Just In
- 35 min ago ನರಿ ಮತ್ತು ಕೋಳಿಗೂ ಮೂರ್ಖರ ದಿನಕ್ಕೂ ಇದೆ ನಂಟು..! ಏನದು.?
- 1 hr ago 2024: ಮದುವೆ, ಗಾಡಿ ಖರೀದಿ, ಗೃಹ ಪ್ರವೇಶ ಹೀಗೆ ಶುಭ ಕಾರ್ಯಕ್ಕೆ ಏಪ್ರಿಲ್ನಲ್ಲಿರುವ ಶುಭ ದಿನಾಂಕಗಳಿವು
- 3 hrs ago ಗುಡ್ಫ್ರೈಡೆ ಆಚರಣೆ ಹುಟ್ಟಿದ್ದು ಹೇಗೆ? ಇದರ ಮಹತ್ವವೇನು ಗೊತ್ತಾ?
- 12 hrs ago ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
Don't Miss
- News RBI: ಬ್ಯಾಂಕ್ ಕೆಲಸ ಮುಗಿದಿಲ್ವಾ? ಭಯ ಬೇಡ ಮಾರ್ಚ್ 30, 31ಕ್ಕೂ ಓಪನ್ ಇರುತ್ತೆ ಆರ್ಬಿಐ ಕಚೇರಿಗಳು!
- Automobiles ಶಿಯೋಮಿಯ ಈ ಎಲೆಕ್ಟ್ರಿಕ್ ಕಾರು ಸ್ಮಾರ್ಟ್ಫೋನ್ಗಳಂತೆ ಅಗ್ಗದ ಬೆಲೆ: ರೇಂಜ್ ಕೇಳಿದ್ರೆ ತಲೆ ತಿರುಗುತ್ತೆ!
- Technology ಈ Amoled ಡಿಸ್ಪ್ಲೇ ಫೋನ್ ಬೆಲೆಯಲ್ಲಿ ಭಾರೀ ಇಳಿಕೆ!..ಈ ಆಫರ್ಗೆ ನೀವು ಫಿದಾ ಆಗ್ತೀರಾ!
- Finance ಮೊದಲ ಬಾರಿಗೆ ಅಂಬಾನಿ ಅದಾನಿ ಸೇರಿ ವ್ಯಾಪಾರ ಒಪ್ಪಂದ, ಇಲ್ಲಿದೆ ಒಪ್ಪಂದ ವಿವರ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Movies "ಇವರು ಆಡೋ ಮಾತುಗಳಿಂದ ನಮ್ಮ ತಾಯಿ ಊಟ ಮಾಡ್ತಿಲ್ಲ"; ಕಣ್ಣೀರಿಟ್ಟ ವರ್ತೂರು ಸಂತೋಷ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮೂಢನಂಬಿಕೆ ವಿಚಿತ್ರವೆನಿಸಿದರೂ ಇದುವೇ ಸತ್ಯ!
ವಿವಿಧ ಧರ್ಮಗಳು ಹಾಗೂ ಆಚರಣೆಗಳ ಹೊರತಾಗಿಯೂ ಸಹ ಭಾರತ ದೇಶದಲ್ಲಿ ಮತ್ತಿತರ ಹಲವಾರು ಸ೦ಸ್ಕೃತಿ, ಸ೦ಪ್ರದಾಯಗಳು ಚಾಲ್ತಿಯಲ್ಲಿವೆ. ಅಲ್ಲದೆ ಇ೦ತಹ ಪರಿಸ್ಥಿತಿ ನಡುವೆಯೂ ಸಹ ಸಾರ್ವಭೌಮತ್ವ, ಜಾತ್ಯಾತೀತತೆ, ಹಾಗೂ ಏಕತೆ, ಸಮಗ್ರತೆಗಳನ್ನು ವಿವಿಧ ಹ೦ತಗಳಲ್ಲಿ ಕಾಪಾಡಿಕೊ೦ಡು ಬ೦ದಿರುವುದರ ಮೂಲಕ ನಮ್ಮ ದೇಶ ಜಗತ್ತಿಗೇ ಮಾದರಿಯಾಗಿದೆ. ಅಷ್ಟೇ ಏಕೆ, ಆಧುನಿಕ ವಿಜ್ಞಾನಕ್ಕೆ ಸಂಬಂಧಿಸಿದಂತೆ ಅಗ್ರ ರಾಷ್ಟ್ರಗಳಲ್ಲಿ ಒಂದಾಗಿರುವ ಭಾರತವು ಮತ್ತೊಂದು ಕಡೆಯಲ್ಲಿ ವಿಚಿತ್ರ ಆಚರಣೆಗಳಲ್ಲಿ ಅಗ್ರಸ್ಥಾನ ಪಡೆದಿದೆ..! ಅದೇ ಮೂಢನಂಬಿಕೆ.
ಹೌದು, ಇ೦ದಿನ ದಿನಮಾನಗಳಲ್ಲಿಯೂ ಸಹ ಮೂಢನಂಬಿಕೆಗಳ ಕಟ್ಟುಪಾಡಿಗೆ ಬಿದ್ದು, ಆಘಾತಕಾರಿ ಅಥವಾ ಕೆಟ್ಟ ಆಚರಣೆಗಳು ಹಾಗೂ ಸ೦ಪ್ರದಾಯಗಳು ಭಾರತ ದೇಶದಲ್ಲಿ ಅಲ್ಲಲ್ಲಿ, ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಉದಾಹರಣೆಗೆ ಶುಭ ಕಾರ್ಯಕ್ಕೆ ಹೊರಡುವಾಗ ಬೆಕ್ಕು ಅಡ್ಡ ಬಂದರೆ ಅಪಶಕುನ, ಮಂಗಳವಾರ ತಲೆಗೂದಲು ಕತ್ತರಿಸಬಾರದು, ಉತ್ತರ ದಿಕ್ಕಿನಲ್ಲಿ ತಲೆಇರಿಸಿ ಮಲಗಬಾರದು, ಮುಸ್ಸಂಜೆಯ ಹೊತ್ತಿನಲ್ಲಿ ಮಲಗಬಾರದು ಹೀಗೆ ಮೂಢನಂಬಿಕೆಗಳ ಆಚರಣೆ ಹನುಮಂತನ ಬಾಲದಂತೆ ಬೆಳೆಯುತ್ತಲೇ ಹೋಗುತ್ತದೆ ಇದಕ್ಕೆ ಲಂಗುಲಗಾಮು ಎನ್ನುವುದೇ ಇಲ್ಲ. ಹೊರಗಿನಿಂದ ಬಂದವರಿಗೆ ನಮ್ಮ ದೇಶದಲ್ಲಿ ನಡೆಸಿಕೊಂಡು ಬರುತ್ತಿರುವ ಈ ಸಂಸ್ಕೃತಿ ವಿಚಿತ್ರ ಎಂದೆನಿಸಿದರೂ ನಾವು ಇದುವೇ ಸತ್ಯ ಎಂಬ ಧ್ಯೇಯ ವಾಕ್ಯವನ್ನು ಬಿಟ್ಟು ಬಿಡದೇ ಪರಿಪಾಲಿಸುತ್ತಾ ಹೋಗುತ್ತೇವೆ.
ಹಿಂದಿನಿಂದಲೂ ಶಾಸ್ತ್ರ ಪುರಾಣಗಳಲ್ಲಿ ಹೇಳಿರುವ ಆಚರಣೆಗಳನ್ನೇ ನಾವುಗಳು ಪಾಲಿಸಿಕೊಂಡು ಬರುತ್ತಿದ್ದು ಇದನ್ನು ಮುರಿದಲ್ಲಿ ದೈವೀ ಕೋಪಕ್ಕೆ ಗುರಿಯಾಗುತ್ತೇವೆ ಎಂಬ ಭಯ ನಮ್ಮನ್ನು ಕಾಡುತ್ತದೆ. ಅದಕ್ಕಾಗಿಯೇ ಸಂಪ್ರದಾಯಗಳ ಆಚರಣೆಯಲ್ಲಿ ಒಂದಿನಿತೂ ಲೋಪವುಂಟಾಗದಂತೆ ಪಾಲಿಸಿಕೊಂಡು ಬರುತ್ತೇವೆ. ಈ ವೈಜ್ಞಾನಿಕ ಯುಗದಲ್ಲಿಯೂ ಮೌಢ್ಯದ ಆಚರಣೆ ಮೂರ್ಖತನದ ಪರಮಾವಧಿ ಎಂದೆನಿಸಿದರೂ
ಇವುಗಳ
ಪಾಲನೆ
ಮಾಡದಿದ್ದಲ್ಲಿ
ನಮ್ಮ
ಮನಸ್ಸಿಗೆ
ಏನೋ
ಒಂದು
ರೀತಿಯ
ಭಯ
ಆವರಿಸಿ
ಬಿಡುತ್ತದೆ.
ಇಂದಿನ
ಲೇಖನದಲ್ಲಿ
ದೇಶದಲ್ಲಿ
ಹೆಚ್ಚು
ಆಚರಿಸಲಾಗುವ
ಕೆಲವೊಂದು
ಮೂಢನಂಬಿಕೆಗಳ
ಪಟ್ಟಿ
ಮಾಡಿದ್ದು
ನಿತ್ಯ
ಜೀವನದಲ್ಲಿ
ಇವುಗಳ
ಆಚರಣೆ
ಇದ್ದೇ
ಇದೆ.
ಅವುಗಳು
ಯಾವುವು
ಎಂಬುದನ್ನು
ನೋಡಲು
ಸ್ಲೈಡರ್
ಕ್ಲಿಕ್
ಮಾಡಿ
ಒಂದು ರೂಪಾಯಿ ನಾಣ್ಯದ ಬಳಕೆ
ಮದುವೆ ಸಮಾರಂಭಗಳಲ್ಲಿ ನಗದನ್ನು ಕಾಣಿಕೆಯಾಗಿ ನೀಡುವಾಗ ಹೆಚ್ಚುವರಿ ಒಂದು ರೂಪಾಯಿಯನ್ನು ಸೇರಿಸಿ ಕೊಡುತ್ತಾರೆ. ಇದು ಶುಭದ ಸಂಕೇತವಾಗಿದ್ದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ. ಯಾವುದೇ ಕೊಡುಗೆಯನ್ನು ನೀಡುವಾಗ ಪೂರ್ಣ ಪ್ರಮಾಣದಲ್ಲಿ ಅದನ್ನು ನೀಡಬೇಕು ಸೊನ್ನೆಯು ಅಶುಭದ ಸಂಕೇತವಾಗಿರುವುದರಿಂದ 100 ರೂ ಕೊಡುವುದರ ಜೊತೆಗೆ ಹೆಚ್ಚುವರಿ 1 ರೂಪಾಯಿಯನ್ನು ಸೇರಿಸಿ ನೀಡಲಾಗುತ್ತದೆ...!
ಕಪ್ಪು ಬೆಕ್ಕು ಕ್ರಮಿಸಿದ ದಾರಿಯನ್ನು ಬಳಸದಿರುವುದು
ಹೆಚ್ಚಿನ ವಿದ್ಯಾವಂತರುಗಳು ಮೂಢನಂಬಿಕೆಗಳನ್ನು ನಂಬುವುದಿಲ್ಲ ಎಂದು ಹೇಳುವುದನ್ನು ಕೇಳುತ್ತೇವೆ. ಆದರೆ ಅವಿದ್ಯಾವಂತರು ಮಾತ್ರವಲ್ಲದೆ ವಿದ್ಯಾವಂತರೂ ಮೂಢನಂಬಿಕೆಗಳನ್ನು ನಂಬುತ್ತಾರೆ ಮತ್ತು ಹಾಗೆಯೇ ಅದನ್ನು ಆಚರಿಸುತ್ತಾರೆ ಕೂಡ. ನೀವು ಸಾಗುತ್ತಿರುವ ದಾರಿಯಲ್ಲಿ ಕಪ್ಪು ಬೆಕ್ಕು ಹಾದುಹೋದರೆ ನೀವು ಆ ಹಾದಿಯಲ್ಲಿ ಹೋಗದೇ ಬೇರೆ ದಾರಿಯಲ್ಲಿ ಮುಂದುವರಿಯುತ್ತೀರಿ. ಈ ಮೂಢನಂಬಿಕೆಯ ಹಿಂದಿರುವ ನೈಜತೆ ಜನರನ್ನು ಕಾಡುಪ್ರಾಣಿಗಳಿಂದ ರಕ್ಷಿಸುವುದಕ್ಕಾಗಿ ಅನುಸರಿಸಿದ ವಿಧಾನವಾಗಿದೆ. ರಾತ್ರಿವೇಳೆಯಲ್ಲಿ ಹಾದುಹೋಗುವ ಪ್ರಾಣಿಗಳನ್ನು ಕುರಿತು ಜನರು ಎಚ್ಚರಿಕೆಯಿಂದಿರಲಿ ಎಂಬ ಕಾರಣಕ್ಕಾಗಿ ಹೊಳೆಯುತ್ತಿರುವ ಕಣ್ಣುಗಳನ್ನು ನೋಡಿದಲ್ಲಿ ಆ ದಾರಿಯಲ್ಲಿ ಮುಂದುವರಿಯಬೇಡಿ ಎಂಬುದಾಗಿ ಸೂಚಿಸುತ್ತಿದ್ದರು. ಆದರೆ ಇದುವೇ ಕಾಲಸರಿದಂತೆ ಜನರ ಮೂಢನಂಬಿಕೆಯಾಗಿ ಮಾರ್ಪಟ್ಟಿದೆ.
ಕಣ್ಣುಗಳ ಅದುರುವಿಕೆ
ಎಡ ಕಣ್ಣು ಅಥವಾ ಬಲಗಣ್ಣು ಅದುರಿದಾಗ ಏನಾದರೂ ಒಳ್ಳೆಯದು ಅಥವಾ ಕೆಟ್ಟದ್ದು ಸಂಭವಿಸುತ್ತದೆ ಎಂದೇ ಜನರು ಭಾವಿಸುತ್ತಿರುತ್ತಾರೆ. ಕಣ್ಣುಗಳ ಅದುರುವಿಕೆಗೆ ಏನಾದರೂ ವೈಜ್ಞಾನಿಕ ಹಿನ್ನೆನಲೆ ಇದ್ದೇ ಇರುತ್ತದೆ. ಈ ರೀತಿ ಸಂಭವಿಸಿದಾಗ ಅದು ಮೂಢನಂಬಿಕೆ ಎಂದು ಭಾವಿಸದೇ ಕೂಡಲೇ ತಜ್ಞರ ಬಳಿ ಕಣ್ಣು ಪರೀಕ್ಷೆಯನ್ನು ಮಾಡಿಕೊಳ್ಳಿ.
ಮಂಗಳವಾರ ಕೂದಲು ಕತ್ತರಿಸುವುದು ಕೆಟ್ಟದ್ದು
ಮಂಗಳವಾರ ತಲೆಗೂದಲು ಕತ್ತರಿಸಿಕೊಳ್ಳಬಾರದೆಂದು ನಿಮ್ಮ ಮನೆಯಲ್ಲಿ ಹಿರಿಯರು ಹೇಳುವುದನ್ನು ನೀವು ಕೇಳಿಸಿಕೊಂಡಿರುತ್ತೀರಿ. ಮೂಢನಂಬಿಕೆಯ ಭಾಗವಾಗಿ ಇದು ಪರಿಗಣಿತವಾಗಿದೆ. ಇದಕ್ಕೆ ಒಂದು ಹಿನ್ನಲೆಯಿದ್ದು ಮಂಗಳವಾರದಂದು ಏಕೆ ತಲೆಗೂದಲು ಕತ್ತರಿಸಿಕೊಳ್ಳಬಾರದು ಎಂಬುದನ್ನು ನಾವು ಇಲ್ಲಿ ತಿಳಿಸುತ್ತಿದ್ದೇವೆ. ಹಿಂದಿನ ಕಾಲದಲ್ಲಿ ಭಾರತದಲ್ಲಿ ಹೆಚ್ಚಿನ ಜನರು ಕೃಷಿಯನ್ನು ಅವಲಂಬಿಸಿಕೊಂಡಿದ್ದರು. ವಾರಪೂರ್ತಿ ಕೆಲಸವನ್ನು ಮಾಡಿದ ನಂತರ ಸೋಮವಾರದಂದು ತಮ್ಮ ವೈಯಕ್ತಿಕ ಕೆಲಸಗಳನ್ನು ಅವರು ಮಾಡಿಕೊಳ್ಳುತ್ತಿದ್ದರು ಇದರಲ್ಲಿ ತಲೆಗೂದಲು ಕತ್ತರಿಸುವಿಕೆ ಕೂಡ ಒಳಗೊಂಡಿತ್ತು. ಸೋಮವಾರದಂದು ಕ್ಷೌರ ಮಾಡಿಕೊಂಡ ನಂತರ ಮಂಗಳವಾರ ಕ್ಷೌರಿಕರು ಬಿಡುವಾಗುತ್ತಿದ್ದರು. ಆದರೆ ಸಮಯ ಕಳೆದಂತೆಲ್ಲಾ ಮಂಗಳವಾರ ತಲೆಗೂದಲು ಕತ್ತರಿಸಿಕೊಳ್ಳಬಾರದು ಎಂಬಲ್ಲಿಯವರೆಗೆ ನಂಬಿಕೆ ಆಚರಣೆಗೆ ಬಂದಿದೆ. ಮಂಗಳವಾರ ಏಕೆ ತಲೆಗೂದಲು ಕತ್ತರಿಸಿಕೊಳ್ಳಬಾರದು ಎಂಬುದರ ರಹಸ್ಯ ನಿಮಗೀಗ ಗೊತ್ತಾಗಿರಬೇಕು ಅಲ್ಲವೇ?
ಉಗುರನ್ನು ಕತ್ತರಿಸುವುದು
ಉಗುರುಗಳನ್ನು ಕತ್ತರಿಸುವುದು ವಾರದ ನಿರ್ದಿಷ್ಟ ದಿನಗಳಲ್ಲಿ ಅಥವಾ ಸೂರ್ಯಾಸ್ತದ ನಂತರ ಉಗುರನ್ನು ಕತ್ತರಿಸಿಬಾರದೆನ್ನುವುದು ಇನ್ನೊಂದು ಸಾಮಾನ್ಯ ಮೂಢನಂಬಿಕೆ. ಮಂಗಳವಾರ, ಗುರುವಾರ ಮತ್ತು ಶನಿವಾರ ಉಗುರನ್ನು ಕತ್ತರಿಸಬಾರದೆಂದು ಬಹುಮಟ್ಟಿಗೆ ನಂಬುತ್ತಾರೆ. ಹಾಗೆ ಕತ್ತರಿಸಿದರೆ ದುರಾದೃಷ್ಟ ಬರುವುದೆಂದು ನಂಬಿದ್ದಾರೆ. ಹಾಗೆಯೇ ಸೂರ್ಯಾಸ್ತದ ನಂತರವೂ ಕೂಡ ಉಗುರನ್ನು ಕತ್ತರಿಸುವುದನ್ನು ನಿಷೇಧಿಸಲಾಗಿದೆ.
ಹತ್ತಿಯ ದಾರದಲ್ಲಿ ಸುತ್ತಿದ ಲಿಂಬೆ ಮತ್ತು ಮೆಣಸನ್ನು ನೇತಾಡಿಸುವುದು
ಅಂಗಡಿಗಳ ಹೊರಗೆ, ಮನೆಯಲ್ಲಿ ಅಥವಾ ವಾಹನಗಳಲ್ಲಿ ಹತ್ತಿಯ ದಾರದಲ್ಲಿ ಕಟ್ಟಿರುವ ಲಿಂಬೆ ಮತ್ತು ಮೆಣಸನ್ನು ನೀವು ಕಂಡಿರಬಹುದು. ಕ್ರಿಮಿಕೀಟಗಳನ್ನು ದೂರವಿಡಲು ಈ ಕ್ರಮವನ್ನು ಅನುಸರಿಸಲಾಗುತ್ತದೆ ಎಂಬುದಾಗಿ ಹೇಳುತ್ತಾರೆ. ಹಿಂದಿನಿಂದಲೂ ಇದು ಆಚರಣೆಯಲ್ಲಿರುವ ಪದ್ಧತಿಯಾಗಿದೆ.