Just In
- 8 min ago ವಾರ ಭವಿಷ್ಯ (ಏಪ್ರಿಲ್20-27) : ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?
- 3 hrs ago ಗುರು ಸಂಚಾರ 2024: ಕನ್ಯಾ ರಾಶಿಯಲ್ಲಿ 12 ತಿಂಗಳು ಗುರುವಿನ ಪ್ರಭಾವ ಹೇಗಿರಲಿದೆ?
- 12 hrs ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 12 hrs ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
Don't Miss
- News Hubballi: ರಾಜ್ಯ ಸರ್ಕಾರದ ವಿರುದ್ಧ ಭಾರೀ ಪ್ರತಿಭಟನೆ: ನೇಹಾ ನಿವಾಸಕ್ಕೆ ಶ್ರೀಗಳು, ಲಕ್ಷ್ಮಿ ಹೆಬ್ಬಾಳ್ಕರ್ ಭೇಟಿ: ಪೊಲೀಸ್ ಅಭಯ
- Technology ನಿಮ್ಮ ಬಳಿ ರೆಡ್ಮಿಯ ಈ ಫೋನ್ ಇದ್ರೆ, ಇಲ್ಲಿದೆ ನಿಮಗೆ ಗುಡ್ನ್ಯೂಸ್!
- Automobiles Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Sports LSG vs CSK IPL 2024: ಐಪಿಎಲ್ನಲ್ಲಿ ಇತಿಹಾಸ ಸೃಷ್ಟಿಸಿದ ಎಂಎಸ್ ಧೋನಿ
- Movies ಹಳೇ ಟ್ವೀಟ್ ಹಾಕಿ ರಕ್ಷಿತ್ ಶೆಟ್ಟಿ ಹೇಳಿದ್ದೇನು? 'ರಿಚರ್ಡ್ ಆಂಟನಿ' ಕಥೆ ಏನಾಯ್ತು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರೈಲು ಹಳಿಗಳ ಕೆಳಗೆ ಒಡೆದ ಜಲ್ಲಿಕಲ್ಲುಗಳನ್ನೇ ಹಾಕುತ್ತಾರೆ ಏಕೆ?
ರೈಲು ಪ್ರಯಾಣ ಇಂದು ಅತ್ಯಂತ ಸಾಮಾನ್ಯವಾಗಿದೆ. ರೈಲುಹಳಿಯ ಮೇಲೆ ಯಾವುದೇ ರೈಲು ಓಡಾಡಿದರೂ, ರೈಲು ಹಳಿಗಳ ಕೆಳಗೆ ಮಾತ್ರ ಕಡ್ಡಾಯವಾಗಿ ಮಧ್ಯಮ ಗಾತ್ರದಲ್ಲಿ ಒಡೆದ ಜಲ್ಲಿಕಲ್ಲುಳಗಳನ್ನೇ ಹಾಸಿರುತ್ತಾರೆ. ಅಷ್ಟೇ ಅಲ್ಲ, ಕಾಲಕಾಲಕ್ಕೆ ಜರಿದುಹೋಗಿದ್ದ ಕಲ್ಲುಗಳನ್ನು ಮತ್ತೆ ಸೇರಿಸುತ್ತಲೂ, ಅಗತ್ಯಬಿದ್ದರೆ ಇನ್ನೂ ಹೆಚ್ಚಿನ ಕಲ್ಲುಗಳನ್ನು ಸೇರಿಸುತ್ತಲೂ ಇರುತ್ತಾರೆ.
ಇದನ್ನು ಗಟ್ಟಿ ಕಾಂಕ್ರೀಟಿನಿಂದ ಶಾಶ್ವತವಾಗಿಸಬಹುದಲ್ಲ, ಇಲ್ಲ, ಜಲ್ಲಿಕಲ್ಲುಗಳನ್ನೇ ಬಳಸುವುದು ಏಕೆಂದು ಗೊತ್ತೇ? ಇದಕ್ಕೆ ವೈಜ್ಞಾನಿಕವಾದ ಕಾರಣವಿದೆ. ಇಂದಿನ ಲೇಖನದಲ್ಲಿ ಜಲ್ಲಿಕಲ್ಲುಗಳನ್ನು ಬಳಸುವ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಲಾಗಿದೆ.
ಇದಕ್ಕೂ
ಮೊದಲು
ಜಲ್ಲಿಕಲ್ಲುಗಳಿಂದಾಗಿ
ಪ್ರಾಣ
ಕಳೆದುಕೊಳ್ಳುವವರ
ಬಗ್ಗೆ
ಅರಿತುಕೊಳ್ಳುವುದು
ಅಗತ್ಯ.
ಜಲ್ಲಿಕಲ್ಲುಗಳು
ರೈಲುಹಳಿಗಳಿಗೆ
ಸೂಕ್ತವೇ
ಹೊರತು
ಇದರ
ಮೇಲೆ
ಮನುಷ್ಯರಾಗಲೀ
ಜಾನುವಾರುಗಳಾಗಲೀ
ಗಟ್ಟಿನೆಲದ
ಮೇಲೆ
ನಡೆದಷ್ಟು
ಸುಲಭವಾಗಿ
ನಡೆಯಲು
ಸಾಧ್ಯವಿಲ್ಲ.
ಹಳಿಗಳ
ಮೇಲೆ
ಧಾವಿಸುತ್ತಿರುವ
ರೈಲು
ಥಟ್ಟನೇ
ನಿಲ್ಲಲೂ
ಸಾಧ್ಯವಿಲ್ಲ.
ಆದ್ದರಿಂದ
ರೈಲು
ಹಳಿಯನ್ನು
ದಾಟುವಾಗ
ಅತಿ
ಹೆಚ್ಚಿನ
ಎಚ್ಚರಿಕೆಯನ್ನು
ವಹಿಸುವುದು
ಅಗತ್ಯ.
ಕಾರಣ #1
ಹಳಿಗಳ ಕೆಳಗೆ ಹಾಸುವ ಈ ಜಲ್ಲಿಕಲ್ಲುಗಳಿಗೆ ತಾಂತ್ರಿಕವಾಗಿ ಬಾಲಾಸ್ಟ್ (ballast) ಎಂದು ಕರೆಯಲಾಗುತ್ತದೆ. ರೈಲುಗಳ ಓಡಾಟಕ್ಕೆ ಈ ಕಲ್ಲುಗಳು ಅತಿ ಅಗತ್ಯವಾಗಿದೆ.
ಕಾರಣ #2
ಎರಡೂ ಕಂಬಿಗಳ ನಡುವೆ ಅಡ್ಡಲಾಗಿ ಮರದ ಅಥವಾ ಕಾಂಕ್ರೀಟಿನ ಅಡ್ಡಪಟ್ಟಿಗಳನ್ನು ರೈಲುಹಳಿಯ ಉದ್ದಕ್ಕೂ ಹಾಸಲಾಗಿರುತ್ತದೆ. ಈ ಅಡ್ಡಪಟ್ಟಿಗಳು ಸರಿಸುಮಾರು ಮುಕ್ಕಾಲು ಪಾಲಿಗಿಂತಲೂ ಹೆಚ್ಚು ಭಾಗ ಜಲ್ಲಿಕಲ್ಲುಗಳ ನಡುವೆ ಹುದುಗಿರುತ್ತದೆ. ರೈಲು ಹಳಿಗಳ ಮೇಲೆ ಓಡುವಾಗ ರೈಲಿನ ಭಾರವನ್ನು ಈ ಪಟ್ಟಿಗಳು ಒಂದೇ ಸ್ಥಳದ ಮೇಲೆ ಹಾಕದೇ ಚಿಕ್ಕ ಚಿಕ್ಕ ಜಲ್ಲಿಕಲ್ಲುಗಳ ಮೂಲಕ ವಿಶಾಲ ಪ್ರದೇಶದ ಮೇಲೆ ಹರಡುತ್ತದೆ. ಅಲ್ಲದೇ ಹಳಿಗಳು ಗಟ್ಟಿಯಾಗಿ ನೆಲಕ್ಕೆ ಕಚ್ಚಿರುವಂತೆ ನೋಡಿಕೊಳ್ಳುತ್ತದೆ.
ಕಾರಣ #3
ಜಲ್ಲಿಕಲ್ಲುಗಳ ಅಂಚುಗಳು ತೀಕ್ಷ್ಣವಾಗಿದ್ದು ಮರದ ಅಥವಾ ಕಾಂಕ್ರೀಟಿನ ಪಟ್ಟಿಗಳನ್ನು ಒತ್ತಡದಲ್ಲಿ ಭದ್ರವಾಗಿ ಕಚ್ಚಿಕೊಂಡಿರಲು ನೆರವಾಗುತ್ತವೆ. ಹೀಗೆ ಹಿಡಿದುಕೊಂಡಿರಬೇಕೆಂದಲೇ ಒಡೆದ ಜಲ್ಲಿಕಲ್ಲುಗಳನ್ನೇ ಆಯ್ದುಕೊಳ್ಳಲಾಗುತ್ತದೆ.
ಕಾರಣ #4
ಹಳಿಗಳು ನೆಲಮಟ್ಟಕ್ಕಿಂತಲೂ ಕೊಂಚ ಎತ್ತರದಲ್ಲಿದ್ದರೆ ಮಾತ್ರ ಮಳೆಗಾಲದಲ್ಲಿ ಹಳಿಗಳು ನೀರಿನಿಂದ ಆವೃತವಾಗದಿರಲು ಸಾಧ್ಯ. ಆದ್ದರಿಂದ ಜಲ್ಲಿಕಲ್ಲುಗಳ ಕೆಳಗೆ ಹೆಚ್ಚಿನ ಮಣ್ಣನ್ನು ಹಾಕಿ ನೆಲಮಟ್ಟಕ್ಕಿಂತಲೂ ಕೊಂಚ ಎತ್ತರವಿರುವಂತೆ ಮಾಡಲಾಗುತ್ತದೆ.
ಕಾರಣ #5
ಹಳಿಗಳ ನಡುವೆ ಮಣ್ಣಿದ್ದರೆ ಕಳೆ ಗಿಡಗಳು ಸುಲಭವಾಗಿ ಬೆಳೆದುಬಿಡುತ್ತವೆ. ಇವನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸಿವುದು ಹೆಚ್ಚಿನ ಖರ್ಚು ಮತ್ತು ಅನಾವಶ್ಯಕ ವಿಳಂಬಕ್ಕೆ ಕಾರಣವಾಗಬಹುದು. ಜಲ್ಲಿಕಲ್ಲುಗಳ ಮೇಲೆ ಕಳೆ ಬೆಳೆಯುವ ಸಾಧ್ಯತೆ ಕಡಿಮೆ ಇರುವುದರಿಂದ ಈ ತೊಂದರೆಯನ್ನು ತಡೆದ ಹಾಗಾಗುತ್ತದೆ.