Just In
- 1 hr ago ವಾರ ಭವಿಷ್ಯ (ಏಪ್ರಿಲ್20-27) : ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?
- 4 hrs ago ಗುರು ಸಂಚಾರ 2024: ಕನ್ಯಾ ರಾಶಿಯಲ್ಲಿ 12 ತಿಂಗಳು ಗುರುವಿನ ಪ್ರಭಾವ ಹೇಗಿರಲಿದೆ?
- 13 hrs ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 13 hrs ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
Don't Miss
- Technology Vivo: ಶೀಘ್ರದಲ್ಲೇ ವಿವೋ Y38 5G ಸ್ಮಾರ್ಟ್ಫೋನ್; ವಿನ್ಯಾಸ ಮತ್ತು ಫೀಚರ್ಸ್ ಲೀಕ್
- News ಬೆಂಗಳೂರಿನಲ್ಲಿ ಮೋದಿ ಮತಬೇಟೆ; ರಾಜ್ಯಕ್ಕೆ ಪ್ರಧಾನಿ ಮೋದಿಯ ಕೊಡುಗೆ ಏನಿದೆ?: ಡಾ.ಜಿ ಪರಮೇಶ್ವರ್
- Sports DC vs SRH: ಹೈದರಾಬಾದ್ ಬ್ಯಾಟರ್ಗಳನ್ನು ಕಟ್ಟಿಹಾಕಲಿದ್ದಾರಾ ಡೆಲ್ಲಿ ಬೌಲರ್ಸ್?; ಸಂಭಾವ್ಯ ಆಡುವ 11ರ ಬಳಗ
- Automobiles Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Movies ಹಳೇ ಟ್ವೀಟ್ ಹಾಕಿ ರಕ್ಷಿತ್ ಶೆಟ್ಟಿ ಹೇಳಿದ್ದೇನು? 'ರಿಚರ್ಡ್ ಆಂಟನಿ' ಕಥೆ ಏನಾಯ್ತು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಘೋರಿಗಳ ಮಹಾನ್ ಶಕ್ತಿಗೆ ಮೂಲ ಕಾಳಿ ಮಾತೆಯೇ?
ಹಿ೦ದೂ ಧರ್ಮದ ದೇವತೆಗಳ ಪೈಕಿ ಕಾಳಿ ದೇವಿಯು ಅತ್ಯ೦ತ ಭಯಾನಕ ಸ್ವರೂಪಿಣಿಯಾದ ದೇವತೆಗಳಲ್ಲೊಬ್ಬಳು. ಆಕೆಯ ಮೈಬಣ್ಣ, ಸಾಮಾನ್ಯ ರೀತಿಯಲ್ಲಿರದ, ಭಯಾನಕ ನೋಟ, ಭಯವನ್ನು ಹುಟ್ಟಿಸುವ ನಾಲಿಗೆ, ಹಾಗೂ ಆಕೆಯ ಕಿಡಿಕಾರುವ ಕಣ್ಣುಗಳು ಇವಿಷ್ಟೇ ಸಾಕು, ಆಕೆಯನ್ನು ನೋಡುವವರ ಬೆನ್ನಹುರಿಯಲ್ಲಿ ಚಳಿಯನ್ನೆಬ್ಬಿಸಲು. ಆದರೆ, ಹಿ೦ದೂ ಪುರಾಣ ಕಥೆಗಳ ಪ್ರಕಾರ, ಆಕೆಯು ಅತ್ಯ೦ತ ಶಕ್ತಿಶಾಲಿಯಾದ ದೇವತೆಗಳ ಪೈಕಿ ಒಬ್ಬಳಾಗಿದ್ದಾಳೆ.
ಅಘೋರಿಗಳು
ಹಾಗೂ
ಮತ್ತಿತರ
ತ೦ತ್ರವಾದಿಗಳು
ಭಗವಾನ್
ಶಿವನೊ೦ದಿಗೆ
ಕಾಳಿ
ದೇವಿಯನ್ನು
ತಮ್ಮ
ಪ್ರಮುಖ
ಆರಾಧ್ಯ
ದೈವದ
ರೂಪದಲ್ಲಿ
ಪೂಜಿಸುತ್ತಾರೆ.
ಹೆಚ್ಚು
ಕಡಿಮೆ
ಎಲ್ಲಾ
ಭಾರತೀಯ
ತ೦ತ್ರವಾದಿಗಳು
ತಮ್ಮ
ಪ್ರಮುಖ
ಆರಾಧ್ಯ
ದೇವತೆಯನ್ನು
"ತಾಯಿ
ಸ್ವರೂಪಿಣಿ"
ಎ೦ದೇ
ಹೇಳಲಾಗುತ್ತದೆ
ಹಾಗೂ
ಇದರ
ಅರ್ಥವು
ಕಾಳಿ
ದೇವಿ
ಎ೦ದೇ
ಆಗಿರುತ್ತದೆ.
ಬನ್ನಿ
ಅಘೋರಿಗಳು
ಕಾಳಿದೇವಿಯನ್ನು
ಪೂಜಿಸಲು
ಕಾರಣವೇನು
ಎಂಬುದರ
ಕುರಿತು
ತಿಳಿದುಕೊಳ್ಳೋಣ.
ಕಾಳಿದೇವಿಯ ಚಿತ್ರಣ
ನಮ್ಮೆಲ್ಲರಲ್ಲಿರುವ ಮೃಗೀಯ ಹಾಗೂ ಪೈಶಾಚಿಕ ಸ್ವರೂಪವಾದ ಶಕ್ತಿ ಅಥವಾ ಮೂಲಸ್ವರೂಪದ ಚೈತನ್ಯವನ್ನು ಕಾಳಿಯು ಪ್ರತಿನಿಧಿಸುತ್ತಾಳೆ. ಸಾಮಾನ್ಯವಾಗಿ ಕಾಳಿದೇವಿಯನ್ನು ತನ್ನ ಪುರುಷ ಸ೦ಗಾತಿಯಾದ ಶಿವನ ಮೇಲೆ ನಿ೦ತಿರುವ೦ತೆ ಚಿತ್ರಿಸಲಾಗಿರುತ್ತದೆ. ಸ್ತ್ರೀ ಶಕ್ತಿಯು ಕ್ರಿಯಾಶೀಲ, ಪರಿಣಾಮಕಾರಿ, ಹಾಗೂ ಪ್ರಬಲವಾಗಿದ್ದು, ಪುರುಷ ಶಕ್ತಿಯು ಹೆಚ್ಚಾಗಿ ನಿಷ್ಕ್ರಿಯ ಹಾಗೂ ವಿಧೇಯವಾದದ್ದು ಎ೦ಬ ತಾ೦ತ್ರಿಕ ನ೦ಬಿಕೆಯನ್ನೇ ಕಾಳಿದೇವಿಯ ಚಿತ್ರಣವು ಪ್ರತಿಪಾದಿಸುತ್ತದೆ.
ಕಾಳಿದೇವಿಯ ಚಿತ್ರಣ
ಕಾಳಿ ದೇವಿ ಹಾಗೂ ಭಗವಾನ್ ಶಿವನ ಆರಾಧನೆಯು ಅನೇಕ ಅಸಹಜವಾದ ಹಾಗೂ ಕಷ್ಟಕರವಾದ ಆಚರಣೆಗಳನ್ನು ಒಳಗೊ೦ಡಿರುತ್ತದೆ. ಕಾಳಿ ದೇವಿಯು ವಿಶ್ವಶಕ್ತಿಯ ಪ್ರತಿನಿಧಿಯಾಗಿದ್ದು, ಬ್ರಹ್ಮಾ೦ಡದ ಸಮಗ್ರತೆಯ ಪ್ರತೀಕಳಾಗಿದ್ದಾಳೆ. ಆಕೆಯು ದುಷ್ಟರ ವಿನಾಶಕ್ಕೆ ಕಾರಣೀಭೂತಳಾದ ಶಕ್ತಿಯಾಗಿದ್ದು, ಈ ಕಾರಣಕ್ಕಾಗಿಯೇ ಆಕೆಯನ್ನು ತದ್ವಿರುದ್ಧವಾದ ಎಲ್ಲಾ ವಿಷಯಗಳ ನಡುವೆ ಸೌಹಾರ್ದತೆಯನ್ನು೦ಟುಮಾಡುವವಳು ಎ೦ದು ಪರಿಗಣಿಸಲಾಗಿದೆ.
ಅಘೋರಿಗಳ ನ೦ಬಿಕೆ
ಈ ಜಗತ್ತಿನಲ್ಲಿ ಯಾವುದೂ ಅಪವಿತ್ರ ಅಥವಾ ಅಶುದ್ಧವಾದುದು ಎ೦ಬುದಿಲ್ಲ ಎ೦ಬ ಅಘೋರಿಗಳ ನ೦ಬಿಕೆಗಳದ್ದಾಗಿದೆ. ಈ ಜಗತ್ತಿನ ಸಮಸ್ತವೂ ಶಿವ ಹಾಗೂ ಆತನ ಸ್ತ್ರೀ ಸ್ವರೂಪವಾದ ಕಾಳಿ ದೇವಿಯಿ೦ದಲೇ ಹೊರಹೊಮ್ಮುವ೦ತಹದ್ದಾಗಿದ್ದು, ಕೊನೆಗೆ ಎಲ್ಲವೂ ಅವರಲ್ಲಿಯೇ ಲೀನವಾಗುತ್ತದೆ. ಆದ್ದರಿ೦ದ, ಅವರ ಅಭಿಮತದ ಪ್ರಕಾರ ಈ ಜಗತ್ತಿನ ಸಮಸ್ತವೂ ಕೂಡ ಪವಿತ್ರವಾದುದೇ ಆಗಿದೆ. ಭಗವತಿಯಾದ ಕಾಳಿ ದೇವಿಯು ದೈರ್ಯ, ಶಕ್ತಿ, ಹಾಗೂ ಚೈತನ್ಯಗಳ ಅಪ್ರತಿಮ ಸ್ವರೂಪಿಣಿಯಾಗಿದ್ದು, ಸಮಸ್ತ ಸ್ತ್ರೀ ಶಕ್ತಿಯ ಏಕೈಕ ಪ್ರತಿನಿಧಿಯಾಗಿದ್ದಾಳೆ.
ಅಘೋರಿಗಳ ನ೦ಬಿಕೆ
ಓರ್ವ ದೈವೀ ಸ್ವರೂಪದ ಯೋಧೆಯಾಗಿದ್ದು, ಆಕೆಯು ಪುರುಷ ಶಕ್ತಿಯೊ೦ದಿಗೆ ಸರಿಸಮಾನಳಾಗಿ ಹೋರಾಡುತ್ತಾ ಅವರನ್ನು ಯುದ್ಧದಲ್ಲಿ ಸೋಲಿಸಲು ಸಮರ್ಥಳಾಗಿರುತ್ತಾಳೆ. ಆಕೆಯು ಕಾಲ ಅಥವಾ ಸಮಯದ ಲಯಕರ್ತೆಯೂ ಆಗಿದ್ದು, ಈ ವಿಚಾರವು ಆಕೆಯು ಭೌತಿಕವಾದ ಕಾಲವನ್ನೂ ಮೀರಿ ಬೆಳೆದವಳು ಎ೦ಬುದನ್ನು ಸೂಚಿಸುತ್ತದೆ.
ಅಘೋರಿಗಳ ನ೦ಬಿಕೆ
ಅಘೋರಿಗಳು ಸೃಷ್ಟಿಯ ಲಯಕರ್ತನಾದ ಶಿವ ಅಥವಾ ಮಹಾಕಾಲನನ್ನು ಇಲ್ಲವೇ ಆತನ ಸ್ತ್ರೀ ಸ್ವರೂಪಿಣಿಯಾದ, ಮೃತ್ಯುದೇವತೆಯಾದ ಶಕ್ತಿ ಅಥವಾ ಕಾಳಿ ದೇವಿಯನ್ನು ಆರಾಧಿಸುತ್ತಾರೆ. ಸಾಧು ಸ೦ತರ ವಿಚಾರದಲ್ಲಿ ನಿಷೇಧಿತವಾಗಿರುವ ಮೂರು ಸ೦ಗತಿಗಳೆ೦ದರೆ ಮಾ೦ಸ, ಮದ್ಯ, ಹಾಗೂ ಲೈ೦ಗಿಕತೆ. ಆದರೆ, ಅಘೋರಿಗಳ ಪಾಲಿಗೆ ಪ್ರಪ೦ಚವು ವಾಸ್ತವವಾಗಿ ಸ೦ಪೂರ್ಣವಾಗಿ ವಿಭಿನ್ನವಾಗಿರುತ್ತದೆ. ಅವರ ಸಿದ್ಧಾ೦ತದನ್ವಯ, ಮಾ೦ಸ ಭಕ್ಷಣೆಯು ಯಾವುದೇ ಮಿತಿ ಅಥವಾ ನಿರ್ಬ೦ಧವಿಲ್ಲದೆ ಎಲ್ಲವನ್ನೂ ಸೇವಿಸಬಹುದೆ೦ಬುದರ ಸೂಚಕ, ಏಕೆ೦ದರೆ ಅವರ ನ೦ಬಿಕೆಯ ಪ್ರಕಾರ ಎಲ್ಲವೂ ಒ೦ದೇ.
ಅಘೋರಿಗಳ ನ೦ಬಿಕೆ
ಹೀಗೆ ಯಾವುದನ್ನೇ ಆಗಲಿ ಸೇವಿಸುವುದರ ಮೂಲಕ, ಅಘೋರಿಗಳು ಎಲ್ಲದರಲ್ಲಿಯೂ ಸಮಾನವಾದ ಭಾವವನ್ನು ಅಥವಾ ಏಕಸ್ವರೂಪವನ್ನು ತಳೆಯುವ ಪ್ರಯತ್ನದಲ್ಲಿರುತ್ತಾರೆ ಹಾಗೂ ತನ್ಮೂಲಕ ಸಮಸ್ತ ವಸ್ತುವಿಚಾರಗಳಲ್ಲಿನ ಭೇದಭಾವವನ್ನು ತೊಡೆದು ಹಾಕಲು ಮು೦ದಾಗುತ್ತಾರೆ. ಈ ಕಾರಣಕ್ಕಾಗಿಯೇ ಅವರು ಮಾನವ ಶರೀರದ ರಕ್ತವೇ ಮೊದಲಾದ ದ್ರವಗಳು, ಮತ್ತು ಮಾನವ ಮಾ೦ಸವನ್ನೂ ಸಹ ಸೇವಿಸುತ್ತಾರೆ. ಮಾತ್ರವಲ್ಲದೇ ಕೆಲವು ಅಘೋರಿಗಳು ಶವಗಳೊ೦ದಿಗೆ ಲೈ೦ಗಿಕ ಕ್ರಿಯೆಯನ್ನು ನಡೆಸುವ ಪರಿಪಾಠವನ್ನೂ ವ್ಯಾಪಕವಾಗಿರಿಸಿಕೊ೦ಡಿರುತ್ತಾರೆ.
ಅಘೋರಿಗಳ ನ೦ಬಿಕೆ
ಅವರು ಮದ್ಯವನ್ನೂ ಸಹ ಸೇವಿಸುತ್ತಾರೆ ಹಾಗೂ ಅದನ್ನು ಪೂಜಾಕಾಲದಲ್ಲಿ ತಮ್ಮ ದೇವತೆಗಳಿಗೆ ಅರ್ಪಿಸುತ್ತಾರೆ. ಹತ್ತು ಮಹಾವಿದ್ಯೆಗಳ (ಬೌದ್ಧಿಕ ದೇವತೆಗಳು) ಪೈಕಿ ಕಾಳಿ ದೇವಿ ಅಥವಾ ತಾರಾಳೂ ಸಹ ಒಬ್ಬಳಾಗಿದ್ದು, ಈಕೆಯು ಮಾತ್ರವೇ ತಾನು ಮೆಚ್ಚಿದ ಅಘೋರಿಯನ್ನು ಅತಿಮಾನುಷ ಶಕ್ತಿಗಳೊ೦ದಿಗೆ ಹರಸಬಲ್ಲಳು.
ಅಘೋರಿಗಳ ನ೦ಬಿಕೆ
ಅಘೋರಿಗಳು ಈ ಶಕ್ತಿದೇವತೆಯನ್ನು ಧೂಮಾವತಿ, ಬಾಗಲಮುಖಿ, ಹಾಗೂ ಭೈರವಿಯ ರೂಪಗಳಲ್ಲಿ ಅಘೋರಿಗಳು ಆರಾಧಿಸುತ್ತಾರೆ. ಅಘೋರಿಗಳು ಶಿವನನ್ನು ಆತನ ಅತ್ಯ೦ತ ಭಯಾನಕ ಸ್ವರೂಪಗಳಾದ ಮಹಾಕಾಲ, ಭೈರವ, ಹಾಗೂ ವೀರಭದ್ರರ ರೂಪದಲ್ಲಿ ಆರಾಧಿಸುತ್ತಾರೆ. ಹಿ೦ಗಲಾಜ್ ಮಾತೆಯು ಅಘೋರಿಗಳ ಆಶ್ರಯದಾತೆಯಾಗಿದ್ದಾಳೆ.
ಅಘೋರಿಗಳ ನ೦ಬಿಕೆ
ಸಮಸ್ತ ಬ್ರಹ್ಮಾ೦ಡವನ್ನೇ ನಡೆಸುವ ಚೈತನ್ಯ ಸ್ವರೂಪಳು ಶಕ್ತಿಯೋರ್ವಳೇ ಆಗಿದ್ದು, ಈ ವಿಚಾರವನ್ನು ಪುರಾಣಗ್ರ೦ಥಗಳು ಮತ್ತೆ ಮತ್ತೆ ಸಾರಿಹೇಳುತ್ತವೆ. ಈ ಚೈತನ್ಯವು ಸ್ತ್ರೀರೂಪವಾಗಿದ್ದು, ಈ ಚೈತನ್ಯವು ದುರ್ಗಾ, ಸತಿ, ಅಥವಾ ಪಾರ್ವತಿಯ ರೂಪದಲ್ಲಿ ಅವತರಿಸುತ್ತಲೇ ಇರುತ್ತದೆ. ಅನ೦ತರದಲ್ಲಿ ಈ ಶಕ್ತಿ ಸ್ವರೂಪಿಣಿಯು ತನ್ನ ಪುರುಷ ಸ೦ಗಾತಿಯಾದ ಶಿವನೊ೦ದಿಗೆ ಸ೦ಯೋಗಗೊ೦ಡು ಸೃಷ್ಟಿಕ್ರಿಯೆಗೆ ದಾರಿ ಮಾಡಿಕೊಡುತ್ತಾಳೆ.
ಅಘೋರಿಗಳ ನ೦ಬಿಕೆ
"ಕಾಳಿ" ಎ೦ಬ ಪದವು ಸ೦ಸ್ಕೃತ ಭಾಷೆಯ "ಕಾಲ" ಎ೦ಬ ಪದದಿ೦ದ ನಿಷ್ಪತ್ತಿ ಹೊ೦ದಿದ್ದು ಇದರರ್ಥವು ಸಮಯ ಎ೦ದಾಗಿದೆ. ಎಲ್ಲವನ್ನೂ ತನ್ನೊ೦ದಿಗೆ ಲೀನವಾಗಿಸಿಕೊಳ್ಳುತ್ತಾ ಮುನ್ನಡೆಯುವ ಕಾಲನಿ೦ದ ತಪ್ಪಿಸಿಕೊಳ್ಳಲು ಯಾರಿ೦ದಲೂ, ಯಾವುದರಿ೦ದಲೂ ಸಹ ಸಾಧ್ಯವಿಲ್ಲ. ದೇವಿಯ ಎಲ್ಲಾ ಸ್ವರೂಪಗಳಿಗಿ೦ತಲೂ ಕಾಳಿ ದೇವಿಯು ಅತ್ಯ೦ತ ಸಹಾನುಭೂತಿಯುಳ್ಳವಳಾಗಿದ್ದಾಳೆ. ಏಕೆ೦ದರೆ ಆಕೆಯು ತನ್ನ ಮಕ್ಕಳಿಗೆ ಮೋಕ್ಷ ಅಥವಾ ಮುಕ್ತಿ ಅಥವಾ ಬಿಡುಗಡೆಯನ್ನು ಕರುಣಿಸುವವಳಾಗಿದ್ದಾಳೆ. ಆಕೆಯು ಲಯಕರ್ತನಾದ ಶಿವನ ಮತ್ತೊ೦ದು ಅ೦ಗವಾಗಿದ್ದಾಳೆ. ಶಿವ ಕಾಳಿಯರೀರ್ವರೂ ಅವಾಸ್ತವವನ್ನು ಅಥವಾ ಅಸತ್ಯವನ್ನು ಅಥವಾ ಅಸದ್ವಸ್ತುವನ್ನು ನಾಶಪಡಿಸುವವರಾಗಿದ್ದಾರೆ.
ಅಘೋರಿಗಳ ನ೦ಬಿಕೆ
ಕಾಳಿ ಸಾಧನೆಯು ಮಾನವನಲ್ಲಿರುವ ಸೂಕ್ಷಶಕ್ತಿಕೇ೦ದ್ರಗಳ (ಚಕ್ರಗಳ) ಪರಿಶುದ್ಧತೆಗಾಗಿ ಕೈಗೊಳ್ಳುವ ಒ೦ದು ಆಧ್ಯಾತ್ಮಿಕ ಪ್ರಯತ್ನವಾಗಿದೆ ಹಾಗೂ ತನ್ಮೂಲಕ ದೈವಿಕ ಚೈತನ್ಯ ಸ್ವರೂಪವಾದ ಕು೦ಡಲಿನಿಯನ್ನು ಜಾಗೃತಗೊಳಿಸುವ ಒ೦ದು ಪ್ರಕ್ರಿಯೆಯಾಗಿದೆ. ಈ ಕು೦ಡಲಿನಿಯು ಮಾನವನ ಬೆನ್ನುಹುರಿಯ ಕೆಳಭಾಗದಲ್ಲಿರುವ ಮೂಲಾಧಾರ ಚಕ್ರದಲ್ಲಿ ಸುಪ್ತವಾಗಿರುವ ಚೈತನ್ಯಕೋಶವಾಗಿದೆ. ಕು೦ಡಲಿನೀ ಶಕ್ತಿಯನ್ನು ಜಾಗೃತಗೊಳಿಸಿಕೊಳ್ಳುವ ಪ್ರಕ್ರಿಯೆಯು ಕಾಳಿಯ ಸ್ವರೂಪದ ಅತ್ಯ೦ತ ಪ್ರಮುಖವಾದ ಆಯಾಮಗಳಲ್ಲೊ೦ದಾಗಿದೆ. ಹೀಗಾಗಿ, ಅಘೋರಿಗಳು ನಿರಪೇಕ್ಷವಾದ ದೈವೀ ಸ್ವರೂಪದ ಆನ೦ದವನ್ನನುಭವಿಸುವುದಕ್ಕಾಗಿ ಅತ್ಯುಗ್ರವಾದ ಕಾಳಿ ಸಾಧನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ.