Just In
- 2 hrs ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 2 hrs ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- 4 hrs ago ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- 4 hrs ago ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
Don't Miss
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Movies ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಕ್ಷಾ ಬಂಧನ ಆಚರಣೆಯ ಪ್ರಾಮುಖ್ಯತೆ ಏಕೆ ವಿಶಿಷ್ಟವಾಗಿದೆ?
ಒಡಹುಟ್ಟಿದವರ ನಡುವೆ ಆಚರಿಸಲ್ಪಡುವ ಈ ರಕ್ಷಾ ಬಂಧನ ಹಬ್ಬ ಕೇವಲ ಒಡಹುಟ್ಟಿದವರಿಗೆ ಮಾತ್ರವಲ್ಲದೆ ಎಲ್ಲಾ ಬಗೆಯ ಸಹೋದರ -ಸಹೋದರಿ ಸಂಬಂಧಗಳನ್ನು ಬಾಂಧವ್ಯವನ್ನು ಗಟ್ಟಿಗೊಳಿಸುವಂತಹ ದಿನ. ಸಹೋದರನಿಗೆ ರಾಖಿಯನ್ನು ಕಟ್ಟಿ ಅವರಿಂದ ಉಡುಗೊರೆಯನ್ನು ಪ್ರತಿಯಾಗಿ ಪಡೆಯುವ ಈ ದಿನಕ್ಕಾಗಿ ವರ್ಷಪೂರ್ತಿ ಸಹೋದರಿಯರು ಎದುರು ನೋಡುತ್ತಿರುತ್ತಾರೆ. ರಕ್ಷಾ ಬಂಧನದ ಸಂಸ್ಕೃತದ ಅರ್ಥ "ರಕ್ಷಣೆಯ ಗಂಟು" ಎಂಬುದು.
ಶಾಸ್ತ್ರೋಕ್ತವಾಗಿ ಸಹೋದರರು ಮತ್ತು ಅವರ ಸಹೋದರಿಯರ ನಡುವಿನ ಪ್ರೀತಿಯ ಬಂಧವನ್ನು ಆಚರಿಸುವ ಒಂದು ಪುರಾತನ ಹಿಂದೂ ಹಬ್ಬವಾಗಿದೆ. ಸಹೋದರಿ ತನ್ನ ಪ್ರೀತಿ ಮತ್ತು ತನ್ನ ಸಹೋದರನ ಒಳಿತನ್ನು ಬಯಸಿ ದೇವರಿಗೆ ಪ್ರಾರ್ಥನೆ ಸಲ್ಲಿಸಿ ರಾಖಿ ಸಮಾರಂಭವನ್ನು ಆಚರಿಸುತ್ತಾಳೆ. ಇದಕ್ಕೆ ಪ್ರತಿಯಾಗಿ, ಸಹೋದರನು ತನ್ನ ಸಹೋದರಿಯನ್ನು ರಕ್ಷಿಸುವ ಮತ್ತು ಎಲ್ಲಾ ಸಂದರ್ಭಗಳಲ್ಲಿ ಆಕೆಯ ಆರೈಕೆಯನ್ನು ಮಾಡುವ ಶಾಸ್ತ್ರೋಕ್ತ ಶಪಥ ಮಾಡುತ್ತಾನೆ. ಕೌಟುಂಬಿಕವೆಂದು ದೃಢೀಕರಿಸಲಾಗುವ ಹಲವಾರು ಸಮಾರಂಭಗಳಲ್ಲಿ ಇದು ಕೂಡ ಒಂದಾಗಿದೆ.
ರಕ್ಷಾ ಬಂಧನ ಹಬ್ಬದ ಕೆಲವು ದಿನಗಳ ಮೊದಲು, ಮಹಿಳೆಯರು ರಾಖಿಗಳನ್ನು ಖರೀದಿಸಲು ಆರಂಭಿಸುತ್ತಾರೆ. ಕೆಲವು ಸಹೋದರಿಯರು ತಾವೇ ಸ್ವತಃ ರಾಖಿಯನ್ನು ತಯಾರಿಸಿದರೆ ಇತರರು ಮಾರುಕಟ್ಟೆಯಿಂದ ಖರೀದಿಸುತ್ತಾರೆ. ಅದೇನೇ ಇದ್ದರೂ ರಾಖಿಯನ್ನು ಸಹೋದರರಿಗೆ ಕಟ್ಟುವುದೇ ಈ ದಿನದ ವಿಶೇಷ. ರಾಖಿ ಕಟ್ಟುವ ಸಂದರ್ಭದಲ್ಲಿ ಅನುಸರಿಸಬೇಕಾದ ಕೆಲವು ಇತರ ಆಚರಣೆಗಳೂ ಇವೆ. ಅವುಗಳು ಯಾವುದೆಂದು ನೋಡೋಣ.
ಮುಂಜಾನೆಯ ಜಳಕ
ಸಹೋದರ-ಸಹೋದರಿಯರು ರಕ್ಷಾ ಬಂಧನದ ದಿನದಂದು ಮುಂಜಾನೆಯೇ ಎದ್ದು ಸ್ನಾನ ಮಾಡಬೇಕು.
ಉಪವಾಸ
ಸಹೋದರನಿಗೆ ರಾಖಿಯನ್ನು ಕಟ್ಟುವವರೆಗೂ ಸಹೋದರಿ ಆಹಾರವನ್ನು ಸೇವಿಸದೇ ಇರುವುದು ವಾಡಿಕೆ.
ರಾಖಿ ತಾಲಿ
ಈ ತಾಲಿ ಎಲ್ಲಾ ಅಗತ್ಯ ವಸ್ತುಗಳಿಂದ ಅಲಂಕೃತವಾಗಿರಬೇಕು. ಈ ತಾಲಿಯಲ್ಲಿ ರಾಖಿ, ದೀಪ, ಸಿಹಿ ತಿನಿಸು, ತಿಲಕ/ಕುಂಕುಮ ಮತ್ತು ಅಕ್ಕಿ/ಅಕ್ಷತೆಯನ್ನು ಹೊಂದಿರಬೇಕು.
ರಾಖಿ ಕಟ್ಟುವುದು
ಮೊದಲಿಗೆ ಸಹೋದರಿ, ಸಹೋದರನ ಹಣೆಗೆ ತಿಲಕವನ್ನು ಇಟ್ಟು ನೆತ್ತಿಯ ಮೇಲೆ ಅಕ್ಕಿ/ಅಕ್ಷತೆಯನ್ನು ಹಾಕಬೇಕು. ನಂತರ ಆರತಿ ಬೆಳಗಬೇಕು. ನಂತರ ಸಹೋದರನಿಗೆ ರಾಖಿಯನ್ನು ಕಟ್ಟಿ ಸಿಹಿಯನ್ನು ತಿನ್ನಿಸಬೇಕು.
ಉಡುಗೊರೆ
ಸಹೋದರನು ರಾಖಿ ಕಟ್ಟಿಸಿಕೊಂಡ ಮೇಲೆ ಸಹೋದರಿಗೆ ಉಡುಗೊರೆಯನ್ನು ನೀಡಬೇಕು. ಜೊತೆಗೆ ಸಹೋದರಿಯನ್ನು ಜೀವನದ ಯಾವುದೇ ಸಮಯದಲ್ಲಿ ಕಾಪಾಡುತ್ತೇನೆ ಎಂದು ವಚನ ನೀಡಬೇಕು.
ಭೂರಿ ಭೋಜನ
ಈ ಎಲ್ಲಾ ವಿಧಿ ವಿಧಾನಗಳ ನಂತರ ಸಹೋದರಿ ಆಹಾರವನ್ನು ಸೇವಿಸಬಹುದು. ನಂತರ ಸಹೋದರಿ ತನ್ನ ಸಹೋದರನಿಗೆ ಇಷ್ಟವಾದ ಅಡುಗೆಯನ್ನು ಮಾಡಿ ರಸ ಭೋಜನವನ್ನು ಉಣಬಡಿಸಬೇಕು.