Just In
- 1 min ago ದಿನ ಭವಿಷ್ಯ ಏಪ್ರಿಲ್ 21: ಭಾನುವಾರ ಯಾವ ರಾಶಿಯವರಿಗೆ ಒಳ್ಳೆಯದು? ಹಣಕಾಸು ಹೇಗಿರಲಿದೆ?
- 1 hr ago ಗುರು ಸಂಚಾರ 2024: ವೃಶ್ಚಿಕ ರಾಶಿಯವರಿಗೆ ಗುರು ಸಂಚಾರದಿಂದ ಅದೃಷ್ಟದ ಬೆಂಬಲ
- 4 hrs ago ಗುರು ಸಂಚಾರ 2024: ತುಲಾ ರಾಶಿಯಲ್ಲಿ 12 ತಿಂಗಳು ಗುರುವಿನ ಪ್ರಭಾವ ಹೇಗಿರಲಿದೆ?
- 7 hrs ago 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
Don't Miss
- Sports DC vs SRH: ಟ್ರಾವಿಸ್ ಹೆಡ್, ಅಭಿಷೇಕ್ ದಾಖಲೆಯ ಜೊತೆಯಾಟ: ಡೆಲ್ಲಿ ಗೆಲುವಿಗೆ ಬೃಹತ್ ಗುರಿ
- News ಕಲೆ ಮತ್ತು ಕಲೆಗಾರ! ಪ್ರಧಾನಿ ನರೇಂದ್ರ ಮೋದಿ ಕಾಲೆಳೆದ ಸಿಎಂ ಸಿದ್ದರಾಮಯ್ಯ
- Movies ರಾಜಕೀಯ ಆಯಾಮ ಬೇಡ, ಜನಸಾಮಾನ್ಯರ ಕೈಗೆ ಒಪ್ಪಿಸಿ ಎಂದ ರಚಿತಾ ರಾಮ್ ; #JusticeForNeha ಎಂದ ರಿಷಬ್ ಶೆಟ್ಟಿ..!
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶಸ್ತ್ರಚಿಕಿತ್ಸೆಯ ಸಮಯದಲ್ಲಿ ವೈದ್ಯರ ಡ್ಯಾನ್ಸ್! ವಿಡಿಯೋ ವೈರಲ್
ವೈದ್ಯರನ್ನು ನಾರಾಯಣ ಅಂದರೆ ದೇವರ ಸ್ವರೂಪಿ ಎಂದು ಕರೆಯುತ್ತಾರೆ, ಅಲ್ಲದೆ ಮತ್ತೊಮ್ಮೆ ಜೀವ ನೀಡಿದ ಮಹಾನ್ ತಾಯಿಗೂ ಹೋಲಿಸುತ್ತಾರೆ, ಆದರೆ ಈ ಲೇಖನದಲ್ಲಿ ವೈದ್ಯರ ಬಗ್ಗೆ ನೀಡಿದ ಮಾಹಿತಿ ಕೇಳಿದರೆ ಅಚ್ಚರಿಪಡುವಿರಿ
ಓರ್ವ ವೈದ್ಯರಿಗೆ ಶಸ್ತ್ರಚಿಕಿತ್ಸೆ ನಡೆಸುವುದು ಎಂದರೆ ಯಾವುದೇ ತಪಸ್ಸಿಗೆ ಕಡಿಮೆ ಇರದ ಸಾಧನೆ, ಏಕಾಗ್ರತೆಯ ಅಗತ್ಯವಿದೆ. ಏಕೆಂದರೆ ಇಲ್ಲಿ ತಪ್ಪಿಗೆ ಅವಕಾಶವೇ ಇಲ್ಲ. ವೈದ್ಯರ ತಪ್ಪಿನಿಂದ ರೋಗಿ ಪರಂಧಾಮಕ್ಕೆ ಧಾವಿಸಬಹುದು. ಈ ಸಮಯದಲ್ಲಿ ವೈದ್ಯರಿಗೆ ಮನಸ್ಸನ್ನು ಬೇರೆಡೆ ಆಕರ್ಷಿಸುವ ಯಾವುದೇ ವಿಷಯ ಶಸ್ತ್ರಚಿಕಿತ್ಸೆಯ ಕೊಠಡಿಯಲ್ಲಿ ಇರಲೇಬಾರದು.
ಇದೇ ಕಾರಣಕ್ಕೆ ಶಸ್ತ್ರಚಿಕಿತ್ಸಾ ಕೊಠಡಿಯ ಹೊರಗೆ ಮಾತನಾಡುವುದು, ಸಂಗೀತ, ಮೊಬೈಲ್ ಇತ್ಯಾದಿ ಎಲ್ಲಕ್ಕೂ ನಿಷೇಧವಿದೆ. ಆದರೆ ಇಂತಹ ಒಂದು ಕೊಠಡಿಯಲ್ಲಿ ದಾದಿಯೊಬ್ಬರೊಂದಿಗೆ ಶಸ್ತ್ರಚಿಕಿತ್ಸಕ ವೈದ್ಯರು ಶಸ್ತ್ರಚಿಕಿತ್ಸೆಯ ಸಮಯದಲ್ಲಿಯೇ ನರ್ತಿಸಿದ್ದು ಮಾತ್ರ ಅಚ್ಚರಿಯ ವಿಷಯವಾಗಿದೆ...! 'ಎದೆಗಾತಿ'ಯಾಗಲು ಪ್ಲಾಸ್ಟಿಕ್ ಸರ್ಜರಿ ಮೊರೆ ಹೊಕ್ಕ ಸಿನಿ ತಾರೆಯರು!
ಹೌದು,
ನಂಬಲೇ
ಸಾಧ್ಯವಿಲ್ಲದ
ಈ
ಸಂಗತಿ
ನಿಜವಾಗಿದೆ.
ಇದಕ್ಕೆ
ಪುರಾವೆಯಾಗಿ
ವಿಡಿಯೋ
ಮುದ್ರಣವನ್ನೂ
ನೀವು
ನೋಡಬಹುದು.
ನಮ್ಮೆಲ್ಲರಿಗೂ
ನಮ್ಮ
ಕೆಲಸ
ಇಷ್ಟದ
ಸಂಗತಿಯಾಗಿದ್ದು
ಈ
ನಡುವೆ
ಕೊಂಚ
ಸಂಗೀತ
ನರ್ತನ
ಸಹ್ಯವಾಗಿದೆ.
ಆದರೆ
ಶಸ್ತ್ರಚಿಕಿತ್ಸೆಯಂತಹ
ಅತ್ಯಂತ
ಗಹನ
ಮತ್ತು
ಸೂಕ್ಷ್ಮ
ವಿಷಯದ
ಸಮಯದಲ್ಲಿ
ಸಂಗೀತ
ನರ್ತನ
ಸರ್ವಥಾ
ಸಲ್ಲದು.
ಆದರೆ
ನುರಿತ
ಈ
ತಜ್ಞರಿಗೆ
ಈ
ರೀತಿಯ
ವರ್ತನೆ
ಸರಿಯಾಗಿತ್ತೇ?
ಹೆಚ್ಚಿನವರು
ಇದನ್ನು
ತಪ್ಪು
ಎಂದೇ
ಹೇಳುತ್ತಾರೆ.
ಇಂದು ಸಾಮಾಜಿಕ ತಾಣದಲ್ಲಿ ವಿಡಿಯೋಗಳನ್ನು ಹಂಚಿಕೊಳ್ಳುವುದು ಕಡ್ಲೆಕಾಯಿ ಹಂಚಿಕೊಳ್ಳುವುದಕ್ಕಿಂತ ಸುಲಭವಾದ ಬಳಿಕ ತಮ್ಮನ್ನು ಹೆಚ್ಚಿನ ಜನರ ನಡುವೆ ಗುರುತಿಸಿಕೊಳ್ಳಲು ಚಿತ್ರ ವಿಚಿತ್ರವಾದ ವಿಧಾನಗಳನ್ನು ಅನುಸರಿಸುತ್ತಾರೆ. ಕೆಲವು ವಿಧಾನಗಳು ಅಪಾಯಕಾರಿಯೂ ಆಗಿವೆ. ಉದಾಹರಣೆಗೆ ಅಪಾಯಕರ ಅಂಚಿನಲ್ಲಿ ಸೆಲ್ಫಿ ತೆಗೆದುಕೊಳ್ಳುವುದು. ಇವೆಲ್ಲಾ ಪ್ಲಾಸ್ಟಿಕ್ ಸರ್ಜರಿ ಮಹಿಮೆ! ಹೀಗೂ ಉಂಟೇ..?
ಈ
ವೈದ್ಯರೂ
ತಮ್ಮ
ಕೆಲಸದ
ನಡುವೆ
ನರ್ತಿಸಿ
ಇದರ
ವೀಡಿಯೋ
ಮೂಲಕ
ಜನಪ್ರಿಯತೆ
ಗಳಿಸಿಕೊಳ್ಳಲು
ಯತ್ನಿಸಿರಬಾರದೇಕೆ?
ನಿಮ್ಮ
ಅನುಮಾನವೂ
ಇದೇ
ಆಗಿದ್ದರೆ
ಕೆಳಗಿನ
ಮಾಹಿತಿ
ನಿಮ್ಮ
ಕುತೂಹಲ
ತಣಿಸಲಿದೆ.....
ಈ ವಿಡಿಯೋ ಸಾಮಾಜಿಕ ತಾಣದಲ್ಲಿ ತಪ್ಪಿ ಬಂದಿದೆ
ಈ ವೈದ್ಯರು 'ಮಹಿಳೆಯರನ್ನು ಘಾಸಿಗೊಳಿಸುತ್ತಿದ್ದಾರೆ' ಎಂಬ ಆರೋಪ ಹೊರಿಸಿದ ವ್ಯಕ್ತಿಯೊಬ್ಬ ಗುಟ್ಟಾಗಿ ಈ ವಿಡಿಯೋಗಳನ್ನು ತೆಗೆದಿದ್ದು ಸಾಮಾಜಿಕ ಜಾಲತಾಣದಲ್ಲಿ ನಿಧಾನವಾಗಿ ಹರಿಬಿಟ್ಟಿದ್ದ. ಇದೊಂದೇ ಅಲ್ಲ, ಇದೇ ವೈದ್ಯರ ಇನ್ನೂ ಹಲವಾರು ವಿಡಿಯೋಗಳನ್ನು ತೆಗೆದಿದ್ದಾನೆ. Image courtesy
ಈ ವಿಡಿಯೋವನ್ನು ಹರಿಬಿಟ್ಟಿದ್ದು ನಗರಪಾಲಿಕಾ ಕೌನ್ಸಿಲರ್
ಕೊಲಂಬಿಯಾ ದೇಶದ ವಾಯುವ್ಯ ಪ್ರಾಂತದಲ್ಲಿರುವ ಮೆಡೆಲ್ಲಿನ್ ನಗರದ ಕೌನ್ಸಿಲರ್ ಆಗಿರುವ ಬರ್ನಾರ್ಡೋ ಅಲೆಜಾಂದ್ರೋ ಗುವೇರಾ ರವರು ಈ ವೀಡಿಯೋವನ್ನು ಸಾಮಾಜಿಕ ತಾಣದಲ್ಲಿ ಎಲ್ಲರ ಗಮನ ಸೆಳೆಯುವಂತೆ ಹರಿಬಿಟ್ಟಿದ್ದು ಈ ವೈದ್ಯರ ವಿರುದ್ಧ ಹಾಗೂ ಈ ರೀತಿಯ ಕೃತ್ಯ ಮತ್ತು ಅಜಾಗರೂಕತೆ ಎಸಗುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಆಗ್ರಹಿಸಿದ್ದಾರೆ. Image courtesy
ಓರ್ವ ರೋಗಿ ಈ ವೈದ್ಯರನ್ನು ಗುರುತಿಸಿದ್ದಾರೆ
ಈ ವೈದ್ಯರ ಬಳಿ ಚಿಕಿತ್ಸೆ ಪಡೆದ ಮಹಿಳೆಯೊಬ್ಬರು ಈ ವಿಡಿಯೋವನ್ನು ಕಂಡು ಈ ವೈದ್ಯರನ್ನು ಕಂಡು ಗುರುತು ಹಿಡಿದಿದ್ದಾರೆ. ಈಕೆ ತಮ್ಮ ದೊಡ್ಡ ಹೊಟ್ಟೆ ಮತ್ತು ಸ್ತನಗಳ ಚಿಕಿತ್ಸೆ ನಡೆಸಲು ಈ ವೈದ್ಯರ ಬಳಿ ಬಂದಿದ್ದು ಶಸ್ತ್ರಚಿಕಿತ್ಸೆಯ ಬಳಿಕ ಮೂರೇ ದಿನದಲ್ಲಿ ಇವರ ಆರೋಗ್ಯ ಬಿಗಡಾಯಿಸಿತ್ತು.
ಈ ಕ್ರಮ ವೈದ್ಯವಿಜ್ಞಾನಕ್ಕೇ ಅವಮಾನ
ವಿಶ್ವದಾದ್ಯಂತ ವೈದ್ಯರು ಮತ್ತು ಶಸ್ತ್ರಚಿಕಿತ್ಸಕರು ಪ್ರತಿಜ್ಞೆಯನ್ನು ಪಾಲಿಸಬೇಕಾಗುತ್ತದೆ. ಶಸ್ತ್ರಚಿಕಿತ್ಸೆಯ ವೇಳೆ ರೋಗಿಗೆ ಅಗತ್ಯವಿರುವ ಎಲ್ಲಾ ರೀತಿಯ ನ್ಯಾಯ ಒದಗಿಸುವುದೂ ಈ ಪ್ರತಿಜ್ಞೆಯಲ್ಲಿ ಒಂದು.
ಈ ಕ್ರಮ ವೈದ್ಯವಿಜ್ಞಾನಕ್ಕೇ ಅವಮಾನ
ಈ ವೈದ್ಯರು ಶಸ್ತ್ರಚಿಕಿತ್ಸೆಯ ವೇಳೆ ನರ್ತಿಸುವುದು ವೈದ್ಯವೃತ್ತಿಗೇ ಅವಮಾನಕರವಾಗಿದೆ ಎಂದು ಹೆಚ್ಚಿನ ವೈದ್ಯರು ಅಭಿಪ್ರಾಯ ಪಡುತ್ತಾರೆ.
ಈ ಪರಿಗೆ ದಂಗಾದ ಜನತೆ
ಯಾವಾಗ ಈ ವೀಡಿಯೋ ಜಾಲತಾಣದಲ್ಲಿ ಲಭ್ಯವಾಯಿತೋ, ಜನರು ಮನಸೋ ಇಚ್ಛೆ ಇದನ್ನು ರವಾನಿಸಿ ವೈದ್ಯರ ಕೃತ್ಯವನ್ನು ಜಗತ್ತಿಗೆ ತಿಳಿಸಿದ್ದಾರೆ. ಕರ್ತವ್ಯದ ಸಮಯದಲ್ಲಿ ನರ್ತಿಸಿ ಕರ್ತವ್ಯಲೋಪ ಮಾಡಿದ ವೈದ್ಯರ ಮತ್ತು ಅವರೊಂದಿಗೆ ನರ್ತಿಸಿ ಸಹಯೋಗ ನೀಡಿದ ದಾದಿಯರ ವರ್ತನೆಯನ್ನು ಜಗತ್ತೇ ಖಂಡಿಸಿದೆ.
ಈ ಪರಿಗೆ ದಂಗಾದ ಜನತೆ
ಇವರ ವಿರುದ್ಧ ತಕ್ಷಣ ಸೂಕ್ತ ಕಾನೂನುಕ್ರಮ ಕೈಗೊಳ್ಳಲು ಆಗ್ರಹಿಸಲಾಗಿದೆ.
ಈ ಬಗ್ಗೆ ನಿಮ್ಮ ಅಭಿಪ್ರಾಯವೇನು? ಈ ವಿಡಿಯೋ ನೋಡಿ ನೀವೇ ನಿರ್ಧರಿಸಿ. ಈ ಬಗ್ಗೆ ನಿಮ್ಮ ಅನಿಸಿಕೆಯನ್ನು ಕೆಳಗಿನ ಕಮೆಂಟ್ಸ್ ಭಾಗದಲ್ಲಿ ಬರೆಯಿರಿ.