Just In
- 1 min ago ಪ್ರವಾಹಕ್ಕೆ ಕಾರಣವಾಗೋದು ಮಳೆಯಲ್ಲ ಬೇಸಿಗೆಯ ಬಿಸಿಲು..! ನಂಬಲು ಸಾಧ್ಯವಿಲ್ಲ ಅಂದ್ರೆ ಈ ವಿಡಿಯೋ ನೋಡಿ..!
- 1 hr ago ಚಪಾತಿ, ಅನ್ನಕ್ಕೆ ಟೊಮೆಟೋ ಬೇಳೆ ಸಾರು ಸಖತ್ ರುಚಿ..! ಮಾಡೋದು ಸುಲಭ..!
- 2 hrs ago ರೆಸಿಪಿ: ಮಾವಿನ ಕಾಯಿ ತುರಿದು ಮಾಡುವ ಉಪ್ಪಿನಕಾಯಿ, ಎಣ್ಣೆ ಬಳಸಿಲ್ಲ, ವರ್ಷದವರೆಗೆ ಇಡಲೂ ಬಹುದು
- 4 hrs ago ಮೊಲದ ಜೊತೆ ಓಡಿ ಮತ್ತೊಮ್ಮೆ ರೇಸ್ ಗೆದ್ದ ಆಮೆ..! ಈ ಕಥೆ ನಿಜವಾಗಿದ್ದು ಹೇಗೆ ನೋಡಿ.!
Don't Miss
- News Zero Shadow Day: ನಾಳೆ ಬುಧವಾರ ಬೆಂಗಳೂರಿನಲ್ಲಿ ಶೂನ್ಯ ನೆರಳು ದಿನ; ಸಮಯ, ವಿವರ
- Sports David Warner: ಊಟನೂ ಬೇಡ, ಹುಡುಗಿನೂ ಬೇಡ; ಆಧಾರ್ ಕಾರ್ಡ್ ಬೇಕೆಂದ ಡೇವಿಡ್ ವಾರ್ನರ್!
- Technology Lava: ಲಾವಾ ಪ್ರೊ ವಾಚ್ Zn ಹಾಗೂ Vn ಸ್ಮಾರ್ಟ್ವಾಚ್ ಲಾಂಚ್! ಸೀಮಿತ ಅವಧಿಯ ಕೊಡುಗೆ ಸಹ ಲಭ್ಯ..
- Automobiles ಅಪ್ಪ-ಮಗಳ ಭಾಂದವ್ಯ.. ಪ್ರೀತಿಯ ಪುತ್ರಿಗೆ ತಂದೆಯಿಂದ 2 ಕೋಟಿಯ ಪೋರ್ಷೆ ಕಾರು ಗಿಫ್ಟ್
- Finance ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 10 ಹಳದಿ ಅನಕೊಂಡ ಸಹಿತ ವ್ಯಕ್ತಿ ಬಂಧನ
- Movies Sathya : ತಾಜ್ ಮಹಲ್ ಎದುರು ನಿಂತ ಸತ್ಯಾ, ಪತಿ ಜೊತೆ ಗೌತಮಿ ಪ್ರವಾಸ...!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಡೋಂಗಿ ಗುರೂಜಿಗಳ ಕರಾಳ ಮುಖ-ಇವರು ಜನರಿಗೆ ಟೋಪಿ ಹಾಕಿದ್ದೇ ಜಾಸ್ತಿ!
ಯಾವುದೇ ವಸ್ತುವಿನ ಮಾರಾಟದಲ್ಲಿ ಉತ್ಪನ್ನವನ್ನು ಗ್ರಾಹಕರು ನೋಡಲು ಸಾಧ್ಯವಾಗುವಂತಿರುವುದು ಅತ್ಯಂತ ಅಗತ್ಯ. ಏಕೆಂದರೆ ನಾವೆಲ್ಲರೂ ಹೊರಗಿನ ಥಳುಕಿಗೆ ಹೆಚ್ಚು ಮನಸೋಲುತ್ತೇವೆ ಹಾಗೂ ಒಳಗಿನ ಹುಳುಕನ್ನು ನೋಡುವ ತಾಳ್ಮೆ ತೋರುವುದಿಲ್ಲ. ಇದೇ ಅವಗಣನೆಯನ್ನು ಕೆಲವು ವ್ಯಕ್ತಿಗಳು ತಮ್ಮ ಅನುಕೂಲಕ್ಕಾಗಿ ಬಳಸಿಕೊಳ್ಳುತ್ತಾರೆ.
ಇವರು ತಮ್ಮನ್ನು ತಾವು ದೇವಾಂಶ ಸಂಭೂತರೆಂದು ಕರೆದುಕೊಂಡು ಜನರ ವಿಶ್ವಾಸ ಮತ್ತು ತನ್ಮೂಲಕ ಹಣವನ್ನು ಗಳಿಸುತ್ತಾರೆ. ಯಾವಾಗಲಾದರೊಮ್ಮೆ ಇವರ ಮಾತುಗಳು ಅಥವಾ ಕ್ರಿಯೆಗಳು ಸಮಾಜದ ಎದುರು ಪ್ರಕಟಗೊಂಡು ನ್ಯಾಯಾಲಯದವರೆಗೂ ಸಾಗಿರುವುದಿದೆ.
ಇಂದಿನ ಲೇಖನದಲ್ಲಿ ಇಂತಹ ಕೆಲವು ಗುರೂಜಿಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲಾಗಿದ್ದು ಕೆಲವು ಪ್ರಸಂಗಗಳಲ್ಲಿ ದೇವರ ಪ್ರತಿನಿಧಿಗಳಾಗಿದ್ದವರನ್ನು ನ್ಯಾಯಾಲಯ ಸಾಮಾನ್ಯ ಮನುಷ್ಯರಂತೆ ಪರಿಗಣಿಸಿ ಶಿಕ್ಷೆಯನ್ನೂ ವಿಧಿಸಿದೆ. ಬನ್ನಿ, ತನ್ನ ವಿವಾದಗಳ ಮೂಲಕ ಕುಖ್ಯಾತರಾದ ಇಂತಹ ಕೆಲವು ಗುರೂಜಿಗಳ ಬಗ್ಗೆ ಅರಿಯೋಣ....
ಆಸಾರಾಂ ಬಾಪು
ಇವರಿಗೆ ವಿಶ್ವದಾದ್ಯಂತ 425ಕ್ಕೂ ಹೆಚ್ಚು ಆಶ್ರಮಗಳು ಮತ್ತು ಐವತ್ತಕ್ಕೂ ಹೆಚ್ಚು ಗುರುಕುಲಗಳಿವೆ. ಇವರನ್ನು ಹಿಂಬಾಲಿಸುವವರ ಸಂಖ್ಯೆ ಬಹಳ ದೊಡ್ಡದಿದ್ದು ಭಾರತದಷ್ಟೇ ವಿದೇಶಗಳಲ್ಲಿಯೂ ಹಿಂಬಾಲಕರಿದ್ದಾರೆ. ಆದರೆ ಕೆಲವು ಸಮಯ ಹಿಂದಷ್ಟೇ ಇವರು ತಮ್ಮ ಮಗನೊಂದಿಗೆ ಏಳುನೂರು ಎಕರೆ ಜಾಗವನ್ನು ಅಕ್ರಮವಾಗಿ ಕಬಳಿಸಿದ ಆರೋಪವನ್ನು ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯ ಹೊರಿಸಿತ್ತು. ಈ ಬಗ್ಗೆ ತನಿಖೆ ನಡೆಸುತ್ತಿದ್ದಂತೆಯೇ ಈ ಗುರೂಜಿಯವರು ಹಿಂದಿನ ದಿನಗಳಲ್ಲಿ ಅಕ್ರಮವಾಗಿ ಹಣ ಸಂಪಾದಿಸಿದ ಹಲವು ಪ್ರಕರಣಗಳೆಲ್ಲಾ ಎಳೆ ಎಳೆಯಾಗಿ ಹೊರಬರತೊಡಗಿದವು.
ಆಸಾರಾಂ ಬಾಪು
ಅಷ್ಟೇ ಅಲ್ಲ, ಜೋಧಪುರದ ಆಶ್ರಮದಲ್ಲಿ ಹದಿನಾರು ವರ್ಷದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಆರೋಪವೂ ಇವರ ಮೇಲಿದೆ. ಈ ಗುರೂಜಿಯವರ ಪೂರ್ಣ ಅಕ್ರಮಗಳ ವಿವರಗಳು ಹೊರಬರಬೇಕಾಗಿರುವುದು ಇನ್ನೂ ಬಹಳಷ್ಟಿದ್ದು ಪೂರ್ಣ ವಿಚಾರಣೆ ಮುಗಿಯಲು ವರ್ಷಗಳೇ ಬೇಕಾಗಬಹುದು.
ಚಂದ್ರಸ್ವಾಮಿ
ತಮ್ಮನ್ನು ಭಗವಂತನೆಂದೇ ಬಿಂಬಿಸಿಕೊಂಡ ಚಂದ್ರಸ್ವಾಮಿಯನ್ನು ವಿಚಾರಣೆಗೊಳಪಡಿಸಿದ ಬಳಿಕ ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆಸಿರುವುದು ಕಂಡುಬಂದಿದೆ. ಹಲವು ವಿದೇಶೀ ವಿನಿಮಯ ವ್ಯವಹಾರ ನಿರ್ವಹಣೆಯ ಅಕ್ರಮಗಳ ಒಟ್ಟು ಹದಿಮೂರು ಪ್ರಕರಣಗಳ ಬಗ್ಗೆ ಈ ವ್ಯಕ್ತಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟು ಒಟ್ಟು ಒಂಭತ್ತು ಕೋಟಿ ರೂಪಾಯಿಗಳನ್ನು ದಂಡ ಕಟ್ಟಲು ನಿರ್ದೇಶಿಸಿದೆ.
ಜಯೇಂದ್ರ ಸರಸ್ವತಿ
ಕಾಂಚಿಪುರಂನಲ್ಲಿರುವ ವರದರಾಜೇಂದ್ರಪೆರುಮಾಳ್ ದೇವಸ್ಥಾನದಲ್ಲಿ ಮ್ಯಾನೇಜರ್ ಆಗಿದ್ದ ಸಂಕರರಾಮನ್ ಎಂಬುವರನ್ನು 2004ರ ಸೆಪ್ಟೆಂಬರ್ 3 ರಂದು ಕೊಲೆ ಮಾಡಿದ ಆರೋಪದ ಮೇಲೆ ಕಾಂಚಿ ಕ್ಷೇತ್ರದ ಸ್ವಾಮಿ ಜಯೇಂದ್ರ ಸರಸ್ವತಿ ಹಾಗೂ ಇವರ ಶಿಷ್ಯ ವಿಜಯೇಂದ್ರರನ್ನು ಬಂದಿಸಲಾಗಿತ್ತು.
ರಾಧೇ ಮಾ
ತಮ್ಮನ್ನು ತಾವು ಭಗವಂತನ ಅವತಾರವೆಂದು ಕರೆದುಕೊಂಡ ಈ ಮಹಿಳೆ ಪ್ರಥಮ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಬಳಿಕ ಕ್ಷಿಪ್ರ ಸಮಯದಲ್ಲಿ ಖ್ಯಾತಿ ಗಳಿಸಿದ್ದರು. ತಮ್ಮ ದಿಟ್ಟತನದಿಂದ ಓರ್ವ ಧಾರ್ಮಿಕ ವ್ಯಕ್ತಿ ಹೇಗಿರಬೇಕು ಎಂಬುದನ್ನು ತೋರಿಸಿದರು.
ರಾಧೇ ಮಾ
ಈ ವ್ಯಕ್ತಿತ್ವನ್ನು ನಂಬಿದ ಸಾವಿರಾರು ಜನರು ಅವರ ಭಕ್ತರಾಗಿ ಹೋದರು. ಆದರೆ ಅವರು ತಮ್ಮ ಖಾಸಗಿ ಸಮಯದಲ್ಲಿ ಹೇಗಿರುತ್ತಾರೆ ಎಂಬುದನ್ನು ತೋರಿಸಿದ ಕೆಲವು ಚಿತ್ರಗಳು ಅಂತರ್ಜಾಲದಲ್ಲಿ ಯಾವಾಗ ಪ್ರಕಟಗೊಂಡವೋ ಜನರಿಗೆ ಇವರ ಭಗವಂತನ ಅವತಾರದ ಮೇಲೆ ನಂಬಿಕೆ ಹೊರಟುಹೋಗಿದೆ. ಇವರು ಚಿಕ್ಕ ಕೆಂಪು ಉಡುಗೆ ತೊಟ್ಟು ಅಸಹ್ಯವಾಗಿ ಕಾಣುತ್ತಿರುವ ಚಿತ್ರಗಳು ಅವರ ಭಕ್ತರ ನಂಬಿಕೆ ಉಡುಗಿಸಲಿಕ್ಕೆ ಸಾಕಾಗಿದೆ.
ನಿರ್ಮಲ್ ಬಾಬಾ
ಓರ್ವ ವ್ಯಾಪಾರಿಯಾಗಿದ್ದ ನಿರ್ಮಲ್ ಯಾವಾಗ ತಮ್ಮನ್ನು ತಾವು ದೇವಾಂಶ ಸಂಭೂತರೆಂದು ಕರೆಯಲುತೊಡಗಿದರೋ, ಆಗ ಅವರ ವಾಣಿಜ್ಯ ವಹಿವಾಟುಗಳೂ ಗಗನಕ್ಕೇರತೊಡಗಿದವು. ಆದರೆ ಇವರ ಆಶ್ರಮದಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂಬ ದೂರು ಬಂದ ಬಳಿಕ ನಡೆಸಿದ ತನಿಖೆಯಲ್ಲಿ ಭಕ್ತರಿಂದ ಅವರ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡಲೆಂದು ಸಂಗ್ರಹಿಸಿದ್ಧ ಅಪಾರ ಧನರಾಶಿ ಕಂಡುಬಂದಿತ್ತು. ಈಗ ಈ ಹಣ ಹೇಗೆ ಬಂತು ಎಂಬುದನ್ನು ಇವರು ವಿವರಿಸಲು ವಿಫಲರಾಗಿದ್ದು ನ್ಯಾಯಾಂಗ ವಿಚಾರಣೆ ಎದುರಿಸುತ್ತಿದ್ದಾರೆ.