Just In
- 8 hrs ago ವೃಷಭ ರಾಶಿಗೆ ಗುರು ಸಂಚಾರ: ಗುರು ನಿಮ್ಮ ಲಗ್ನ ಮನೆಯಲ್ಲಿ ಇರುವುದರಿಂದ ಇದರ ಪ್ರಭಾವ ಹೇಗಿರಲಿದೆ?
- 9 hrs ago ವೃಷಭ ರಾಶಿಗೆ ದೇವಗುರುವಿನ ಸಂಚಾರ: ಮೇಷ ರಾಶಿಗಳಿಗೆ ಇದರ ಪ್ರಭಾವ ಹೇಗಿರಲಿದೆ?
- 9 hrs ago ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- 11 hrs ago ದಿನ ಭವಿಷ್ಯ ಏಪ್ರಿಲ್ 19: ಶುಕ್ರವಾರದ ಈ ಶುಭ ದಿನ ನಿಮ್ಮ ರಾಶಿಗೆ ಹೇಗಿರಲಿದೆ?
Don't Miss
- News ಹಳೇ ಹುಲಿ ಪಿಸಿ ಮೋಹನ್ ಎದುರು ಮನ್ಸೂರ್ ಅಲಿ ಖಾನ್ ಕಣಕ್ಕೆ; ಮತ್ತೊಮ್ಮೆ ಇತಿಹಾಸ ಬರೆಯುತ್ತಾರಾ ಬಿಜೆಪಿ ಕಲಿ?
- Finance ಜಗತ್ತಿಗೆ ಭಾರತವೇ ಬಾಸ್, ಅಂತಾರಾಷ್ಟ್ರೀಯ ಹಣಕಾಸು ನಿಧಿ ಹೇಳಿದ್ದು ಏನು?
- Movies 'ಮಾರ್ಟಿನ್' ಚಿತ್ರದ ನಿರ್ಮಾಪಕ- ನಿರ್ದೇಶಕರ ಮಧ್ಯೆ ಕಿರಿಕ್: ಕೊನೆಗೂ ಸಿಕ್ತು ಸ್ಪಷ್ಟನೆ
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಯಶಸ್ವಿ ವ್ಯಕ್ತಿಗಳು ತಮ್ಮ ಸಾಧನೆಗೆ ಬಳಸುವ 7 ಅಸ್ತ್ರಗಳು
ಸಾಧಕರ ಆತ್ಮಚರಿತ್ರೆಯನ್ನು ಓದಿದರೆ ನಮ್ಮ ಜೀವನದ ಉದ್ದೇಶ, ಅದಕ್ಕಾಗಿ ನಾವು ಮಾಡಬೇಕಾದ ಕೆಲಸಗಳ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯುತ್ತದೆ. ಅದೇ ರೀತಿ ಯಶಸ್ವಿ ವ್ಯಕ್ತಿಗಳಾಗಿ ಯಾರೆಲ್ಲಾ ಗುರುತಿಸಿಕೊಂಡಿದ್ದಾರೆ ಅವರ ದಿನಚರಿ ಹಾಗೂ ಹವ್ಯಾಸಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸಿ. ಆಗ ನಿಮಗೆ ಅವರ ಗೆಲುವಿನ ಹಿಂದೆ ಅವರ ಶ್ರಮ ನಿಮಗೆ ಗೋಚರವಾಗುತ್ತದೆ. ಅದರಲ್ಲೂ ಸಾಧಕರರಲ್ಲಿ ಈ ಕೆಳಗಿನ ಗುಣಗಳು ಕಂಡು ಬರುತ್ತವೆ, ಅಲ್ಲದೆ ಅವರ ಆ ಗುಣಗಳೇ ಅವರ ಸಾಧನೆಯ ಮೂಲಮಂತ್ರಗಳಾಗಿರುತ್ತವೆ.
1. ಬೆಳಗ್ಗೆ ಏಳುವುದು: ಬೆಳಗ್ಗೆ ಬೇಗ ಎದ್ದಷ್ಟು ಬೇಗನೆ ಕೆಲಸ ಮಾಡಲು ಅಥವಾ ಮಾಡಬೇಕಾದ ಕೆಲಸಗಳ ಕಡೆ ಗಮನ ಹರಿಸಲು ಪ್ರಾರಂಭಿಸುತ್ತೇವೆ. ಇದರಿಂದ ದುಡಿಯಲು ಅಧಿಕ ಸಮಯ ದೊರೆಯುತ್ತದೆ.
2. ತಾಳ್ಮೆ ಮತ್ತು ವೃತ್ತಿ ನಿಷ್ಠೆ: ತಾಳ್ಮೆ ಅನ್ನುವುದು ಸಾಧಕರ ಮೂಲ ಮಂತ್ರವಾಗಿರುತ್ತದೆ. ಅಲ್ಲದೆ ತಮ್ಮ ಕೆಲಸವನ್ನು ತುಂಬಾ ನಿಷ್ಠೆಯಿಂದ ಮಾಡುವುದಲ್ಲದೆ ಕೆಲಸದ ಮೇಲೆ ಶೇ.100ರಷ್ಟು ಗಮನವನ್ನು ನೀಡುವವರು ಆಗಿರುತ್ತಾರೆ.
3. ನೆಟ್ ವರ್ಕ್: ಸಾಧಕರಿಗೆ ಜನರ ಜೊತೆ ಚೆನ್ನಾಗಿ ಬೆರೆಯುವುದು ಗೊತ್ತಿರುತ್ತದೆ. ಒಳ್ಳೆಯ ಸ್ನೇಹಿತರನ್ನು ಮಾಡಿಕೊಳ್ಳುತ್ತಾರೆ. ಜನರನ್ನು ತಮ್ಮ ಗುಣದಿಂದ ಆಕರ್ಷಿಸುವ ಕಲೆ ಗೊತ್ತಿರುತ್ತದೆ.
4. ಜ್ಞಾನ: ಸಾಕಷ್ಟು ಜ್ಞಾನವನ್ನು ಗಳಿಸಿರುತ್ತಾರೆ. ಆ ಜ್ಞಾನವನ್ನು ಓದಿ ಆಗಿರಬಹುದು, ಅನುಭವದಿಂದ ಇರಬಹುದು ಅಥವಾ ತಾನು ಬೆರೆಯುವ ಸಮಾಜದಿಂದ ಪಡೆದುಕೊಂಡಿರುತ್ತಾರೆ. ಜ್ಞಾನವೇ ಅವರ ಶಕ್ತಿಯಾಗಿರುತ್ತದೆ.
5. ಸಮಯ ಪ್ರಜ್ಞೆ: ಸಾಧಕರಲ್ಲಿ ಸಮಯ ಪ್ರಜ್ಞೆ ಕಂಡು ಬರುತ್ತದೆ. ಸಮಯ ಪ್ರಜ್ಞೆ ಅನ್ನುವುದು ಇದ್ದರೆ ಅಂತಹ ವ್ಯಕ್ತಿಗಳು ಜೀವನದಲ್ಲಿ ಜಯಗಳಿಸುತ್ತಾರೆ.
6. ಲೆಕ್ಕಾಚಾರ: ಸಾಧಕರು ಪ್ರತಿಯೊಂದು ವಿಷಯದ ಬಗ್ಗೆ ಲೆಕ್ಕಚಾರ ಹಾಕಿ ನಂತರ ಕೆಲಸಕ್ಕೆ ಕೈ ಹಾಕುತ್ತಾರೆ. ಈ ರೀತಿ ಮಾಡಿದರೆ ಈ ರೀತಿ ಉಂಟಾಗಬಹುದೆಂಬ ಸ್ಪಷ್ಟ ಕಲ್ಪನೆ ಇರುತ್ತದೆ.
7. ನಿಖರತೆ ಹಾಗೂ ಪರಿಪೂರ್ಣತೆ: ಸಾಧಕರು ಮಾಡುವ ಕೆಲಸದಲ್ಲಿ ಪರಿಪೂರ್ಣತೆ ಇರುತ್ತದೆ. ಅವರ ಆಲೋಚನೆಗಳಲ್ಲಿ ನಿಖರತೆ ಇರುತ್ತದೆ.
ಆದ್ದರಿಂದ ನೀವು ಏನಾದರೂ ಸಾಧನೆ ಮಾಡಬೇಕೆಂದು ಇದ್ದರೆ ಈ ಮೇಲಿನ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಒಳ್ಳೆಯದು.