Just In
- 1 hr ago ಗುರು ಸಂಚಾರ 2024: ಕನ್ಯಾ ರಾಶಿಯಲ್ಲಿ 12 ತಿಂಗಳು ಗುರುವಿನ ಪ್ರಭಾವ ಹೇಗಿರಲಿದೆ?
- 10 hrs ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 11 hrs ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- 12 hrs ago ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
Don't Miss
- News Karnataka Dam Water Level: ಏಪ್ರಿಲ್ 20ರಂದು ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ, ವಿವರ ಇಲ್ಲಿದೆ
- Automobiles ಪೆಟ್ರೋಲ್ಗೆ ಹೆಚ್ಚು ಹಣ ಖರ್ಚು ಮಾಡುತ್ತಿದ್ದೀರಾ?.. ಇಲ್ಲಿವೆ ಉತ್ತಮ ಎಲೆಕ್ಟ್ರಿಕ್ ಸ್ಕೂಟರ್ಗಳು, ಜಾಸ್ತಿ ಓಡ
- Finance Bengaluru Traffic Police: ಬೆಂಗಳೂರಿನ ಈ ರಸ್ತೆ ಸಂಚಾರ ಮಾರ್ಗ ಬದಲಾವಣೆ, ವಿವರ
- Technology Samsung: ಭಾರತದಲ್ಲಿ ಹೊಸ ವೇರಿಯಂಟ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ F15 5G! ಬೆಲೆ ಎಷ್ಟು?
- Sports RCB: 'ಗೋ ಗ್ರೀನ್' ಭಾಗವಾಗಿ 3 ಕೆರೆಗಳ ಅಭಿವೃದ್ಧಿಪಡಿಸಿದ ಆರ್ಸಿಬಿ
- Movies Amruthadhaare ; ಪಾರ್ಥ ಮತ್ತು ಅಪೇಕ್ಷಾ ಪ್ರೀತಿ, ಕೆಂಡಾಮಂಡಲಗೊಂಡ ಶಕುಂತಲಾ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನಸಿನ ಉದ್ಯೋಗ ಪಡೆಯಬೇಕೇ? ಈ ದೇವರನ್ನು ಪೂಜಿಸಿ
ಉದ್ಯೋಗಕ್ಕಾಗಿ ಯಾವುದೇ ದೇವತೆ ಹಿಂದೂ ಪರಂಪರೆಯಲ್ಲಿ ನಿಗದಿಪಡಿಸಿಲ್ಲ. ಆದರೆ ಇದಕ್ಕೂ ಒಂದು ಪರ್ಯಾಯವಿದೆ. ಕೆಲವು ಭಿನ್ನ ಶಕ್ತಿಗಳ ಒಂದಕ್ಕಿಂತ ಹೆಚ್ಚು ದೇವರುಗಳನ್ನು ಆರಾಧಿಸುವ ಮೂಲಕ ನಿಮ್ಮ ಕನಸಿನ ಉದ್ಯೋಗ ಪಡೆಯಲು ಖಂಡಿತಾ ಸಾಧ್ಯವಿದೆ.
ಹಿಂದೂ ಪುರಾಣಗಳ ಪ್ರಕಾರ ಒಟ್ಟು ಮೂವತ್ತಮೂರು ಕೋಟಿ ದೇವತೆಯರಿದ್ದಾರೆ. ಪ್ರತಿ ದೇವತೆಗೂ ಒಂದೊಂದು ಶಕ್ತಿಯಿದ್ದು ವಿಶೇಷ ಪಾತ್ರವನ್ನು ವಹಿಸುತ್ತಾರೆ. ಉದಾಹರಣೆಗೆ ಲಕ್ಷ್ಮಿ ಎಂದರೆ ಧನದೇವತೆ. ಸರಸ್ವತಿ ಎಂದರೆ ವಿದ್ಯಾದೇವತೆ.
ಅಂತೆಯೇ ಧನ ಬೇಕಾದರೆ ಲಕ್ಷ್ಮಿಯನ್ನೂ ವಿದ್ಯೆ ತಲೆಗೆ ಹತ್ತಬೇಕಾದರೆ ಸರಸ್ವತಿಯನ್ನೂ ಒಲಿಸಿ ಕೊಳ್ಳುವಂತೆ ಹೇಳಲಾಗುತ್ತದೆ. ಆದರೆ ಇಂದಿನ ದಿನದಲ್ಲಿ ಕೇವಲ ಧನ ಅಥವಾ ವಿದ್ಯೆ ಇದ್ದರೆ ಮಾತ್ರ ಸಾಲದು, ಈ ವಿದ್ಯೆಯನ್ನು ಬಳಸಿಕೊಳ್ಳಬಲ್ಲಂತಹ ಉದ್ಯೋಗವೂ ಬೇಕು. ಹಿಂದೂ ಧರ್ಮದಲ್ಲಿ ಇವರು 'ಕೋಪಿಷ್ಠ ದೇವರು' ಎಂದೇ ಪ್ರಸಿದ್ಧಿ!
ಹಾಗಾದರೆ ಉತ್ತಮ ಉದ್ಯೋಗ ಪಡೆಯಲು ಯಾವ ದೇವರನ್ನು ಒಲಿಸಿಕೊಳ್ಳಬೇಕು? ಅಷ್ಟಕ್ಕೂ ಉದ್ಯೋಗಕ್ಕಾಗಿ ಹಿಂದೂ ಪುರಾಣದಲ್ಲಿ ಯಾವುದಾದರೂ ದೇವತೆ ಇದ್ದಾರೆಯೇ? ಈ ಪ್ರಶ್ನೆಯನ್ನು ಪಂಡಿತರಲ್ಲಿ ಕೇಳಿದರೆ ನಮಗೆ ಸಿಗುವ ಉತ್ತರ 'ಇಲ್ಲ'.
ವಾಸ್ತವವಾಗಿ ಉದ್ಯೋಗಕ್ಕಾಗಿ ಯಾವುದೇ ದೇವತೆ ಹಿಂದೂ ಪರಂಪರೆಯಲ್ಲಿ ನಿಗದಿಪಡಿಸಿಲ್ಲ. ಆದರೆ ಇದಕ್ಕೂ ಒಂದು ಪರ್ಯಾಯವಿದೆ. ಕೆಲವು ಭಿನ್ನ ಶಕ್ತಿಗಳ ಒಂದಕ್ಕಿಂತ ಹೆಚ್ಚು ದೇವರುಗಳನ್ನು ಆರಾಧಿಸುವ ಮೂಲಕ ನಿಮ್ಮ ಕನಸಿನ ಉದ್ಯೋಗ ಪಡೆಯಲು ಖಂಡಿತಾ ಸಾಧ್ಯವಿದೆ. ಈ ನಿಟ್ಟಿನಲ್ಲಿ ಯಾವ ದೇವರನ್ನು ಆರಾಧಿಸಬಹುದು ಎಂಬುದನ್ನು ನೀವೇ ಪರಾಮರ್ಶಿಸಿ ಅತ್ಯಂತ ಸೂಕ್ತ ಎಂದು ಕಂಡುಬಂದ ದೇವರನ್ನು ಆಯ್ದುಕೊಳ್ಳಿ....
ಗಣೇಶ
ಗಣೇಶ ಗಣನಾಯಕನೂ ಹೌದು, ವಿಘ್ನನಿವಾರಕನೂ ಹೌದು. ಅಂತೆಯೇ ಯಾವುದಾದರೂ ಹೊಸದನ್ನು ಪ್ರಾರಂಭಿಸುವಾಗ ಯಾವುದೇ ವಿಘ್ನಗಳು ಬಾರದಂತೆ ಗಣೇಶನನ್ನು ಪೂಜಿಸಿಯೇ ಕಾರ್ಯಾರಂಭಗೊಳಿಸಲಾಗುತ್ತದೆ. ಗಣೇಶ ದೇವರನ್ನು ಮೊದಲು ಪೂಜಿಸಲು ಕಾರಣಗಳೇನು?
"ಓಂ ಗಂ ಗಣೇಶಾಯಃ ನಮಃ"
ಅಂತೆಯೇ ಗೃಹಪ್ರವೇಶ, ಹೊಸ ವಾಹನ, ಹೊಸ ವ್ಯಾಪಾರ ಮೊದಲಾದವುಗಳ ಪ್ರಾರಂಭದ ಪೂಜೆ ಗಣೇಶನಿಗೆ ಮೀಸಲು. ಆದ್ದರಿಂದ ನಿಮ್ಮ ಉದ್ಯೋಗದ ಸಂದರ್ಶನದ ದಿನದಂದು ಗಣೇಶ ಮಂತ್ರವನ್ನು ಪಠಿಸಿ ಹೊರಡಿ. ಮಂತ್ರವೇನೂ ಕಷ್ಟದ್ದಲ್ಲ. "ಓಂ ಗಂ ಗಣೇಶಾಯಃ ನಮಃ" ಎಂದರೆ ಸಾಕು.
ದೇವಿ ಲಕ್ಷ್ಮಿ
ಈಕೆ ಕೇವಲ ಧನದ ದೇವತೆ ಮಾತ್ರವಲ್ಲ, ಉತ್ತಮ ಭವಿಷ್ಯ ನೀಡುವ ದೇವತೆಯೂ ಆಗಿದ್ದಾಳೆ. ಈಕೆಯನ್ನು ಒಲಿಸಿಕೊಂಡರೆ ಮನೆಗೆ ಧನಾಗಮನವಾಗುತ್ತದೆ ಎಂದು ಹಿರಿಯರು ಹೇಳುತ್ತಾರೆ. ಸಾಮಾನ್ಯವಾಗಿ ಮನೆತನವನ್ನು ಆಧರಿಸಿ ಗುರುವಾರ ಅಥವಾ ಶುಕ್ರವಾರದಂದು ಲಕ್ಷ್ಮೀಪೂಜೆಯನ್ನು ನೆರವೇರಿಸಲಾಗುತ್ತದೆ. ಈ ಸಂದರ್ಭವನ್ನು ನಿಮ್ಮ ಉದ್ಯೋಗ ಪಡೆಯಲು ಉಪಯೋಗಿಸಿಕೊಂಡು ಸಂದರ್ಶನ ಮುನ್ನದಿನದಲ್ಲಿ ಪ್ರಾರ್ಥಿಸುವ ಮೂಲಕ ಉದ್ಯೋಗ ಪಡೆಯಲು ಸಾಧ್ಯವಾಗುತ್ತದೆ.
ದೇವಿ ಸರಸ್ವತಿ
ವಿದ್ಯೆ, ಕಲೆ, ಸಂಗೀತ ಮೊದಲಾದವುಗಳಿಗೆ ಸರಸ್ವತಿ ದೇವಿಯನ್ನು ಆರಾಧಿಸಬೇಕು. ಇಂದು ಉದ್ಯೋಗ ಪಡೆಯಬೇಕೆಂದರೆ ವಿದ್ಯೆ ಅತ್ಯಂತ ಅಗತ್ಯವಾಗಿದೆ. ಆದ್ದರಿಂದ ವಿದ್ಯಾವಂತರಾಗಿ ಉದ್ಯೋಗವರಸಲು ಹೊರಡುವ ಮುನ್ನ ಸರಸ್ವತಿಯನ್ನು ಆರಾಧಿಸಿ ಬಿಳಿಯ ಹೂಗಳನ್ನು ಅರ್ಪಿಸಿ ಹೊರಡುವ ಮೂಲಕ ಮುಂದಿನ ಕಾರ್ಯಗಳು ಸುಗಮವಾಗುತ್ತವೆ.
ದೇವಿ ಸರಸ್ವತಿ
ಉದ್ಯೋಗಕ್ಕೆ ಎಲ್ಲಾ ದೇವತೆಗಳನ್ನು ಆರಾಧಿಸಲೇಬೇಕು ಎಂದೇನಿಲ್ಲ ನಿಮಗೆ ಸೂಕ್ತ ಎನಿಸಿದ ಎರಡು ದೇವತೆಗಳಿಗೆ ಪೂಜೆ ಸಲ್ಲಿಸಿದರೆ ಸಾಕು. ಇದರಿಂದ ನಿಮಗೆ ಮನಸ್ಸಿನಲ್ಲಿ ದೊರಕುವ ಬೆಂಬಲ ಮತ್ತು ನಿರಾಳತೆ ಉದ್ಯೋಗ ಪಡೆಯಲು ನೆರವಾಗುತ್ತದೆ. ಆದರೆ ದೇವರು ನಿಮ್ಮ ಪ್ರಯತ್ನಗಳಿಗೆ ಬೆಂಬಲ ನೀಡುತ್ತಾರೆಯೇ ಹೊರತು ಬೇರೇನನ್ನೂ ಅಲ್ಲ. ಆದ್ದರಿಂದ ಉದ್ಯೋಗ ಪಡೆಯುವ ಮುನ್ನ ಸೂಕ್ತವಾದ ತಯಾರಿ ಮಾಡಿಕೊಂಡೇ ಹೊರಡಬೇಕು.