Just In
- 1 hr ago ಮೀನ ರಾಶಿಯಲ್ಲಿ ರಾಹು-ಮಂಗಳ ಯುತಿಯಿಂದ ಅಂಗಾರಕ ಯೋಗ: 12 ರಾಶಿಗಳ ಮೇಲಿರಲಿದೆ ಈ ನಕರಾತ್ಮಕ ಪರಿಣಾ
- 2 hrs ago ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- 2 hrs ago ಪುರುಷರಲ್ಲಿ ಹೆಚ್ಚಾಗುತ್ತಿದೆ ಬಂಜೆತನ: ಪುರುಷರು ಈ ಆಹಾರ ಸೇವಿಸಿದರೆ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುವುದು
- 3 hrs ago ಏಪ್ರಿಲ್ 24 ದಿನ ಭವಿಷ್ಯ: ಬುಧವಾರದ ಈ ದಿನ ನಿಮ್ಮ ರಾಶಿಫಲ ಹೇಗಿದೆ?
Don't Miss
- Movies 'KGF-2' ಚಿತ್ರದಿಂದ ಸಿಕ್ಕಿದ್ದು 200 ಕೋಟಿ ರೂ.; 'ಟಾಕ್ಸಿಕ್', 'ರಾಮಾಯಣ'ಕ್ಕೆ ಯಶ್ 50-50 ಡೀಲ್!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೆಂಡತಿ ಮೇಲೇ ಅತ್ಯಾಚಾರ ಮಾಡಲು ಸ್ನೇಹಿತನಿಗೆ ಸಹಕರಿಸಿದ ಪಾಪಿ ಪತಿ!
ತನ್ನ ಪತ್ನಿಯನ್ನೇ ಸ್ನೇಹಿತನಿಗೆ ಬಲಾತ್ಕರಿಸಲು ಅವಕಾಶ ಮಾಡಿಕೊಟ್ಟ ಭೀಭತ್ಸವಾದ ಪ್ರಕರಣದ ವಿವರಗಳನ್ನು ಈ ಲೇಖನದಲ್ಲಿ ನೀಡಲಾಗಿದೆ, ಮುಂದೆ ಓದಿ...
ಈ ವಿಶ್ವದಲ್ಲಿ ಒಳ್ಳೆಯವರು ಕೆಟ್ಟವರು ಎಲ್ಲರೂ ಇದ್ದರೂ ಕೆಲವು ವ್ಯಕ್ತಿಗಳು ಮಾತ್ರ ರಾಕ್ಷಸತನದ ಪರಮಾವಧಿಯನ್ನು ದಾಟಿ ಮಾನವತೆಗೇ ಕಳಂಕ ತರುತ್ತಾರೆ. ಇದರಲ್ಲಿ ಪ್ರಮುಖರಾದವರೆಂದರೆ ಬಲಾತ್ಕಾರಿಗಳು. ಹೊರನೋಟಕ್ಕೆ ಇವರು ಸಭ್ಯರಂತೆ ಸೋಗು ಹಾಕಿಕೊಂಡಿದ್ದು ಕಳ್ಳತನದಿಂದ ಅಮಾಯಕರನ್ನು ಮೋಸದಿಂದ ತಮ್ಮ ತೃಷೆ ತೀರಿಸಿಕೊಳ್ಳುವ ಕಾಮನೆಗೆ ಬಳಸಿಕೊಳ್ಳುತ್ತಾರೆ. ತಂಗಿಯ ಮೇಲೇ ಅತ್ಯಾಚಾರ ಎಸಗಿದ ಹನ್ನೊಂದರ ಪೋರ!
ಕೆಲವರು ಇತರರ ಅಸಹಾಯಕತೆಯನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡರೆ ಇನ್ನು ಕೆಲವರಂತೂ ತಮ್ಮ ಆಪ್ತರನ್ನೇ ಇತರರಿಗೆ ಎರವಲು ನೀಡುವ ಮೂಲಕ ಮಾನವೀಯತೆಯನ್ನೇ ಮರೆಯುತ್ತಾರೆ. ಇಂತಹ ವ್ಯಕ್ತಿಗಳ ಪಟ್ಟಿಗೆ ಸೇರಿದ ಪತಿಯೊಬ್ಬರು ತಮ್ಮ ಪತ್ನಿಯನ್ನೇ ತಮ್ಮ ಸ್ನೇಹಿತನಿಗೆ ಬಲಾತ್ಕರಿಸಲು ಅವಕಾಶ ಮಾಡಿಕೊಟ್ಟಿದ್ದು ಈಗ ಬೆಳಕಿಗೆ ಬಂದಿದ್ದು ಅಸಹ್ಯದ ಪರಮಾವಧಿ ಹೀಗೂ ಇರಬಹುದೇ ಎಂದು ಚಿಂತಿಸುವಂತಾಗಿದೆ. ನ್ಯಾಯ ಬೇಕೆಂದರೆ ಕೊನೆಗೆ 'ನಗ್ನ ಪರೀಕ್ಷೆ'ಗೆ ರೆಡಿಯಾಗಬೇಕು!
ಈ ಪರಿಯ ಒಪ್ಪಿಗೆಗೆ ಕಾರಣವೇನಾದರೂ ಇರಬೇಕಲ್ಲ? ಇದೆ, ಕೆಳಗಿನ ಲೇಖನದಲ್ಲಿ ವಿವರಿಸಲಾಗಿರುವ ಈ ಕಾರಣವನ್ನು ತಿಳಿದ ಬಳಿಕ ನಿಮ್ಮ ರಕ್ತ ಕೊತಕೊತನೆ ಕುದಿಯುವುದು ಖಾತರಿ. ಆ ಸಮಯದಲ್ಲಿ ಈ ವ್ಯಕ್ತಿ ನಿಮ್ಮ ಎದುರಿಗೇನಾದರೂ ಇದ್ದರೆ ಕೊಲೆಯೇ ಆಗಿ ಬಿಡಬಹುದು. ಬನ್ನಿ, ಮಾನವೀಯತೆಯ ಇತಿಹಾಸದಲ್ಲಿಯೇ ಅತ್ಯಂತ ಭೀಭತ್ಸವಾದ ಪ್ರಕರಣದ ವಿವರಗಳನ್ನು ಈಗ ನೋಡೋಣ...
ಈ ಘಟನೆ ಎಲ್ಲಿ ನಡೆಯಿತು?
ಇದು ನಡೆದದ್ದು, ನಮ್ಮ ಭಾರತದಲ್ಲಿಯೇ, ಹರ್ಯಾನಾ ರಾಜ್ಯದಲ್ಲಿ....
ಈ ಘಟನೆ ಎಲ್ಲಿ ನಡೆಯಿತು?
ರಾಜು ಎಂಬ ವ್ಯಕ್ತಿ ಮತ್ತು ಆತನ ಸ್ನೇಹಿತನ ನಡುವೆ ಒಂದು ಬಿರಿಯಾನಿ ಮತ್ತು ಒಂದು ಬಾಟಲಿ ವಿಸ್ಕಿಯ ಸೇವನೆಗಾಗಿ ಹಣ ಕೊಡುವುದೆಂದು ಒಪ್ಪಂದವಾಗಿತ್ತು.
ಒಂದು ಊಟದ ಬದಲಿಗೆ ಏನು?
ರಾಜುವಿಗೆ ಬಿರಿಯಾನಿ ತುಂಬಾ ಇಷ್ಟವಾಗಿತ್ತು. ಇದರೊಂದಿಗೆ ಹೊಟ್ಟೆ ಸೇರಿದ ಪರಮಾತ್ಮ ತನ್ನ ಕರಾಳ ರೂಪ ತೋರತೊಡಗಿದ್ದ. ಇನ್ನೊಂದು ಚಿಕನ್ ಬಿರಿಯಾನಿ ಬೇಕೆಂದು ಸ್ನೇಹಿತನಿಗೆ ದುಂಬಾಲು ಬಿದ್ದ. ರಾಜು ಪಾನಮತ್ತನಾಗಿದ್ದು ಬಿರಿಯಾನಿಗಾಗಿ ಏನು ಮಾಡಲೂ ತಯಾರಿದ್ದಾನೆಂದು ಅರಿತ ಆತನ ಸ್ನೇಹಿತನ ಮನದಲ್ಲಿ ಕಳ್ಳ ಯೋಜನೆಯೊಂದು ರೂಪುಗೊಂಡಿತ್ತು.
ಬಳಿಕ ಏನಾಯಿತು?
ಆತ ರಾಜುವಿಗೆ ಇನ್ನೊಂದು ಬಿರಿಯಾನಿಯ ಜೊತೆಗೆ ಇನ್ನೊಂದು ಬಾಟಲಿ ವಿಸ್ಕಿಯನ್ನೂ ತರಿಸಿಕೊಟ್ಟ. ಹಣ ತುಂಬಾ ಹೆಚ್ಚಾಯಿತಲ್ಲಾ, ಇದರ ಬದಲಿಗೆ ರಾಜು ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿದ್ದ ಪತ್ನಿಯನ್ನು ಹಂಚಿಕೊಡುವಂತೆ ಕೇಳಿಕೊಂಡ
ಆಕೆ ಇದನ್ನು ಪ್ರತಿಭಟಿಸಿದಳು
ಪಾನಮತ್ತನಾಗಿದ್ದ ರಾಜು ಎರಡು ಮಾತನಾಡದೇ ಇದಕ್ಕೆ ಒಪ್ಪಿಕೊಂಡ. ಈ ಒಪ್ಪಂದದ ಪ್ರಕಾರ ಆ ಸ್ನೇಹಿತ ರಾಜುವಿನ ಪತ್ನಿಯನ್ನು ಸೆಳೆದಾಗ ಆಕೆ ತನ್ನ ಶಕ್ತಿ ಮೀರಿ ಪ್ರತಿಭಟಿಸಿದಳು. ಆದರೆ ಪಾನಮತ್ತನಾಗಿದ್ದ ಆಕೆಯ ಪತಿಯೇ ಆಕೆಯನ್ನು ಸ್ನೇಹಿತನತ್ತ ದೂಡಿದ.
ಆಕೆ ಇದನ್ನು ಪ್ರತಿಭಟಿಸಿದಳು
ಅಲ್ಲದೇ ಆ ಸ್ನೇಹಿತ ನೀಡಿದ್ದ ಎರಡನೆಯ ಬಾಟಲಿ ವಿಸ್ಕಿ ಹೀರುತ್ತಾ ಆ ಸ್ನೇಹಿತ ತನ್ನೆದುರಿಗೇ ತನ್ನ ಪತ್ನಿಯನ್ನು ಬಲಾತ್ಕರಿಸುತ್ತಿರುವುದನ್ನು ನೋಡುತ್ತಾ ವಿಕೃತವಾದ ಆನಂದವನ್ನು ಪಡೆಯುತ್ತಿದ್ದ.
ಮಾನವೀಯತೆ ಎಲ್ಲಿ ಹೋಯಿತು?
ಈ ಪ್ರಕರಣವನ್ನು ಆಕೆ ಪೋಲೀಸರಲ್ಲಿ ತಿಳಿಸಿದ ಬಳಿಕ ಈಗ ಇಬ್ಬರೂ ಪೋಲೀಸರ ಅತಿಥಿಗಳಾಗಿದ್ದಾರೆ. ಆದರೂ ಯಕಶ್ಚಿತ್ ಒಂದು ಬಿರಿಯಾನಿಯ ಬೆಲೆಗೆ ತನ್ನ ಪತ್ನಿಯನ್ನೇ ಪಣವಿಡುವುದೆಂದರೆ ಇದಕ್ಕಿಂತ ಭೀಭತ್ಸತೆ ಕಾಣುತ್ತದೆಯೇ?
ಮಾನವೀಯತೆ ಎಲ್ಲಿ ಹೋಯಿತು?
ವಾಸ್ತವವಾಗಿ ಇದರ ಹಿಂದೆ ಮದ್ಯದ ಅಮಲೇ ಕೆಲಸ ಮಾಡುತ್ತಿದ್ದು ಪಾನಮತ್ತ ಸಮಯದಲ್ಲಿ ಮೆದುಳು ವಿವೇಚನೆಯನ್ನು ಮರೆತ ಕಾರಣವೇ ಈ ಕೃತ್ಯ ನಡೆದಿದೆ. ಬಲಾತ್ಕಾರದ ಪ್ರಕರಣ ದಾಖಲಾಗಿದ್ದು ನ್ಯಾಯಾಲಯದ ತೀರ್ಪು ಇನ್ನೇನು ಬರಬೇಕಿದೆ.
ನ್ಯಾಯ ಆಕೆಯ ಪರವಾಗಿ ಬರಲಿ......
ನ್ಯಾಯ ಆಕೆಯ ಪರವಾಗಿ ಬರಲಿ, ಜಗತ್ತಿನ ಎಲ್ಲರೂ ಈ ತೀರ್ಪಿನಿಂದ ಪಾಠ ಕಲಿಯುವಂತಾಗಲಿ ಎಂದು ನಾವೆಲ್ಲಾ ಅಶಿಸೋಣ.