Just In
- 36 min ago ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- 1 hr ago ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
- 2 hrs ago ದಿನ ಭವಿಷ್ಯ ಏಪ್ರಿಲ್ 20: ಶನಿವಾರದ ಈ ಶುಭ ದಿನ ನಿಮ್ಮ ರಾಶಿಗೆ ಹೇಗಿರಲಿದೆ?
- 4 hrs ago ವೃಷಭ ರಾಶಿಗೆ ಗುರು ಸಂಚಾರ: 10ನೇ ಮನೆಯಲ್ಲಿ ಗುರು ಸಿಂಹ ರಾಶಿಯವರು ಆಸ್ತಿ ಖರೀದಿಸಬಹುದು
Don't Miss
- News RCB: ಆರ್ಸಿಬಿ ಫ್ರಾಂಚೈಸ್ನಿಂದ ಬೆಂಗಳೂರಿನ ಮೂರು ಕೆರೆಗಳ ಪುನಶ್ಚೇತನ
- Movies Srirasthu shubhamasthu: ನಿಧಿ ಹುಡುಕಲು ಹೋದ ಸೊಸೆ ಮಾವನಿಗೆ ಸಿಕ್ಕಿದ್ದು ಬರೀ ಬೂದಿನಾ?
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಾಸ್ತು ಪ್ರಕಾರ ಮನೆಯಲ್ಲಿ ಇಂತಹ ವಸ್ತುಗಳು ಇರಲೇಬಾರದು!
ವಾಸ್ತು ಪ್ರಕಾರ ಕೆಲವೊಂದು ವಸ್ತುಗಳನ್ನು ಮನೆಯ ಒಳಗಡೆ ಇಟ್ಟುಕೊಂಡರೆ ಮನೆಯ ಸುಖ, ನೆಮ್ಮದಿ ಹಾಳಾಗಿ ದಾರಿದ್ರ್ಯ ಬರುತ್ತದೆ ಎನ್ನಲಾಗುತ್ತಿದೆ. ಅಲ್ಲದೆ ಇಂತಹ ವಸ್ತುಗಳನ್ನು ಮನೆಯಲ್ಲಿ ಇಟ್ಟರೆ ಬಡತನ ಮತ್ತು ವೃತ್ತಿಯಲ್ಲೂ ಹಿನ್ನಡೆಯಾಗಬಹುದಂತೆ..
ಮನೆ ಒಳಗಿನವರು ಹೇಗಿದ್ದಾರೆಂದು ಹೇಳಬೇಕಾದರೆ ಮನೆಯ ಅಂಗಳವನ್ನು ನೋಡಿದರೆ ಸಾಕು ಎಂದು ಹಿರಿಯರು ಹೇಳುತ್ತಾರೆ. ಆದರೆ ಇಂದಿನ ದಿನಗಳಲ್ಲಿ ಮನೆಯ ಅಂಗಳಗಳು ಹಳ್ಳಿಗಳಲ್ಲಿ ಮಾತ್ರ ಕಾಣಸಿಗುತ್ತದೆ. ನಗರಗಳಲ್ಲಿ ಅಪಾರ್ಟ್ಮೆಂಟ್ ಗಳಿಂದಾಗಿ ಅಂಗಳವೆನ್ನುವುದು ಏನೆಂದೇ ಮಕ್ಕಳಿಗೆ ತಿಳಿಯದಂತಾಗಿದೆ. ಅಪಾರ್ಟ್ಮೆಂಟ್ಗಳಲ್ಲಿ ವಾಸ ಮಾಡುತ್ತಿರುವವರು ಹೆಚ್ಚಾಗಿ ಪ್ರತಿಯೊಂದು ವಸ್ತುಗಳನ್ನು ಮನೆಯ ಒಳಗಡೆಯೇ ಇಟ್ಟಿರುತ್ತಾರೆ.
ಯಾಕೆಂದರೆ ಸ್ಥಳದ ಅಭಾವವೂ ಇದಕ್ಕೆ ಕಾರಣವಾಗಿದೆ. ಆದರೆ ವಾಸ್ತು ಪ್ರಕಾರವಾಗಿ ಕೆಲವೊಂದು ವಸ್ತುಗಳನ್ನು ಮನೆಯ ಒಳಗಡೆ ಇಟ್ಟುಕೊಂಡರೆ ಅದರಿಂದ ಮನೆಯ ಸುಖ, ನೆಮ್ಮದಿ ಹಾಳಾಗಿ ದಾರಿದ್ರ್ಯ ಬರುತ್ತದೆ ಎನ್ನಲಾಗುತ್ತಿದೆ. ಈ ಲೇಖನದಲ್ಲಿ ಮನೆಯ ಒಳಗಡೆ ಇಡಬಾರದ ಕೆಲವೊಂದು ವಸ್ತುಗಳ ಬಗ್ಗೆ ತಿಳಿಸಿಕೊಡಲಿದ್ದೇವೆ.
ಇಂತಹ ವಸ್ತುಗಳನ್ನು ಮನೆಯಲ್ಲಿ ಇಟ್ಟರೆ ಅದರಿಂದ ಬಡತನ ಬರಬಹುದು ಮತ್ತು ವೃತ್ತಿಯಲ್ಲೂ ಹಿನ್ನಡೆಯಾಗಬಹುದು. ನಿಮ್ಮ ಮನೆಯಲ್ಲಿ ಇಂತಹ ವಸ್ತುಗಳು ಇದ್ದರೆ ಅದನ್ನು ತಕ್ಷಣವೇ ಹೊರಹಾಕಿ. ಇಲ್ಲದಿದ್ದರೆ ನಿಮ್ಮ ಬದುಕಿನಲ್ಲೂ ದಾರಿದ್ರ್ಯ ಕಾಣಿಸಿಕೊಳ್ಳಬಹುದು. ಯಾವ ವಸ್ತುಗಳನ್ನು ಮನೆಯಲ್ಲಿ ಇಡಬಾರದು ಎಂದು ತಿಳಿಯಲು ಮುಂದೆ ಓದಿಕೊಂಡು ಮನೆಯೊಳಗೆ ಇದ್ದರೆ ಅದನ್ನು ಹೊರಹಾಕಿ...
ತುಳಸಿ ಗಿಡ
ತುಳಸಿ ಗಿಡವು ಹಿಂದೂಗಳಿಗೆ ತುಂಬಾ ಪವಿತ್ರವೆಂದು ಹೇಳಲಾಗುತ್ತದೆ. ತುಳಸಿ ಗಿಡವನ್ನು ಮನೆಯ ಅಂಗಳದಲ್ಲಿ ಇಡಬೇಕು. ಮನೆಯ ಒಳಗಡೆ ಅದರಲ್ಲೂ ಮನೆಯ ದಕ್ಷಿಣ ಭಾಗದಲ್ಲಿ ಇದ್ದರೆ ಅದರಿಂದ ನಿಮಗೆ ಮತ್ತು ಕುಟುಂಬಕ್ಕೆ ದೊಡ್ಡ ಸಮಸ್ಯೆಯಾಗಬಹುದು. ದಕ್ಷಿಣ ಭಾಗದಲ್ಲಿ ತುಳಸಿ ಗಿಡವಿದ್ದರೆ ಅದನ್ನು ಈಗಲೇ ಅಲ್ಲಿಂದ ತೆಗೆಯಿರಿ.
ಶೂ ರ್ಯಾಕ್
ಮನೆಯ ಒಳಗಡೆ ಯಾವತ್ತೂ ಶೂ ಹಾಕಿಕೊಂಡು ಹೋಗಬೇಡಿ. ಶೂ ರ್ಯಾಕ್ ಇಡಲು ಮನೆಯ ಹೊರಗಡೆ ಜಾಗ ಮಾಡಿಕೊಳ್ಳಿ. ಇದರಿಂದ ಶೂವನ್ನು ಮನೆಯ ಒಳಗಡೆ ತರುವ ಪ್ರಮೇಯವೇ ಬರುವುದಿಲ್ಲ.
ಹಾಲಿನ ಪಾತ್ರೆ ಮುಚ್ಚಿಡಿ
ಹಾಲಿನ ಪಾತ್ರೆಯನ್ನು ಯಾವಾಗಲೂ ಮುಚ್ಚಿಡಬೇಕೆಂದು ನೆನಪಿಡಿ. ಹಾಲು ಅಥವಾ ಹಾಲಿನ ಯಾವುದೇ ಉತ್ಪನವನ್ನು ಬಾಯಿ ಮುಚ್ಚದೆ ಹಾಗೆ ಇಡಬೇಡಿ. ಹಾಲು ಬಿಸಿಯಾಗಿದ್ದರೆ ಫ್ರಿಡ್ಜ್ ನಲ್ಲಿ ಇಡುವ ಮೊದಲು ಪಾತ್ರೆಯ ಬಾಯಿಮುಚ್ಚಿಕೊಳ್ಳಿ.
ಸ್ವಚ್ಛತೆಗೆ ಆದ್ಯತೆ ನೀಡಿ...
ಮನೆಯನ್ನು ಯಾವಾಗಲೂ ಸ್ವಚ್ಛ ಮಾಡಿಕೊಳ್ಳುತ್ತಾ ಇರಿ ಮತ್ತು ಆದಷ್ಟು ಜೇಡ ಬಲೆಯನ್ನು ತೆಗೆಯಿರಿ. ಮನೆಯು ಅಸ್ತವ್ಯಸ್ತವಾಗಿರದಂತೆ ನೋಡಿಕೊಂಡರೆ ತುಂಬಾ ಒಳ್ಳೆಯದು.
ಬಾಡಿದ ಹೂಗಳು
ಬೆಳಿಗ್ಗೆ ನೀವು ದೇವರಿಗೆ ಹೂವಿನಿಂದ ಅಲಂಕಾರ ಮಾಡಿದ ಬಳಿಕ ಸಂಜೆ ವೇಳೆ ಆ ಹೂಗಳು ಬಾಡಿ ಹೋಗುತ್ತದೆ. ಇದರಿಂದ ಸಂಜೆಯಾದ ಬಳಿಕ ಹೂವುಗಳನ್ನು ತೆಗೆಯಿರಿ. ಬಾಡಿದ ಹೂವುಗಳು ಮನೆಯಲ್ಲಿ ನಕಾರಾತ್ಮಕ ಪರಿಣಾಮ ಉಂಟು ಮಾಡುತ್ತದೆ.
ಮುಳ್ಳಿನ ಗಿಡಗಳು
ಹೆಚ್ಚಿನವರು ಅಲಂಕಾರಕ್ಕಾಗಿ ಪಾಪಸು ಕಳ್ಳಿಯಂತಹ ಮುಳ್ಳಿನ ಗಿಡಗಳನ್ನು ಮನೆಯೊಳಗೆ ಇಡುತ್ತಾರೆ. ಇದರಿಂದ ಬಡತನ ಬರಬಹುದು ಮತ್ತು ಮನೆಯ ಸದಸ್ಯರಿಗೆ ಅನಾರೋಗ್ಯ ಉಂಟಾಗಬಹುದು. ಇದು ತುಂಬಾ ಅಸುರಕ್ಷಿತವೆಂದು ನಂಬಲಾಗಿದೆ.
ಅಶ್ವತ್ಥ ಮರ
ಅಶ್ವತ್ಥ ಮರದ ಕಟ್ಟೆಗೆ ಸುತ್ತು ಬರುತ್ತೇವೆ. ಇದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ. ಆದರೆ ಇದರಲ್ಲಿ ದುಷ್ಟಶಕ್ತಿಗಳು ಕೂಡ ನೆಲೆನಿಲ್ಲುತ್ತದೆಯಂತೆ. ಅಶ್ವತ್ಥ ಗಿಡವು ಮನೆಯೊಳಗೆ ಇದ್ದರೆ ಕುಟುಂಬದ ಸದಸ್ಯರಿಗೆ ಯಾವಾಗ ನೋಡಿದರೂ ಚಿಂತೆ ಮತ್ತು ಭಯ ಆವರಿಸಿಕೊಂಡಿರುತ್ತದೆ.