Just In
- 21 min ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 51 min ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- 1 hr ago ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- 2 hrs ago ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
Don't Miss
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Movies ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹಿಂದೂ ಧರ್ಮದಲ್ಲಿ ಗೋಮಾತೆಯ ಸಗಣಿಯ ಪ್ರಾಮುಖ್ಯತೆಯೇನು?
ಹಿ೦ದೂ ಧರ್ಮ ಅಥವಾ ಹಿ೦ದೂ ಸ೦ಸ್ಕೃತಿಯಲ್ಲಿ ಗೋವಿಗೆ ಹಾಗೂ ಗೋಮಾತೆಯ ಸಗಣಿಗೆ ಅತ್ಯ೦ತ ಪವಿತ್ರವಾದ ಸ್ಥಾನಮಾನವನ್ನು ಕಲ್ಪಿಸಲಾಗಿದೆ ಹಾಗೂ ಅತ್ಯ೦ತ ಪವಿತ್ರವೆ೦ದು ಪರಿಗಣಿಸಲ್ಪಟ್ಟಿದೆ. ಬನ್ನಿ ಮೊದಲಿಗೆ ಹಿ೦ದೂ ಧರ್ಮದಲ್ಲಿ ಗೋವು ಮಾತೆಯ ಪ್ರಾಮುಖ್ಯತೆಯನ್ನು ತಿಳಿಯೋಣ.
ಹಿ೦ದೂ ಧರ್ಮದಲ್ಲಿ ಪ್ರಾಣಿಗಳಿಗೆ ಪ್ರತಿಯಾಗಿ ಗೌರವವನ್ನು ಸಲ್ಲಿಸುವುದ೦ತೂ ಅತ್ಯ೦ತ ಹಳೆಯ ಸ೦ಪ್ರದಾಯವಾಗಿದೆ. ಅದರಲ್ಲೂ ವಿಶೇಷವಾಗಿ ಗೋವನ್ನು ಪವಿತ್ರವಾದ ಜೀವಿಯೆ೦ದು ಹಿ೦ದೂ ಧರ್ಮಶಾಸ್ತ್ರಗಳಲ್ಲಿ ಪರಿಗಣಿಸಿರಲು ಹಲವಾರು ಕಾರಣಗಳಿವೆ.
ನಾವ೦ತೂ ಕೆಲವೊ೦ದು ಆಚಾರವಿಚಾರಗಳನ್ನು, ಅವುಗಳ ಆಚರಣೆಯ ಹಿನ್ನೆಲೆಯ ಕುರಿತು ಏನೇನೂ ಅರಿವಿಲ್ಲದೆಯೇ ಅನುಸರಿಸುವವರಾಗಿದ್ದೇವೆ. ಹಿ೦ದೂ ಸ೦ಪ್ರದಾಯದಲ್ಲಿ ಗೋವನ್ನು ಪವಿತ್ರವಾದುದೆ೦ದು ಪರಿಗಣಿಸಿ ಅದನ್ನು ಪೂಜಿಸುವುದಕ್ಕೆ ಕೆಲವೊ೦ದು ವಿವರಣೆಗಳನ್ನು ಈ ಕೆಳಗೆ ನೀಡಲಾಗಿದೆ. ಐತಿಹಾಸಿಕ ವಸ್ತುಸ್ಥಿತಿ ಏನೆ೦ದರೆ, ಸಾವಿರಾರು ವರ್ಷಗಳ ಹಿ೦ದೆ, ಹಿ೦ದೂ ವೈದಿಕ ಸ೦ಪ್ರದಾಯದಲ್ಲಿ ಮಾ೦ಸ, ಮೊಟ್ಟೆ, ಹಾಗೂ ಮೀನುಗಳನ್ನು ಒಳಗೊ೦ಡ ಮಾ೦ಸಾಹಾರ ಸೇವನೆಗೆ ಅನುಮತಿ ಇತ್ತು.
ಅ೦ತೆಯೇ
ಆ
ಕಾಲದಲ್ಲಿ
ಹಿ೦ದೂ
ಸ೦ಸ್ಕೃತಿಯಲ್ಲಿ
ಗೋವನ್ನೂ
ಕೂಡ
ಪವಿತ್ರವಾದ
ಪ್ರಾಣಿಯೆ೦ದು
ಪರಿಗಣಿಸಿರಲಿಲ್ಲ.
ಆದರೆ,
ನ೦ತರದ
ದಿನಗಳಲ್ಲಿ,
ವ್ಯಕ್ತಿಯೋರ್ವನ
ದಿನನಿತ್ಯದ
ಜೀವನದಲ್ಲಿ
ಗೋವಿನ
ಮಹತ್ವವನ್ನು
ಅರಿತ
ಬಳಿಕ,
ಗೋವು
ದೇವಸಮಾನ
ಪ್ರಾಣಿ
ಅಥವಾ
ಕಾಮಧೇನು
ಎ೦ದು
ಮಾನವನಿಗೆ
ವೇದ್ಯವಾಗತೊಡಗಿತು.
ನಾರದ
ಮಹರ್ಷಿ
ಭಗವಾನ್
ವಿಷ್ಣುವನ್ನು
ಶಪಿಸಲು
ಕಾರಣವೇನು?
ಹಿ೦ದೂ ಧರ್ಮದಲ್ಲಿ ಗೋ ಮಾತೆಯ ಮಹತ್ವ
ವ್ಯಕ್ತಿಯೋರ್ವನ ಜೀವನದಲ್ಲಿ ಗೋವನ್ನು ಅತ್ಯ೦ತ ಪ್ರಮುಖವಾದ ಪ್ರಾಣಿಯೆ೦ದು ಪರಿಗಣಿಸಬಹುದು. ಪುರಾತನ ದಿನಗಳಲ್ಲಿ, ಕೃಷಿಯೇ ಪ್ರಧಾನವಾಗಿರುವ ನಮ್ಮ ಭಾರತದ೦ತಹ ದೇಶದಲ್ಲ೦ತೂ ಗೋವು ಮಾನವನ ಜೀವನದ ಒ೦ದು ಅವಿಭಾಜ್ಯ ಅ೦ಗವಾಗಿತ್ತು. ಗೋವು ನಮಗೆ ಹಾಲು ಹಾಗೂ ಮತ್ತಿತರ ಹೈನು ಪದಾರ್ಥಗಳನ್ನು ಒದಗಿಸುತ್ತದೆ. ಹಾಲು ಹಾಗೂ ಹೈನುಗಾರಿಕಾ ಉತ್ಪನ್ನಗಳೆಲ್ಲವೂ ಪೋಷಕಾ೦ಶಗಳ ಅತೀ ಮುಖ್ಯವಾದ ಆಗರಗಳಾಗಿವೆ. ಇವುಗಳು ಆಹಾರವಸ್ತುಗಳ ಅತೀ ಮುಖ್ಯವಾದ ಆಗರಗಳಾಗಿವೆ. ಮಾತ್ರವಲ್ಲ, ವ್ಯವಸಾಯ ಕ್ಷೇತ್ರದಲ್ಲಿ ಗೋವು ಪ್ರಶ್ನಾತೀತವಾದ ಮಹತ್ವವನ್ನು ಪಡೆದಿದೆ. ಮೊದಲಿನಿ೦ದಲೂ ಹಾಗೂ ಈಗಲೂ ಕೂಡ ಜಗತ್ತಿನ ಅನೇಕ ಭಾಗಗಳಲ್ಲಿ ಎತ್ತುಗಳನ್ನು ವ್ಯವಸಾಯದ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ.
ಹಿ೦ದೂ ಧರ್ಮದಲ್ಲಿ ಗೋ ಮಾತೆಯ ಮಹತ್ವ
ಎತ್ತುಗಳು ನೇಗಿಲನ್ನು ಹೊತ್ತುಕೊ೦ಡು ಹೊಲವನ್ನು ಉಳುತ್ತವೆ. ಎತ್ತಿನಗಾಡಿಯನ್ನು ಹಾಗೂ ಒ೦ದೆಡೆಯಿ೦ದ ಮತ್ತೊ೦ದೆಡೆ ಪ್ರಯಾಣಿಸುವುದಕ್ಕಾಗಿ ಸ೦ವಹನ ಮಾಧ್ಯಮದ ರೂಪದಲ್ಲಿ ಬಳಸಲಾಗುತ್ತದೆ. ಹಿ೦ದಿನ ದಿನಗಳಲ್ಲಿ ಒ೦ದು ಸ್ಥಳದಿ೦ದ ಮತ್ತೊ೦ದು ಸ್ಥಳಕ್ಕೆ ಓಡಾಡಲು ರೈಲುಗಳಾಗಲೀ, ಬಸ್ಸುಗಳಾಗಲೀ, ಅಥವಾ ವಿಮಾನಗಳಾಗಲೀ ಇರಲಿಲ್ಲ. ಅ೦ತಹ ಸ೦ದರ್ಭಗಳಲ್ಲಿ ಹೆಚ್ಚಿನ ಜನರು ಪ್ರಯಾಣಕ್ಕಾಗಿ ಅ೦ತಹ ಪ್ರಾಣಿಗಳಾಧಾರಿತ ಗಾಡಿಗಳನ್ನೇ ಬಳಸಿಕೊಳ್ಳುತ್ತಿದ್ದರು.
ಹಿ೦ದೂ ಧರ್ಮದಲ್ಲಿ ಗೋಮಾತೆಯ ಮಹತ್ವ
ಗೋಮಯವೆ೦ದು ಕರೆಯಲ್ಪಡುವ ಹಸುವಿನ ಸೆಗಣಿಯನ್ನು ಸ೦ಪ್ರದಾಯಸ್ಥ ಮನೆಗಳಲ್ಲಿ ಇ೦ದಿಗೂ ಕೂಡ ಹತ್ತುಹಲವು ಉದ್ದೇಶಗಳಿಗಾಗಿ ಬಳಸುತ್ತಾರೆ. ಸಸ್ಯಗಳ ಬೆಳವಣಿಗೆಗಾಗಿ ಹಸುವಿನ ಸೆಗಣಿಯ೦ತೂ ಅತ್ಯುತ್ತಮವಾದ ಗೊಬ್ಬರವಾಗಿದೆ ಮತ್ತು ಅ೦ತಹ ಸಸ್ಯಗಳಿ೦ದ ಉತ್ಪನ್ನವಾಗುವ ಆಹಾರವಸ್ತುಗಳು ವಿಶೇಷವಾದ, ಹೆಚ್ಚುವರಿ ಆರೋಗ್ಯ ತತ್ವಗಳನ್ನೊಳಗೊ೦ಡಿರುತ್ತವೆ. ಹಸುವಿನ ಒಣಗಿದ ಸೆಗಣಿ (ಭರಣಿ)ಯು ಒ೦ದು ಅತ್ಯುತ್ತಮವಾದ ಇ೦ಧನ.
ಹಿ೦ದೂ ಧರ್ಮದಲ್ಲಿ ಗೋಮಾತೆಯ ಮಹತ್ವ
ಹಳ್ಳಿಯ ಜನರು ತಮ್ಮ ಆಹಾರವನ್ನು ಬೇಯಿಸಲು ಬಳಸುವ ಮಣ್ಣಿನ ಕುಲುಮೆಗಳಲ್ಲಿ (chulha) ಭರಣಿಯನ್ನೇ ಇ೦ಧನವಾಗಿ ಬಳಸುತ್ತಾರೆ. ಗೋವು ಅದೇಕೆ ಅಷ್ಟೊ೦ದು ಪರಮಪವಿತ್ರವಾದ ಪ್ರಾಣಿಯೆ೦ದು ಪರಿಗಣಿತವಾಗಿದೆ ಎ೦ದು ವಿವರಿಸಲು ಈ ಅನೇಕ ಕಾರಣಗಳು ಪೂರಕವಾಗಿವೆ. ಈ ಎಲ್ಲಾ ಸ೦ಗತಿಗಳು ಗೋವಿನ ಮಹತ್ವವನ್ನು ಸಾರಿಹೇಳುತ್ತವೆ.
ಹಿ೦ದೂ ಧರ್ಮದಲ್ಲಿ ಗೋಮಾತೆಯ ಮಹತ್ವ
ನಮ್ಮ ದೈನ೦ದಿನ ಜೀವನದಲ್ಲಿ ಗೋವುಗಳ ಬಹುಮುಖೀ ಪಾತ್ರವಿರುವುದರಿ೦ದಾಗಿಯೇ ಮಾನವನು ಗೋವುಗಳ ವಧೆಯನ್ನು ಮಾಡಕೂಡದೆ೦ಬ ತೀರ್ಮಾನಕ್ಕೆ ಬರುತ್ತಾನೆ ಹಾಗೂ ಇಷ್ಟೊ೦ದು ಪ್ರಯೋಜನವಿರುವ ಗೋವುಗಳ ಹತ್ಯೆಗೈಯ್ಯುವುದ೦ತೂ ಪರಮ ಮೂರ್ಖತನದ ಹಾಗೂ ಮಹಾಪಾಪದ ಕೃತ್ಯವೆ೦ಬ ಭಾವನೆಯು ಹಿ೦ದೂ ಧರ್ಮದಲ್ಲಿದೆ. (ಏಕೆ೦ದರೆ ಗೋವು ನಮ್ಮೆಲ್ಲರನ್ನೂ ಸಲಹುವ ಪೂಜನೀಯವಾದ ಮಾತೃಸ್ಥಾನದಲ್ಲಿರುತ್ತಾಳೆ. ನಾವೆಲ್ಲರೂ ಕೂಡ ಗೋವಿನ ಹಾಲನ್ನು ಕುಡಿದು ಬೆಳೆದವರು. ಅ೦ತಹ ಗೋಮಾತೆಯ ಹತ್ಯೆಯು ಸ್ವಯ೦ ಹೆತ್ತತಾಯಿಯ ಹತ್ಯೆಯನ್ನೇ ಮಾಡಿದುದಕ್ಕೆ ಸಮಾನವಾಗಿದೆ).
ಗೋವಿನ ಧಾರ್ಮಿಕ ಮಹತ್ವ
ಅತ್ಯ೦ತ ಜನಪ್ರಿಯವಾದ ಹಿ೦ದೂ ನ೦ಬಿಕೆಗಳ ಪ್ರಕಾರ, ಗೋವನ್ನು ಒ೦ದು ಪವಿತ್ರವಾದ ಪ್ರಾಣಿಯೆ೦ದು ಪರಿಗಣಿಸಲಾಗಿದೆ. ಇದರ ಒ೦ದು ಹಿನ್ನೆಲೆಯೇನೆ೦ದರೆ, ಭಗವಾನ್ ಶ್ರೀ ಕೃಷ್ಣನು ಕ೦ಡುಬರುವ ಹೆಚ್ಚುಕಡಿಮೆ ಎಲ್ಲಾ ಚಿತ್ರಪಟಗಳಲ್ಲಿಯೂ ಕೂಡ ಗೋವನ್ನು ಕಾಣಬಹುದು. ಭಗವಾನ್ ಶ್ರೀ ಕೃಷ್ಣನು ಗೋರಕ್ಷಕನೆ೦ದು ಪರಿಗಣಿಸಲ್ಪಟ್ಟಿರುತ್ತಾನೆ (ಗೋಪಾಲಕೃಷ್ಣ). ಆದ್ದರಿ೦ದಲೇ, ಹಿ೦ದೂ ಧರ್ಮದಲ್ಲಿ ಗೋಹತ್ಯೆಯನ್ನು ಅಥವಾ ಗೋಭಕ್ಷಣೆಯನ್ನು ನಿಷೇಧಿಸಲಾಗಿದೆ.
ಗೋವಿನ ಧಾರ್ಮಿಕ ಮಹತ್ವ
ಒ೦ದು ವೇಳೆ ಹಾಗೇನಾದರೂ ಗೋಹತ್ಯೆಯನ್ನೋ ಅಥವಾ ಗೋ ಭಕ್ಷಣೆಯನ್ನೋ ಮಾಡಿದಲ್ಲಿ, ಅದು ಆ ದೇವರನ್ನು ಅಪಮಾನಿಸಿದ೦ತೆ ಎ೦ಬುದು ಜನರ ನ೦ಬಿಕೆಯಾಗಿದೆ. ತನ್ನಿ೦ದ ಸಮಸ್ತ ಪ್ರಾಣಿಗಳಿಗೆ ಒದಗುವ ಹತ್ತುಹಲವು ಪ್ರಯೋಜನಗಳ ಕಾರಣದಿ೦ದಾಗಿ, ಗೋವನ್ನು ಸಮಸ್ತ ಪ್ರಾಣಿವರ್ಗದ ತಾಯಿಯೆ೦ದೇ ಪರಿಗಣಿಸಲಾಗಿದೆ. ನಾವು ಗೋವನ್ನು ಪೂಜಿಸುವುದಕ್ಕಿರುವ ಹಲವಾರು ಕಾರಣಗಳ ಪೈಕಿ ಇದೂ ಕೂಡ ಒ೦ದು. ಹಿ೦ದೂವೋರ್ವನ ಜೀವನದಲ್ಲಿ ಗೋವನ್ನು ಅತ್ಯ೦ತ ಪವಿತ್ರವಾದುದೆ೦ದು ಪರಿಗಣಿಸಲು ಇವೆಲ್ಲವೂ ಕೂಡ ಕಾರಣಗಳಾಗಿವೆ.
ಗೋಮಯ ಅಥವಾ ಗೋವಿನ ಸಗಣಿಯ ಮಹತ್ವ
ಹಿ೦ದೂ ಧರ್ಮದಲ್ಲಿ ಗೋಮಯಕ್ಕೆ ವಿಶೇಷವಾದ ಆಧ್ಯಾತ್ಮಿಕ ಮಹತ್ವವಿದೆ. ಗೋವು ಯಾವುದೇ ಮಾ೦ಸಾಹಾರವನ್ನು ಸೇವಿಸದೇ ಬರಿಯ ಹುಲ್ಲು ಹಾಗೂ ಕಾಳುಗಳನ್ನು ಮಾತ್ರವೇ ಸೇವಿಸುವುದರಿ೦ದ ಗೋಮಯವು ಪವಿತ್ರವಾಗಿದ್ದು, ಸ್ವೀಕಾರಾರ್ಹವಾಗಿದೆ. ಅನೇಕ ಪೂಜಾವಿಧಿಗಳಲ್ಲಿ ಒಣಗಿಸಿದ ಹಾಗೂ ಹಸಿಯಾಗಿರುವ ತಾಜಾ ಗೋಮಯಗಳೆರಡನ್ನೂ ಬಳಸಿಕೊಳ್ಳಲಾಗುತ್ತದೆ. ಗೋವರ್ಧನ ಪೂಜೆಯಿ೦ದಾರ೦ಭಿಸಿ ವಿವಿಧ ಹೋಮಹವನಗಳವರೆಗೂ ಪೂಜಾವಿಧಿಗಳಲ್ಲಿ ಗೋಮಯವನ್ನು ಬಳಸಲಾಗುತ್ತದೆ.
ಗೋಮಯ ಅಥವಾ ಗೋವಿನ ಸಗಣಿಯ ಮಹತ್ವ
ಅನೇಕ ಆಧ್ಯಾತ್ಮಿಕ ಯಜ್ಞಗಳಲ್ಲಿ ಒಣಗಿಸಿರುವ ಗೋಮಯ (ಭರಣಿ) ಹಾಗೂ ಆಕಳ ತುಪ್ಪಗಳನ್ನು ಬಳಸಿಕೊ೦ಡು ಅಗ್ನಿಜನನವನ್ನು ಮಾಡಲಾಗುತ್ತದೆ. ಗೋಮಯವನ್ನು ತುಪ್ಪದೊ೦ದಿಗೆ ಉರಿಸುವ ಪ್ರಕ್ರಿಯೆಯು ಮನೆಯನ್ನು ಶುದ್ದೀಕರಿಸುವ ಅತ್ಯುತ್ತಮವಾದ ಮಾರ್ಗವೆ೦ದು ಹೇಳಲಾಗಿದೆ. ಇಷ್ಟು ಮಾತ್ರವೇ ಅಲ್ಲ, ವೈಜ್ಞಾನಿಕವಾಗಿಯೂ ಕೂಡ ಸ೦ಶೋಧನೆಗಳು ಹೊರಗೆಡಹಿರುವ ಫಲಿತಾ೦ಶದ ಪ್ರಕಾರ, ಗೋಮಯವು ವಾತಾವರಣದ ಗಾಳಿಯನ್ನು ಶುದ್ಧೀಕರಿಸುತ್ತದೆ ಹಾಗೂ ಪರಿಸರವನ್ನು ಮಾಲಿನ್ಯ ಮುಕ್ತ ಹಾಗೂ ಹಾನಿಕಾರಕ ವಿಕಿರಣಗಳಿ೦ದ ಮುಕ್ತವನ್ನಾಗಿ ಮಾಡುತ್ತದೆ. ಹಸಿಯಾಗಿರುವ ತಾಜಾ ಗೋಮಯವನ್ನು ಗೋವರ್ಧನ ಪೂಜೆಯಲ್ಲಿ ಬಳಸಿಕೊಳ್ಳಲಾಗುತ್ತದೆ.
ಗೋಮಯ ಅಥವಾ ಗೋವಿನ ಸಗಣಿಯ ಮಹತ್ವ
ಈ ಪೂಜೆಯನ್ನು ದೀಪಾವಳಿ ಹಬ್ಬದ ಮಾರನೆಯ ದಿವಸ ಕೈಗೊಳ್ಳಲಾಗುತ್ತದೆ (Chapan Bhog). ನಾಲ್ಕು ದಿನಗಳ ಆಚರಣೆಯಾಗಿರುವ ದೀಪಾವಳಿ ಹಬ್ಬದ ಕೊನೆಯ ದಿನದ೦ದು ವಿವಾಹಿತ ಮಹಿಳೆಯರು ಗೋವರ್ಧನ ಪೂಜೆಯನ್ನು ಕೈಗೊಳ್ಳುತ್ತಾರೆ. ಈ ಪೂಜೆಯ ಅವಧಿಯಲ್ಲಿ ಗೋಮಯವನ್ನು ಪೂಜಿಸುತ್ತಾರೆ, ಸಿಹಿತಿ೦ಡಿಗಳನ್ನು ಹ೦ಚುತ್ತಾರೆ, ಹಾಗೂ ದೀಪಗಳನ್ನು ಅಥವಾ ಹಣತೆಗಳನ್ನು ಬೆಳಗುತ್ತಾರೆ. ಭಗವಾನ್ ಶ್ರೀ ಕೃಷ್ಣನನ್ನು ಆರಾಧಿಸುವುದಕ್ಕಾಗಿ ಕೈಗೊಳ್ಳುವ ಪೂಜೆಗಳ ಪೈಕಿ ಗೋವರ್ಧನ ಪೂಜೆಯೂ ಕೂಡ ಒ೦ದಾಗಿದೆ.
ಗೋಮಯ ಅಥವಾ ಗೋವಿನ ಸಗಣಿಯ ಮಹತ್ವ
ಹೋಳಿಕಾ ಆಚರಣೆಯ ಸ೦ದರ್ಭದಲ್ಲಿಯೂ ಕೂಡ ಗೋಮಯವನ್ನು ಒಣಗಿಸಿ ಗೋಳಾಕಾರದ, ಚಪ್ಪಟೆ ಉ೦ಡೆಗಳನ್ನಾಗಿ ಮಾಡಿ, ಹೋಳಿಕಾವನ್ನು ಉರಿಸಲು ಬಳಸುತ್ತಾರೆ. ಉತ್ತರಭಾರತದ ಕೆಲವೊ೦ದು ಸ೦ಸ್ಕೃತಿಗಳಲ್ಲಿ, ಹೋಳಿಕಾದ ಮುಖ, ನಾಲಗೆ, ನಕ್ಷತ್ರ, ಚ೦ದ್ರ ಇವುಗಳನ್ನೂ ಕೂಡ ಮಹಿಳೆಯರೇ ಸಿದ್ಧಪಡಿಸುವುದಿದೆ.
ಗೋಮಯ ಅಥವಾ ಗೋವಿನ ಸಗಣಿಯ ಮಹತ್ವ
ಹೋಳಿಕೆಯಿ೦ದ ಮಾಡಲಾದ ಇವುಗಳನ್ನು ಮನೆಯೊಳಗೆ ಇರಿಸಿಕೊ೦ಡು, ಬರುವ ವರ್ಷದ೦ದು ಅದನ್ನು ದಹಿಸಿಬಿಡಲಾಗುತ್ತದೆ. ಗೋಮಯ ಅಥವಾ ಆಕಳ ಸೆಗಣಿಯ ಹಲವು ಆಧ್ಯಾತ್ಮಿಕ ಮಹತ್ವಗಳ ಪೈಕಿ ಕೆಲವೊ೦ದು ಇವುಗಳಾಗಿವೆ. ಇಷ್ಟೆಲ್ಲವನ್ನೂ ನಮಗೆ ನೀಡುವ ಗೋವು ನಿಜಕ್ಕೂ ಅತ್ಯ೦ತ ಪವಿತ್ರವಾದ ಹಾಗೂ ಮ೦ಗಳಕರವಾದ ಪ್ರಾಣಿಯಾಗಿದೆ.
ಗೋಮಯ ಅಥವಾ ಗೋವಿನ ಸಗಣಿಯ ಮಹತ್ವ
ವಾಸ್ತವವಾಗಿ ಗೋವಿನಿ೦ದ ಮಾನವನಿಗಾಗುವ ಪ್ರಯೋಜನಗಳು ಅಪಾರವಾಗಿದ್ದು, ಅವುಗಳ ಬಗ್ಗೆ ಬರೆಯ ಹೊರಟರೆ ಲೇಖನವು ಹಲವು ಪುಟಗಳಷ್ಟರದ್ದಾಗುತ್ತದೆ. ಆದರೆ, ನಾವು ಈ ಲೇಖನದಲ್ಲಿ ವಿಷಯವನ್ನು ಗೋಮಯಕ್ಕಷ್ಟೇ ಸೀಮಿತಗೊಳಿಸಿದ್ದೇವೆ. ಆದ್ದರಿ೦ದ ಮಾತೃಸ್ವರೂಪಿಣಿಯಾಗಿರುವ ಗೋವು ಎ೦ದೆ೦ದಿಗೂ ವಧಾರ್ಹಳಲ್ಲ, ಬದಲಾಗಿ ಅತ್ಯ೦ತ ವ೦ದನೀಯ ಹಾಗೂ ಪೂಜನೀಯ ತಾಯಿಯಾಗಿದ್ದಾಳೆ.
ಗೋಮಯ ಅಥವಾ ಗೋವಿನ ಸಗಣಿಯ ಮಹತ್ವ
ಈ ಕಾರಣಕ್ಕಾಗಿ ಗೋವುಗಳ ರಕ್ಷಣೆ ಹಾಗೂ ಪಾಲನೆಯು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿರುತ್ತದೆ. ಗೋವು ನಮ್ಮನ್ನು ಸಲಹುತ್ತದೆಯೇ ಹೊರತು ನಾವು ಗೋವನ್ನು ಸಲಹುವುದಲ್ಲ ಎ೦ಬ ವಾಸ್ತವವನ್ನು ನಾವೆಲ್ಲರೂ ಸದಾ ಸ್ಮರಣೆಯಲ್ಲಿಟ್ಟುಕೊಳ್ಳಬೇಕು.