Just In
- 1 hr ago ವಾರ ಭವಿಷ್ಯ (ಏಪ್ರಿಲ್20-27) : ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?
- 4 hrs ago ಗುರು ಸಂಚಾರ 2024: ಕನ್ಯಾ ರಾಶಿಯಲ್ಲಿ 12 ತಿಂಗಳು ಗುರುವಿನ ಪ್ರಭಾವ ಹೇಗಿರಲಿದೆ?
- 13 hrs ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 14 hrs ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
Don't Miss
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Automobiles Mahindra Thar: ಸುಲಭವಾಗಿ ಆಫ್ರೋಡ್ ಕಿಂಗ್ ಖರೀದಿಸಬೇಕೆ?: ಆನ್ರೊಡ್ ಬೆಲೆ, EMI ಸಂಪೂರ್ಣ ಮಾಹಿತಿ!
- Movies Sathya ; ಸತ್ಯಾ ತವರು ಮನೆಗೆ ಅವಮಾನ ಮಾಡಿದ ಕೀರ್ತನ..!
- News ನೇಹಾ ಕೊಲೆಗೆ ಸಿಎಂ ತೀವ್ರ ಖಂಡನೆ: ಕೊಲೆಗಾರನಿಗೆ ಶಿಕ್ಷೆ ಕುರಿತು ಸಿದ್ದರಾಮಯ್ಯ ಹೇಳಿದ್ದೇನು?
- Technology Vivo: ಶೀಘ್ರದಲ್ಲೇ ವಿವೋ Y38 5G ಸ್ಮಾರ್ಟ್ಫೋನ್; ವಿನ್ಯಾಸ ಮತ್ತು ಫೀಚರ್ಸ್ ಲೀಕ್
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಘೋರಿಗಳ ಅಸಂಪ್ರದಾಯಿಕವಾದ ಮತ್ತು ಭಯ ಭೀತಗೊಳಿಸುವ ಆಚರಣೆಗಳು
ಭಾರತ ಮೂಲತಃ ಸಾಧು, ಸಂತರ ಮತ್ತು ಆಧ್ಯಾತ್ಮದ ತವರೂರು. ಇದರಲ್ಲಿ ಸಾಧುಗಳ ವಿಚಾರಕ್ಕೆ ಬರುವುದಾದರೆ, ನಾವು ಇಲ್ಲಿ ಹಲವಾರು ಬಗೆಯ ಸಾಧುಗಳನ್ನು ಕಾಣಬಹುದು. ಅವರಲ್ಲಿ ಕೆಲವರು ಖಾವಿ ಬಟ್ಟೆಯನ್ನು ಧರಿಸಿದರೆ, ಇನ್ನೂ ಕೆಲವರು ಕಪ್ಪು ಬಣ್ಣದ ವಸ್ತ್ರಗಳನ್ನು ಧರಿಸಿರುತ್ತಾರೆ. ಇನ್ನು ಕೆಲವು ಸಾಧುಗಳು ಬಟ್ಟೆಯನ್ನೆ ಧರಿಸದೆಯೇ ತಿರುಗಾಡುತ್ತಾರೆ. ಸಾಧುಗಳು ಎಂದರೆ ನಮ್ಮ ಮನಸ್ಸಿನಲ್ಲಿ ತಮ್ಮ ಜೀವನವನ್ನು ದೇವರಿಗಾಗಿ ಸಮರ್ಪಿಸಿದ, ಐಹಿಕ ಸುಖ ಭೋಗಗಳನ್ನು ತ್ಯಾಗ ಮಾಡಿ,
ತಮ್ಮ ಆತ್ಮ ಸಾಕ್ಷಾತ್ಕಾರವನ್ನು ಮಾಡಿಕೊಳ್ಳಲು ಜೀವಿಸುತ್ತಿರುವ ವ್ಯಕ್ತಿಗಳ ಚಿತ್ರಣ ನಮ್ಮ ಮುಂದೆ ಬರುತ್ತದೆ. ಆದರೆ ತಮ್ಮದೇ ಆದ ಅಸಂಪ್ರದಾಯಿಕವಾದ ವಿಧಾನಗಳ ಮೂಲಕ ದೇವರನ್ನು ಒಲಿಸಿಕೊಳ್ಳಲು ಶ್ರಮಿಸುವ ಕೆಲವು ಸಾಧುಗಳು ಇರುವರೆಂದು ನಿಮಗೆ ಗೊತ್ತೇ? ಈ ಸಾಧುಗಳು ಇತರರು ಭಯಾನಕವೆಂದು ಪರಿಗಣಿಸುವ ಸ್ಥಳಗಳಲ್ಲಿ ವಾಸಿಸುತ್ತಾರೆ.
ಸ್ಮಶಾನಗಳು ಇವರು ವಾಸಿಸುವ ಸ್ಥಳಗಳಲ್ಲಿ ಒಂದಾಗಿದೆ. ಇವರು ಸ್ಮಶಾನದ ಬೂದಿಯನ್ನು ತಮ್ಮ ಮೈಗೆಲ್ಲ ಬಳಿದುಕೊಳ್ಳುತ್ತಾರೆ. ಇದಲ್ಲದೆ ಮನುಷ್ಯನ ತಲೆ ಬುರುಡೆಯನ್ನು ಇವರು ಬಟ್ಟಲಿನಂತೆ ಬಳಸುತ್ತಾರೆ. ಇದನ್ನು ಇವರು ಕುಡಿಯುವ ಸಲುವಾಗಿ ಬಳಸುತ್ತಾರೆ. ಜೊತೆಗೆ ಇವರು ಮನುಷ್ಯನ ಮಾಂಸವನ್ನು ಸಹ ತಿನ್ನುತ್ತಾರೆ.
ಹಿಂದೂ ಸಂಪ್ರದಾಯಗಳ ಹಿಂದೆ ಇರುವ ಅದ್ಭುತವಾದ ವೈಜ್ಞಾನಿಕ ಕಾರಣಗಳು
ಈಗ ನಿಮಗೆ ಹೊಳೆದಿರಬೇಕು! ನಾವು ಯಾರ ಬಗ್ಗೆ ಇಲ್ಲಿ ಹೇಳಲು ಹೋಗುತ್ತಿದ್ದೇವೆ ಎಂದು! ಹೌದು, ನಾವು ಭಾರತದಲ್ಲಿನ ಅಘೋರಿಗಳ ಕುರಿತಾಗಿ ಹೇಳುತ್ತಿದ್ದೇವೆ. ಅಘೋರಿಗಳು ತಮ್ಮ ನರಭಕ್ಷಕ ಆಚರಣೆಗಳಿಂದ. ಪ್ರಾಣಿ ಬಲಿ ಮತ್ತು ಇನ್ನಿತರ ವಿಲಕ್ಷಣ ಸಂಗತಿಗಳಿಂದ ನಮಗೆ ಚಿರಪರಿಚಿತರಾಗಿದ್ದಾರೆ. ಇವರು ಶಿವನ ಬೈರವ ಅವತಾರದ ಪರಮಭಕ್ತರು. ಇವರ ಗುರಿ ಪುನರ್ಜನ್ಮದಿಂದ ಮುಕ್ತಿಯನ್ನು ಹೊಂದುವುದು. ಹಾಗಾಗಿ ಇವರುಗಳು ಪ್ರಙ್ಞೆಗೆ ಅತೀತವಾದ ಸ್ಥಿತಿಯಲ್ಲಿ ತಮ್ಮ ಜೀವನವನ್ನು ದೂಡುತ್ತಿರುತ್ತಾರೆ ಮತ್ತು ಸಾಮಾಜಿಕ ನಿಷೇಧಗಳ ಮೂಲಕ ಆತ್ಮಸಾಕ್ಷಾತ್ಕಾರವನ್ನು ಸಾಧಿಸಿ "ಮೋಕ್ಷ"ವನ್ನು ಪಡೆಯಲು ಬಯಸುತ್ತಾರೆ. ಅಂತಿಮವಾಗಿ ಇವರು ಜೀವಾತ್ಮ ಮತ್ತು ಪರಮಾತ್ಮ ಬೇರೆ ಅಲ್ಲ (ಅದ್ವೈತ) ಎಂಬುದನ್ನು ಸಾರುವ ಅಂತಿಮ ಸತ್ಯವನ್ನು ತಿಳಿಯಲು ಬಯಸುತ್ತಾರೆ.
ಅಘೋರಿಗಳು ಶಿವನೇತ್ರರಂತೆ ಶಿವನ ಭಕ್ತರಾಗಿದ್ದರು, ಅವರಂತಲ್ಲದೆ ಅತಿಯಾದ ಆಚರಣೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಶಿವನೇತ್ರರು ಸಹ ಶಿವನನ್ನು ಆರಾಧಿಸುತ್ತಾರೆ. ಆದರೆ ಅವರು ಅದಕ್ಕೆ ಅನುಸರಿಸುವುದು ಸಾತ್ವಿಕ ಮಾರ್ಗವನ್ನು. "ಅಘೋರಿ" ಎಂಬ ಪದವು ಸಂಸ್ಕೃತ ಮೂಲದಿಂದ ಬಂದಿದ್ದಾಗಿದೆ. ಇದರರ್ಥ ಅಂಧಕಾರ ರಹಿತ ಎಂದು. ಅಘೋರ್ ಎಂಬುದು ನಿರ್ಭಯದಿಂದ ಕೂಡಿದ ಅಥವಾ ಅಸಹ್ಯ ರಹಿತವಾದ ಸ್ವಾಭಾವಿಕ ಪ್ರಙ್ಞೆಯನ್ನು ಸೂಚಿಸುತ್ತದೆ. ಆದ್ದರಿಂದಲೆ ಅಘೋರಿಗಳು ಭಯವಿಲ್ಲದೆ ಬದುಕುವವರು ಮತ್ತು ಯಾವುದೇ ತಾರತಾಮ್ಯವನ್ನು ಹೊಂದಿಲ್ಲದೆ ಬದುಕುವವರಾಗಿರುತ್ತಾರೆ. ಹಾಗಾದರೆ ಬನ್ನಿ ನಾವು ಈ ಅಘೋರಿಗಳ ಬಗ್ಗೆ, ಅವರ ಜೀವನ ಹಾಗು ಆಚರಣೆಗಳ ಕುರಿತಾಗಿ ಮತ್ತು ನಂಬಿಕೆಗಳ ಬಗ್ಗೆ ಸ್ವಲ್ಪ ಆಳವಾಗಿ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.
ಭಾರತದಲ್ಲಿರುವ 10 ಪ್ರಮುಖ ಮೂಢನಂಬಿಕೆಗಳು
ಅಸಂಪ್ರದಾಯಿಕವಾದ ಮತ್ತು ಭಯ ಭೀತಗೊಳಿಸುವ ಆಚರಣೆಗಳು
ಅಘೋರಿಗಳು ಈ ವಿಶ್ವದಲ್ಲಿ ಯಾವುದು ಅಶುದ್ಧವಲ್ಲ ಎಂಬ ವಿಚಾರವನ್ನು ನಂಬುತ್ತಾರೆ. ಏಕೆಂದರೆ ಪ್ರತಿಯೊಂದು ಶಿವನಿಂದ ಬಂದದ್ದು ಮತ್ತು ಶಿವನ ಬಳಿಗೆ ವಾಪಸ್ ಹೋಗುವುವು. ಹಾಗಾಗಿ ವಿಶ್ವದಲ್ಲಿರುವ ಪ್ರತಿಯೊಂದು ಅಂಶವು ಸಹ ಪರಿಶುದ್ಧತೆಯಿಂದ ಕೂಡಿವೆ ಎಂದು ನಂಬುತ್ತಾರೆ. ಲಯಕಾರಕನಾದ ಶಿವನು ಸ್ಮಶಾನವಾಸಿ. ಆದ್ದರಿಂದ ಅಘೋರಿಗಳು ಸಹ ಸ್ಮಶಾನದ ಸಮೀಪದಲ್ಲಿಯೇ ವಾಸಿಸುತ್ತಾರೆ. ಇವರು ತಮ್ಮ ದೇಹಕ್ಕೆ ಚಿತಾಭಸ್ಮವನ್ನು ಲೇಪಿಸಿಕೊಳ್ಳುತ್ತಾರೆ. ಏಕೆಂದರೆ ಅವರ ಪ್ರಕಾರ ಇದು ಭೂಮಿಯ ಮೇಲಿರುವ ಅಂಶಗಳಲ್ಲಿಯೇ ಅತ್ಯಂತ ಪರಿಶುದ್ಧವಾದ ಅಂಶವಂತೆ. ಜೊತೆಗೆ ಇದು ಭೂಮಿಯ ಮೇಲೆ ಯಾವುದು ಶಾಶ್ವತವಲ್ಲ ಹಾಗು ಒಂದಲ್ಲ ಒಂದು ದಿನ ಎಲ್ಲವೂ ಬೂದಿಯಾಗುತ್ತವೆ ಎಂಬ ಅಂಶವನ್ನು ಸದಾ ನೆನಪಿಗೆ ತರುತ್ತದೆಯಂತೆ.
ಅಸಂಪ್ರಾದಾಯಿಕ ಮತ್ತು ಭಯಾನಕ ಆಚರಣೆಗಳು
ಅಘೋರಿಗಳು ಸತ್ತ ಮನುಷ್ಯನ ಮೂಳೆಗಳನ್ನು ಮತ್ತು ತಲೆ ಬುರುಡೆಗಳನ್ನು ತಮ್ಮ ಆಭರಣಗಳಾಗಿ ಹಾಗು ತಿನ್ನುವ ಬಟ್ಟಲುಗಳಾಗಿ ಬಳಸುತ್ತಾರೆ. ಇವುಗಳನ್ನು ಇವರು ಅಂತ್ಯ ಸಂಸ್ಕಾರದ ನಂತರ ಗಂಗಾ ನದಿಯಲ್ಲಿ ಎಸೆಯುವ ಶವಗಳಿಂದ ಸಂಗ್ರಹಿಸುತ್ತಾರೆ. ಹಿಂದೂ ಆಚಾರದ ಪ್ರಕಾರ ಸಿದ್ಧ ಪುರುಷರ, ಗರ್ಭಿಣಿಯರ, ಹಾವು ಕಡಿತಕ್ಕೆ ಒಳಗಾದವರನ್ನು ಮತ್ತು ಆಗ ತಾನೇ ಜನಿಸಿದ ಮಕ್ಕಳನ್ನು ದಹನ ಮಾಡಬಾರದಂತೆ. ಹಾಗಾಗಿ ಅಂತಹವರನ್ನು ಪವಿತ್ರ ಗಂಗಾನದಿಯಲ್ಲಿ ತೇಲಿ ಬಿಡಲಾಗುತ್ತದೆ. ಇಂತಹ ಶವಗಳನ್ನು ಅಘೋರಿಗಳು ತಮ್ಮ ಬಲಿಪೀಠ ಅಥವಾ ಪೂಜಾ ಸ್ಥಳಗಳಾಗಿ ಮತ್ತು ಕೆಲವೊಮ್ಮೆ ಮರಣದ ನೆನಪಿಗಾಗಿ ಇವುಗಳ ಭಕ್ಷಣೆಯು ಸಹ ನಡೆಯುತ್ತದೆ.
ಶಿವ: ಶ್ರೇಷ್ಠಾತಿ ಶ್ರೇಷ್ಠ ದೈವ
ಅಘೋರಿಗಳ ಪ್ರಕಾರ ಶಿವನ ಬೈರವ ಅವತಾರವು ಶ್ರೇಷ್ಠಾತಿ ಶ್ರೇಷ್ಠ ದೈವವೆಂದು ಪರಿಗಣಿಸಲ್ಪಟ್ಟಿದೆ. ಜಗತ್ತಿನಲ್ಲಿ ನಡೆಯುತ್ತಿರುವ ಎಲ್ಲಾ ಸಂಗತಿ, ಅವುಗಳ ಪರಿಣಾಮ ಮತ್ತು ಸ್ಥಿತಿಗಳಿಗೆ ಶಿವನೇ ಕಾರಣ. ಅಘೋರಿಗಳ ಪ್ರಕಾರ ಪ್ರತಿಯೊಂದು ಆತ್ಮವು ಶಿವನಂತೆ. ಇದು ಅಷ್ಟ ಮಹಾಪಾಶಗಳೆಂದು ಕರೆಯುವ 8 ಐಹಿಕ ಬಂಧನಗಳಿಂದ ಆವರಿಸಲ್ಪಟ್ಟಿದೆ. ಆ ಎಂಟು ಮಹಾಪಾಶಗಳು ಹೀಗಿವೆ. ಈ ಎಂಟು ಬಂಧನಗಳು ಇಂದ್ರಿಯ ಆಸೆ,ಕೋಪ, ಲೋಭ, ದುರಾಸೆ, ಭಯ ಮತ್ತು ದ್ವೇಷಗಳು ಆಗಿವೆ. ಅಘೋರಿಗಳ ಎಲ್ಲಾ ಸಾಧನಗಳು ಮತ್ತು ಆಚರಣೆಗಳು ಈ ಬಂಧನಗಳಿಂದ ವಿಮುಕ್ತಿಯನ್ನು ಪಡೆಯುವ ಕಡೆಗೆ ಸಾಗುತ್ತವೆ.
ನಂಬಿಕೆಗಳು
ಅಘೋರಿಗಳ ಪ್ರತಿಯೊಂದು ಆಚರಣೆಗಳು ಅವರನ್ನು ಮನುಷ್ಯ ಜೀವನದ ಅಷ್ಟ ಮಹಾಪಾಶಗಳಿಂದ ಬಂಧ ಮುಕ್ತಗೊಳಿಸಿ ಶಿವನನ್ನು ಸಾಕ್ಷಾತ್ಕಾರ ಮಾಡಿಕೊಳ್ಳಲು ನೆರವಾಗುತ್ತವೆ. ಸ್ಮಶಾನದಲ್ಲಿ ಇವರು ಮಾಡುವ ಸಾಧನೆಯು ಇವರನ್ನು ಸಾವಿನ ಕುರಿತಾಗಿ ಇರುವ ಭಯದಿಂದ ಮುಕ್ತಿಗೊಳಿಸುತ್ತದೆ. ಕೆಲವೊಮ್ಮೆ ಇವರು ಶವಗಳ ಜೊತೆಗೆ ಲೈಂಗಿಕ ಕ್ರಿಯೆಯಲ್ಲಿ ಸಹ ತೊಡಗಿಕೊಳ್ಳುತ್ತಾರೆ. ಇದರಿಂದ ಅವರಿಗೆ ಲೈಂಗಿಕ ಬಯಕೆಗಳು ಬಿಡುಗಡೆ ಹೊಂದುತ್ತವೆ ಹಾಗು ಅವರ ಇಂದ್ರಿಯ ಆಸೆಗಳು ಅವರಿಂದ ದೂರ ಸರಿಯುತ್ತವೆ. ನಗ್ನವಾಗಿ ಸಂಚರಿಸುವ ಇವರಿಗೆ ಜೀವನದಲ್ಲಿ ಅಗತ್ಯ ಅಂಶಗಳ ಹೊರತಾಗಿ ಯಾವುದೇ ದುರಾಸೆಯಿರುವುದಿಲ್ಲ. ಅಘೋರಿಗಳು ಯಾವುದೇ ಆತ್ಮವು ಈ ಎಂಟು ಬಂಧನಗಳಿಂದ ಬಿಡುಗಡೆ ಹೊಂದಿದ ಮೇಲೆ ಆಕೆ/ಆತನು ಸದಾಶಿವನ ಸಾನಿಧ್ಯದಲ್ಲಿ ಮೋಕ್ಷವನ್ನು ಸಂಪಾದಿಸುತ್ತಾರಂತೆ.
ವಾಮಾಚಾರ
ಅಘೋರಿಗಳ ವಿಲಕ್ಷಣವಾದ ನಡವಳಿಕೆಯನ್ನು ಗಮನಿಸಿ ಜನ ಅವರನ್ನು ಮಂತ್ರವಾದಿಗಳು, ವಾಮಾಚಾರ ಮಾಡುವವರು ಎಂದು ತಪ್ಪಾಗಿ ಗ್ರಹಿಸುತ್ತಾರೆ. ಆದರೆ ಇದು ಸತ್ಯವಲ್ಲ. ನಿರಂತರವಾದ ಯೋಗ ಸಾಧನೆಯಿಂದ ಅವರಿಗೆ ಕೆಲವೊಂದು ಅಲೌಕಿಕ ಶಕ್ತಿಗಳು ಲಭಿಸಿರುವುದು ನಿಜವಾದರು, ಅವರು ಯಾವುದೇ ವಾಮಾಚಾರದಲ್ಲಿ ಪಾಲ್ಗೊಳ್ಳುವುದಿಲ್ಲ. ಅವರ ಆಚರಣೆಗಳು ಮತ್ತು ವಿಧಿ ವಿಧಾನಗಳು ಕೇವಲ ಶಿವನ ನಿಜ ಸ್ವರೂಪವನ್ನು ತಿಳಿದುಕೊಳ್ಳಲು ಮತ್ತು ಮೋಕ್ಷವನ್ನು ಪಡೆಯುವ ಸಲುವಾಗಿ ಸಮರ್ಪಣೆಯಾಗುತ್ತವೆ.
ಅಘೋರಿಗಳನ್ನು ಯಾರನ್ನು ಪೂಜಿಸುತ್ತಾರೆ?
ಅಘೋರಿಗಳು ಶಿವ ಮತ್ತು ಕಾಳಿಯನ್ನು ಪೂಜಿಸುತ್ತಾರೆ. ಅಘೋರಿಗಳಿಗೆ ಅಲೌಕಿಕ ಶಕ್ತಿಗಳಂತಹ ದಶ ಮಹಾವಿದ್ಯೆಗಳನ್ನು ದಯಪಾಲಿಸುವವಳು ಕಾಳಿ ಅಥವಾ ತಾರಾ. ಹಾಗಾಗಿ ಈಕೆಯನ್ನು ಇವರು ಪೂಜಿಸುತ್ತಾರೆ. ಇವರು ಕಾಳಿಯನ್ನು ಧೂಮವತಿ ಎಂಬ ಹೆಸರಿನಿಂದ ಆರಾಧಿಸುತ್ತಾರೆ. ಭಾಗಲಮುಖಿ ಮತ್ತು ಬೈರವಿ ಎಂಬ ಹೆಸರಿನಿಂದಲೂ ಇವರು ಈ ದೇವಿಯನ್ನು ಪೂಜಿಸುತ್ತಾರೆ. ಇದಲ್ಲದೆ ಇವರು ಶಿವನನ್ನು ಆತನ ರುದ್ರ ಸ್ವರೂಪವಾದ ಮಹಾಕಾಳ, ಬೈರವ ಮತ್ತು ವೀರಭದ್ರ ಎಂಬ ಅವತಾರ ರೂಪಗಳಲ್ಲಿ ಆರಾಧಿಸುತ್ತಾರೆ. ಹಿಂಗ್ಲಾಜ್ ಮಾತಾ ಅಘೋರಿಗಳ ಕುಲ ದೇವತೆಯಾಗಿ ಪೂಜಿಸಲ್ಪಡುತ್ತಾಳೆ.
ಸರಳ ತತ್ವಙ್ಞಾನ
ಅಘೋರಿಗಳ ಪ್ರಕಾರ ಇಡೀ ಬ್ರಹ್ಮಾಂಡವೇ ಅವರಲ್ಲಿ ಅಡಕಗೊಂಡಿರುತ್ತದೆ. ತಾವು ನಗ್ನವಾಗಿರುವುದರಿಂದ ಅವರು ಮನುಷ್ಯನ ನಿಜ ಸ್ವರೂಪವನ್ನು ಪ್ರತಿನಿಧಿಸುತ್ತಾರೆ. ಹುಟ್ಟುವಾಗ ಯಾವ ರೂಪದಲ್ಲಿ ಬಂದರೋ, ಹೋಗುವಾಗ ಅದೇ ರೂಪದಲ್ಲಿ ಹೋಗುತ್ತಾರೆ. ಹಾಗಾಗಿ ಅವರು ನಗ್ನವಾಗಿರುವುದರ ಕುರಿತು ಮುಜುಗರವನ್ನು ವ್ಯಕ್ತಪಡಿಸುವುದಿಲ್ಲ. ಅವರು ಪ್ರೀತಿ, ದ್ವೇಷ,ಅಸೂಯೆ ಮತ್ತು ಅಹಂನಂತಹ ಭಾವನೆಗಳಿಂದ ದೂರವಿರುತ್ತಾರೆ. ಅವರ ಪ್ರಕಾರ ಅತಿ ಕೊಳಕು ಮತ್ತು ಅಪವಿತ್ರ ವಸ್ತುಗಳಲ್ಲಿಯೂ ಸಹ ದೇವರು ನೆಲೆಸಿರುತ್ತಾನೆ.
ಅಪಾರ್ಥಕ್ಕೆ ಒಳಗಾದ ಪಂಥ
ಅಘೋರಿಗಳನ್ನು ತುಂಬಾ ಜನ ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ. ಇವರು ಶವಗಳನ್ನು ಭಕ್ಷಿಸುವ ಕಾರಣದಿಂದ ಜನರು ಇವರನ್ನು ವಾಮಾಚಾರದ ಜೊತೆಗೆ ಗುರುತಿಸುತ್ತಾರೆ. ಆದರೆ ಇವರು ಸರಳ ಜೀವಿಗಳು, ದೇವರನ್ನು ಹುಡುಕಲು ಅತಿರೇಕದ ಮಾರ್ಗಗಳನ್ನು ಅನುಸರಿಸುತ್ತಾರೆ ಅಷ್ಟೇ. ಆದರೆ ಇವರಲ್ಲಿ ಗುಣಪಡಿಸುವ ಶಕ್ತಿ ಇದೆ. ಇವರು ಒಬ್ಬ ರೋಗಿಯ ದೇಹದಲ್ಲಿನ ಕಲ್ಮಶಗಳನ್ನು ಹೊರಗೆ ವರ್ಗಾವಣೆ ಮಾಡಿ, ಅವರಿಗೆ ಮತ್ತೆ ಆರೋಗ್ಯವನ್ನು ತಂದು ಕೊಡುವ ಶಕ್ತಿಯನ್ನು ಹೊಂದಿರುತ್ತಾರೆ. ಈ ಶಕ್ತಿ ವಾಮಾಚಾರದ ಮೂಲಕ ಸಿಗುವುದಿಲ್ಲ. ಇದು ಅಘೋರಿಗಳ ಮನಸ್ಸು ಮತ್ತು ದೇಹದ ಅತ್ಯುನ್ನತವಾದ ಹಂತವಾಗಿರುತ್ತದೆ. ಹಾಗಾಗಿಯೇ ಅವರು ತುಂಬಾ ಶಕ್ತಿಶಾಲಿಯಾಗಿರುತ್ತಾರೆ.