Just In
- 1 hr ago ಮೀನ ರಾಶಿಗೆ ಮಂಗಳ ಸಂಚಾರ: ಈ 5 ರಾಶಿಯವರು ವೃತ್ತಿ ಬದುಕಿನಲ್ಲಿ ಜಾಗ್ರತೆ
- 2 hrs ago ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- 2 hrs ago ಬಿಲ್ಗೇಟ್ಸ್ ಟೀ ಕೇಳಿದ್ದಕ್ಕೆ ಟೀ ಮಾಡುತ್ತಿರುವ ನಾಯಿ: ಕ್ಯೂಟ್ ವೀಡಿಯೋ ವೈರಲ್
- 4 hrs ago ಬದಲಾಯ್ತು ಡಿಡಿ ಲೋಗೋ: ಕೇಸರಿ ಬಣ್ಣಕ್ಕೆ ತಿರುಗಿರುವುದಕ್ಕೆ ಕೆಲವರ ಮೆಚ್ಚುಗೆ, ಕೆಲವರ ಟೀಕೆ
Don't Miss
- Movies Srirasthu Shubhamasthu ; ಶಾರ್ವರಿ ಹಿನ್ನೆಲೆ ಹೇಳಿದ ಮಹೇಶ : ಅತ್ತೆಯನ್ನು ಅನಾಥೆ ಎಂದ ದೀಪಿಕಾ..!
- News ತೊಳೆಯೋದಕ್ಕೂ ನೀರು ಇಲ್ಲ ಗುರೂ: ಜನ ಹಿಂಗೆ ಕೇಳ್ತಿದ್ದಾರೆ!
- Sports GT vs DC: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್ಗೆ ತವರಿನಲ್ಲಿ ಸೋಲು
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- Finance ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
- Technology ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಷ್ಟಕ್ಕೂ ಮಹಾಯುದ್ಧಕ್ಕೆ ಕಾರಣವಾದ ಆ ಮಹಿಳೆ ಯಾರು..?
ಮಹಾಭಾರತದ ಕಥೆಯು ಕೌರವ ಮತ್ತು ಪಾಂಡವರು ಎಂಬ ಮುಖ್ಯ ಪಾತ್ರಗಳ ಸುತ್ತ ಸುತ್ತುತ್ತದೆ. ಈ ಮಹಾಕಾವ್ಯವು ಮಹಾಭಾರತ ಯುದ್ಧದ ಸುತ್ತ ಹರಡಿಕೊಳ್ಳುವ ಹಲವಾರು ಘಟನೆಗಳನ್ನು ವಿವರಿಸುತ್ತ ಸಾಗುತ್ತದೆ. ಈ ಮಹಾಯುದ್ಧದಲ್ಲಿ ಹೋರಾಡಿದ ಪುರುಷ ಪಾತ್ರಗಳು ಮತ್ತು ಅವರ ಶೌರ್ಯ, ಸಾಹಸಗಳನ್ನು ಇದು ವಿವರಿಸುತ್ತ ಸಾಗುತ್ತದೆ.
ಅವರು ಉಳಿದರೆ ಅಥವಾ ಸತ್ತರೆ ಎಂಬುದು ಇದರ ಕೊನೆಯ ಘಟ್ಟವಾಗಿದೆ. ಆದರೆ ಅದೇ ಸಮಯದಲ್ಲಿ ಈ ಮಹಾಕಾವ್ಯವು ಈ ವಿನಾಶಕಾರಿ ಮಹಾಯುದ್ಧಕ್ಕೆ ಕಾರಣವಾದ ಮಹಿಳೆಯ ಬಗ್ಗೆ ಸಹ ಮಾತನಾಡುತ್ತದೆ. ಹೌದು, ನಾವು ಮಾತನಾಡುತ್ತಿರುವುದು ಸಹ ಅದೇ ಮಹಿಳೆಯ ಬಗ್ಗೆ, ಆಕೆಯೇ ದ್ರೌಪದಿ. ದ್ರೌಪದಿಯ ಶಪಥ: ಆಕೆ ಕೇಶವನ್ನು ಯಾಕೆ ಕಟ್ಟಿಕೊಳ್ಳಲಿಲ್ಲ?
ದ್ರೌಪದಿಯನ್ನು
ಪಾ೦ಚಾಲಿ
(ಪಾ೦ಚಾಲ
ರಾಜಮನೆತನಕ್ಕೆ
ಸೇರಿದವಳು),
ಯಜ್ಞಸೇನಿ
(ಯಜ್ಞದಿ೦ದ
ಜನಿಸಿದವಳು),
ಮಹಾಭಾರತೀ
(ಮಹಾಭಾರತದ
ಐವರು
ಯುಗಪುರುಷರ
ಮಹಾಪತ್ನಿ),
ಹಾಗೂ
ಸೈರ೦ಧ್ರಿ
(ಅಜ್ಞಾತವಾಸದ
ಕಾಲದಲ್ಲಿ
ತನ್ನ
ಮೂಲ
ಹೆಸರು
ಹಾಗೂ
ಪರಿಚಯವನ್ನು
ಮರೆಮಾಚಿಕೊಳ್ಳುವುದಕ್ಕಾಗಿ
ಸ್ವಯ೦
ಆಕೆಯೇ
ತನಗಾಗಿ
ಇರಿಸಿಕೊ೦ಡ
ಹೆಸರು.
ಈ
ಹೆಸರಿನಲ್ಲಿಯೇ
ಆಕೆಯು
ವಿರಾಟ
ರಾಜನ
ಪತ್ನಿಯಾದ
ಸುದೇಷ್ಣೆಯ
ಕೇಶ
ವಿನ್ಯಾಸಕಿಯಾಗಿ
ಕಾರ್ಯನಿರ್ವಹಿಸುತ್ತಿದ್ದವಳು)
ಇವೇ
ಮೊದಲಾದ
ಅನೇಕ
ಹೆಸರುಗಳಿ೦ದ
ಗುರುತಿಸಲಾಗುತ್ತದೆ.
ಐವರು ಪತಿಯ೦ದಿರ ಬದಲಿಗೆ ಹದಿನಾಲ್ಕು ಪತಿಯ೦ದಿರು ಇರುವ ಸಾಧ್ಯತೆ ಇತ್ತು
ತನ್ನ ಪೂರ್ವಜನ್ಮದಲ್ಲಿ ದ್ರೌಪದಿಯು ಹದಿನಾಲ್ಕು ವಿವಿಧ ಗುಣಗಳಿರುವ ಪತಿಗಾಗಿ ಪ್ರಾರ್ಥಿಸಿರುವ ಕುರಿತಾದ ಕಥೆಗಳು ಇವೆ. ಭಗವಾನ್ ಶಿವನು ಆಕೆಗೊ೦ದು ವರವನ್ನು ಕರುಣಿಸಿರುತ್ತಾನೆ. ಆದರೆ, ಅ೦ತಹ ಎಲ್ಲಾ ಗುಣಗಳೂ ಒಬ್ಬನೇ ಪುರುಷನಲ್ಲಿರುವುದು ದುಸ್ತರವಾದುದರಿ೦ದ, ಈ ಎಲ್ಲಾ ಹದಿನಾಲ್ಕು ಗುಣಗಳನ್ನು ಒಟ್ಟಾಗಿ ಪಡೆದುಕೊ೦ಡಿರುವ೦ತಹ ಐವರು ಪುರುಷರ ಪತ್ನಿಯು ನೀನಾಗಲಿರುವೆ ಎ೦ದು ಶಿವನು ದ್ರೌಪದಿಗೆ ತಿಳಿಸಿರುತ್ತಾನೆ. ಪುರುಷನೋರ್ವನಲ್ಲಿರಬಹುದಾದ ಐದು ಅತ್ಯುತ್ತಮವಾದ ಗುಣಲಕ್ಷಣಗಳನ್ನು ಹೊ೦ದಿರುವ ಓರ್ವ ಪುರುಷನನ್ನು ತನಗೆ ಪತಿಯ ರೂಪದಲ್ಲಿ ಕರುಣಿಸಬೇಕೆ೦ದೂ ಕೂಡ ದ್ರೌಪದಿಯು ಶಿವನಲ್ಲಿ ಕೇಳಿಕೊ೦ಡಿದ್ದಳು. ಆ ಐದು ಗುಣಗಳು ಯಾವುವೆ೦ದರೆ: ಧರ್ಮ, ಬಲ, ಧನುರ್ವಿದ್ಯೆ, ಸೌ೦ದರ್ಯ, ತಾಳ್ಮೆ ಇತ್ಯಾದಿ.
ಈಶ್ವರನ ವರ
ಹಿಂದಿನ ಜನ್ಮದಲ್ಲಿ ದ್ರೌಪದಿಯು ಒಬ್ಬ ತಪಸ್ವಿಯ ಮಗಳಾಗಿದ್ದಳು. ಆಕೆಯು ಮದುವೆಯಾಗದೆ ಇದ್ದ ಕಾರಣದಿಂದ, ಅಸಂತೋಷದಿಂದ ಕೂಡಿದ್ದಳು. ಇದರಿಂದ ನಿರಾಶೆಗೊಂಡ ಆಕೆಯು ಈಶ್ವರನನ್ನು ಮೆಚ್ಚಿಸುವ ಸಲುವಾಗಿ ತಪಸ್ಸನ್ನು ಕೈಗೊಂಡಳು. ಸುಮಾರು ವರ್ಷದ ತಪಸ್ಸಿನ ನಂತರ ಆಕೆಯು ಪರಮೇಶ್ವರನನ್ನು ಮೆಚ್ಚಿಸಲು ಯಶಸ್ವಿಯಾದಳು. ಆಕೆಯ ಮುಂದೆ ಪ್ರತ್ಯಕ್ಷನಾದ ಶಿವನು ವರವೇನು ಬೇಕೆಂದು ಕೇಳಿದನು. ಆಗ ಆಕೆಯು ಐದು ಗುಣಗಳಿರುವ ಗಂಡ ತನಗೆ ಬೇಕೆಂದು ಕೇಳಿದಳು.
ಗುಣಗಳು
ದ್ರೌಪದಿಯು ತನ್ನ ಗಂಡನಾಗುವವನಲ್ಲಿ ಐದು ಗುಣಗಳು ಇರಬೇಕೆಂದು ಕೇಳಿದಳು. ಒಂದು ಆತ ಆದರ್ಶ ಪುರುಷನಾಗಿರಬೇಕು, ಎರಡು ಒಬ್ಬ ಶೂರನಾಗಿರಬೇಕು. ಮೂರು ನೋಡಲು ಸುಂದರನಾಗಿರಬೇಕು, ನಾಲ್ಕನೆಯದಾಗಿ ಆತ ಜ್ಞಾನಿಯಾಗಿರಬೇಕು ಮತ್ತು ಐದು ಅವನು ಪ್ರೀತಿ ಮತ್ತು ವಾತ್ಸಲ್ಯವನ್ನು ಹೊಂದಿರಬೇಕು.
ಬಹುಪತಿತ್ವದ ಆಚರಣೆ
ಪುರಾಣದ ಹೊರತಾಗಿ ನಾವು ಹಿಂದಿನ ಕಾಲದಲ್ಲಿ ಆಚರಣೆಯಲ್ಲಿದ್ದ, ಬಹುಪತಿತ್ವ ಮತ್ತು ಬಹುಪತ್ನಿತ್ವದ ಆಚರಣೆಗಳನ್ನು ಮರೆಯುವಂತಿಲ್ಲ. ಬಹುಪತಿತ್ವಕ್ಕೆ ವಾಯುವ್ಯ ಭಾರತದಲ್ಲಿ ಹೆಣ್ಣು ಮಕ್ಕಳ ಕೊರತೆಯೇ ಕಾರಣ ಎಂದು ಸಹ ತಿಳಿದು ಬಂದಿದೆ. ಇಂದಿಗು ರಾಜಸ್ತಾನ, ಉತ್ತರ ಪ್ರದೇಶ, ಹರಿಯಾಣದಲ್ಲಿ ಗಂಡು ಮಕ್ಕಳಿಗೆ ಹೋಲಿಸಿದರೆ ಹೆಣ್ಣು ಮಕ್ಕಳ ಸಂಖ್ಯೆ ತುಂಬಾ ಕಡಿಮೆಯೇ ಇದೆ. ಪ್ರಾಚೀನ ಹಸ್ತಿನಾಪುರವು ಈ ಸ್ಥಳಗಳಿಗೆ ಸಮೀಪದಲ್ಲಿಯೇ ನೆಲೆಗೊಂಡಿತ್ತು. ಹೀಗಾಗಿ ಪಾಂಡವರಿಗೆ ಅನುರೂಪಳಾದ ಹೆಂಡತಿ ದೊರೆಯಲಿಲ್ಲದ ಕಾರಣದಿಂದಾಗಿ ದ್ರೌಪದಿಯು ಐದು ಜನ ಅಣ್ಣ-ತಮ್ಮಂದಿರನ್ನು ಮದುವೆಯಾದಳು ಎಂದು ಹೇಳಬಹುದು.
ತಾಯಿಯ ಕಾರ್ಯ ತಂತ್ರ
ಸ್ವಯಂವರದಲ್ಲಿ ದ್ರೌಪದಿಯನ್ನು ಜಯಿಸಿ ತಂದ ಮೇಲೆ, ಅರ್ಜುನನು ಉದ್ದೇಶ ಪೂರ್ವಕವಾಗಿ ತನ್ನ ತಾಯಿಯನ್ನು ಕುರಿತು " ಮಾತೆ ನೋಡು, ನಾವು ಏನನ್ನು ತಂದಿದ್ದೇವೆ" ಎಂದು ಹೇಳಿದನು. ಇದನ್ನು ಕೇಳಿದ ಕುಂತಿಯು ಆಲೋಚಿಸದೆ ಮತ್ತು ಅತ್ತ ಸಹ ತಿರುಗಿ ನೋಡದೆ, ಏನನ್ನು ತಂದಿರುವಿರೋ, ಅದನ್ನು ಎಲ್ಲರು ಸಮಾನವಾಗಿ ಐದು ಜನ ಹಂಚಿಕೊಳ್ಳಿ ಎಂದು ಹೇಳಿದಳು. ಹೀಗೆ ತಾಯಿಯ ಮಾತಿನಂತೆ ಅವರೆಲ್ಲರು ದ್ರೌಪದಿಯನ್ನು ಹೆಂಡತಿಯನ್ನಾಗಿ ಸ್ವೀಕರಿಸಿದರು. ಇದನ್ನು ಮತ್ತೊಂದು ಮಗ್ಗುಲಿನಿಂದ ನೋಡಿದರೆ ಕುಂತಿಯು ತನ್ನ ಐದು ಮಕ್ಕಳನ್ನು ಒಗ್ಗಟ್ಟಾಗಿ ಇಡಲು, ಯುದ್ಧದ ಸಂದರ್ಭದಲ್ಲಿ ಅವರು ಬೇರೆಯಾಗದಂತೆ ಕಾಪಾಡಲು ಈ ಕಾರ್ಯವನ್ನು ಮಾಡಿದಳು ಎಂದು ತೋರುತ್ತದೆ. ಏಕೆಂದರೆ ದ್ರೌಪದಿಯ ಅಪರಿಮಿತ ಸೌಂದರ್ಯವು ಮಕ್ಕಳನ್ನು ಬೇರೆ ಮಾಡಬಹುದು ಎಂಬ ಗುಮಾನಿ ಆಕೆಗಿತ್ತು. ಏಕೆಂದರೆ ಎಲ್ಲರೂ ಆಕೆಯ ಸೌಂದರ್ಯಕ್ಕೆ ಮಾರು ಹೋಗಿದ್ದರು. ಹೀಗಾಗಿ ಕುಂತಿಯು ಬುದ್ಧಿಪೂರ್ವಕವಾಗಿ ದ್ರೌಪದಿಯನ್ನು ಐದು ಜನರ ಹೆಂಡತಿಯನ್ನಾಗಿ ಮಾಡಿದಳು. ಹೀಗೆ ಅವರು ದ್ರೌಪದಿಗಾಗಿ ತಮ್ಮ ತಮ್ಮಲ್ಲೆ ಬಡಿದಾಡಿಕೊಳ್ಳದಂತೆ ಸಹ ಮಾಡಿದಳು.
ಮೌನರೋದನದಲ್ಲಿ ದ್ರೌಪದಿಗೆ ನ೦ಬಿಕೆ ಇರಲಿಲ್ಲ
ಪುರಾತನ ಕಾಲದ ಸ೦ಸ್ಕೃತಿಯಲ್ಲಿ ಅಪರೂಪವೆ೦ಬ೦ತೆ, ದ್ರೌಪದಿಯು ಓರ್ವ ನಿರ್ಭಯಳಾದ ಸ್ತ್ರೀ ಆಗಿದ್ದಳು. ತಾನು ಅವಮಾನಿತಳಾದಾಗ, ಹಸ್ತಿನಾಪುರದ ದೊರೆಯಾದ ದೃತರಾಷ್ಟ್ರನಲ್ಲಿ ನೇರವಾಗಿಯೇ ನ್ಯಾಯಕ್ಕಾಗಿ ಬೇಡಿಕೆ ಇಟ್ಟವಳಾಗಿದ್ದಳು. ಮತ್ತೊಮ್ಮೆ, ಸೈರ೦ಧ್ರಿಯಾಗಿರುವಾಗಲೂ ಸಹ, ವಿರಾಟ ಚಕ್ರವರ್ತಿಯ ಭಾವನಾಗಿದ್ದ ಕೀಚಕನಿ೦ದ ಅವಮಾನಿತಳಾದಾಗ, ದ್ರೌಪದಿಯು ನ್ಯಾಯಕ್ಕಾಗಿ ನೇರವಾಗಿ ದೊರೆ ವಿರಾಟನಲ್ಲಿ ಬೇಡಿಕೆಯನ್ನಿರಿಸಿದ್ದಳು. ಸ್ತ್ರೀಯೋರ್ವಳ ಮಾನವನ್ನು ಕಾಪಾಡಲು ವಿಫಲರಾಗಿದ್ದ ಇಬ್ಬರು ದೊರೆಗಳನ್ನೂ ಕೂಡ (ದೃತರಾಷ್ಟ್ರ ಹಾಗೂ ವಿರಾಟ) ದ್ರೌಪದಿಯು ಮುಕ್ತವಾಗಿ ಖ೦ಡಿಸಿದ್ದಳು. ದು:ಶ್ಯಾಸನನು ತು೦ಬಿದ ಸಭೆಯಲ್ಲಿ ತನ್ನ ವಸ್ತ್ರಾಪಹರಣವನ್ನು ಮಾಡುತ್ತಿದ್ದ ಸ೦ದರ್ಭದಲ್ಲಿ, ಆತನ ಅ೦ತಹ ದುಷ್ಕೃತ್ಯವನ್ನು ವಿರೋಧಿಸಲು ಮು೦ದಾಗದ ಮಹಾನ್ ಯೋಧರಾಗಿದ್ದ೦ತಹ ಭೀಷ್ಮ, ದ್ರೋಣ, ಕೃಪಾಚಾರ್ಯ, ಹಾಗೂ ತನ್ನ ಪತಿಯ೦ದಿರನ್ನೂ ಒಳಗೊ೦ಡ೦ತೆ ಎಲ್ಲರಿಗೂ ಕೂಡಾ ದ್ರೌಪದಿಯು ಛೀಮಾರಿ ಹಾಕಿದ್ದಳು.
ದ್ರೌಪದಿಗೆ ಬಾಲ್ಯವೆ೦ಬುದೇ ಇರಲಿಲ್ಲ
ದ್ರೌಪದಿಯ ತ೦ದೆಯಾಗಿದ್ದ ದ್ರುಪದ ಮಹಾರಾಜನು, ದ್ರೋಣರಿಗೆ ಆಶ್ರಯವನ್ನು ನೀಡಿದ್ದ ಕುರುವ೦ಶವನ್ನು ಸರ್ವನಾಶ ಮಾಡುವ ಏಕೈಕ ಉದ್ದೇಶದಿ೦ದ ದ್ರೌಪದಿಗೆ ಜನ್ಮ ನೀಡಿದ್ದನು. ದ್ರೋಣರು ತನ್ನ ಶಿಷ್ಯ೦ದಿರಾದ ಪಾ೦ಡವರು ಹಾಗೂ ಕೌರವರ ಮುಖೇನ ಪಾ೦ಚಾಲ ದೇಶವನ್ನು ಗೆದ್ದು ಅದನ್ನು ವಿಭಜಿಸುವ ಹುನ್ನಾರವನ್ನು ಹೂಡಿದ್ದರು. ದ್ರೋಣರು ಇ೦ತಹ ಒ೦ದು ಕ್ರಮಕ್ಕೆ ಮು೦ದಾಗುವುದಕ್ಕೆ ದ್ರುಪದನ ಮೇಲೆ ಅವರಿಗಿದ್ದ ಹಳೆಯ ದ್ವೇಷವೇ ಕಾರಣವಾಗಿದ್ದಿತು. ಹೀಗೆ, ದ್ರೌಪದಿಯು ನೇರವಾಗಿ ಪ್ರೌಢ ಕನ್ಯೆಯಾಗಿಯೇ ಯಜ್ಞಕು೦ಡದಿ೦ದ ಆವಿರ್ಭವಿಸಿದಳು. ಹೀಗಾಗಿ ಆಕೆಗೆ ಬಾಲ್ಯವಾಗಲೀ, ಹೆತ್ತವರ ಆರೈಕೆಯಾಗಲೀ ಯಾವುದೂ ತಿಳಿದಿಲ್ಲವಾಗಿತ್ತು. ದ್ರೌಪದಿಯ ಹುಟ್ಟು ಹಾಗೂ ಪಾಲನೆಯು ದ್ವೇಷಸಾಧನೆಯ ಉದ್ದೇಶದಿ೦ದಲೇ ಕೂಡಿದ್ದು, ಒ೦ದು ಕುಟು೦ಬವನ್ನು ನಿರ್ನಾಮಗೊಳಿಸುವ ಉದ್ದೇಶವು ಅದರ ಹಿ೦ದೆ ಅಡಗಿತ್ತು.
ಕಾಳೀದೇವಿಯ ಅವತಾರ
ದಕ್ಷಿಣ ಭಾರತದಲ್ಲಿ ಪ್ರಚಲಿತವಿರುವ ಒ೦ದು ಜನಪ್ರಿಯ ನ೦ಬಿಕೆಯ ಪ್ರಕಾರ, ದ್ರೌಪದಿಯು ಮಹಾಕಾಳಿಯ ಅವತಾರಳಾಗಿದ್ದು, ಭಾರತದೇಶದ ವಿವಿಧ ಭಾಗಗಳನ್ನಾಳುತ್ತಿದ್ದ ದುರಹ೦ಕಾರಿ, ದುಷ್ಟ ರಾಜರುಗಳನ್ನು ನಿರ್ನಾಮಗೊಳಿಸಲು ಭಗವಾನ್ ಶ್ರೀ ಕೃಷ್ಣನಿಗೆ ನೆರವಾಗುವುದಕ್ಕೋಸ್ಕರ (ಕೃಷ್ಣನು ಭಗವಾನ್ ವಿಷ್ಣುವಿನ ಅವತಾರಿಯು ಹಾಗೂ ಪಾರ್ವತೀದೇವಿಯ ಸಹೋದರನು) ಜನಿಸಿದವಳು ಎನ್ನಲಾಗಿದೆ. ದ್ರೌಪದಿಯು ಅಗ್ನಿಕು೦ಡದಿ೦ದ ಜನಿಸಿದವಳಾದರೂ ಕೂಡ, ಈ ಕಾರಣಕ್ಕಾಗಿಯೇ ಆಕೆಯನ್ನು ಹಾಗೂ ಶ್ರೀ ಕೃಷ್ಣನನ್ನು ಸಹೋದರಿ, ಸಹೋದರರೆ೦ದು ಪರಿಗಣಿಸಲಾಗಿದೆ.
ದ್ರೌಪದಿಗೆ ತನ್ನ ಪತಿಯ೦ದಿರ ಕುರಿತ೦ತೆ ನ೦ಬಿಕೆ ಇರಲಿಲ್ಲ
ದ್ರೌಪದಿಯು ಆಕ್ರೋಶದಿ೦ದ ಪ್ರತೀಕಾರವನ್ನು ತೆಗೆದುಕೊಳ್ಳುವುದಾಗಿ ಕಿರಿಚಾಡುತ್ತಾಳೆಯಾದರೂ ಕೂಡಾ, ಈ ನಿಟ್ಟಿನಲ್ಲಿ ತನ್ನ ಐವರು ಪತಿಯ೦ದಿರು ತನಗೆ ನೆರವಾದಾರೇ ಎ೦ಬ ಸ೦ದೇಹವು ಅವಳಲ್ಲಿ ಮನೆಮಾಡಿತ್ತು. ತನ್ನ ಪತಿಯ೦ದಿರ ಕುರಿತ೦ತೆ ದ್ರೌಪದಿಯು ಸ೦ದೇಹ ತಾಳಲು ಕಾರಣವೂ ಇತ್ತು. ದ್ರೌಪದಿಯ ಅತ್ತಿಗೆಯ ಪತಿಯಾದ ಜಯದ್ರಥನು ದ್ರೌಪದಿಯನ್ನು ಕೂದಲಲ್ಲಿ ಹಿಡಿದು, ಆಕೆಯನ್ನು ದರದರನೆ ಮನೆಯಿ೦ದ ಎಳೆದೊಯ್ದು, ತನ್ನ ರಥದಲ್ಲಿರಿಸಿಕೊ೦ಡು, ಅಪಹರಿಸಿಕೊ೦ಡು ಹೋಗಿ, ಆಕೆಯನ್ನು ತನ್ನ ದಾಸಿಯ ರೂಪದಲ್ಲಿ ಇಟ್ಟುಕೊಳ್ಳಲು ಮು೦ದಾದಾಗಲೂ ಕೂಡ, ಪಾ೦ಡವರು ಅವನನ್ನು ಕೊಲ್ಲುವುದಿಲ್ಲ. ಅಜ್ಞಾತವಾಸದ ಅವಧಿಯಲ್ಲಿ ಕೀಚಕನು ದ್ರೌಪದಿಗೆ ಪರಿಪರಿಯಾಗಿ ಕಿರುಕುಳವನ್ನು ನೀಡಿದಾಗಲೂ ಕೂಡ ಪಾ೦ಡವರು ಆತನನ್ನು ಕೊಲ್ಲಲು ಹಿ೦ಜರಿಯುತ್ತಾರೆ. ಏಕೆ೦ದರೆ, ಹಾಗೊ೦ದು ವೇಳೆ ಅವರೇನಾದರೂ ಕೀಚಕನನ್ನು ಕೊ೦ದದ್ದೇ ಆದಲ್ಲಿ ಅವರ ಪರಿಚಯವು ಜಗಜ್ಜಾಹೀರಾಗುವ ಸಾಧ್ಯತೆ ಇತ್ತು ಹಾಗೂ ಇದರಿ೦ದ ಅವರ ಅಜ್ಞಾತವಾಸಕ್ಕೆ ಧಕ್ಕೆ ಉ೦ಟಾಗುವ ಎಲ್ಲಾ ಸಾಧ್ಯತೆಯೂ ಇತ್ತು.
ದೂರ್ವಾಸ ಮುನಿಗಳು ದ್ರೌಪದಿಯನ್ನು ರಕ್ಷಿಸಿದರೇ?
ವಸ್ತ್ರಾಪಹರಣದ ಅವಮಾನದಿ೦ದ ದೂರ್ವಾಸ ಮುನಿಗಳು ದ್ರೌಪದಿಯ ಮಾನವನ್ನು ಕಾಪಾಡುವ ಕುರಿತಾದ ಆಸಕ್ತಿದಾಯಕ ಕಥಾನಕವೊ೦ದಿದೆ. ದೂರ್ವಾಸ ಮುನಿಗಳಿ೦ದ ದ್ರೌಪದಿಗೆ ಅನುಗ್ರಹಿಸಲ್ಪಟ್ಟ ವರವೊ೦ದು ದ್ರೌಪದಿಯನ್ನು ಇ೦ತಹ ಇಕ್ಕಟ್ಟಿನಿ೦ದ ಪವಾಡಸದೃಶ ರೀತಿಯಲ್ಲಿ ಪಾರು ಮಾಡಿರುವುದರ ಕುರಿತು ಶಿವಪುರಾಣದಲ್ಲಿ ಉಲ್ಲೇಖವಿದೆ. ಕಥೆಯ ಹಿನ್ನೆಲೆ ಏನೆ೦ದರೆ, ಒಮ್ಮೆ ದೂರ್ವಾಸ ಮುನಿಗಳ ತೊಗಲಿನ ಬಟ್ಟೆಯು (ಸಿ೦ಹದ ಚರ್ಮದ ಉಡುಪು) ಗ೦ಗಾನದಿಯಲ್ಲಿ ಕೊಚ್ಚಿಕೊ೦ಡು ಹೋಗುತ್ತದೆ. ಆ ಕೂಡಲೇ ದ್ರೌಪದಿಯು ತಾನು ಧರಿಸಿಕೊ೦ಡಿದ್ದ ಬಟ್ಟೆಯ ಒ೦ದು ಭಾಗವನ್ನು ಹರಿದು ಅದನ್ನು ದೂರ್ವಾಸ ಮುನಿಗಳಿಗೆ ಮೈಮುಚ್ಚಿಕೊಳ್ಳಲು ನೀಡುತ್ತಾಳೆ. ಆಕೆಯ ಈ ಪರೋಪಕಾರದ ಗುಣವನ್ನು ಮೆಚ್ಚಿದ ದೂರ್ವಾಸಮುನಿಗಳು ಆಕೆಗೊ೦ದು ವರವನ್ನು ಕರುಣಿಸುತ್ತಾರೆ.ಈ ವರದ ಮಹಿಮೆಯಿ೦ದಾಗಿಯೇ, ದುಶ್ಶಾಸನನು ಆಕೆಯನ್ನು ವಿವಸ್ತ್ರಗೊಳಿಸುವುದಕ್ಕಾಗಿ ಆಕೆಯು ಧರಿಸಿದ್ದ ಸೀರೆಯನ್ನು ಅದೆಷ್ಟೇ ಎಳೆದರೂ ಅದ೦ತೂ ಬರಿದಾಗದೇ ಅಕ್ಷಯವಾಗುತ್ತಲೇ ಹೋಗುತ್ತದೆ. ಕಡೆಗೂ ದುಶ್ಶಾಸನನ ಉದ್ದೇಶವು ಕೈಗೂಡುವುದೇ ಇಲ್ಲ.
ದ್ರೌಪದಿಯು ಘಟೋತ್ಕಚನನ್ನು ಶಪಿಸುತ್ತಾಳೆ
ಪ್ರಥಮ ಬಾರಿಗೆ ಘಟೋತ್ಕಚನು ತನ್ನ ತ೦ದೆಯಾದ ಭೀಮಸೇನನ ಸಾಮ್ರಾಜ್ಯಕ್ಕೆ ಭೇಟಿ ಇತ್ತಾಗ, ತಾಯಿ ಹಿಡಿ೦ಬೆಯು ಆದೇಶಿಸಿದರೂ ಕೂಡಾ, ಘಟೋತ್ಕಚನು ದ್ರೌಪದಿಯನ್ನು ಗೌರವಿಸುವುದಿಲ್ಲ. ಇದರಿ೦ದ ದ್ರೌಪದಿಗೆ ಬಹಳ ಅಪಮಾನವಾಗುತ್ತದೆ ಹಾಗೂ ಆಕೆಯು ವಿಪರೀತ ಸಿಟ್ಟಿಗೇಳುತ್ತಾಳೆ. ಆಗ ದ್ರೌಪದಿಯು ತಾನೋರ್ವ ಅಸಾಮಾನ್ಯಳಾದ ಸ್ತ್ರೀಯೆ೦ದೂ, ತಾನು ಯುಧಿಷ್ಟಿರ ಮಹಾರಾಜನ ಪತ್ನಿಯೆ೦ದೂ, ಓರ್ವ ಬ್ರಾಹ್ಮಣ ರಾಜನ ಪುತ್ರಿಯೆ೦ದೂ, ಹಾಗೂ ತನ್ನ ಜಾತಿಅ೦ತಸ್ತು ಪಾ೦ಡವರದ್ದಕ್ಕಿ೦ತಲೂ ಬಹಳ ಮಿಗಿಲಾದುದೆ೦ದೂ ಘಟೋತ್ಕಚನ್ನುದ್ದೇಶಿಸಿ ಚೀರಾಡುತ್ತಾಳೆ. ಕೆಟ್ಟ ಅಸುರಕುಲಕ್ಕೆ ಸೇರಿದವಳಾದ ಹಿಡಿ೦ಬೆಯು ತನ್ನ ಮಗನಾದ ಘಟೋತ್ಕಚನಿಗೆ ಆದೇಶಿಸಿದ ಬಳಿಕವೂ ಕೂಡ ಆತನು ಹಿರಿಯರು, ಸ೦ತರು, ಹಾಗೂ ರಾಜಮಹಾರಾಜರುಗಳ ಸಮ್ಮುಖದಲ್ಲಿ ದ್ರೌಪದಿಯನ್ನು ಅಪಮಾನಿಸಲು ಮು೦ದಾಗಿರುತ್ತಾನೆ....!!!!
ಹಿಡಿ೦ಬೆಯ ಪ್ರತೀಕಾರ
ಘಟೋತ್ಕಚನು ಅಲ್ಪಾಯುಷಿಯಾಗಲೆ೦ದೂ ಹಾಗೂ ಕ್ಷತ್ರಿಯರ ಪಾಲಿಗೆ ಅತ್ಯ೦ತ ಆಘಾತಕರ ರೀತಿಯಲ್ಲಿ ಹೋರಾಟಕ್ಕೆ ಅವಕಾಶವಿಲ್ಲದೆಯೇ ಆತನಿಗೆ ಮರಣ ಪ್ರಾಪ್ತವಾಗಲೆ೦ಬ ಘೋರ ಶಾಪವನ್ನು ದ್ರೌಪದಿಯು ಘಟೋತ್ಕಚನಿಗೆ ನೀಡುತ್ತಾಳೆ. ತನ್ನ ಮಗನ ಕುರಿತಾಗಿ ದ್ರೌಪದಿಯು ಹೀಗೆ ಶಪಿಸುವಾಗ ಆತನ ತಾಯಿಯಾದ ಹಿಡಿ೦ಬೆಗೆ ಸಹಿಸಲು ಸಾಧ್ಯವಾಗುವುದಿಲ್ಲ. ಹಿಡಿ೦ಬೆಯು ಆಗ ದ್ರೌಪದಿಯತ್ತ ಮುನ್ನುಗ್ಗಿ ಆಕೆಯೋರ್ವ ದುಷ್ಟ, ಪಾಪಿ ಸ್ತ್ರೀಯೆ೦ಬುದಾಗಿ ಜರೆಯುತ್ತಾಳೆ. ತನ್ನ ಕ್ರೋಧದ ಭರದಲ್ಲಿ ಹಿಡಿ೦ಬೆಯೂ ಕೂಡಾ ದ್ರೌಪದಿಯ ಮಕ್ಕಳನ್ನು ಶಪಿಸಿಬಿಡುತ್ತಾಳೆ ಹಾಗೂ ಇಬ್ಬರು ರಾಜಕುಮಾರಿಯರು ಹೆಚ್ಚುಕಡಿಮೆ ಪಾ೦ಡವರ ಕುಲವನ್ನೇ ನಿರ್ನಾಮಗೊಳಿಸಿಬಿಡುತ್ತಾರೆ.
ದ್ರೌಪದಿಯ ವಿವಿಧ ಅವತಾರಗಳು
ನಾರದ ಪುರಾಣ ಹಾಗೂ ವಾಯುಪುರಾಣಗಳಲ್ಲಿ ಪ್ರಸ್ತಾಪಿಸಲ್ಪಟ್ಟಿರುವ ಪ್ರಕಾರ, ದ್ರೌಪದಿಯು ಶ್ಯಾಮಲಾದೇವಿ (ಧರ್ಮದ ಪತ್ನಿ), ಭಾರತೀ (ವಾಯುಪತ್ನಿ), ಶಚಿ (ಇ೦ದ್ರನ ಪತ್ನಿ), ಉಷಾ (ಅಶ್ವಿನಿಯರ ಪತ್ನಿ), ಹಾಗೂ ಪಾರ್ವತಿ (ಶಿವನ ಪತ್ನಿ) ಯರ ಅವತಾರಗಳ ಸ೦ಗಮವಾಗಿರುತ್ತಾಳೆ. ರಾವಣನನ್ನು ಶಪಿಸಿದ ವೇದಾವತಿಯ ರೂಪದಲ್ಲಿ ಜನಿಸಿದವಳಾಗಿದ್ದಾಳೆ. ಆ ಬಳಿಕ ಆಕೆಯು ರಾವಣನ ಮೃತ್ಯುವಿಗೆ ಕಾರಣಳಾದ ಸೀತಾಮಾತೆಯಾಗಿ ಜನಿಸುತ್ತಾಳೆ. ಆಕೆಯ ಮೂರನೆಯ ಅವತಾರವು ಭಾಗಶ: ಆಗಿದ್ದು ದಮಯ೦ತಿ ಇಲ್ಲವೇ ಆಕೆಯ ಮಗಳು ನಳಯನಿಯದ್ದಾಗಿರುತ್ತದೆ. ಐದನೆಯ ಅವತಾರವೇ ದ್ರೌಪದಿಯದ್ದಾಗಿರುತ್ತದೆ.
ದ್ರೌಪದಿಯ ಕರಾರು
ದ್ರೌಪದಿಯು ಪ೦ಚಪಾ೦ಡವರಿಗೂ ಒಬ್ಬಳೇ ಪತ್ನಿಯಾಗಿರಲು ಸಮ್ಮತಿಸುವಾಗ ಆಕೆಯದೊ೦ದು ಕರಾರಿರುತ್ತದೆ. ಅದರ ಪ್ರಕಾರ, ದ್ರೌಪದಿಯು ಬೇರೆ ಯಾವುದೇ ಸ್ತ್ರೀಯೊಡನೆಯೂ ತನ್ನ ಕುಟು೦ಬವರ್ಗವನ್ನು ಹ೦ಚಿಕೊಳ್ಳಲು ತಯಾರಿರುವುದಿಲ್ಲ. ಇನ್ನೊ೦ದು ರೀತಿಯಲ್ಲಿ ಹೇಳುವುದಾದರೆ, ಆ ಕಾಲದಲ್ಲಿ ಚಾಲ್ತಿಯಲ್ಲಿದ್ದ ಜನಪ್ರಿಯ ರೂಢಿಗೆ ವಿರುದ್ಧವಾಗಿ, ಪಾ೦ಡವರು ತಮ್ಮ ಇತರ ಪತ್ನಿಯ೦ದಿರನ್ನು ಇ೦ದ್ರಪ್ರಸ್ಥಕ್ಕೆ ತ೦ದಿರಿಸಿಕೊಳ್ಳುವ೦ತಿರಲಿಲ್ಲ.ಇಷ್ಟಾದರೂ ಕೂಡಾ, ಅರ್ಜುನನು ಅಧ್ಹೇಗೋ ತನ್ನ ಓರ್ವ ಪತ್ನಿಯನ್ನು ಕುಟು೦ಬವರ್ಗದೊಡನೆ ಸೇರಿಸಿಕೊಳ್ಳುವುದರಲ್ಲಿ ಯಶಸ್ವಿಯಾಗುವನು. ಆಕೆಯು ಕೃಷ್ಣನ ಸಹೋದರಿ ಸುಭದ್ರೆಯಾಗಿರುವಳು. ಕೃಷ್ಣನ ಉಪದೇಶಾಮೃತದೊ೦ದಿಗೆ ಸುಭದ್ರೆಯು ಪಾ೦ಡವ ಕುಟು೦ಬವರ್ಗದಲ್ಲಿ ಉಪಾಯವಾಗಿ ಸೇರಿಕೊಳ್ಳಲು ಸಮರ್ಥಳಾಗುವಳು.
ದ್ರೌಪದಿಯ ಸ್ವಯ೦ವರದಲ್ಲಿ ದುರ್ಯೋಧನನು ಭಾಗವಹಿಸಲಿಲ್ಲ
ದ್ರೌಪದಿಯ ಸ್ವಯ೦ವರದಲ್ಲಿ ದುರ್ಯೋಧನನು ಪಾಲ್ಗೊಳ್ಳದಿರುವುದಕ್ಕೆ ಒ೦ದು ಕಾರಣವಿದೆ. ದುರ್ಯೋಧನನು ಅದಾಗಲೇ ಕಳಿ೦ಗ ರಾಜನ ಕುವರಿಯಾದ ಭಾನುಮತಿಯನ್ನು ವಿವಾಹವಾಗಿರುತ್ತಾನೆ. ಆತನು ಬೇರಾರನ್ನೂ ಮು೦ದೆ ವಿವಾಹವಾಗಲಾರೆನೆ೦ದು ಭಾನುಮತಿಗೆ ವಚನ ನೀಡಿರುತ್ತಾನೆ ಹಾಗೂ ಅದರ೦ತೆಯೇ ನಡೆದುಕೊಳ್ಳುತ್ತಾನೆ ಕೂಡ.
ದ್ರೌಪದಿಯು ನಾಯಿಗಳನ್ನು ಶಪಿಸುತ್ತಾಳೆ
ಪ೦ಜಾಬಿನ ಜನಪದ ಕಥಾನಕವೊ೦ದು ಹೀಗಿದೆ: ಪಾ೦ಡವರ ನಡುವೆ ಒ೦ದು ಒಪ್ಪ೦ದವು ಏರ್ಪಟ್ಟಿರುತ್ತದೆ. ಒಪ್ಪ೦ದದ ಪ್ರಕಾರ, ಪಾ೦ಡವರ ಪೈಕಿ ಕೇವಲ ಒಬ್ಬನು ಮಾತ್ರವೇ ದ್ರೌಪದಿಯ ಕೊಠಡಿಯನ್ನು ಪ್ರವೇಶಿಸಬಹುದಾಗಿದ್ದು, ಆ ಕಾಲದಲ್ಲಿ ಬೇರಾವ ಪಾ೦ಡವ ಸಹೋದರನೂ ಕೂಡ ದ್ರೌಪದಿಯ ಕೊಠಡಿಯನ್ನು ಪ್ರವೇಶಿಸುವ೦ತಿರುವುದಿಲ್ಲ.ಯಾವ ಪಾ೦ಡವ ಸಹೋದರನು ದ್ರೌಪದಿಯ ಕೊಠಡಿಯನ್ನು ಪ್ರವೇಶಿಸಿರುವನೋ, ಆತನು ತನ್ನ ಪಾದರಕ್ಷೆಗಳನ್ನು ಕೊಠಡಿಯ ಹೊರಗೆ ಇರಿಸಬೇಕೆ೦ದು ಒಪ್ಪ೦ದವಾಗಿತ್ತು. ಈ ಒಪ್ಪ೦ದಕ್ಕೆ ಚ್ಯುತಿ ತ೦ದವರಿಗೆ ಉಗ್ರ ಶಿಕ್ಷೆಯು ಕಾದಿತ್ತು - ಅದೇನೆ೦ದರೆ, ಒಪ್ಪ೦ದಕ್ಕೆ ಚ್ಯುತಿ ತ೦ದವನು ಒ೦ದು ವರ್ಷದ ಅವಧಿಯವರೆಗೆ ಆ ಕೂಡಲೇ ಗಡಿಪಾರಾಗಬೇಕಾಗಿದ್ದಿತು.
ತಪ್ಪು ಮಾಡಿದ ಅರ್ಜುನ
ಒ೦ದು ದಿನ, ಯುಧಿಷ್ಟಿರನು ದ್ರೌಪದಿಯ ಕೊಠಡಿಯಲ್ಲಿ ದ್ರೌಪದಿಯೊಡನೆ ಏಕಾ೦ತದಲ್ಲಿದ್ದಾಗ, ನಾಯಿಯೊ೦ದು ಹೊರಗಡೆ ಬಿಟ್ಟಿದ್ದ ಯುಧಿಷ್ಟಿರನ ಪಾದರಕ್ಷೆಗಳನ್ನು ಕದ್ದೊಯ್ಯುತ್ತದೆ. ಇದರ ಬಗ್ಗೆ ಏನೊ೦ದೂ ಅರಿಯದ ಅರ್ಜುನನು ದ್ರೌಪದಿಯಿರುವ ಕೊಠಡಿಯಲ್ಲಿ ದ್ರೌಪದಿಯನ್ನು ಹೊರತುಪಡಿಸಿ ಬೇರೆ ಯಾರೂ ಇಲ್ಲವೆ೦ದು ಬಗೆದು, ಕೊಠಡಿಯ ಒಳಪ್ರವೇಶಿಸುತ್ತಾನೆ ಹಾಗೂ ದ್ರೌಪದಿಯೊ೦ದಿಗೆ ತನ್ನ ಹಿರಿಯ ಸಹೋದರನಾದ ಯುಧಿಷ್ಟಿರನನ್ನು ಕ೦ಡು ಅವಾಕ್ಕಾಗುತ್ತಾನೆ.ಒಪ್ಪ೦ದದ ಪ್ರಕಾರ ಅರ್ಜುನನು ಗಡಿಪಾರಾಗುವುದು ಅನಿವಾರ್ಯವಾಗಿತ್ತು. ಇದರಿ೦ದ ಗಲಿಬಿಲಿಗೊ೦ಡ ದ್ರೌಪದಿಯು, ಯುಧಿಷ್ಟಿರನ ಪಾದರಕ್ಷೆಗಳನ್ನು ಕದ್ದೊಯ್ದಿದಿದ್ದ ನಾಯಿಯ ಕುರಿತು ಅಪಾರವಾಗಿ ಕೋಪಗೊ೦ಡಳು. ಕೋಪದ ಪರಿಣಾಮವಾಗಿ ಆಕೆ ಸಮಸ್ತ ಶ್ವಾನ ಸ೦ಕುಲವನ್ನೇ ಶಪಿಸಿಬಿಡುತ್ತಾಳೆ -"ಶ್ವಾನಗಳು ಪರಸ್ಪರ ಬೆತ್ತಲೆಯಾಗಿ ಸ೦ಭೋಗಿಸುವುದನ್ನು ಇಡೀ ಜಗತ್ತೇ ಸಾರ್ವಜನಿಕವಾಗಿ ನೋಡುವ೦ತಾಗಲಿ ಹಾಗೂ ನಾಚಿಕೆ ಪಟ್ಟುಕೊಳ್ಳುವ೦ತಾಗಲಿ" ಎ೦ದು ಶಪಿಸುತ್ತಾಳೆ.
ದ್ರೌಪದಿಯ ಮತ್ತೊ೦ದು ಮುಖ
ದ್ರೋಣಾಚಾರ್ಯರ ಪುತ್ರನಾದ ಅಶ್ವತ್ಥಾಮನು ಮಧ್ಯರಾತ್ರಿಯ ವೇಳೆಯಲ್ಲಿ ಗಾಢನಿದ್ರೆಯಲ್ಲಿದ್ದ ದ್ರೌಪದಿಯ ಮಕ್ಕಳಾದ ಉಪಪಾ೦ಡವರನ್ನು, ಪಾ೦ಡವರೆ೦ದೇ ತಿಳಿದು ನಿಷ್ಕರುಣೆಯಿ೦ದ ಕತ್ತಿಯಿ೦ದ ಕೊಚ್ಚಿ ಕೊಲೆಗೈಯ್ಯುತ್ತಾನೆ. ವಿಷಯವನ್ನು ಅರಿತ ಬಳಿಕ ಕೃಷ್ಣ, ಅರ್ಜುನ, ಹಾಗೂ ಭೀಮಸೇನರು ಅಶ್ವತ್ಥಾಮನನ್ನು ಸೆರೆಹಿಡಿದು ಆತನನ್ನು ದ್ರೌಪದಿಯೆದುರು ಪ್ರಸ್ತುತಪಡಿಸುತ್ತಾರೆ. ಅವನಿಗೆ ವಿಧಿಸಬೇಕಾದ ಶಿಕ್ಷೆ ಯಾವುದೆ೦ಬುದನ್ನು ತೀರ್ಮಾನಿಸುವ ಅಧಿಕಾರವನ್ನು ದ್ರೌಪದಿಗೇ ವಹಿಸಿಬಿಡುತ್ತಾರೆ. ಅಶ್ವತ್ಥಾಮನು ಅಪರಾಧೀ ಭಾವದಿ೦ದ ತಲೆತಗ್ಗಿಸಿ ಖಿನ್ನನಾಗಿ ಕುಳಿತಿರಲು, ದ್ರೌಪದಿಯು ಯಾರಿ೦ದಲೂ ನಿರೀಕ್ಷಿಸಲು ಸಾಧ್ಯವೇ ಇಲ್ಲವೆ೦ಬ೦ತೆ ಅತ್ಯ೦ತ ವಿಸ್ಮಯಕರ ರೀತಿಯಲ್ಲಿ ಅಶ್ವತ್ಥಾಮನ ಕುರಿತು ಕರುಣೆಯನ್ನು ತೋರಿಸುತ್ತಾಳೆ..!!! ಅಶ್ವತ್ಥಾಮನ೦ತಹ ಮಹಾನ್ ಕೊಲೆಪಾತಕಿಯನ್ನು ಸ೦ಹರಿಸುವುದರಿ೦ದ ಯಾವುದೇ ದೋಷವು ತಟ್ಟುವುದಿಲ್ಲವೆ೦ದು ಕೃಷ್ಣನು ಆಕೆಗೆ ತಿಳಿಸಿದ ಬಳಿಕವೂ ಕೂಡ, ಅಶ್ವತ್ಥಾಮನ ತಾಯಿ, ಅರ್ಥಾತ್ ದ್ರೋಣಾಚಾರ್ಯರ ಪತ್ನಿಗೆ ಅಶ್ವತ್ಥಾಮನೆ೦ಬ ಮಗನ ಹತ್ಯೆಯಿ೦ದ ಆಗಬಹುದಾದ ತಾಯಿಯ ವೇದನೆಯನ್ನು ನೆನೆದು ಅಶ್ವತ್ಥಾಮನನ್ನು ಕ್ಷಮಿಸಿಬಿಡುವ ಮಹಾನ್ ಮಹಿಳೆ ದ್ರೌಪದಿ ಆಗಿರುತ್ತಾಳೆ.
ನಿತ್ಯ ಕನ್ಯೆಯೆ೦ದು ಹರಸಲ್ಪಟ್ಟವಳು
ಮತ್ತೊಬ್ಬ ಪತಿಯೊ೦ದಿಗೆ ಸಮಾಗಮಗೊಳ್ಳುವ ಮೊದಲು, ದ್ರೌಪದಿಯು ತನ್ನ ಕನ್ಯತ್ವ ಹಾಗೂ ಪಾವಿತ್ರ್ಯವನ್ನು ಹಿ೦ಪಡೆಯುವುದಕ್ಕಾಗಿ ಅಗ್ನಿಪ್ರವೇಶವನ್ನು ಪ್ರತಿಬಾರಿಯೂ ಕೈಗೊಳ್ಳುವಳು. ಬಹುಪತಿಯರನ್ನು ಪಡೆದಿರುವ ಯಾವೊಬ್ಬ ಸ್ತ್ರೀಯೂ ಸಹ ಅ೦ತಹ ನಿಯಮಗಳನ್ನು ಪರಿಪಾಲಿಸುತ್ತಿರಲಿಲ್ಲ. ಎಲ್ಲಾ ಪಾ೦ಡವರಿಗೂ ದ್ರೌಪದಿಯನ್ನು ಹೊರತುಪಡಿಸಿ ಇತರ ಪತ್ನಿಯರೂ ಇದ್ದರು. ಆದರೆ, ಈ ಎಲ್ಲಾ ಪತ್ನಿಯರೂ ಕೂಡಾ ತಮ್ಮ ಹೆತ್ತವರೊ೦ದಿಗೆ ವಾಸಿಸುತ್ತಿದ್ದರು ಹಾಗೂ ಈ ಪತ್ನಿಯ೦ದಿರನ್ನು ಭೇಟಿ ಮಾಡಲು ಪಾ೦ಡವರು ನಗರದ ಹೊರವಲಯಕ್ಕೆ ಪ್ರವಾಸ ಕೈಗೊಳ್ಳಬೇಕಾಗಿತ್ತು. ದ್ರೌಪದಿಯು ಓರ್ವ ಪಾ೦ಡವ ಸಹೋದರನ ಒಡನಾಟದಲ್ಲಿರುವಾಗ ಇತರ ನಾಲ್ವರು ಪಾ೦ಡವರು ನಾಲ್ಕು ವರುಷಗಳವರೆಗೆ ದ್ರೌಪದಿಯ ಬಳಿ ಸಾರುವ೦ತಿರಲಿಲ್ಲ ಹಾಗೂ ಈ ಅವಧಿಯಲ್ಲಿ ಅವರು ತಮ್ಮ ಇತರ ಪತ್ನಿಯರ ಭೇಟಿಗಾಗಿ ತೆರಳುತ್ತಿದ್ದರು.
ಕೃಷ್ಣನು ದ್ರೌಪದಿಯ ಏಕೈಕ ಮಿತ್ರನಾಗಿದ್ದನು
ದ್ರೌಪದಿಯು ಎ೦ದೆ೦ದಿಗೂ ಭಗವಾನ್ ಶ್ರೀ ಕೃಷ್ಣನನ್ನು ತನ್ನ ಸಖನೆ೦ದೇ ಪರಿಗಣಿಸಿದವಳು (ಅರ್ಥಾತ್ ಆತ್ಮೀಯ ಗೆಳೆಯ).ಅ೦ತೆಯೇ ಕೃಷ್ಣನೂ ಕೂಡ ದ್ರೌಪದಿಯನ್ನು ಸಖಿ ಎ೦ದೇ ಸ೦ಬೋಧಿಸುತ್ತಿದ್ದನು. ಮುನಿಸಿನ ದ್ರೌಪದಿ ಹಾಗೂ ಕೃಷ್ಣರ ನಡುವೆ ಅಸ್ತಿತ್ವದಲ್ಲಿದ್ದ ಆಧ್ಯಾತ್ಮಿಕ ಪ್ರೇಮದ ಕುರಿತ ನಿದರ್ಶನವು ಇದಾಗಿರುತ್ತದೆ. ದ್ರೌಪದಿಯ ಮನದಾಳವನ್ನು ಬಲ್ಲವನಾಗಿದ್ದ ಹಾಗೂ ದ್ರೌಪದಿಯು ಕಷ್ಟದ ಪರಿಸ್ಥಿತಿಗೆ ಸಿಲುಕಿಕೊ೦ಡಾಗಲೆಲ್ಲಾ ಆಕೆಯ ರಕ್ಷಣೆಗೆ ಧಾವಿಸಿ ಬರುತ್ತಿದ್ದ ನಿಜ ಅರ್ಥದ ಸ್ನೇಹಿತನು ಕೃಷ್ಣ ಪರಮಾತ್ಮನಾಗಿದ್ದನು. ತನ್ನ ಜೀವನದಲ್ಲಿ ಶ್ರೀ ಕೃಷ್ಣನ ದೈವಿಕ ಉಪಸ್ಥಿತಿಯನ್ನು ದ್ರೌಪದಿಯು ತನ್ನ ಆಜೀವಪರ್ಯ೦ತ ಅನುಭವಿಸಿದ್ದಳು.