Just In
- 2 hrs ago ಗುಡ್ಫ್ರೈಡೆ ಆಚರಣೆ ಹುಟ್ಟಿದ್ದು ಹೇಗೆ? ಇದರ ಮಹತ್ವವೇನು ಗೊತ್ತಾ?
- 11 hrs ago ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- 11 hrs ago ಮೀನ ರಾಶಿಯಲ್ಲಿ ಬುಧ ವಕ್ರೀಯ ಚಲನೆ ಮಾಡುವಾಗ ಈ 5 ರಾಶಿಯವರು ವೃತ್ತಿ ಜೀವನದ ಬಗ್ಗೆ ಜಾಗ್ರತೆ
- 12 hrs ago ದಿನ ಭವಿಷ್ಯ ಮಾರ್ಚ್ 29: ಶುಕ್ರವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
Don't Miss
- News Mukhtar Ansari's death: ಉತ್ತರಪ್ರದೇಶದಲ್ಲಿ ಕಿಚ್ಚು ಹಚ್ಚಿದ ಗ್ಯಾಂಗ್ಸ್ಟಾರ್, ರಾಜಕಾರಣಿ ಮುಖ್ತಾರ್ ಅನ್ಸಾರಿ ನಿಧನ
- Technology iPhone: ಆಪಲ್ ಅಂತಿಮವಾಗಿ ಐಫೋನ್ 12 ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿಯೇ ಬಿಟ್ಟಿತು! ಏನದು?
- Movies "ಇವರು ಆಡೋ ಮಾತುಗಳಿಂದ ನಮ್ಮ ತಾಯಿ ಊಟ ಮಾಡ್ತಿಲ್ಲ"; ಕಣ್ಣೀರಿಟ್ಟ ವರ್ತೂರು ಸಂತೋಷ್
- Automobiles Tata Nexon: ಟಾಟಾ ನೆಕ್ಸಾನ್ ಹೊಸ ರೂಪಾಂತರಗಳು ಬಿಡುಗಡೆ, ರೂ.10 ಲಕ್ಷ ಬೆಲೆ.. ಆಕರ್ಷಕ ವೈಶಿಷ್ಟ್ಯಗಳು
- Sports Riyan Parag: 'ಗಾಯದಿಂದ ಮೂರು ದಿನ ಒದ್ದಾಡಿ ಹೋಗಿದ್ದೆ': ರಿಯಾನ್ ಪರಾಗ್
- Finance ಇನ್ಮುಂದೆ ದುಬಾರಿಯಾಗಲಿದೆ ಎಸ್ಬಿಐ ಡೆಬಿಟ್, ಕ್ರೆಡಿಟ್ ಕಾರ್ಡ್ ನಿರ್ವಹಣಾ ಶುಲ್ಕ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈಕೆಯ ವಯಸ್ಸು ಕೇವಲ ಹದಿನಾರು, ಆದರೆ ಇವಳು ಮಾಡಿದ್ದೇನು ಗೊತ್ತೇ?
ಇಂದು ಕ್ರೈಂ ಅಥವಾ ಅಪರಾಧ ಎಂಬ ಪದ ನಮಗೆ ಇಷ್ಟೊಂದು ಸಾಮಾನ್ಯವಾಗಿ ಹೋಗಿದೆ ಎಂದರೆ ನಿತ್ಯವೂ ವೃತ್ತಪತ್ರಿಕೆಗಳಲ್ಲಿ ಒಳ್ಳೆಯ ಸುದ್ದಿಗಳಿಗಿಂತಲೂ ಅಪರಾಧ ಸುದ್ದಿಗಳನ್ನೇ ಓದಿ, ಟೀವಿಯಲ್ಲಿ ಇಂತಹದ್ದೇ ಧಾರಾವಾಹಿಗಳನ್ನು ನೋಡಿ ಅಭ್ಯಾಸವಾಗಿಬಿಟ್ಟಿದೆ. ಅದರಲ್ಲೂ ಚಿಕ್ಕವಯಸ್ಸಿನ ಹೆಣ್ಣುಮಕ್ಕಳು ಗರ್ಭಿಣಿಯರಾಗುವುದು, ಮಾತ್ರೆ ತಿಂದು ಗರ್ಭಪಾತದ ಸಮಯದಲ್ಲಿ ಪ್ರಾಣ ಕಳೆದುಕೊಳ್ಳುವುದು ಇತ್ಯಾದಿ. ಅನೈತಿಕ ಸಂಬಂಧ ಹಿಂದಿರುವ ಸತ್ಯಾಸತ್ಯತೆ...
ಅದರಲ್ಲೂ ಪಾಶ್ಚಾತ್ಯ ದೇಶಗಳಲ್ಲಿ ಸುಲಭವಾಗಿ ಸಿಗುವ ಗರ್ಭನಿರೋಧಕ ಗುಳಿಗೆಗಳನ್ನು ನಂಬಿ ಮುಂದುವರೆಯುವ ಹದಿಹರೆಯದವರು ತಮ್ಮ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಆದರೆ ದಿಗ್ಭ್ರಾಂತಿ ಮೂಡಿಸುವ ಇನ್ನೊಂದು ಸುದ್ದಿಯ ಪ್ರಕಾರ ಹದಿನಾರರ ಯುವತಿಯೊಬ್ಬಳು ಈಗತಾನೇ ಜನ್ಮ ನೀಡಿದ ಮಗುವನ್ನು ಎರಡನೆಯ ಮಹಡಿಯಿಂದ ಕೆಳಕ್ಕೆಸೆದು ಸುದ್ದಿ ಮಾಡಿದ್ದಾಳೆ. ಇಲ್ಲಿನ ಜನರ ಕಥೆ ಕೇಳಿದರೆ, ಕರುಳು ಚುರ್ ಅನ್ನುತ್ತದೆ...
ಲೈಂಗಿಕ ಜೀವನದ ಬಗ್ಗೆ ಅರಿವು ಮೂಡಿಸಲು ಆಗಿರುವ ಮಾಹಿತಿಯ ಕೊರತೆಯ ನೇರ ಪರಿಣಾಮ ಇದಾಗಿದ್ದು ಈ ನಿಟ್ಟಿನಲ್ಲಿ ಹೆಚ್ಚಿನ ಜನಜಾಗೃತಿಯ ಅಗತ್ಯವಿದೆ. ಅನಗತ್ಯ ಬಸುರಿನಿಂದ ಹುಟ್ಟಿದ ಮಗುವನ್ನು ಏನು ಮಾಡುವುದು ಎಂಬ ಯೋಚನೆಯಲ್ಲಿ ಚಿಂತಾಕ್ರಾಂತಳಾಗಿದ್ದ ಈ ಯುವತಿಗೆ ಹೀಗೆ ಮಾಡಲು ಏಕಾಗಿ ಹೊಳೆಯಿತು ಎಂಬುದನ್ನು ಈಗ ನೋಡೋಣ....
ವಾಸ್ತವದಲ್ಲಿ ಏನಾಯಿತು?
ಈ ಬಗ್ಗೆ ಮಾಹಿತಿ ನೀಡಿದ ವರದಿಗಳ ಪ್ರಕಾರ ತನ್ನ ಮಗುವನ್ನು ನೋಡಿದ ತಕ್ಷಣ ಈಕೆಗೆ ಭಯಾನಕವಾದ ಶಾಕ್ ಅಥವಾ ಆಘಾತ ಹೊಡೆದಂತಾಗಿದೆ. ತಕ್ಷಣ ಏನು ಮಾಡಬೇಕೆಂದು ಅರಿಯದೇ ಈ ಮಗುವನ್ನು ನೇರವಾಗಿ ಕಿಟಕಿಯಿಂದ ಹೊರಗೆಸೆದಿದ್ದಾಳೆ.
ಇದೊಂದು ಅಪಘಾತ ಎಂಬ ವಿವರಣೆ
ಈ ಬಗ್ಗೆ ತನಿಖೆ ನಡೆಸಿದಾಗ ಈಗ ತಾನು ಬೇಕೆಂದು ಮಾಡಿದ್ದಲ್ಲವೆಂದೂ ಇದೊಂದು ಅಕಸ್ಮಿಕವಾಗಿ ನಡೆದ ಘಟನೆ ಎಂದೂ, ಈ ಘಟನೆ ನಡೆದಾಗ ತಾನು ಅತ್ಯಂತ ಆಘಾತದಲ್ಲಿದ್ದು ಏಕಾಗಿ ಹೀಗೆ ಮಾಡಿದೆ ಎಂದು ತಿಳಿಯುತ್ತಿಲ್ಲವೆಂದೂ ಆಕೆ ತಿಳಿಸಿದ್ದಾಳೆ.
ಕೆಳಕ್ಕೆ ಬಿದ್ದ ಮಗುವಿಗೇನಾಯಿತು?
ಆರೋಗ್ಯವಂತರೇ ಎರಡನೇ ಮಹಡಿಯಿಂದ ಬಿದ್ದರೆ ಪ್ರಾಣಾಪಾಯವಿದೆ. ಅಂತಹದ್ದರಲ್ಲಿ ಇನ್ನೂ ಹುಟ್ಟಿದ ಎಳೆಯಕೂಸು ಆಘಾತವನ್ನು ಹೇಗೆ ತಡೆದೀತು? ವಿಪರೀತ ಗಾಯಗೊಂಡಿದ್ದ ಮಗು ಕೆಲವೇ ಹೊತ್ತು ಉಸಿರಾಡಿ ಬಳಿಕ ಜೀವನದ ಅಲ್ಪಯಾತ್ರೆಯನ್ನು ಮುಗಿಸಿತು.
ಈಕೆಯ ತಾಯಿ ಮಗುವನ್ನು ಬದುಕಿಸಲು ಯತ್ನಿಸಿದ್ದರು
ಮಗುವನ್ನು ಕೆಳಕ್ಕೆಸೆದ ಬಳಿಕ ಎಚ್ಚೆತ್ತ ಈ ಯುವತಿ ತಕ್ಷಣ ತನ್ನ ತಾಯಿಗೆ ವಿಷಯ ತಿಳಿಸಿದ್ದಾಳೆ. ತಕ್ಷಣವೇ ಕೆಳಕ್ಕೋಡಿದ ಈಕೆಯ ತಾಯಿ ಮಗುವನ್ನು ಎತ್ತಿಕೊಂಡು ಬದುಕಿಸಲು ತನ್ನಿಂದಾದ ಪ್ರಯತ್ನವನ್ನು ನಡೆಸಿದ್ದಾರೆ. ಆದರೆ ಮಗು ಕೊಂಚಕಾಲದ ಬಳಿಕ ತೀರಿಕೊಂಡಿದೆ.
ಕೊನೆಗೂ ಈ ಯುವತಿಯನ್ನು ಆರೋಪಿ ಸ್ಥಾನದಲ್ಲಿರಿಸಲಾಯಿತು
ಕಾರಣವೇನೇ ಇರಲಿ, ಒಂದು ಜೀವವನ್ನು ಬಲವಂತವಾಗಿ ಕೊನೆಗಾಣಿಸುವುದು ಕೊಲೆಯೇ ಎಂದು ಪರಿಗಣಿಸಿದ ಪೋಲೀಸರು ಈಕೆಯನ್ನು ಬಂಧಿಸಿ ಮಗುವಿನ ಕೊಲೆಯ ಆರೋಪವನ್ನು ಹೊರಿಸಿದ್ದಾರೆ. ನ್ಯಾಯಾಲಯದ ತೀರ್ಪು ಬರುವುದು ಇನ್ನೂ ಬಾಕಿ ಇದೆ.