ್ನು ತಡೆಯಲಾರದೇ ಆತ್ಮಹತ್ಯೆಗೆ ಶರಣಾದರು. ಇವರ ಆತ್ಮವನ್ನು ಆ ಸ್ಥಳದಲ್ಲಿ ಆತ್ಮದ ಇರುವಿಕೆಯನ್ನು ಗಮನಿಸಲಾಗಿದೆ. ಬಳಿಕ ಇವರು ಆತ್ಮಹತ್ಯೆ ಮಾಡಿಕೊಂಡ ಸ್ಥಳವನ್ನು ಇಂದಿಗೂ ಖಾಲಿಯಾಗಿರಿಸಲಾಗಿದೆ. ಆದರೆ ಇವರ ಆತ್ಮ ಯಾರಿಗೂ ತೊಂದರೆ ನೀಡಿಲ್ಲ ಅಥವಾ ಇದುವರೆಗೂ ಯಾವುದೇ ಅಹಿತಕರ ಘಟನೆಯೂ ನಡೆದಿಲ್ಲ.
ಬೆಂಕಿಯಿಂದ ಉರಿಯುತ್ತಿರುವ ಯುವತಿ!
1989ರಲ್ಲಿ ಇಪ್ಪತ್ತು ವರ್ಷದ ಸಲ್ಮಾ ಎಂಬ ಯುವತಿ ಜುಹು ಏರೋಡ್ರೋಂ ಬಳಿ ತನ್ನ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಆತ್ಮಹತ್ಯೆಗೆ ಕಾರಣವೇನು ಎಂದು ಇದುವರೆಗೆ ಖಚಿತವಾಗಿ ತಿಳಿದುಬಂದಿಲ್ಲ.
ಬೆಂಕಿಯಿಂದ ಉರಿಯುತ್ತಿರುವ ಯುವತಿ!
ಆದರೆ ಈ ಸ್ಥಳದಲ್ಲಿ ಆಕೆಯ ಆತ್ಮದ ಇರುವಿಕೆಯನ್ನು ಕಂಡುಕೊಂಡ ಬಳಿಕ ಕ್ರೈಸ್ತ ಭಕ್ತರೊಬ್ಬರು ಇಲ್ಲಿನ ನಿವಾಸಿಗಳನ್ನು ಆತ್ಮದ ಪ್ರಭಾವದಿಂದ ರಕ್ಷಿಸುವ ಉದ್ದೇಶದಿಂದ ಈ ಸ್ಥಳದಲ್ಲಿ ಹುನಮ ಮಂದಿರವೊಂದನ್ನು ಕಟ್ಟಿಸಿದ್ದಾರೆ. ಆದರೂ ಕೆಲವು ವಿಶಿಷ್ಟ ದಿನಗಳಂದು ಈಕೆಯ ಆತ್ಮವನ್ನು ಆಕೆಯ ಬಟ್ಟೆಗಳು ಬೆಂಕಿಯಿಂದ ಉರಿಯುತ್ತಿರುವಂತೆ ಅಕ್ಕಪಕ್ಕದ ಗಿಡಮರಗಳ ಎಡೆಗಳಲ್ಲಿ ಕಂಡವರಿದ್ದಾರೆ.